![1-csaddasd](https://www.udayavani.com/wp-content/uploads/2024/07/1-csaddasd-415x234.jpg)
Health: ಅಸ್ತಮಾ ಮತ್ತು ಮೂಢನಂಬಿಕೆಗಳು
Team Udayavani, Jun 23, 2024, 3:23 PM IST
![7-health](https://www.udayavani.com/wp-content/uploads/2024/06/7-health-620x372.jpg)
ಬಹಳ ಪುರಾತನ ಕಾಲದಿಂದಲೂ ನಾವು ಅಸ್ತಮಾದ ಬಗ್ಗೆ ಕೇಳುತ್ತ ಬಂದಿದ್ದೇವೆ. ಮುಂದಿನ ಮನೆಯ ಮಗು ಆಟವಾಡುತ್ತಿರುವಾಗ ಉಸಿರು ಕಟ್ಟಿದಂತಾಗುತ್ತದೆ ಎಂಬುದರಿಂದ ತೊಡಗಿ ಹಾಲಿನವನು ದಿನಾ ಬೆಳಗ್ಗೆ ಕೆಮ್ಮುತ್ತಲೇ ಹಾಲು ಹಾಕುವ ವರೆಗೆ ಎಲ್ಲ ಕಡೆಯೂ ಅಸ್ತಮಾದ ಬಗ್ಗೆ ಕೇಳುತ್ತ, ಕಾಣುತ್ತಲೇ ಇರುತ್ತೇವೆ. ಭಾರತದಲ್ಲಿ ಅಂದಾಜು 35 ದಶಲಕ್ಷ ಮಂದಿ ಅಸ್ತಮಾ ಹೊಂದಿದ್ದಾರೆ ಎನ್ನುತ್ತದೆ ಅಂಕಿಅಂಶ. ಆದರೂ ನಾವು ಈ ಮೂರಕ್ಷರದ ಪದವನ್ನು ಕೇಳಿದಾಕ್ಷಣ ಯಾಕೆ ಬೆಚ್ಚಿಬೀಳುತ್ತೇವೆ? ಹಿಂದೆ ಈ ಕಾಯಿಲೆಗೆ ಬೆರಳೆಣಿಕೆಯಷ್ಟು ಔಷಧಗಳು ಮಾತ್ರ ಲಭ್ಯವಿದ್ದುವು ಎಂಬುದರಿಂದಾಗಿಯೇ ಈ ಭೀತಿ? ಅಥವಾ ನೀವು ಇನ್ಹೇಲರ್ ಉಪಯೋಗಿಸುವುದರ ಬಗ್ಗೆ ನಿಮ್ಮ ಸಹಪಾಠಿ ತಮಾಶೆ ಮಾಡುತ್ತಾನೆ ಎಂಬುದು ಇದಕ್ಕೆ ಕಾರಣವೇ?
ಪುರಾತನ ಈಜಿಪ್ಟ್ ನಲ್ಲಿ ದೊರಕಿದ, ಕ್ರಿಸ್ತಪೂರ್ವ 1550ರ ಕಾಲಘಟ್ಟದ ಎಬೆರ್ ಪ್ಯಾಪಿರಸ್ ಪಠ್ಯಗಳಲ್ಲಿಯೂ ಅಸ್ತಮಾದಂತಹ ರೋಗಲಕ್ಷಣಗಳನ್ನು ಉಲ್ಲೇಖೀಸಲಾಗಿದೆ. “ಅಸ್ತಮಾ’ ಎಂಬ ಪದವು “ಉಸಿರಿಗಾಗಿ ಕಷ್ಟಪಡು’ ಅಥವಾ “ಕಷ್ಟದಿಂದ ಉಸಿರಾಡು’ ಎಂಬ ಅರ್ಥವುಳ್ಳ ಗ್ರೀಕ್ ಪದ “ಆಝೈನ್’ ಎಂಬುದರಿಂದ ಉದ್ಭವಿಸಿದೆ. ಪುರಾತನ ಕಾಲದಿಂದಲೇ ಅಸ್ತಮಾದಂತಹ ರೋಗಲಕ್ಷಣಗಳ ಉಲ್ಲೇಖವಿದ್ದರೂ ಅದನ್ನು ಒಂದು ಪ್ರತ್ಯೇಕ ಕಾಯಿಲೆಯಾಗಿ ಗುರುತಿಸಿ ಅದು ಶ್ವಾಸನಾಳಗಳಿಗೆ ಸಂಬಂಧಿಸಿದ್ದು ಎಂಬುದನ್ನು ಪತ್ತೆಹಚ್ಚಿದ್ದು 17ನೇ ಶತಮಾನದಲ್ಲಿ ಆಂಗ್ಲ ವೈದ್ಯ ಥಾಮಸ್ ವಿಲ್ಲಿಸ್. ಅಸ್ತಮಾಕ್ಕೆ ಶಾಪ, ಪಾಪ ಕಾರಣವೆಂಬ ನಂಬಿಕೆ ಹೊರಟು ಹೋಗಿ ಮೌಢಾÂಚರಣೆಗಳ ಬದಲು ಲಕ್ಷಣಗಳನ್ನು ವೈದ್ಯಶಾಸ್ತ್ರೀಯವಾಗಿ ನಿಭಾಯಿಸುವತ್ತ ಗಮನ ಹರಿಸುವ ಪದ್ಧತಿ ಆ ಬಳಿಕ ಪ್ರಾರಂಭವಾಯಿತು.
ಅಸ್ತಮಾ ಉಸಿರಾಟಕ್ಕೆ ಸಂಬಂಧಿಸಿದ ಒಂದು ದೀರ್ಘಕಾಲೀನ ಅನಾರೋಗ್ಯವಾಗಿದೆ. ಇದರಲ್ಲಿ ಉರಿಯೂತದಿಂದಾಗಿ ಶ್ವಾಸನಾಳಗಳು ಸಂಕುಚನಗೊಳ್ಳುತ್ತವೆ, ಇದರಿಂದಾಗಿ ಉಬ್ಬಸ, ಉಸಿರು ಕಟ್ಟುವಿಕೆ, ಎದೆ ಬಿಗಿತ ಮತ್ತು ಕೆಮ್ಮು ಉಂಟಾಗುತ್ತವೆ. ಈ ಲಕ್ಷಣಗಳು ಸಾಮಾನ್ಯವಾಗಿ ರಾತ್ರಿ ಮತ್ತು ಬೆಳಗಿನ ಜಾವದಲ್ಲಿ ಉಲ್ಬಣಗೊಳ್ಳುತ್ತವೆ. ಅಲರ್ಜಿಕಾರಕಗಳು, ವ್ಯಾಯಾಮ, ಶ್ವಾಸಾಂಗ ಸೋಂಕುಗಳು ಮತ್ತು ಒತ್ತಡದಂತಹ ಅಂಶಗಳಿಂದ ಈ ಅಸ್ತಮಾ ರೋಗಲಕ್ಷಣಗಳು ಪ್ರಚೋದನೆಗೊಳ್ಳಬಹುದಾಗಿದೆ.
ಅಸ್ತಮಾದ ರೋಗಕಾರಕ ವ್ಯಾಖ್ಯಾನದ ಪ್ರಕಾರ, ಈ ಕಾಯಿಲೆ ಉಂಟಾಗುವುದಕ್ಕೆ ವಂಶವಾಹಿ, ಪರಿಸರಕ್ಕೆ ಸಂಬಂಧಿಸಿದ ಮತ್ತು ರೋಗ ನಿರೋಧಕ ಶಕ್ತಿಗೆ ಸಂಬಂಧಿಸಿದ ಅಂಶಗಳ ಸಂಕೀರ್ಣ ಸಂಯೋಗವು ಕಾರಣವಾಗುತ್ತದೆ. ಇದರಿಂದಾಗಿ ಶ್ವಾಸಮಾರ್ಗದ ದೀರ್ಘಕಾಲೀನ ಉರಿಯೂತ ಮತ್ತು ಅತಿ ಪ್ರತಿಸ್ಪಂದಕ ಗುಣ ತಲೆದೋರುತ್ತದೆ. ಕುಟುಂಬದಲ್ಲಿ ಅಸ್ತಮಾ ರೋಗಿಗಳನ್ನು ಹೊಂದಿರುವ ಅಥವಾ ಅಲರ್ಜಿ ಕಾಯಿಲೆಗಳನ್ನು ಹೊಂದಿರುವ ವ್ಯಕ್ತಿಗಳು ಅಸ್ತಮಾಕ್ಕೆ ತುತ್ತಾಗುವ ಸಾಧ್ಯತೆಗಳು ಅಧಿಕ. ಪರಾಗರೇಣುಗಳು, ಧೂಳಿನ ಸೂಕ್ಷ್ಮಜೀವಿಗಳು, ಸಾಕುಪ್ರಾಣಿಗಳ ಕೂದಲು, ಚರ್ಮದ ಪುಡಿ, ಮಾಲಿನ್ಯಕಾರಕಗಳು, ತಂಬಾಕು ಹೊಗೆ, ಶ್ವಾಸಾಂಗ ಸೋಂಕುಗಳು, ಕೆಲಸದ ಸ್ಥಳದಲ್ಲಿ ಇರಬಹುದಾದ ಪ್ರಚೋದಕಗಳು ಮತ್ತು ಇಂತಹ ಇತರ ಅನೇಕ ಅಂಶಗಳು ಅಸ್ತಮಾ ರೋಗ ಲಕ್ಷಣಗಳು ಉಂಟಾಗುವುದಕ್ಕೆ ಕಾರಣವಾಗಬಹುದಾಗಿದೆ.
ಅಸ್ತಮಾ ಹೊಂದಿರುವ ವ್ಯಕ್ತಿಯು ಅಲರ್ಜಿಕಾರಕಗಳನ್ನು ಉಸಿರಾಡಿದಾಗ ಅವು ಶ್ವಾಸಮಾರ್ಗದಲ್ಲಿ ಟಿಎಚ್2 ರೋಗಪ್ರತಿರೋಧಕ ಜೀವಕೋಶಗಳನ್ನು ಪ್ರಚೋದಿಸುತ್ತವೆ, ಅವು ರಾಸಾಯನಿಕ ಮೀಡಿಯೇಟರ್ಗಳನ್ನು ಬಿಡುಗಡೆ ಮಾಡುತ್ತವೆ ಮತ್ತು ಉರಿಯೂತ ಉಂಟಾಗುವ ಪ್ರಕ್ರಿಯೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ.
ಅಲರ್ಜಿಕಾರಕಗಳಿಗೆ ಮತ್ತೆ ಒಡ್ಡಿಕೊಂಡಾಗ ಈಗಾಗಲೇ ಹೀಗೆ ಸೂಕ್ಷ್ಮಸಂವೇದಿಗೊಂಡಿರುವ ಜೀವಕೋಶಗಳು ಹಿಸ್ಟಮಿನ್, ಲುಕೊಟ್ರಿಯೆನ್ಸ್ ಮತ್ತು ಪ್ರೊಸ್ಟಾಗ್ಲಾಂಡಿನ್ ಗಳಂತಹ ಉರಿಯೂತ ಮೀಡಿಯೇಟರ್ಗಳನ್ನು ಬಿಡುಗಡೆ ಮಾಡುತ್ತವೆ. ಇದರಿಂದಾಗಿ ಶ್ವಾಸಮಾರ್ಗದಲ್ಲಿ ಉರಿಯೂತ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಅಸ್ತಮಾದಲ್ಲಿ ರೋಗಲಕ್ಷಣಗಳನ್ನು ಪ್ರಚೋದಿಸುವುದು ಅಲರ್ಜಿಕಾರಕಗಳಿಗೆ ದ್ವಿತೀಯ ಬಾರಿ ಒಡ್ಡಿಕೊಳ್ಳುವಿಕೆ. ಯಾವ ಅಲರ್ಜಿಕಾರಕದಿಂದ ಅಸ್ತಮಾ ರೋಗಿಯೊಬ್ಬನಿಗೆ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂಬುದು ವ್ಯಕ್ತಿನಿರ್ದಿಷ್ಟವಾಗಿದ್ದು, ಈ ಹಿಂದೆ ಹೇಳಿರುವಂತೆ ವಂಶವಾಹಿಗಳು ಮತ್ತು ಪರಿಸರದ ಸಂಕೀರ್ಣ ಸಂಯೋಜನೆಯಿಂದ ನಿರ್ಧಾರವಾಗುತ್ತದೆ.
-ಮುಂದಿನ ವಾರಕ್ಕೆ
–ಡಾ| ಶ್ರೀನಿವಾಸ್ ಎಸ್. ಪೈ,
ಸೀನಿಯರ್ ರೆಸಿಡೆಂಟ್ ಕೆಎಂಸಿ ಆಸ್ಪತ್ರೆ,
ಅತ್ತಾವರ, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ರೆಸ್ಪಿರೇಟರಿ ಮೆಡಿಸಿನ್ ವಿಭಾಗ, ಕೆಎಂಸಿ,ಮಂಗಳೂರು)
ಟಾಪ್ ನ್ಯೂಸ್
![1-csaddasd](https://www.udayavani.com/wp-content/uploads/2024/07/1-csaddasd-415x234.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![rape](https://www.udayavani.com/wp-content/uploads/2024/07/rape-150x100.jpg)
Bidar; 9 ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಶಿಕ್ಷಕನ ಬಂಧನ
![1-csaddasd](https://www.udayavani.com/wp-content/uploads/2024/07/1-csaddasd-150x85.jpg)
Hosanagara: ಅಪಘಾತವಾಗಿ ಪಲ್ಟಿಯಾದ 50ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಸರಕಾರಿ ಬಸ್
![1-sagara](https://www.udayavani.com/wp-content/uploads/2024/07/1-sagara-150x94.jpg)
Sagara; ಮರ ಕತ್ತರಿಸುತ್ತಿದ್ದಾಗ ಕೊಂಬೆ ಬಿದ್ದು ವ್ಯಕ್ತಿ ಸಾವು
![Rabakavi](https://www.udayavani.com/wp-content/uploads/2024/07/Rabakavi-150x90.jpg)
Irrigation: ರೈತರ ವಿಚಾರದಲ್ಲಿ ರಾಜಕಾರಣ ಮಾಡದಿರಿ: ಸಚಿವ ತಿಮ್ಮಾಪುರ
![Congress ಸಿಎಂ, ಡಿಸಿಎಂ ಆಯ್ಕೆ ಹೈಕಮಾಂಡ್ಗೆ ಬಿಟ್ಟ ವಿಚಾರ: ಸಚಿವ ತಿಮ್ಮಾಪುರ](https://www.udayavani.com/wp-content/uploads/2024/07/aaaz-150x84.jpg)
Congress Govt ಸಿಎಂ, ಡಿಸಿಎಂ ಆಯ್ಕೆ ಹೈಕಮಾಂಡ್ಗೆ ಬಿಟ್ಟ ವಿಚಾರ: ಸಚಿವ ತಿಮ್ಮಾಪುರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.