![Modi-Lokasabha](https://www.udayavani.com/wp-content/uploads/2024/07/Modi-Lokasabha-415x249.jpg)
UP: ಅಂತ್ಯಸಂಸ್ಕಾರವಾದ ಬಳಿಕ 600 ಕಿಮೀ ದೂರದಲ್ಲಿ ವಿವಾಹಿತೆ ಜೀವಂತವಾಗಿ ಪತ್ತೆ!
ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದ ಪತಿ...ನಿಗೂಢ, ಕುತೂಹಲಕಾರಿ ಘಟನೆ
Team Udayavani, Jun 23, 2024, 8:05 PM IST
![suicide (2)](https://www.udayavani.com/wp-content/uploads/2024/06/suicide-2-620x335.jpg)
ಲಕ್ನೋ: ಉತ್ತರ ಪ್ರದೇಶದ ಗೋರಖ್ಪುರದಲ್ಲಿ ನಾಲ್ಕು ದಿನಗಳ ಹಿಂದೆ ತನ್ನ 40 ವರ್ಷದ ಪತ್ನಿಯನ್ನು ಅಂತ್ಯಸಂಸ್ಕಾರ ಮಾಡಿದ ಬಳಿಕ ವ್ಯಕ್ತಿಯೊಬ್ಬನಿಗೆ ಆಕೆ 600 ಕಿಲೋಮೀಟರ್ ದೂರದಲ್ಲಿರುವ ಝಾನ್ಸಿಯಲ್ಲಿ ಜೀವಂತವಾಗಿ ಪತ್ತೆಯಾದ ನಂತರ ಮತ್ತೆ ಒಂದಾದ ನಿಗೂಢ, ಕುತೂಹಲಕಾರಿ ಘಟನೆ ನಡೆದಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಗೋರಖ್ಪುರದ ಬನ್ಸ್ಗಾಂವ್ನ ನಿವಾಸಿ ರಾಮ್ ಸುಮೇರ್ (60) ಅವರು ತಮ್ಮ ಪತ್ನಿ ಫೂಲ್ಮತಿ ಜೂನ್ 15 ರಂದು ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದ. ನಾಲ್ಕು ದಿನಗಳ ನಂತರ, ಜೂನ್ 19 ರಂದು ಉರುವಾ ಬಜಾರ್ ಪ್ರದೇಶದಲ್ಲಿ ಮಹಿಳೆಯ ಶವವೊಂದು ಪತ್ತೆಯಾಗಿತ್ತು. ಸುಮೇರ್ ಶವವನ್ನು ತನ್ನ ಹೆಂಡತಿಯೆಂದು ಗುರುತಿಸಿ ಅಂತಿಮ ವಿಧಿಗಳನ್ನು ಪೂರ್ಣಗೊಳಿಸಿದ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಆಕೆಯ ಮರಣೋತ್ತರ ಪರೀಕ್ಷೆಯಲ್ಲಿ ಮಹಿಳೆಯನ್ನು ಕತ್ತು ಹಿಸುಕಿ ಸಾಯಿಸಲಾಗಿದೆ ಎಂದು ಬಹಿರಂಗಪಡಿಸಿದ ನಂತರ ಪ್ರಕರಣವು ನಿಗೂಢ ತಿರುವು ಪಡೆದುಕೊಂಡಿದ್ದು, ಹೆಚ್ಚಿನ ತನಿಖೆಯನ್ನು ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಂಕಿತ ಹಂತಕನನ್ನು ಹಿಡಿಯಲು, ಪೊಲೀಸರು ಫೂಲ್ಮತಿಯ ಮೊಬೈಲ್ ಫೋನ್ ಅನ್ನು ಪತ್ತೆಹಚ್ಚಿದರು, ಅದು ಝಾನ್ಸಿಯಲ್ಲಿ ಸುಮಾರು 600 ಕಿಲೋಮೀಟರ್ ದೂರದಲ್ಲಿ ಸಕ್ರಿಯವಾಗಿತ್ತು. ಕರೆ ದಾಖಲೆಗಳು ಫೂಲ್ಮತಿ ಮತ್ತು ಸುಲ್ತಾನ್ಪುರದ ಶುಭಂ ಎಂಬುವವರ ನಡುವೆ ಆಗಾಗ್ಗೆ ಸಂವಹನ ನಡೆಸುತ್ತಿದ್ದವು. ವಿಚಾರಣೆ ನಡೆಸಿದಾಗ ಫೂಲ್ಮತಿ ಬದುಕಿದ್ದು, ಆಕೆಯನ್ನು ಝಾನ್ಸಿ ಬಳಿ ಕರೆತಂದಿರುವುದಾಗಿ ಶುಭಂ ಪೊಲೀಸರಿಗೆ ತಿಳಿಸಿದ್ದಾನೆ.ನಂತರ ಪೊಲೀಸರು ಆಕೆಯನ್ನು ಶುಭಂ ನೀಡಿದ ವಿಳಾಸದಲ್ಲಿ ಪತ್ತೆ ಹಚ್ಚಿದ್ದಾರೆ.
ಫೂಲ್ಮತಿ ತನ್ನ ತವರು ಮನೆಯಿಂದ ಜೂನ್ 15 ರಂದು ತನ್ನ ಮನೆಗೆ ಹೋಗಿದ್ದಳು ಆದರೆ ಬಂದಿರಲಿಲ್ಲ ಎಂದು ಸುಮೇರ್ ಪೊಲೀಸರಿಗೆ ತಿಳಿಸಿದ್ದಾನೆ. ವ್ಯಾಪಕ ಹುಡುಕಾಟದ ನಂತರ ಕಾಣೆಯಾಗಿರುವುದಾಗಿ ದೂರು ನೀಡಿದ್ದ.
ಮಹಿಳೆಯ ಹೇಳಿಕೆಯನ್ನು ದಾಖಲಿಸಿಕೊಂಡ ನಂತರ ಶನಿವಾರ ಆಕೆಯನ್ನು ಆಕೆಯ ಪತಿಯೊಂದಿಗೆ ವಾಪಸ್ ಕಳುಹಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ತೋಮರ್ ತಿಳಿಸಿದ್ದಾರೆ.
ಸದ್ಯ ಸುಮೇರ್, ಫೂಲ್ಮತಿ, ಶುಭಂ ಮತ್ತು ಶವಸಂಸ್ಕಾರವಾಗಿ ಹೋಗಿರುವ ಮೃತ ಮಹಿಳೆ ಯಾರು, ಇವರ ನಡುವಿನ ಸಂಪರ್ಕವನ್ನು ನಿರ್ಧರಿಸಲು ತನಿಖೆ ನಡೆಯುತ್ತಿದೆ. ಬಾಲಕನೊಬ್ಬ ಅನುಮಾನಾಸ್ಪದವಾಗಿ ಚಲಿಸುತ್ತಿರುವ ಸಿಸಿಟಿವಿ ಕೆಮೆರಾ ದೃಶ್ಯಾವಳಿಗಳನ್ನು ಪೊಲೀಸರು ಪಡೆದುಕೊಂಡಿದ್ದು, ಪ್ರಕರಣವನ್ನು ಹೊಸ ಕೋನದಲ್ಲಿ ಮರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
![Modi-Lokasabha](https://www.udayavani.com/wp-content/uploads/2024/07/Modi-Lokasabha-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Modi-Lokasabha](https://www.udayavani.com/wp-content/uploads/2024/07/Modi-Lokasabha-150x90.jpg)
Lokasabha: ಕಾಂಗ್ರೆಸ್ಗೆ 100ಕ್ಕೆ 99 ಸಿಕ್ಕಿದ್ದಲ್ಲ- ಪ್ರಧಾನಿ ಮೋದಿ ವಾಗ್ದಾಳಿ
![Anant Ambani ಮದುವೆಗೆ ಮುನ್ನ ಸಾಮೂಹಿಕ ವಿವಾಹ ಆಯೋಜನೆ; ವಧುಗಳಿಗೆ ತಲಾ ಒಂದು 1ರೂ. ವಿತರಣೆ](https://www.udayavani.com/wp-content/uploads/2024/07/anant-150x83.jpg)
Anant Ambani ಮದುವೆಗೆ ಮುನ್ನ ಸಾಮೂಹಿಕ ವಿವಾಹ; ವಧುಗಳಿಗೆ ತಲಾ ಒಂದು 1.01 ಲಕ್ಷರೂ. ವಿತರಣೆ
![Uttar Pradesh: ಸತ್ಸಂಗ ಕಾರ್ಯಕ್ರಮದಲ್ಲಿ ಕಾಲ್ತುಳಿತ-ಮಕ್ಕಳು ಸೇರಿ 27 ಮಂದಿ ದುರ್ಮರಣ](https://www.udayavani.com/wp-content/uploads/2024/07/Lucknoe-150x93.jpg)
Uttar Pradesh: ಸತ್ಸಂಗ ಕಾರ್ಯಕ್ರಮದಲ್ಲಿ ಕಾಲ್ತುಳಿತ-ಮಕ್ಕಳು ಸೇರಿ 50 ಮಂದಿ ದುರ್ಮರಣ
![](https://www.udayavani.com/wp-content/uploads/2024/07/Bite-150x84.jpg)
Uttar Pradesh: ಹಾವಿನ ದ್ವೇಷ…45 ದಿನಗಳಲ್ಲಿ 5 ಬಾರಿ ಹಾವು ಕಚ್ಚಿದರೂ ಬದುಕುಳಿದ ವ್ಯಕ್ತಿ!
![16](https://www.udayavani.com/wp-content/uploads/2024/07/16-150x90.jpg)
ಮದುವೆ ಆಗಲು ನಿರಾಕರಿಸಿದ್ದಕ್ಕೆ ಪ್ರಿಯಕರನ ಖಾಸಗಿ ಅಂಗವನ್ನೇ ಕತ್ತರಿಸಿದ ಪ್ರಿಯತಮೆ.!
MUST WATCH
ಹೊಸ ಸೇರ್ಪಡೆ
![Modi-Lokasabha](https://www.udayavani.com/wp-content/uploads/2024/07/Modi-Lokasabha-150x90.jpg)
Lokasabha: ಕಾಂಗ್ರೆಸ್ಗೆ 100ಕ್ಕೆ 99 ಸಿಕ್ಕಿದ್ದಲ್ಲ- ಪ್ರಧಾನಿ ಮೋದಿ ವಾಗ್ದಾಳಿ
![T20 World Cup Final; ಸೂರ್ಯ ಕ್ಯಾಚ್ ಬಗ್ಗೆ ಅನುಮಾನ ಪಟ್ಟವರಿಗೆ ಸಿಕ್ಕಿತು ಉತ್ತರ](https://www.udayavani.com/wp-content/uploads/2024/07/surya-150x83.jpg)
T20 World Cup Final; ಸೂರ್ಯ ಕ್ಯಾಚ್ ಬಗ್ಗೆ ಅನುಮಾನ ಪಟ್ಟವರಿಗೆ ಸಿಕ್ಕಿತು ಉತ್ತರ
![Anant Ambani ಮದುವೆಗೆ ಮುನ್ನ ಸಾಮೂಹಿಕ ವಿವಾಹ ಆಯೋಜನೆ; ವಧುಗಳಿಗೆ ತಲಾ ಒಂದು 1ರೂ. ವಿತರಣೆ](https://www.udayavani.com/wp-content/uploads/2024/07/anant-150x83.jpg)
Anant Ambani ಮದುವೆಗೆ ಮುನ್ನ ಸಾಮೂಹಿಕ ವಿವಾಹ; ವಧುಗಳಿಗೆ ತಲಾ ಒಂದು 1.01 ಲಕ್ಷರೂ. ವಿತರಣೆ
![Bidar; ಲೈಂಗಿಕ ಕಿರುಕುಳ ಪ್ರಕರಣ: ಇಬ್ಬರು ಶಿಕ್ಷಕರ ಅಮಾನತ್ತು](https://www.udayavani.com/wp-content/uploads/2024/07/suspended-150x83.jpg)
Bidar; ಲೈಂಗಿಕ ಕಿರುಕುಳ ಪ್ರಕರಣ: ಇಬ್ಬರು ಶಿಕ್ಷಕರ ಅಮಾನತ್ತು
![2-hunsur](https://www.udayavani.com/wp-content/uploads/2024/07/2-hunsur-150x90.jpg)
Hunsur: ಮಲಗಿದ್ದಲ್ಲೇ ಮೃತಪಟ್ಟ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.