![iOS 18 ನಲ್ಲಿ ಕನ್ನಡ ಸೇರಿ, ಭಾರತೀಯ ಭಾಷೆಗಳ ಬೆಂಬಲಕ್ಕೆ ಆದ್ಯತೆ](https://www.udayavani.com/wp-content/uploads/2024/07/iphone-415x279.jpg)
Manipal ಖಿನ್ನತೆಯಿಂದ ಬಳಲುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ
Team Udayavani, Jun 24, 2024, 12:24 AM IST
![Manipal ಖಿನ್ನತೆಯಿಂದ ಬಳಲುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ](https://www.udayavani.com/wp-content/uploads/2024/06/Gangolli-6-620x349.jpg)
ಮಣಿಪಾಲ: ಖಿನ್ನತೆಯಿಂದ ಬಳಲು ತ್ತಿದ್ದ ಮಣಿಪಾಲದ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೂಲತಃ ಮಂಗಳೂರಿನ ಕೋಡಿಕಲ್ ನಿವಾಸಿ ವೈದೇಹಿ (26) ಮೃತರು.
ಕ್ವಾಟ್ರರ್ಸ್ನಲ್ಲಿ ಉಳಿದುಕೊಂಡಿದ್ದ ಇವರು ಎರಡು ತಿಂಗಳ ಹಿಂದೆ ಖಿನ್ನತೆಗೆ ಒಳಗಾಗಿದ್ದು ಚಿಕಿತ್ಸೆ ಪಡೆದುಕೊಂಡಿದ್ದರು. ಖನ್ನತೆಗೆ ಕಾರಣ ಕೇಳಿದಾಗ ತನಗೆ ವಿದ್ಯಾಭ್ಯಾಸ ಮಾಡಲು ಕಷ್ಟವಾಗುತ್ತಿದ್ದು, ಒತ್ತಡದಲ್ಲಿ ಓದುತ್ತಿದ್ದೇನೆ ಎಂದು ಹೇಳುತ್ತಿದ್ದರು.
ವಿದ್ಯಾಭ್ಯಾಸದ ಒತ್ತಡದಿಂದ ಅಥವಾ ಇನ್ಯಾವುದೋ ವೈಯಕ್ತಿಕ ವಿಚಾರಗಳಿಂದ ಮನನೊಂದು ಜೂ.22ರಂದು ತಾನು ವಾಸವಿದ್ದ ಕ್ವಾಟ್ರರ್ಸ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಣಿಪಾಲ ಠಾಣೆಯಲ್ಲಿ ಮೃತರ ತಂದೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
![iOS 18 ನಲ್ಲಿ ಕನ್ನಡ ಸೇರಿ, ಭಾರತೀಯ ಭಾಷೆಗಳ ಬೆಂಬಲಕ್ಕೆ ಆದ್ಯತೆ](https://www.udayavani.com/wp-content/uploads/2024/07/iphone-415x279.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.