![INdia-team](https://www.udayavani.com/wp-content/uploads/2024/07/INdia-team-415x249.jpg)
Kundapura ಆನಗಳ್ಳಿ: ಹೊಳೆಗೆ ಬಿದ್ದು ವ್ಯಕ್ತಿ ಸಾವು
Team Udayavani, Jun 24, 2024, 12:37 AM IST
![ಆನಗಳ್ಳಿ: ಹೊಳೆಗೆ ಬಿದ್ದು ವ್ಯಕ್ತಿ ಸಾವು](https://www.udayavani.com/wp-content/uploads/2024/06/byndoor-7-620x365.jpg)
ಕುಂದಾಪುರ: ಬೆಂಗಳೂರಿನಿಂದ ಊರಿಗೆ ಹೋಗಿ ಬರುತ್ತೇನೆಂದು ಹೇಳಿ ಹೊರಟು ಬಂದಿದ್ದ ಬಡಾಕೇರಿ ಗ್ರಾಮದ ಸಾತುಬೆಟ್ಟು ನಿವಾಸಿ ರಾಜು ಬಿ. (48) ಅವರ ಮೃತದೇಹ ಜೂ.21 ರಂದು ಆನಗಳ್ಳಿ ಸಮೀಪದ ಹೊಳೆಯಲ್ಲಿ ಪತ್ತೆಯಾಗಿದೆ.
ರಾಜು ಅವರು ಬೆಂಗಳೂರಿನಲ್ಲಿ ಕ್ಯಾಟರಿಂಗ್ ಕೆಲಸ ಮಾಡಿಕೊಂಡಿದ್ದು, ಜೂ. 20ರಂದು ಊರಿಗೆ ಹೋಗಿ ಬರುತ್ತೇನೆಂದು ಹೇಳಿ ಹೊರಟಿದ್ದರು. ಜೂ. 21ರಂದು ಮಧ್ಯಾಹ್ನ ಆನಗಳ್ಳಿ ಹೊಳೆಯಲ್ಲಿ ಗಂಡಸಿನ ಮೃತದೇಹ ಸಿಕ್ಕಿರುವ ವಿಚಾರ ತಿಳಿದು ಸಹೋದರ ಅಶೋಕ (38) ಅವರು ಸ್ಥಳಕ್ಕೆ ಹೋಗಿ ನೋಡಿದಾಗ ಅದು ರಾಜು ಅವರದೇ ಮೃತದೇಹವೆಂದು ಗುರುತು ಪತ್ತೆ ಹಚ್ಚಿದ್ದಾರೆ.
ರಾಜು ಅವರು ಯಾವುದೋ ಕಾರಣಕ್ಕೆ ಆನಗಳ್ಳಿಯ ನದಿಯ ಸಮೀಪಕ್ಕೆ ಹೋದವರು ಆಕಸ್ಮಿಕವಾಗಿಹೊಳೆ ನೀರಿಗೆ ಬಿದ್ದು ಮುಳುಗಿ ಮೃತಪಟ್ಟಿರಬಹುದು ಎಂದು ತಿಳಿದು ಬಂದಿದೆ. ಸಹೋದರ ಅಶೋಕ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಢಿಕ್ಕಿ ; ಸಹ ಸವಾರನಿಗೆ ಗಾಯ
ಗಂಗೊಳ್ಳಿ: ಗುಜ್ಜಾಡಿಯ ನಾಗೇಂದ್ರ ಅವರ ಬೈಕ್ಗೆ ವಾಸ್ಟನ್ ಡಯಾಸ್ ಅವರ ಬೈಕ್ ಢಿಕ್ಕಿಯಾದ ಪರಿಣಾಮ ಸಹ ಸವಾರ ಶ್ರೀನಿವಾಸ ಗಾಯಗೊಂಡ ಘಟನೆ ಜೂ. 22ರಂದು ಸಂಭವಿಸಿದೆ. ನಾಗೇಂದ್ರ ಅವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
![INdia-team](https://www.udayavani.com/wp-content/uploads/2024/07/INdia-team-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Kundapura ಪೊಲೀಸ್ ಹೆಸರಿನಲ್ಲಿ ಲಕ್ಷ ದೋಚಿದರುKundapura ಪೊಲೀಸ್ ಹೆಸರಿನಲ್ಲಿ ಲಕ್ಷ ದೋಚಿದರು](https://www.udayavani.com/wp-content/uploads/2024/07/kun-1-150x90.jpg)
Kundapura ಪೊಲೀಸ್ ಹೆಸರಿನಲ್ಲಿ ಲಕ್ಷ ದೋಚಿದರು
![1-dssd](https://www.udayavani.com/wp-content/uploads/2024/07/1-dssd-150x101.jpg)
Heavy Rain; ಜುಲೈ 5 ರಂದು ಉಡುಪಿಯ 3 ತಾಲೂಕುಗಳಲ್ಲಿ ಪಿಯುಸಿವರೆಗೆ ರಜೆ
![Kollur: ಸೊಸೈಟಿ ಗುಡ್ಡೆ ಬಳಿ ಧರೆ ಕುಸಿದು ಮಣ್ಣಿನಡಿ ಸಿಲುಕಿ ಮಹಿಳೆ ಸಾವು](https://www.udayavani.com/wp-content/uploads/2024/07/kollur-150x93.jpg)
Kollur: ಸೊಸೈಟಿಗುಡ್ಡೆ ಬಳಿ ಧರೆ ಕುಸಿದು ಮಣ್ಣಿನಡಿ ಸಿಲುಕಿ ಮಹಿಳೆ ಸಾವು
![8-udupi](https://www.udayavani.com/wp-content/uploads/2024/07/8-udupi-150x90.jpg)
Udupi ಜಿಲ್ಲೆಯಲ್ಲಿ ಗಾಳಿ-ಮಳೆ ಹಾನಿ:ಮಾಹಿತಿ ಪಡೆದು,ಕ್ರಮಕ್ಕೆ ಸೂಚಿಸಿದ ಸಚಿವೆ ಹೆಬ್ಬಾಳ್ಕರ್
![5-byndoor](https://www.udayavani.com/wp-content/uploads/2024/07/5-byndoor-150x90.jpg)
Heavy Rain: ಬೈಂದೂರು ವಲಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.