Menstrual Cycle: ಹೆರಿಗೆಯ ಬಳಿಕ ಮಹಿಳೆಯ ಋತುಚಕ್ರ ಪೂರ್ವಸ್ಥಿತಿ ಸ್ಥಾಪನೆ

ಚಿಹ್ನೆಗಳು ಯಾವುವು? ಅನಿಯಮಿತವಾಗಿದ್ದರೆ ಎಚ್ಚರಿಕೆ ವಹಿಸಬೇಕು ಏಕೆ?

Team Udayavani, Jun 24, 2024, 10:34 AM IST

2-Health

ಶಿಶುವಿಗೆ ಜನ್ಮ ನೀಡಿದ ಬಳಿಕ ಬಾಣಂತಿತನದ ಅವಧಿಗೆ ಸ್ತ್ರೀಯ ದೇಹವು ಹೊಂದಿಕೊಳ್ಳಬೇಕಾಗಿರುವುದರಿಂದ ಆಕೆಯ ಋತುಚಕ್ರವು ಗಮನಾರ್ಹ ಬದಲಾವಣೆಗಳಿಗೆ ಒಳಗಾಗುತ್ತದೆ. ಆದರೆ ಮಹಿಳೆಯ ಋತುಚಕ್ರವು ಗರ್ಭಧಾರಣೆಗೆ ಪೂರ್ವಸ್ಥಿತಿಗೆ ಮರಳಿದೆ ಎಂಬುದನ್ನು ಸೂಚಿಸುವ ಕೆಲವು ಪ್ರಧಾನ ಚಿಹ್ನೆಗಳಿವೆ.

ಒಂದು ಪ್ರಧಾನ ಚಿಹ್ನೆ ಎಂದರೆ ಋತುಚಕ್ರವು ಹಿಂದಿನಂತೆ ನಿಯಮಿತವಾಗಿ ಆಗಲಾರಂಭಿಸುವುದು. ಸಾಮಾನ್ಯವಾಗಿ ಮಹಿಳೆಯ ಋತುಚಕ್ರವು ಹೆರಿಗೆಯ ಬಳಿಕ 6ರಿಂದ 8 ವಾರಗಳಲ್ಲಿ ಪುನರಾರಂಭವಾಗುತ್ತದೆ; ಆದರೆ ಇದು ವ್ಯಕ್ತಿನಿರ್ದಿಷ್ಟ ಅಂಶಗಳಾದ ಎದೆಹಾಲು ಉಣಿಸುವಿಕೆ, ಹಾರ್ಮೋನ್‌ ಬದಲಾವಣೆಗಳು ಮತ್ತು ಒಟ್ಟಾರೆ ದೇಹಾರೋಗ್ಯವನ್ನು ಆಧರಿಸಿ ಮಹಿಳೆಯಿಂದ ಮಹಿಳೆಗೆ ಬದಲಾಗಬಹುದು. ಶಿಶುಜನನವಾದ ಬಳಿಕ ಮಹಿಳೆಯ ದೇಹವು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಂತೆ ಋತುಸ್ರಾವಗಳ ನಡುವಣ ಅಂತರವು ಸ್ಥಿರಗೊಳ್ಳಬಹುದು ಹಾಗೂ ಋತುಸ್ರಾವದ ದಿನಗಳು ಮತ್ತು ಸ್ರಾವದ ಪ್ರಮಾಣ ಗರ್ಭ ಧರಿಸುವುದಕ್ಕೆ ಹಿಂದಿನ ದಿನಗಳನ್ನು ಹೋಲಬಹುದು.

ಋತುಚಕ್ರಕ್ಕೆ ಸಂಬಂಧಿಸಿದ ಲಕ್ಷಣಗಳ ನಿರಂತರತೆಯು ಇನ್ನೊಂದು ಚಿಹ್ನೆಯಾಗಿರಬಹುದಾಗಿದೆ. ಹೊಟ್ಟೆನೋವು, ಹೊಟ್ಟೆಯುಬ್ಬರ, ಭಾವನಾತ್ಮಕ ಏರುಪೇರು ಮತ್ತು ಸ್ತನಗಳು ಮೃದುವಾಗುವಂತಹ ಗರ್ಭ ಧರಿಸುವುದಕ್ಕೆ ಮುನ್ನ ಋತುಸ್ರಾವದ ಸಮಯದಲ್ಲಿ ಅನುಭವಕ್ಕೆ ಬರುತ್ತಿದ್ದ ಲಕ್ಷಣಗಳು ಹೆರಿಗೆಯಾದ ಬಳಿಕ ಋತುಚಕ್ರವು ಸಹಜ ಸ್ಥಿತಿಗೆ ಬರುತ್ತಿದ್ದಂತೆ ಪುನರಾರಂಭಗೊಳ್ಳಬಹುದು. ಈ ಪರಿಚಿತ ಲಕ್ಷಣಗಳು ಗರ್ಭ ಧರಿಸುವುದಕ್ಕೆ ಹಿಂದಿನ ಹಾರ್ಮೋನ್‌ ಸಮತೋಲನವು ಮತ್ತೆ ಸ್ಥಾಪನೆಯಾಗಿದೆ ಎಂಬುದರ ಸೂಚಕವಾಗಿವೆ.

ಆದರೆ ಹೆರಿಗೆಯ ಬಳಿಕ ಋತುಚಕ್ರದ ವಿಷಯವಾಗಿ ಯಾವುದೇ ಅಸಹಜತೆಗಳು ಕಂಡುಬಂದರೆ ಅವುಗಳನ್ನು ನಿರ್ಲಕ್ಷಿಸಬಾರದು. ಮಹಿಳೆಯಲ್ಲಿ ಸುದೀರ್ಘ‌ ಅವಧಿಗೆ ಭಾರೀ ಋತುಸ್ರಾವ, ಎರಡು ಋತುಚಕ್ರಗಳ ನಡುವೆ ಆಗಾಗ ಸ್ರಾವ ಅಥವಾ ಸಾಮಾನ್ಯಕ್ಕಿಂತ ಕಿರು ಅಥವಾ ದೀರ್ಘ‌ ಅವಧಿಯ ಋತುಸ್ರಾವಗಳು ಉಂಟಾಗುತ್ತಿದ್ದರೆ ಎಚ್ಚರಿಕೆ ವಹಿಸಬೇಕು. ಋತುಚಕ್ರಕ್ಕೆ ಸಂಬಂಧಿಸಿದ ಈ ಅಸಹಜತೆಗಳು ಹಾರ್ಮೋನ್‌ ಅಸಮತೋಲನ, ಥೈರಾಯ್ಡ ಕಾಯಿಲೆಗಳು, ಪಾಲಿಸಿಸ್ಟಿಕ್‌ ಓವರಿ ಸಿಂಡ್ರೋಮ್‌ (ಪಿಸಿಒಎಸ್‌) ಅಥವಾ ಪ್ರಜನನಾತ್ಮಕ ಅಂಗಗಳಲ್ಲಿ ತಲೆದೋರಿರಬಹುದಾದ ತೊಂದರೆಗಳ ಸಂಕೇತಗಳಾಗಿರಬಹುದಾಗಿದ್ದು, ಇವುಗಳು ಇದ್ದರೆ ವೈದ್ಯಕೀಯ ಚಿಕಿತ್ಸೆ ಅಗತ್ಯವಾಗಿರುತ್ತದೆ.

ಪ್ರತೀ ಮಹಿಳೆಯೂ ಶಿಶು ಜನನವಾದ ಬಳಿಕ ತಮ್ಮ ಋತುಚಕ್ರದ ಬಗ್ಗೆ ನಿಗಾ ಹೊಂದಿರಬೇಕು ಮತ್ತು ಕಳವಳಕ್ಕೆ ಕಾರಣವಾಗಬಹುದಾದ ಯಾವುದೇ ಬದಲಾವಣೆಗಳು ಅಥವಾ ಅಸಹಜತೆಗಳು ಇದ್ದುದಾದರೆ ಸ್ತ್ರೀರೋಗ ಮತ್ತು ಪ್ರಸೂತಿಶಾಸ್ತ್ರಜ್ಞರನ್ನು ಸಂಪರ್ಕಿಸಬೇಕು.

ಸ್ತ್ರೀರೋಗ ಮತ್ತು ಪ್ರಸೂತಿಶಾಸ್ತ್ರಜ್ಞರಿಂದ ನಿಯಮಿತವಾಗಿ ತಪಾಸಣೆಗೆ ಒಳಗಾಗುವುದು ಮತ್ತು ಮುಕ್ತವಾಗಿ ಸಮಾಲೋಚನೆ ನಡೆಸುವುದರಿಂದ ಯಾವುದೇ ತೊಂದರೆಗಳು ಇದ್ದರೆ ಶೀಘ್ರವಾಗಿ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಮತ್ತು ಆರೈಕೆಯನ್ನು ಪಡೆದುಕೊಳ್ಳುವುದು ಸಾಧ್ಯವಾಗುತ್ತದೆ. ಇದರಿಂದ ಗರಿಷ್ಠ ಪ್ರಜನನಾತ್ಮಕ ಆರೋಗ್ಯ ಮತ್ತು ಒಟ್ಟಾರೆ ಕ್ಷೇಮವನ್ನು ಹೊಂದಿರುವುದು ಸಾಧ್ಯ.

-ಡಾ| ಲಿನ್ಸೆಲ್‌ ಟೆಕ್ಸೀರಾ,

ಕನ್ಸಲ್ಟಂಟ್‌ ಒಬಿಜಿ ಕೆಎಂಸಿ ಆಸ್ಪತ್ರೆ,

ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಒಬಿಜಿ ವಿಭಾಗ, ಕೆಎಂಸಿ, ಮಂಗಳೂರು)

ಟಾಪ್ ನ್ಯೂಸ್

CM-Mysore1

MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ

Kota-poojary

Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ

SSLLC

leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ

1-horoscope

Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ

Text-Bokk

KSOU: ಪರೀಕ್ಷೆ ಸಮೀಪಿಸುತ್ತಿದ್ದರೂ ಮುದ್ರಿತ ಪಠ್ಯ ಸಿಗಲಿಲ್ಲ

1-hejb

Israel ಸರ್ಜಿಕಲ್‌ ಸ್ಟ್ರೈಕ್‌: ಹೆಜ್ಬುಲ್ಲಾ ಮುಖ್ಯಸ್ಥನ ಅಂತ್ಯಕ್ಕೆ 80 ಟನ್‌ ಬಾಂಬ್‌!

bjp-congress

BJP vs Congress ; ಕೇಸ್‌ ಮೇಲೆ ಕೇಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7(1)

Health: ಆಹಾರ ಚೆನ್ನಾಗಿ ಜಗಿದು ನುಂಗಿ ನೆತ್ತಿಗೆ ಹತ್ತದಿರಲಿ!

Operation ಥಿಯೇಟರ್‌ ಒಳಗೆ ಏನು ನಡೆಯುತ್ತದೆ?

Operation ಥಿಯೇಟರ್‌ ಒಳಗೆ ಏನು ನಡೆಯುತ್ತದೆ?

(Expiry Date)ಔಷಧಗಳ ಅವಧಿ ಮುಗಿಯುವ ದಿನಾಂಕ; ರಾಷ್ಟ್ರೀಯ ಫಾರ್ಮಕೋವಿಜಿಲೆನ್ಸ್‌ ಸಪ್ತಾಹ

Expiry Date; ಔಷಧಗಳ ಅವಧಿ ಮುಗಿಯುವ ದಿನಾಂಕ; ರಾಷ್ಟ್ರೀಯ ಫಾರ್ಮಕೋವಿಜಿಲೆನ್ಸ್‌ ಸಪ್ತಾಹ

6-redmeat

Red Meat: ಮಧುಮೇಹ ಉಂಟಾಗುವ ಅಪಾಯ ಮತ್ತು ಕೆಂಪು ಮಾಂಸ ಸೇವನೆಗಿರುವ ಸಂಬಂಧ

5-body-weight

Body Weight: ಕ್ರೀಡಾಳುಗಳ ಸಾಧನೆಯ ಮೇಲೆ ಕ್ಷಿಪ್ರ ದೇಹತೂಕ ಏರಿಳಿತದ ಪರಿಣಾಮಗಳು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

CM-Mysore1

MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ

Kota-poojary

Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ

SSLLC

leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ

1-horoscope

Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ

Text-Bokk

KSOU: ಪರೀಕ್ಷೆ ಸಮೀಪಿಸುತ್ತಿದ್ದರೂ ಮುದ್ರಿತ ಪಠ್ಯ ಸಿಗಲಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.