Water: ಮಳೆಗಾಲದಲ್ಲೂ ಇರಲಿ ನೀರಿನ ಕಾಳಜಿ


Team Udayavani, Jun 24, 2024, 11:45 AM IST

4-

ಮಳೆ ಬಂದು ಪರಿಸರ ಹಚ್ಚ ಹಸುರಿನಿಂದ ಕಂಗೊಳಿಸುತ್ತಿದೆ. ಬಾವಿ, ಕೆರೆ, ಜಲಮೂಲಗಳೆಲ್ಲ ಮೈದುಂಬಿ ಹರಿಯುತ್ತಿವೆ. ಬೇಸಗೆಯಲ್ಲಿದ್ದ ನೀರಿನ ಕ್ಷಾಮ ಈಗ ಇಲ್ಲ. ಕುಡಿಯಲು ಮತ್ತು ದೈನಂದಿನ ಮನೆ ಕೆಲಸಗಳಿಗೆ ನೀರು ಬೇಕಾದಷ್ಟು ದೊರೆಯುತಿದ್ದರೂ ನೀರಿನ ಕುರಿತು ಈಗ ಎಕೆ ಕಾಳಜಿ ಹೊಂದಬೇಕು ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಖಂಡಿತ ಮೂಡಿರಬಹುದು. ಕಾರಣ ಇಷ್ಟೇ “ಹನಿ ಹನಿಗೂಡಿ ಹಳ್ಳ’ ಎಂಬ ನಾಣ್ಣುಡಿಯಂತೆ ಈಗೇನೋ ನೀರಿನ ಕೊರತೆ ಇಲ್ಲ ಆದರೆ ಬೇಸಗೆ ಕಾಲದಲ್ಲಿ ಬರಡಾಗಿರುವ ಈ ಭೂಮಿ, ತಳ ಕಾಣುವ ಬಾವಿ, ಇವೆಲ್ಲವನ್ನು ಊಹಿಸಿದರೆ ಈಗಲೂ ಭಯವಾಗುತ್ತದೆ.

ಮಳೆಗಾಲದಲ್ಲಿ ಧಾರಾಕಾರವಾಗಿ ಹರಿಯುವ ಮಳೆ ನೀರನ್ನು ಸಂಗ್ರಹಿಸಿ ನಾಳೆಗಾಗಿ ಅದನ್ನು ಶೇಖರಿಸಿದರೆ ಖಂಡಿತ ಬೇಸಗೆಯಲ್ಲಿ ಜಲಕ್ಷಾಮ ಉಂಟಾಗುವುದಿಲ್ಲ. ಪ್ರತಿಯೊಂದು ಮನೆಯಲ್ಲೂ ಇಂಗುಗುಂಡಿ ಮತ್ತು ಮಳೆ ನೀರಿನ ಸಂರಕ್ಷಣೆಗಾಗಿ ಮಳೆ ಕೊಯ್ಲು ಮುಂತಾದ ಕ್ರಮಗಳನ್ನು ಈಗಲೇ ಪ್ರಾರಂಭಿಸಿದರೆ ಬೇಸಗೆಯಲ್ಲಿ ಬರಗಾಲ ಎದುರಾಗುವುದಿಲ್ಲ.

ಈಗ ಬರುವಂತ ಮಳೆ ನೀರನ್ನು ಹಾಗೆಯೇ ಹರಿಯ ಬಿಟ್ಟರೆ ಈ ಶುದ್ಧವಾದ ನೀರು ಹಳ್ಳ, ಕೊಳ್ಳ, ನದಿಗಳನ್ನು ಸೇರಿ ಅನಂತರ ಸಮುದ್ರಕ್ಕೆ ಸೇರಿದರೆ ಸಿಹಿನೀರು ಉಪ್ಪು ನೀರಾಗಿ ಮಾರ್ಪಟ್ಟ ಅನಂತರ ಅದನ್ನು ಬಳಸಲು ಸಾಧ್ಯವಿಲ್ಲ. ಹಾಗಾಗಿ “ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ’ ಅಂದರೆ ಬೇಸಗೆ ಕಾಲದಲ್ಲಿ ಬರಗಾಲ ಬಂದಾಗ ನೀರಿಗಾಗಿ ಹೋರಾಡುವ ಮತ್ತು ಹಾರಾಡುವುದರ ಬದಲು ಈಗಿನಿಂದಲೇ ನಮ್ಮ ಸುಂದರ ನಾಳೆಗಾಗಿ ಒಂದಿಷ್ಟು ಜಾಗರೂಕತೆ, ಮುಂದಾಲೋಚನೆ ಹೊಂದಿದರೆ ಭೂಮಿಯ ಅಂತರ್ಜಲಮಟ್ಟವನ್ನು ಹೆಚ್ಚಿಸಬಹುದು.

ನಾವು ಈಗಾಗಲೇ ಅರಣ್ಯನಾಶ, ಕೊಳವೆಬಾವಿ ನಿರ್ಮಾಣ, ಸ್ವತ್ಛಂದವಾಗಿ ಹರಿಯುತ್ತಿದ್ದ ನೀರಿಗೆ ಅಣೆಕಟ್ಟು ಕಟ್ಟಿ ಅಭಿವೃದ್ಧಿ, ತಂತ್ರಜ್ಞಾನದ ಹೆಸರಿನಲ್ಲಿ ಪರಿಸರವನ್ನು ಹಾಳು ಮಾಡಿದ್ದು, ಸುನಾಮಿ, ಅತಿವೃಷ್ಟಿ, ಅನಾವೃಷ್ಟಿ, ಬರಗಾಲ ಹೀಗೆ ಈ ಎಲ್ಲ ರೂಪವನ್ನು ಕಂಡಿದ್ದೇವೆ. ಈಗಲೂ ಪರಿಸರ ಜಾಗೃತಿಯ ಕುರಿತು ಒಂದಿಷ್ಟು ಜಾಗರೂಕತೆ ವಹಿಸದಿದ್ದರೆ ನಮ್ಮ ಮುಂದಿನ ಜನಾಂಗದ ಪಾಡು ಶೋಚನೀಯವಾದೀತು.

ಈಗಾಗಲೇ ಸಮೃದ್ಧವಾಗಿ ಅಂತರ್ಜಲವಿದ್ದ ಜಿಲ್ಲೆಗಳು ಬರಪೀಡಿತ ಜಿಲ್ಲೆಗಳೆಂದು ಹೆಸರುವಾಸಿ ಆದಾಗಲೇ ನಮಗೆ ಎಚ್ಚರಿಕೆಯ ಕರೆಗಂಟೆ ಬಾರಿಸಿದಂತೆ. ಹಾಗಾಗಿ ನಾವು ಇನ್ನೂ ಹಾಯಾಗಿ ಮಲಗಿದ್ದರೆ ನಮ್ಮ ಮಕ್ಕಳು ಮೊಮ್ಮಕ್ಕಳ ಶಾಪ ಖಂಡಿತ ತಟ್ಟಿತು.

-ಬಿ. ಶಶಾಂಕ ಪೈ

ಎಂ.ಪಿ.ಎಂ. ಕಾಲೇಜು, ಕಾರ್ಕಳ

ಟಾಪ್ ನ್ಯೂಸ್

Road

Traffic Jam: ಬಿ.ಸಿ.ರೋಡು-ಕಲ್ಲಡ್ಕ ಮಧ್ಯೆ ಹದಗೆಟ್ಟ ಹೆದ್ದಾರಿ

ಸೇತುವೆ ದುಃಸ್ಥಿತಿ; ಘನ ವಾಹನ ಸಂಚಾರ ನಿಷೇಧ

Bridge ದುಃಸ್ಥಿತಿ; ಘನ ವಾಹನ ಸಂಚಾರ ನಿಷೇಧ: ಜಿಲ್ಲಾಧಿಕಾರಿ ಆದೇಶ

Mangaluru ಉಳಾಯಿಬೆಟ್ಟು ಉದ್ಯಮಿಯ ಮನೆ ದರೋಡೆ ಪ್ರಕರಣ: 8 ಮಂದಿ ಪೊಲೀಸರ ವಶಕ್ಕೆ

Mangaluru ಉಳಾಯಿಬೆಟ್ಟು ಉದ್ಯಮಿಯ ಮನೆ ದರೋಡೆ ಪ್ರಕರಣ: 8 ಮಂದಿ ಪೊಲೀಸರ ವಶಕ್ಕೆ

Rain ಕರಾವಳಿಯಲ್ಲಿ ಸಾಧಾರಣ ಮಳೆ: ಜು. 5ರಿಂದ “ಆರೆಂಜ್‌ ಅಲರ್ಟ್‌’

Rain ಕರಾವಳಿಯಲ್ಲಿ ಸಾಧಾರಣ ಮಳೆ: ಜು. 5ರಿಂದ “ಆರೆಂಜ್‌ ಅಲರ್ಟ್‌’

Shiroor : ಗಾಳಿ ಮಳೆಗೆ ಹಾರಿ ಹೋದ ಹೊಟೇಲ್‌ ಮೇಲ್ಛಾವಣಿ

Shiroor : ಗಾಳಿ ಮಳೆಗೆ ಹಾರಿ ಹೋದ ಹೊಟೇಲ್‌ ಮೇಲ್ಛಾವಣಿ

Kodagu: ಆನೆ ದಾಳಿ; ರಿಕ್ಷಾ ಜಖಂ, ತೋಟಕ್ಕೆ ಹಾನಿ

Kodagu: ಆನೆ ದಾಳಿ; ರಿಕ್ಷಾ ಜಖಂ, ತೋಟಕ್ಕೆ ಹಾನಿ

Elephant ತುಳಿತದಿಂದ ಜೀವ ಹಾನಿ ತಡೆಗೆ ಕಾರ್ಯಾಗಾರ

Elephant ತುಳಿತದಿಂದ ಜೀವ ಹಾನಿ ತಡೆಗೆ ಕಾರ್ಯಾಗಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-uv-fusion

Education: ಅಸಮತೋಲನೆ ನಿವಾರಣೆಗೆ ಸಹ ಶಿಕ್ಷಣ ಸರಿಯಾದ ದಾರಿ

13-tn-sitharama

T. N. Seetharam: ಧಾರಾವಾಹಿಗಳಿಗೆ ಹೊಸ ಭಾಷ್ಯ ನೀಡಿದ ನಿರ್ದೇಶಕ ಟಿ.ಎನ್‌. ಸೀತಾರಾಮ

11-uv-fusion

Rajeev Taranath: ಸರೋದ್‌ ಸ್ವರ ಮಾಂತ್ರಿಕನ ಸ್ವರ್ಗಾರೋಹಣ

10-uv-fusion

UV Fusion: ನೈಸರ್ಗಿಕ ಕಾಡು ಪುನರುತ್ಥಾನಕ್ಕೆ ಕೊಡುಗೆ ನೀಡುವ ಉಪ್ಪಳಿಗೆ

11-uv-fusion

UV Fusion: ಸಿನೆಮಾ

MUST WATCH

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

ಹೊಸ ಸೇರ್ಪಡೆ

Road

Traffic Jam: ಬಿ.ಸಿ.ರೋಡು-ಕಲ್ಲಡ್ಕ ಮಧ್ಯೆ ಹದಗೆಟ್ಟ ಹೆದ್ದಾರಿ

ಸೇತುವೆ ದುಃಸ್ಥಿತಿ; ಘನ ವಾಹನ ಸಂಚಾರ ನಿಷೇಧ

Bridge ದುಃಸ್ಥಿತಿ; ಘನ ವಾಹನ ಸಂಚಾರ ನಿಷೇಧ: ಜಿಲ್ಲಾಧಿಕಾರಿ ಆದೇಶ

Mangaluru ಉಳಾಯಿಬೆಟ್ಟು ಉದ್ಯಮಿಯ ಮನೆ ದರೋಡೆ ಪ್ರಕರಣ: 8 ಮಂದಿ ಪೊಲೀಸರ ವಶಕ್ಕೆ

Mangaluru ಉಳಾಯಿಬೆಟ್ಟು ಉದ್ಯಮಿಯ ಮನೆ ದರೋಡೆ ಪ್ರಕರಣ: 8 ಮಂದಿ ಪೊಲೀಸರ ವಶಕ್ಕೆ

Rain ಕರಾವಳಿಯಲ್ಲಿ ಸಾಧಾರಣ ಮಳೆ: ಜು. 5ರಿಂದ “ಆರೆಂಜ್‌ ಅಲರ್ಟ್‌’

Rain ಕರಾವಳಿಯಲ್ಲಿ ಸಾಧಾರಣ ಮಳೆ: ಜು. 5ರಿಂದ “ಆರೆಂಜ್‌ ಅಲರ್ಟ್‌’

Shiroor : ಗಾಳಿ ಮಳೆಗೆ ಹಾರಿ ಹೋದ ಹೊಟೇಲ್‌ ಮೇಲ್ಛಾವಣಿ

Shiroor : ಗಾಳಿ ಮಳೆಗೆ ಹಾರಿ ಹೋದ ಹೊಟೇಲ್‌ ಮೇಲ್ಛಾವಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.