Education: ಶಿಕ್ಷಣ ಎಂದರೆ ಕೇವಲ ಅಂಕ ಗಳಿಕೆಯೇ ?


Team Udayavani, Jun 24, 2024, 2:20 PM IST

13-uv-fusion

ಶರವೇಗದಲ್ಲಿ ಮುನ್ನಡೆಯುವ ಕಾಲಘಟ್ಟವು ನಮ್ಮರಿವಿಗೆ ಬಾರದಂತೆ ಬದಲಾಗುತ್ತ ಓಡುತ್ತಿದೆ. ಇಂತಹ ಈ ಸಮಾಜದಲ್ಲಿ ಓರ್ವ ವ್ಯಕ್ತಿಯನ್ನು ಅಳೆಯುವುದು ಶಿಕ್ಷಣ ಕ್ಷೇತ್ರದಲ್ಲಿ ಆತ ಗಳಿಸಿರುವ ಅಂಕಗಳಿಂದ ಎನ್ನುವುದು ಸತ್ಯ ಸಂಗತಿ.  ಹಾಗಾದರೆ, ಕೇವಲ ಅಂಕಗಳಿಕೆ ಒಂದೇ ಶಿಕ್ಷಣವೇ?

ಗಳಿಸಿರುವ ಅಂಕವೇ ಆತನನ್ನು ಅಳೆಯುತ್ತದೆ ಎಂದಾದರೆ ವ್ಯಕ್ತಿತ್ವಕ್ಕೆ, ಗುಣಕ್ಕೆ, ಜ್ಞಾನಕ್ಕೆ ಬೆಲೆಯೇ ಇಲ್ಲವೇ? ಎಂಬುವುದು ನಮ್ಮಲ್ಲಿ ಉದ್ಭವಿಸಬಹುದಾದ ಸರ್ವೇಸಾಮಾನ್ಯವಾದ ಪ್ರಶ್ನೆ. ಇಂತಹ ಕೆಲವು ಪ್ರಶ್ನೆಗಳಿಗೆ ಉತ್ತರ ನಮಗೆ ತಿಳಿದಿದ್ದರೂ ಸಹ ಪ್ರಶ್ನೆ ಏಳುವಂತಹ ಸಂದರ್ಭವನ್ನು ಏಕೆ ನಾವೇ ಉಂಟು ಮಾಡುತ್ತೇವೆ?, ಎಂಬುದಕ್ಕೆ ಯಾರ ಬಳಿಯೂ ಉತ್ತರವಿರದೇನೋ. ಇದಕ್ಕೆ ಅನ್ವಯಿಸುವ ಒಂದು ಉದಾಹರಣೆ ಎಂದರೆ ಹಿಂದಿನ ಹಾಗೂ ಇಂದಿನ ಕಾಲದ ಶಿಕ್ಷಣ ರೀತಿ.

ವೇದಗಳ ಕಾಲದ ಶಿಕ್ಷಣ ಪದ್ಧತಿ

ವೈದಿಕ ಯುಗದಲ್ಲಿ ಹೆಚ್ಚಾಗಿ ಭಾರತೀಯ ಉಪಖಂಡದಲ್ಲಿ ಪ್ರಚಲಿತದಲ್ಲಿದ್ದ ಶಿಕ್ಷಣ ಪದ್ಧತಿ ಎಂದರೆ ಗುರುಕುಲ ಪದ್ಧತಿ.  ಅಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳ ಬಗ್ಗೆ ತಿಳಿಸಿಕೊಡಲಾಗುತ್ತಿತ್ತು. ಗುರುಕುಲ ಎಂದರೆ ಗುರುವಿನ ವಸತಿ. ಒಮ್ಮೆ ವಿದ್ಯೆ ಕಲಿಯಲು ಗುರುಕುಲ ಹೊಕ್ಕರೆ 7 ಅಥವಾ 12 ಅಥವಾ 21 ವರ್ಷಗಳವರೆಗೆ ಅಲ್ಲಿಯೇ ಇದ್ದು ಕಲಿಯುವುದು ಪದ್ಧತಿ. ದೈನಂದಿನ ಎಲ್ಲ ಚಟುವಟಿಕೆಗಳನ್ನು, ಜೀವನ ಪಾಠವನ್ನು, ಸಹ ಬಾಳ್ವೆಯನ್ನು, ಶಿಕ್ಷಣದೊಂದಿಗೆ ಕಲಿಯುವುದು ಇಲ್ಲಿನ ಉದ್ದೇಶ.

ತಮ್ಮ ಮನೆಯಿಂದ ಹೊರ ಉಳಿದವರಿಗೆ ಗುರು ಪತ್ನಿಯು ತಾಯಿ ಸ್ಥಾನದಲ್ಲಿರುವಳು. ಸಹಪಾಠಿಗಳು ಕುಟುಂಬದಂತಾಗಿ ಅಲ್ಲೊಂದು ಸುಂದರ ಬಾಂಧವ್ಯ, ಸ್ನೇಹ ಮನೋಭಾವ, ಸಂಬಂಧಗಳು ಸೃಷ್ಟಿಯಾಗಿ ಜೀವನಕ್ಕೆ ಬೇಕಾದ ಮೌಲ್ಯಗಳನ್ನು ಕಲಿತುಕೊಳ್ಳುವ ಅವಕಾಶವಿತ್ತು.

ಗುರು ಶಿಷ್ಯರ ಮಧ್ಯೆ ಅಂತರ ಕಡಿಮೆ ಇದ್ದು ಉತ್ತಮ ಬಾಂಧವ್ಯವಿತ್ತು. ಗುರುವು ಯಾವುದೇ ರೀತಿಯ ಶುಲ್ಕವನ್ನು ತೆಗೆದುಕೊಳ್ಳುತ್ತಿರಲಿಲ್ಲ. ಕೊನೆಗೊಂದು ಗೌರವದ ಸಂಕೇತವೆಂಬಂತೆ ಗುರುದಕ್ಷಿಣೆ ಕೊಡುವ ಸಂಪ್ರದಾಯವಿತ್ತು. ಶಿಕ್ಷಣಾವಧಿ ಪೂರ್ಣವಾಗಿ ವಿದಾಯ ಹೇಳಿ ಹೊರಡುವ ಸಮಯದಲ್ಲಿ ಅವನೊಬ್ಬ ಸಂಸ್ಕಾರಯುತ ವ್ಯಕ್ತಿಯಾಗಿ ಹೊರಹೊಮ್ಮುತ್ತಿದ್ದುದು ಸತ್ಯ.

ಈಗಿನ ಕಾಲದ ಶಿಕ್ಷಣ ಪದ್ಧತಿ

ಇಂದಿನ ಶಿಕ್ಷಣವು ಯಾವ ರೀತಿ ಇದೆ ಎಂಬುದು ಒಂದು ಹಂತಕ್ಕೆ ಎಲ್ಲರಿಗೂ ತಿಳಿದಿದೆ. ಸರಳವಾಗಿ ಹೇಳುವುದಾದರೆ ವಿದ್ಯೆ, ವಿದ್ಯಾಸಂಸ್ಥೆಗಳು ವ್ಯವಹಾರದ ಆಧಾರದ ಮೇಲೆ ನಡೆಯುತ್ತಿವೆ. ವರ್‌ಷದಿಂದ ವರ್ಷಕ್ಕೆ ವಿದ್ಯಾಭ್ಯಾಸದ ಶುಲ್ಕವು ನಾಗಾಲೋಟದಲ್ಲಿ  ಏರುತ್ತಿದೆ.

ಒಂದು ಉದಾಹರಣೆ ಎಂದರೆ ಪದವಿ ಪೂರ್ವ ಶಿಕ್ಷಣ. ವರ್ಷದ ಕಲಿಕೆಗೆ ಹೇಗೂ ಲಕ್ಷಗಟ್ಟಲೆ ಶುಲ್ಕ ಕಟ್ಟಿದರೆ, ಇಉಖ, ಒಉಉ, Nಉಉಖ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಳಿಗೆ ಮತ್ತೆ ಇನ್ನೊಂದಷ್ಟು ‘ಇಟಚcಜಜಿnಜ ಊಛಿಛಿs’ ಎಂಬ ಹಣೆಪಟ್ಟಿಯಲ್ಲಿ ಹಣ. ವಿದ್ಯಾರ್ಥಿಯೋರ್ವನ ದಿನದ ಬಹುಪಾಲು ಇಂತಹ  ತರಗತಿಗಳಿಗೆ ಮೀಸಲಾದರೆ, ಅಲ್ಲಿ ಕೊಡುವ ಚಟುವಟಿಕೆಗಳನ್ನು ಪೂರೈಸಲು ನಂತರದ ಸಮಯ ಕಳೆಯುತ್ತದೆ. ನಿತ್ಯವೂ ಇದೇ ಪುನರಾವರ್ತನೆಯಾದರೆ, ವೈಯಕ್ತಿಕ ಸಮಯ, ಕೌಟುಂಬಿಕ ಸಮಯ ಹಾಗೂ ಪಠ್ಯೇತರ ವಿಷಯಗಳಿಗೆ ಸಮಯವೆಲ್ಲಿ!? ಇದೊಂದು ರೀತಿಯ ಯಾಂತ್ರಿಕ ಜೀವನವಾಗುತ್ತದೆ.

ಇತ್ತೀಚೆಗೆ ಎರಡು-ಮೂರು ವರ್ಷದ ಅಂತಿಮ ಪರೀಕ್ಷೆಯ ಫಲಿತಾಂಶ ಪ್ರಕಟವಾದಾಗ ಪೂರ್ಣ ಅಂಕಗಳಿಸಿದ ವಿದ್ಯಾರ್ಥಿಗಳು ಹೆಚ್ಚಾಗಿ ಕಂಡಿದ್ದಾರೆ. ಅವರ ದಿನಚರಿ ಕೇಳಿದರೆ ಓದು-ಪುಸ್ತಕ-ಕೋಚಿಂಗ್‌ ಬಿಟ್ಟರೆ ಮತ್ತಿನ್ನೇನು ಇರುವುದಿಲ್ಲ. ಹಾಗಾದರೆ ಜೀವನಕ್ಕೆ ಅಷ್ಟೇ ಸಾಕೇ? ಅಷ್ಟು ಅಂಕಗಳಿಸಿದವರೆಲ್ಲರೂ ಉತ್ತಮರೇ? ಎಂಬ ಪ್ರಶ್ನೆಗೆ ಉತ್ತರ ನಗು ಒಂದೇ. ಆದರೆ ತಿಳಿಯಲೇಬೇಕಾದ ವಿಷಯವೇನೆಂದರೆ, ಯಾಂತ್ರಿಕ ಜೀವನದಲ್ಲಿ ವ್ಯಕ್ತಿತ್ವ- ಕೌಶಲ್ಯಗಳೆಲ್ಲದರಿಂದ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ.

ಎಲೆಕ್ಟ್ರಾನಿಕ್‌ ಉಪಕರಣಗಳು, ಕೃತಕ ಬುದ್ಧಿಮತ್ತೆ(ಅಐ) ಯಂತಹ ತಂತ್ರಜ್ಞಾನಗಳಿಗೆ ವಿದ್ಯಾರ್ಥಿಗಳು ಹೊಂದಿಕೊಂಡು ತಮ್ಮ ಯೋಚನಾ ಲಹರಿಯನ್ನು ಕಳೆದುಕೊಂಡಿದ್ದಾರೆ. ತಮ್ಮ ಮೆದುಳಿಗೆ ಕೆಲಸವೇ ಇಲ್ಲದಂತಾಗಿದೆ. ಇದಕ್ಕೆ ಮೂಲ ಕಾರಣ ಇಂದಿನ  ಶಿಕ್ಷಣ ಪದ್ಧತಿ ಎಂದರೆ ತಪ್ಪಾಗಲಾರದು.

‘ಶಿಕ್ಷಣ’ ಎಂಬ ಪದದಲ್ಲಿ ಇರುವಂತೆ ‘ಹಣ’ವೇ ಈಗ ಮುಖ್ಯ ಗುರಿಯಾಗಿ, ಶಿಕ್ಷೆ ಇಲ್ಲದ ಶಿಕ್ಷಣವಾಗಿಹೋಗಿರುವುದು ವಿಪರ್ಯಾಸ. ಸಮಾಜದಲ್ಲಿ ಹೇಗೆ ಜೀವನ ನಡೆಸುವುದು, ಸಹಬಾಳ್ವೆ- ಸಂಗ ಜೀವನ ಹೇಗೆ, ಎನ್ನುವುದು ಕಲಿಸಬೇಕಾದ ಶಿಕ್ಷಣವು ಈಗ ಕೌಶಲ್ಯಾಧಾರಿತವಾಗಿರದೆ ವ್ಯಾವಹಾರಿಕ ಮನಸ್ಥಿತಿಯಾಗಿದೆ..

“ಮನೆಯೇ ಮೊದಲ ಪಾಠಶಾಲೆ’ ಎಂಬುದೇನೋ ಸರಿ. ಆದರೆ ಮನೆಯವರೇ ಅಂಕದ ಹಿಂದೆ ಬಿದ್ದರೆ ಅಥವಾ ಮಕ್ಕಳಿಗೆ ಪೂರ್ಣಾಂಕಗಳಿಸು ಎಂದು ಆಮಿಷ ಒಡ್ಡಿದರೆ, ಅವರ ಮುಂದಿನ ದಿನಗಳು ದಾರುಣವಾಗಿರುವುದಂತೂ ಸತ್ಯ. ಹೀಗಿರುವಾಗ ಶಿಕ್ಷಣವು ಅಂಕಗಳಿಗೆ ಕೇಂದ್ರೀಕೃತವಾಗದೇ ವ್ಯಕ್ತಿತ್ವ ವಿಕಸನ, ಪಠ್ಯೇತರ ವಿಚಾರಗಳಿಗೂ ಪ್ರಾಮುಖ್ಯತೆ ನೀಡುವಂತಾಗಬೇಕು. ಜೀವನ ಮೌಲ್ಯಗಳನ್ನು ಅಳವಡಿಸ್ಕೊಳ್ಳುವ ಬುನಾದಿಯಾಗಬೇಕು.

ಇನ್ನಾದರೂ ಶಿಕ್ಷಣ ಕ್ಷೇತ್ರವು ಕೇವಲ ಧನಾಧಾರಿತವಾಗಿರದೇ ಇರಲಿ ಎಂಬ ಅಭಿಲಾಷೆ ನನ್ನದು. ಬಹುಶಃ ಇಂದಿನ ಮಕ್ಕಳಿಗೆ ಗುರುಕುಲ ಪದ್ಧತಿಯೇ ಪುನಃ ಬಂದರೂ ಉತ್ತಮವಾದೀತೇನೋ ಎಂಬುವುದು ನನ್ನ ಅಭಿಪ್ರಾಯ.

- ಕೃಪಾಶ್ರೀ

ಕುಂಬಳೆ 

ಟಾಪ್ ನ್ಯೂಸ್

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1sadgu

Pariksha Pe Charcha: ಸಾರ್ಟ್‌ಫೋನ್‌ಗಿಂತಲೂ ನೀವು ಸಾರ್ಟ್‌ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.