UV Fusion: ಐ (i) ಅಂದ್ರೆ?


Team Udayavani, Jun 24, 2024, 3:10 PM IST

17-uv-fusion

ಪ್ರತಿ ಪದವನ್ನು ಲೇಖಕರು ಅವರ ತೆಕ್ಕೆಗೆ ಬೇಕಾದ ರೀತಿಯಲ್ಲಿ ಸಮರ್ಪಕವಾಗಿ ಬಳಸಿಕೊಂಡು ಪಕ್ವ ಭಂಡಾರವಾಗಿ ರೂಪಿಸಿ ಓದುಗರ ಮುಂದಿರಡುವಲ್ಲಿ ಯಶಸ್ವಿಯಾಗುತ್ತಾರೆ.ಹಾಗಾದ್ರೆ ನಾವು ಬಹಿರಂಗವಾಗಿ ಒಂದು ಪದಕ್ಕೆ ಹೊಸ ರೂಪ ನೀಡೋಣ, ಏನಂತೀರಾ?

ನನ್ನತನವನ್ನು ಪ್ರದರ್ಷಿಸುವ “ನಾನು’ ಎಂಬ ಶಬ್ದ ಕೇಳಿರಬಹುದು. ಈ ನಾನು ಎಂಬ ಶಬ್ದದ ಉದ್ಗಾರದೊಡನೆ ಧನಾತ್ಮಕ ಯೋಚನೆ ನಿರ್ಮಾಣವಾಗುವುದಕ್ಕಿಂತ ಮನಸ್ಸಿಗೆ ನಾಟುವುದು ಒಂದಿಷ್ಟು ಋಣಾತ್ಮಕ ಛಾಯೆಯೇ.

“ನಾನು’ ಎಂದರೆ ಸಾಮಾನ್ಯವಾಗಿ ಅದೊಂದು ಅಹ:ಮಿಕೆಯ ಸಂಕೇತದಂತೆ ಕಾಣುತ್ತೇವೆ. ಸಾಲಿನ ಜೋಡಣೆಯಿಂದ ಬೇರ್ಪಟ್ಟ “ನಾನು’ ಎಂದೆಂದಿಗೂ ಅದು ಗರ್ವದ ಪ್ರತೀಕ ಹಾಗೂ ಪ್ರತ್ಯೇಕ ನಿಲುವಿನ ಪದ. “ನಾನು’ ಎಂದರೆ ಪ್ರೀತಿ, ಕರುಣೆ, ತಾಳ್ಮೆ, ಸ್ವತಂತ್ರದ ಸ್ವಾವಲಂಬನೆಯ ಭಾವನೆ ಎಂದು ವರ್ಣಿಸುವವರು ಅತ್ಯಲ್ಪವೇ ;

ಹಾಗಾದ್ರೆ ಆಂಗ್ಲ ಭಾಷೆಯಲ್ಲಿ “ನಾನು’ ಎಂಬುವುದಕ್ಕೆ ಏನನ್ನು ಬಳಸುತ್ತೇವೆ ? ಹೌದು ಅದು “ಐ’ ಎಂಬ ಪದ ಬಳಸುವುದು ಗೊತ್ತೇ ಇದೆ. ಈ “ಐ’ ಏನನ್ನು ಸೂಚಿಸುತ್ತೆ ? ಎಂದಾದರೂ ಇದರ ಸುತ್ತ ಗಿರಕಿ ಹೊಡೆದಿದ್ದೀರಾ ! ಇದು ಇಂಗ್ಲಿಷ್‌ ವರ್ಣಮಾಲೆಯ 9ನೇ ಅಕ್ಷರ ಎಂಬುದೊಂದು ಬಿಟ್ಟರೆ ಇದಕ್ಕೆ ಹೊಸದೊಂದು ರೂಪ ನೀಡುವುದು ಬೇಡವೇ; ಇದನ್ನು ನಮ್ಮ ಪರಿಚಯಾತ್ಮಕ ವ್ಯಾಖ್ಯಾನವಾಗಿ ನಾವು ಸಾಮಾನ್ಯವಾಗಿ ಬಳಸುತ್ತೇವೆ. ಕನ್ನಡದ “ನಾನು’ ಎಂಬ ಪದದಂತೆ ಪೂರ್ಣ ವಾಕ್ಯದಿಂದ ಈ “ಐ’ ಯನ್ನು ಕಿತ್ತು ತೆಗೆದು ಈಗ ಪ್ರತ್ಯೇಕಿಸೋಣ. ಇವಾಗ ಹೇಳಿ ಏನನ್ನು ಇದು ಸೂಚಿಸಿದರೆ ಉತ್ತಮ ?

“ಐ’ ಎಂದರೆ ಇಂಪ್ರೂವೆ¾ಂಟ್‌ ಅಂತ ಹೇಳ್ಳೋಣವೇ ? ಖಂಡಿತ ನನ್ನ ಪ್ರಕಾರ ಅದು ಅರ್ಥ ವ್ಯತ್ಯಾಸವಾಗದು. “ಐ’ ಎಂಬುವುದನ್ನು ಧನಾತ್ಮಕ ರೂಢಿಯಾಗಿ ತೆಗೆದುಕೊಳ್ಳೋಣ.ಇಂಗ್ಲಿಷ್‌ ಪದಗಳ ಸಾಲಿನಲ್ಲಿ ಒಂದೇ ಅಕ್ಷರ ಒಂದು ಪದವಾಗಿ ಅರ್ಥವಾಗಿ ನಿಲ್ಲುವುದು ಅದು ಅಕ್ಷರ “ಐ’ ಮಾತ್ರ . ಆದ್ದರಿಂದ ಈ ಪದ ಸ್ವಾವಲಂಬನೆಯ ಪತಾಕೆಯಂತೆ ಗೋಚರವಾಗುತ್ತದೆ.

ತಾನು ಏನನ್ನು ಸಾಧಿಸಲಿಲ್ಲ ಅಥವಾ ತಾನೇನನ್ನೂ ಗೈಯಲ್ಲಿಲ್ಲವೆಂದು ಸಫಲತೆಯ ದಾರಿಯನ್ನೇ ಇಂಗ್ಲಿಷ್‌ ನಲ್ಲಿ ಅನುವಾದಿಸಲಿ ಅಥವಾ ತಾನು ಗೆದ್ದೆ ಅಥವಾ ಸಾಧಿಸಿದ ಸಂಭ್ರಮವನ್ನೇ ಪಡಿಯಚ್ಚಾಗಿಸಲಿ ಅವ ಅಥವಾ ಅವಳು “ಐ’ ಎಂದು ಆರಂಭದಲ್ಲಿ ಉಪಯೋಗಿಸಲೇಬೇಕು. ಅರ್ಥಕ್ಕೆ ಧಕ್ಕೆ ಬಾರದಿರಲು ಆ ಪದ ಬೇಕೇ ಬೇಕು.

ಆ “ಐ’ ಎಂಬ ಪದ ಸಂತೋಷದಲ್ಲಿರುವವರಿಗೆ ಹೊಸ ಅಧ್ಯಾಯವನ್ನು ಬಿಡಿಸಿಟ್ಟರೆ ಸೋಲುಗಳ ಅಡಿಯಲ್ಲಿ ನಿಲುಗಿರುವವರಿಗೆ ಹೇಗೆ ಬಡಿದೇಳಬೇಕು ಎಂದು ಏಕಾಂಗಿ ಅಕ್ಷರವಿದ್ದ ಆ “ಐ’ ಎಂಬ ಪದ ಉಸುರುತ್ತದೆ. ಹಾಗಾದ್ರೆ ನಾನು ಸಂಭೋಧಿಸುತ್ತೇನೆ ಅದು “ಐ’ ಎಂದರೆ ಖಡಾ ಖಂಡಿತವಾಗಿ ಇಂಪ್ರೂವ್ಮೆಂಟ್‌.. ಮತ್ತೆ ನೀವು ಹೇಳಿ “ಐ’ ಅಂದ್ರೆ?

 ಸಮ್ಯಕ್ತ್ ಜೈನ್‌

ಕಡಬ

ಟಾಪ್ ನ್ಯೂಸ್

vijayapura

Vijayapura; ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿ ಹಲವರು ನಾಪತ್ತೆ, ಓರ್ವನ ಶವ ಪತ್ತೆ

Krishna-Byregowda

DK, Udupi: ಕಾಲು ಸಂಕಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ: ಕೃಷ್ಣ ಭೈರೇಗೌಡ

Kishkindha Anjanadri ,ಅಂಜನಾದ್ರಿ ಹುಂಡಿ,Africa, Italy, England currency

Kishkindha ಅಂಜನಾದ್ರಿ ಹುಂಡಿಯಲ್ಲಿ ಆಫ್ರಿಕಾ, ಇಟಲಿ, ಇಂಗ್ಲೆಂಡ್ ಕರೆನ್ಸಿ

ಚಾರಣಪಥಗಳ ಆನ್ ಲೈನ್ ಟಿಕೆಟ್ ಗೆ ಶೀಘ್ರ ಚಾಲನೆ: ಈಶ್ವರ ಖಂಡ್ರೆ

Trekking: ಚಾರಣಪಥಗಳ ಆನ್ ಲೈನ್ ಟಿಕೆಟ್ ಗೆ ಶೀಘ್ರ ಚಾಲನೆ: ಈಶ್ವರ ಖಂಡ್ರೆ

Modi-Lokasabha

Lokasabha: ಕಾಂಗ್ರೆಸ್‌ಗೆ 100ಕ್ಕೆ 99 ಸಿಕ್ಕಿದ್ದಲ್ಲ- ಪ್ರಧಾನಿ ಮೋದಿ ವಾಗ್ದಾಳಿ

T20 World Cup Final; ಸೂರ್ಯ ಕ್ಯಾಚ್ ಬಗ್ಗೆ ಅನುಮಾನ ಪಟ್ಟವರಿಗೆ ಸಿಕ್ಕಿತು ಉತ್ತರ

T20 World Cup Final; ಸೂರ್ಯ ಕ್ಯಾಚ್ ಬಗ್ಗೆ ಅನುಮಾನ ಪಟ್ಟವರಿಗೆ ಸಿಕ್ಕಿತು ಉತ್ತರ

Bidar; ಲೈಂಗಿಕ ಕಿರುಕುಳ ಪ್ರಕರಣ: ಇಬ್ಬರು ಶಿಕ್ಷಕರ ಅಮಾನತ್ತು

Bidar; ಲೈಂಗಿಕ ಕಿರುಕುಳ ಪ್ರಕರಣ: ಇಬ್ಬರು ಶಿಕ್ಷಕರ ಅಮಾನತ್ತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-uv-fusion

Education: ಅಸಮತೋಲನೆ ನಿವಾರಣೆಗೆ ಸಹ ಶಿಕ್ಷಣ ಸರಿಯಾದ ದಾರಿ

13-tn-sitharama

T. N. Seetharam: ಧಾರಾವಾಹಿಗಳಿಗೆ ಹೊಸ ಭಾಷ್ಯ ನೀಡಿದ ನಿರ್ದೇಶಕ ಟಿ.ಎನ್‌. ಸೀತಾರಾಮ

11-uv-fusion

Rajeev Taranath: ಸರೋದ್‌ ಸ್ವರ ಮಾಂತ್ರಿಕನ ಸ್ವರ್ಗಾರೋಹಣ

10-uv-fusion

UV Fusion: ನೈಸರ್ಗಿಕ ಕಾಡು ಪುನರುತ್ಥಾನಕ್ಕೆ ಕೊಡುಗೆ ನೀಡುವ ಉಪ್ಪಳಿಗೆ

11-uv-fusion

UV Fusion: ಸಿನೆಮಾ

MUST WATCH

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

ಹೊಸ ಸೇರ್ಪಡೆ

vijayapura

Vijayapura; ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿ ಹಲವರು ನಾಪತ್ತೆ, ಓರ್ವನ ಶವ ಪತ್ತೆ

3-crime

Crime News: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Krishna-Byregowda

DK, Udupi: ಕಾಲು ಸಂಕಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ: ಕೃಷ್ಣ ಭೈರೇಗೌಡ

Kishkindha Anjanadri ,ಅಂಜನಾದ್ರಿ ಹುಂಡಿ,Africa, Italy, England currency

Kishkindha ಅಂಜನಾದ್ರಿ ಹುಂಡಿಯಲ್ಲಿ ಆಫ್ರಿಕಾ, ಇಟಲಿ, ಇಂಗ್ಲೆಂಡ್ ಕರೆನ್ಸಿ

ಚಾರಣಪಥಗಳ ಆನ್ ಲೈನ್ ಟಿಕೆಟ್ ಗೆ ಶೀಘ್ರ ಚಾಲನೆ: ಈಶ್ವರ ಖಂಡ್ರೆ

Trekking: ಚಾರಣಪಥಗಳ ಆನ್ ಲೈನ್ ಟಿಕೆಟ್ ಗೆ ಶೀಘ್ರ ಚಾಲನೆ: ಈಶ್ವರ ಖಂಡ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.