![ರಾಷ್ಟ್ರ ಸಂತ ವಿರಾಗ ಸಾಗರ ಮುನಿಮಹಾರಾಜ್ ಸಮಾಧಿ ಮರಣ](https://www.udayavani.com/wp-content/uploads/2024/07/viraag-saagar-ji-415x272.jpg)
Rajya Sabha ಸಭಾ ನಾಯಕರಾಗಿ ಜೆ.ಪಿ.ನಡ್ಡಾ ನೇಮಕ
ಪಿಯೂಷ್ ಗೋಯಲ್ ಲೋಕಸಭೆ ಸಂಸದರಾಗಿ ಆಯ್ಕೆ ಹಿನ್ನೆಲೆ
Team Udayavani, Jun 24, 2024, 6:09 PM IST
![JP-Nadda](https://www.udayavani.com/wp-content/uploads/2024/06/JP-Nadda-1-620x372.jpg)
ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಆರೋಗ್ಯ ಮತ್ತು ರಾಸಾಯನಿಕ, ರಸಗೊಬ್ಬರ ಖಾತೆ ಸಚಿವ ಜಗತ್ ಪ್ರಕಾಶ್ ನಡ್ಡಾ ರಾಜ್ಯಸಭೆಯ ಸಭಾ ನಾಯಕರಾಗಿ ಸೋಮವಾರ ನೇಮಕವಾಗಿದ್ದಾರೆ.
ಈ ಮೊದಲು ರಾಜ್ಯಸಭೆಯಲ್ಲಿ ಸಭಾ ನಾಯಕರಾಗಿ ಪಿಯೂಷ್ ಗೋಯಲ್ ನಿರ್ವಹಿಸಿದ್ದರು. ಪಿಯೂಷ್ ಗೋಯಲ್ ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದ ಉತ್ತರ ಮುಂಬೈ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ದಾಖಲಿಸಿದ್ದು, ಸತತ ಮೂರನೇ ಬಾರಿಗೆ ನರೇಂದ್ರ ಮೋದಿ ನೇತೃತ್ವದಲ್ಲಿ ಅಧಿಕಾರಕ್ಕೇರಿದ ಎನ್ಡಿಎ ಸರ್ಕಾರದಲ್ಲಿ ಕೇಂದ್ರ ವಾಣಿಜ್ಯ ಸಚಿವರಾಗಿದ್ದಾರೆ.
ಜೆ.ಪಿ.ನಡ್ಡಾ ಕೇಂದ್ರ ಸಚಿವ ಸಂಪುಟಕ್ಕೆ ಸೇರಿರುವುದರಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಮಾತುಗಳು ಕೇಳಿ ಬರುತ್ತಿದೆ. ಅಮಿತಾ ಶಾ ಬಳಿಕ 2020ರಲ್ಲಿ ಅಧ್ಯಕ್ಷ ಸ್ಥಾನ ವಹಿಸಿದ್ದರು.
ಬಿಹಾರದಲ್ಲಿ 1975ರ ಬಳಿಕ ನಡೆದ ಜೆ.ಪಿ ಚಳವಳಿ ಮೂಲಕ ಹೋರಾಟಕ್ಕೆ ಪ್ರವೇಶಿಸಿದ ಜೆ.ಪಿ ನಡ್ಡಾ, ನಂತರ ಎಬಿವಿಪಿ ಮೂಲಕ ರಾಜಕೀಯ ಬೆಳವಣಿಗೆ ಕಂಡರು. ೨೦೧೨ರಲ್ಲಿ ಹಿಮಾಚಲ ಪ್ರದೇಶದಿಂದ ರಾಜ್ಯಸಭೆಗೆ ಮೊದಲ ಬಾರಿ ಆಯ್ಕೆಯಾಗಿದ್ದರು. 2014ರಲ್ಲಿ ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯರಾಗಿಯೂ ಆಯ್ಕೆಯಾದರು.
ಟಾಪ್ ನ್ಯೂಸ್
![ರಾಷ್ಟ್ರ ಸಂತ ವಿರಾಗ ಸಾಗರ ಮುನಿಮಹಾರಾಜ್ ಸಮಾಧಿ ಮರಣ](https://www.udayavani.com/wp-content/uploads/2024/07/viraag-saagar-ji-415x272.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.