![police crime](https://www.udayavani.com/wp-content/uploads/2024/07/police-crime-2-415x256.jpg)
“ದೇವರಂತಹ” ಮತದಾರರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ: ಅಯೋಧ್ಯೆ ಸಂಸದ
Team Udayavani, Jun 24, 2024, 7:02 PM IST
![1-sadsdasd](https://www.udayavani.com/wp-content/uploads/2024/06/1-sadsdasd-1-620x448.jpg)
ಹೊಸದಿಲ್ಲಿ: “ದೇವರಂತಹ” ಮತದಾರರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡುವುದಾಗಿ ಫೈಜಾಬಾದ್ನ ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿಕೆ ನೀಡಿದ್ದಾರೆ.
18 ನೇ ಲೋಕಸಭೆ ಅಧಿವೇಶನದ ಮೊದಲ ದಿನವಾದ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಮಾಜವಾದಿ ಪಕ್ಷದ ಹಿರಿಯ ನಾಯಕ ಅವಧೇಶ್ ಪ್ರಸಾದ್ ಅವರು “ದೇವರಂತಹ” ಮತದಾರರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದರು.
ಅವಧೇಶ್ ಪ್ರಸಾದ್ ಅವರ ಕೈ ಹಿಡಿದುಕೊಂಡೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಸಂಸತ್ತಿನ ಮೆಟ್ಟಿಲುಗಳನ್ನು ಏರಿದ್ದು ಗಮನಸೆಳೆಯಿತು.
ಅವಧೇಶ್ ಪ್ರಸಾದ್ ಅವರು ರಾಮ ಮಂದಿರ ನಿರ್ಮಾಣವಾದ ಅಯೋಧ್ಯೆಯಲ್ಲಿಯೇ ಬಿಜೆಪಿಯ ಸಂಸದ ಲಲ್ಲು ಸಿಂಗ್ ಅವರನ್ನು ಸೋಲಿಸಿ ಭಾರೀ ಸುದ್ದಿಯಾಗಿದ್ದರು. ಸಮಾಜವಾದಿ ಪಕ್ಷ ಭರ್ಜರಿ ನಿರ್ವಹಣೆ ತೋರಿದ್ದು ಅಯೋಧ್ಯೆಯಲ್ಲಿಯೂ ಗೆಲುವಿನ ನಗೆ ಬೀರುವ ಮೂಲಕ ಬಿಜೆಪಿಗೆ ನಿರೀಕ್ಷೆಯೇ ಮಾಡದ ರೀತಿಯಲ್ಲಿ ಭಾರೀ ಆಘಾತ ನೀಡಿತ್ತು.
ಟಾಪ್ ನ್ಯೂಸ್
![police crime](https://www.udayavani.com/wp-content/uploads/2024/07/police-crime-2-415x256.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.