Gangolli ಜಾಮೀನಿನಲ್ಲಿ ಬಂದು ವಾರದಲ್ಲಿ ಕದ್ದು ಸಿಕ್ಕಿಬಿದ್ದ


Team Udayavani, Jun 25, 2024, 12:04 AM IST

Gangolli ಜಾಮೀನಿನಲ್ಲಿ ಬಂದು ವಾರದಲ್ಲಿ ಕದ್ದು ಸಿಕ್ಕಿಬಿದ್ದ

ಗಂಗೊಳ್ಳಿ: ಇಲ್ಲಿನ ಪೊಲೀಸ್‌ ಠಾಣಾ ವ್ಯಾಪ್ತಿಯ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಬಳಿ ಇರುವ ಪಂಚಗಂಗಾ ಸೊಸೈಟಿಯಲ್ಲಿ ಜೂ. 22ರ ತಡರಾತ್ರಿ ಕಳ್ಳತನ ಮಾಡುತ್ತಿದ್ದಾಗಲೇ ಪೊಲೀಸರು ಬಂಧಿಸಿದ್ದಾರೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

13 ಕಳವು ಪ್ರಕರಣ
ಆರೋಪಿ ಕೊಲ್ಲಂ ಜಿಲ್ಲೆ ಕರುನಾಗಪಳ್ಳಿ ತಾಲೂಕು ಚೆರಿಯಳ್ಳಿಕಲ್‌ ಅಲಪ್ಪಾಡ್‌ ತಾಝಃಚೆಯಿಲ್‌ ವೀಡು ಪ್ರಕಾಶ್‌ ಬಾಬು ಯಾನೆ‌ ನಿಯಾಝ್ (46) ಕುಂಬಳೆ ಪೊಲೀಸ್‌ ಠಾಣೆಯಲ್ಲಿ, ಕ್ಯಾಲಿಕಟ್‌ನ ಮಾರಾಡ ಠಾಣೆ, ತಲಶೆÏàರಿ ಠಾಣೆ, ಕಣ್ಣೂರು ನಗರ ಠಾಣೆ, ಅಲೆಪ್ಪಿ ಮಾವಿಲಕಾರ ಠಾಣೆ, ಚೆಂಗನೂರು ಠಾಣೆ, ಉಡುಪಿ ಜಿಲ್ಲೆಯ, ಗಂಗೊಳ್ಳಿ ಠಾಣೆ, ಕುಂದಾಪುರ ಠಾಣೆ, ದ.ಕ. ಜಿಲ್ಲೆಯ ಕೊಣಾಜೆ ಠಾಣೆ, ಬೆಂಗಳೂರು ಕುಮಾರಸ್ವಾಮಿ ಲೇ ಔಟ್‌ ಠಾಣೆ ವ್ಯಾಪ್ತಿ ಸೇರಿ 13 ಕಡೆ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.

ಸ್ಕೂಟರ್‌ನಲ್ಲಿ ಕೇರಳದಿಂದ ಬಂದಿದ್ದ
ಜೂ. 15ರಂದು ಕೇರಳದ ಮಾವಿಲಕಾರ ಹಾಗೂ ಚೆಂಗನೂರು ಠಾಣಾ ಸರಹದ್ದಿನ ಕಳವು ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡು ಬಂದಿದ್ದ ಈತ ಕೇರಳದಿಂದ ಬೆಂಗಳೂರಿಗೆ ಬಂದು, ಅಲ್ಲಿಂದ ಚಿಕ್ಕಮಗಳೂರಿಗೆ ಬಂದು, ಅಲ್ಲಿಂದ ಕುಂದಾಪುರ, ಮುಳ್ಳಿಕಟ್ಟೆಗೆ ಸ್ಕೂಟರ್‌ನಲ್ಲಿ ಬಂದಿದ್ದ.

ಲಘುವಾಗಿ ಪರಿಗಣಿಸಿದ್ದನೇ?
ರಾತ್ರಿ ಪಂಚಗಂಗಾ ಸೊಸೈಟಿಯ ಹಿಂಬದಿಯ ಕಿಟಕಿ ಮುರಿದು ಸೊಸೈಟಿಗೆ ನುಗ್ಗಿದ ಕಳ್ಳ ಸಿಸಿ ಟಿವಿ ಕೆಮರಾ ಇರುವುದನ್ನು ಗಮನಿಸಿದ್ದ. ಸ್ವಿಚ್‌ ಹಾಕಿ ಲೈಟ್‌ ಕೂಡಾ ಬೆಳಗಿಸಿ ಕೋಣೆಯೆಲ್ಲ ಬೆಲೆಬಾಳುವ ವಸ್ತು, ಹಣಕ್ಕಾಗಿ ತಡಕಾಡಿದ್ದ. ಆದರೆ ಅಲ್ಲಿದ್ದ ಸಿಸಿ ಟಿವಿ ಕುಂದಾಪುರದ ಸೈನ್‌ ಇನ್‌ ಸೆಕ್ಯುರಿಟಿ ಸಂಸ್ಥೆಯ 24 ತಾಸು ನೇರ ವೀಕ್ಷಣೆಯ ಟಿವಿ ಎಂದು ಗೊತ್ತಾಗದೇ ಸಿಕ್ಕಿಬಿದ್ದ. ನೇರ ವೀಕ್ಷಣೆ ಮಾಡುತ್ತಿದ್ದ ಸೈನ್‌ ಇನ್‌ ಸೆಕ್ಯುರಿಟಿ ಸಂಸ್ಥೆಯ ಸಿಬಂದಿ ತತ್‌ಕ್ಷಣ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿ, ರಾತ್ರಿ ರೌಂಡ್ಸ್‌ನಲ್ಲಿ ಬಂಟ್ವಾಡಿ ಸಮೀಪವಿದ್ದ ಪಿಎಸ್‌ಐ ಬಸವರಾಜ ಕನಶೆಟ್ಟಿ ಅವರು 5 ನಿಮಿಷದ ಒಳಗೆ ತಲುಪುವಂತೆ ಮಾಡಿದರು. ಪೊಲೀಸ್‌ ಸಿಬಂದಿ ಮೋಹನ ಪೂಜಾರಿ ಹಾಗೂ ಎಸ್‌ಐ ಘಟನ ಸ್ಥಳಕ್ಕೆ ತೆರಳಿ ಕಿಟಕಿ ಮೂಲಕವೇ ಕಳ್ಳನಿಗೆ ಪೊಲೀಸ್‌ ಬಂದುದನ್ನು ತಿಳಿಸಿ ಎಚ್ಚರಿಸಿ ಅಲ್ಲೇ ಇರುವಂತೆ ಮಾಡಿದರು. ಬ್ರಾಂಚ್‌ ಮ್ಯಾನೇಜರ್‌ ಹಾಗೂ ಸಿಬಂದಿ ಸ್ಥಳಕ್ಕೆ ಬಂದ ಬಳಿಕ ಬಾಗಿಲು ತೆರೆದು ಕಳವು ಮಾಡುತ್ತಿದ್ದವನನ್ನು ವಶಕ್ಕೆ ಪಡೆದಿದ್ದಾರೆ.

ಸ್ವಾಧೀನ
ಆರೋಪಿಯಿಂದ ಕಳವು ಮಾಡಿದ ನಗದು 2 ಸಾವಿರ ರೂ., ಕಳವು ಮಾಡಲು ಬಂದ ಸುಝುಕಿ ಎಕ್ಸೆಸ್‌ ಮೋಟಾರು ಸೈಕಲ್‌, ಮೊಬೈಲ್‌, ಕೃತ್ಯಕ್ಕೆ ಉಪಯೋಗಿಸಿದ ಮೂರು ರಾಡ್‌, ಕಟ್ಟಿಂಗ್‌ ಪ್ಲೇಯರ್‌ ಇನ್ನಿತರ ವಸ್ತುಗಳನ್ನು ಸ್ವಾಧೀನಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.