Missing Case ಯುವಕ ನಾಪತ್ತೆ ; ದೂರು ದಾಖಲು
Team Udayavani, Jun 25, 2024, 12:17 AM IST
ಸುಳ್ಯ: ಯುವಕನೋರ್ವ ನಾಪತ್ತೆಯಾಗಿದ್ದು, ನದಿಗೆ ಬಿದ್ದಿರುವ ಶಂಕೆಯಿಂದ ಸುಳ್ಯದ ಪಯಸ್ವಿನಿ ನದಿಯಲ್ಲಿ ಸೋಮವಾರ ಹುಡುಕಾಟ ನಡೆಸಲಾಗಿದೆ.
ಸುಳ್ಯದ ಕುರುಂಜಿಗುಡ್ಡೆಯ ಗುರುಸ್ವಾಮಿ ಅವರ ಪುತ್ರ ಕುಮಾರ ನಾಪತ್ತೆಯಾಗಿದ್ದು, ಅವರು ರವಿವಾರ ಮಧ್ಯಾಹ್ನ ಮನೆಯಿಂದ ಹೊರ ಹೋದವರು ರಾತ್ರಿಯಾದರೂ ಹಿಂದಿರುಗಿರಲಿಲ್ಲ. ಅವರು ಸುಳ್ಯದ ಭಸ್ಮಡ್ಕದ ಪಯಸ್ವಿನಿ ನದಿ ದಡದಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದರು.
ಪಯಸ್ವಿನಿ ನದಿ ಬಳಿ ಚಪ್ಪಲಿ ಪತ್ತೆಯಾಗಿದೆ. ಮನೆಯವರು ಸುಳ್ಯ ಠಾಣೆಗೆ ದೂರು ನೀಡಿದ್ದಾರೆ. ನದಿ ಬಳಿಯಲ್ಲಿ ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ, ಈಜು ತಜ್ಞರ ಸಹಕಾರದೊಂದಿಗೆ ನದಿಯಲ್ಲಿ ಸೋಮವಾರ ಹುಡುಕಾಟ ನಡೆಸಲಾಗಿದೆ. ಸಂಜೆಯವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.