ಮರಳುಗಾರಿಕೆಗೆ ನಲುಗಿದ ಉಳಿಯ ಕುದ್ರು: ಕಡಿಮೆಯಾಗಿದೆ ಕುದ್ರುವಿನ ಅರ್ಧಕ್ಕರ್ಧ ಗಾತ್ರ

ತತ್‌ಕ್ಷಣ ಕ್ರಮಕ್ಕೆ ಆಗ್ರಹ

Team Udayavani, Jun 25, 2024, 6:35 AM IST

ಮರಳುಗಾರಿಕೆಗೆ ನಲುಗಿದ ಉಳಿಯ ಕುದ್ರು: ಕಡಿಮೆಯಾಗಿದೆ ಕುದ್ರುವಿನ ಅರ್ಧಕ್ಕರ್ಧ ಗಾತ್ರಮರಳುಗಾರಿಕೆಗೆ ನಲುಗಿದ ಉಳಿಯ ಕುದ್ರು: ಕಡಿಮೆಯಾಗಿದೆ ಕುದ್ರುವಿನ ಅರ್ಧಕ್ಕರ್ಧ ಗಾತ್ರ

ಮಂಗಳೂರು: ಪಾವೂರು ಮತ್ತು ಅಡ್ಯಾರ್‌ ಮಧ್ಯೆ ನೇತ್ರಾವತಿ ನದಿಯ ಮಧ್ಯದ ಪಾವೂರು ಉಳಿಯ ಕುದ್ರು ಅಕ್ರಮ ಮರಳುಗಾರಿಕೆಯಿಂದ ನಲುಗಿವೆ. ದ್ವೀಪದ ಭೂಭಾಗವನ್ನೇ ಬಗೆದು ಮರಳುಗಾರಿಕೆ ನಡೆಯುತ್ತಿ ದ್ದರೂ ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸ್ಥಳೀಯರ ಮನವಿ ಮೇರೆಗೆ ಕೆಥೋಲಿಕ್‌ ಸಭಾ ಮಂಗಳೂರು ಪ್ರದೇಶ್‌ ಮತ್ತು ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದವರು ಸೋಮವಾರ ಕುದ್ರುವಿಗೆ ಭೇಟಿ ನೀಡಿ, ಮರಳುಗಾರಿಕೆ ನಡೆಸಲಾದ ಸ್ಥಳವನ್ನು ಪರಿಶೀಲಿಸಿದರು. ಇಲ್ಲಿ ಮರಳುಗಾರಿಕೆ ತಡೆಯಲು ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳ ಬೇಕು. ಇಲ್ಲವಾದಲ್ಲಿ ಕಾನೂನು ಸಮರ ಅನಿವಾರ್ಯ ಎಂದು ಎಚ್ಚರಿಸಿದರು.

ಅರ್ಧಕ್ಕರ್ಧ ದ್ವೀಪವೇ ಇಲ್ಲ!
ಸುಮಾರು 80 ಎಕ್ರೆ ವಿಸ್ತೀರ್ಣ ಹಾಗೂ 2 ಕಿ.ಮೀ.ನಷ್ಟು ಉದ್ದಕ್ಕಿದ್ದ ದ್ವೀಪ ಹಲವು ವರ್ಷಗಳ ಮರಳು ಗಾರಿಕೆಯಿಂದ ಈಗ 40 ಎಕ್ರೆಗೆ ಇಳಿದಿದ್ದು, ಉದ್ದವೂ ಒಂದು ಕಿ.ಮೀ. ಕಡಿಮೆಯಾಗಿದೆ. ದೊಡ್ಡ ನೆರೆ ಬಂದರೆ ಸಂಪೂರ್ಣ ದ್ವೀಪವೇ ಕೊಚ್ಚಿ ಹೋಗಬಹುದು.

ಎ.ಬಿ. ಇಬ್ರಾಹಿಂ ಅವರು ಜಿಲ್ಲಾಧಿಕಾರಿಯಾಗಿದ್ದಾಗ ದ್ವೀಪದ ಸುತ್ತಲಿನ 1 ಕಿ.ಮೀ. ವ್ಯಾಪ್ತಿ ಯಲ್ಲಿ ಮರಳುಗಾರಿಕೆ ನಿಷೇಧಿಸಿ ಆದೇಶ ಹೊರಡಿಸಿ, ಮರಳು ದಕ್ಕೆ ಗಳನ್ನು ನಾಶಪಡಿಸಿದ್ದರು. ಪ್ರಸ್ತುತ ಆ ಆದೇಶಕ್ಕೆ ಯಾವುದೇ ಬೆಲೆಇಲ್ಲ ಎನ್ನುತ್ತಾರೆ “ಉದಯವಾಣಿ’ ಜತೆ ಮಾತನಾಡಿದ ಸ್ಥಳೀಯರಾದ ಬೆನೆಟ್‌.

ಹೋರಾಡುವ ಶಕ್ತಿ ಇಲ್ಲ
ಮರಳುಗಾರಿಕೆ ವಿರುದ್ಧ ಹಲವು ಬಾರಿ ಹೋರಾಟ ನಡೆಸಿದ್ದೇವೆ. ಮರಳು ತೆಗೆಯುವವರನ್ನು ಓಡಿಸಿದ್ದೇವೆ. ಆದರೆ ಅವರ ತಾಕತ್ತಿನ ಎದುರು ನಮ್ಮ ಶಕ್ತಿ ಕುಂದಿದೆ. ನಮಗೆ ಶಾಶ್ವತ ಪರಿಹಾರ ಬೇಕು. ಭಯ ರಹಿತ ಜೀವನಕ್ಕೆ ಸಹಾಯ ಮಾಡಿ ಎಂದು ಗಿಲ್ಬರ್ಟ್‌ ಡಿ’ಸೋಜಾ ಮನವಿ ಮಾಡಿದರು.

ಕುದ್ರು ಇನ್ಫೆಂಟ್ ಜೀಸಸ್‌ ಚರ್ಚ್‌ ನ ಧರ್ಮಗುರು ಫಾ| ಮನೋಹರ್‌ ಡಿ’ಸೋಜಾ, ಕೆಥೋಲಿಕ್‌ ಸಭಾ ಕಾರ್ಯದರ್ಶಿ ಆಲ್ವಿನ್‌ ಮೊಂತೇರೊ, ಮಾಜಿ ಅಧ್ಯಕ್ಷ ಸ್ಟಾನಿ ಲೋಬೊ, ಪ್ರಮುಖರಾದ ಮುನೀರ್‌ ಕಾಟಿಪಳ್ಳ, ಮಂಜುಳಾ ನಾಯಕ್‌, ಕೆ. ಯಾದವ ಶೆಟ್ಟಿ, ಬಿ. ಶೇಖರ್‌, ಸುನಿಲ್‌ ಕುಮಾರ್‌ ಬಜಾಲ್‌ ಮತ್ತಿತರರಿದ್ದರು.

ದ್ವೀಪದ ಕುರಿತು
ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಪಾವೂರು ಉಳಿಯ ಕುದ್ರು ನೇತ್ರಾವತಿ ನದಿ ಮಧ್ಯದಲ್ಲಿದೆ. ತುಂಬೆ ಹಾಗೂ ಹರೇಕಳ ಅಣೆಕಟ್ಟಿನ ನಡುವಿನ ಪ್ರದೇಶವೂ ಸಹ. ಹಲವು ವರ್ಷಗಳ ಹಿಂದೆ 50ಕ್ಕೂ ಅಧಿಕ ಕುಟುಂಬಗಳಿದ್ದವು. ಪ್ರಸ್ತುತ 35ಕ್ಕೆ ಇಳಿದಿದ್ದು, ಸುಮಾರು 130 ಮಂದಿ ಇಲ್ಲಿ ವಾಸವಾಗಿದ್ದಾರೆ. ಈ ಪೈಕಿ ಶೇ.99ರಷ್ಟು ಕ್ರಿಶ್ಚಿಯನ್ನರು. ಕೃಷಿ ಹಾಗೂ ಹೊರಗೆ ಉದ್ಯೋಗ ಮಾಡಿಕೊಂಡು ಜೀವಿಸುತ್ತಿದ್ದಾರೆ. ಇವರಿಗೆ ಹೊರ ಪ್ರದೇಶದ ಸಂಪರ್ಕಕ್ಕೆ ದೋಣಿಯೇ ಆಧಾರ. ಹರೇಕಳ ಅಣೆಕಟ್ಟು ನಿರ್ಮಾಣದಿಂದಾಗಿ ಬೇಸಗೆಯಲ್ಲೂ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿರುತ್ತದೆ. ಕುದ್ರು ಮತ್ತು ಅಡ್ಯಾರ್‌ ನಡುವೆ ಸೇತುವೆ ಆಗಬೇಕು ಎಂಬ ಬೇಡಿಕೆ ಈಡೇರಿಲ್ಲ. ಬೇಸಗೆಯಲ್ಲಿ ಕುದ್ರು ನಿವಾಸಿಗಳೇ ತಾತ್ಕಾಲಿಕವಾಗಿ ಸೇತುವೆ ನಿರ್ಮಿಸಿದರು. ಕೆಲ ವರ್ಷಗಳ ಹಿಂದೆ ಮರಳು ದಂಧೆಕೋರರು ಈ ಸೇತುವೆಗೂ ಹಾನಿ ಮಾಡಿದರು ಎನ್ನುತ್ತಾರೆ ಸ್ಥಳೀಯರು.

ಮರಳುಗಾರಿಕೆ ಮೂಲಕ ದ್ವೀಪದ ಜನರನ್ನು ಓಡಿಸುವ ಸಂಚು ನಡೆಯುತ್ತಿದೆ. ಇದರಲ್ಲಿ ಎಲ್ಲ ಇಲಾಖೆಗಳೂ ಕೈ ಜೋಡಿಸಿರುವೆ. ಜನರ ಕಣ್ಣೀರಿನ ಶಾಪ ಖಂಡಿತ ವಾಗಿ ದಂಧೆಕೋರರಿಗೆ ತಟ್ಟಲಿದೆ.
– ರಾಯ್‌ ಕ್ಯಾಸ್ಟಲಿನೋ,
ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಪಿಆರ್‌ಒ

ಸ್ಥಳೀಯರ ಮನವಿ ಮೇರೆಗೆ ಜನರ ಸಮಸ್ಯೆಯನ್ನು ಪ್ರತ್ಯಕ್ಷವಾಗಿ ನೋಡಲು ಬಂದಿದ್ದೇವೆ. ಜಿಲ್ಲಾಧಿ ಕಾರಿಗೆ ಕರೆ ಮಾಡಿ ಸ್ಥಳೀಯರ ಕಷ್ಟವನ್ನು ಸ್ಥಳದಿಂದಲೇ ವಿವರಿಸಿ ದ್ದೇವೆ. ಶಾಶ್ವತ ಪರಿಹಾರ ಸಿಗುವವ ರೆಗೆ ಹೋರಾಟ ನಿಲ್ಲಿಸುವುದಿಲ್ಲ.
ಆಲ್ವಿನ್‌ ಡಿ’ಸೋಜಾ,
ಅಧ್ಯಕ್ಷರು, ಕೆಥೋಲಿಕ್‌ ಸಭಾ

ಟಾಪ್ ನ್ಯೂಸ್

Dengue: ಆರೋಗ್ಯ ಅಧಿಕಾರಿಯೇ ಆಹುತಿ: ಒಂದೇ ದಿನ 286 ಪ್ರಕರಣ

Dengue: ಆರೋಗ್ಯ ಅಧಿಕಾರಿಯೇ ಆಹುತಿ: ಒಂದೇ ದಿನ 286 ಪ್ರಕರಣ

Kamlashile Temple; ಕಮಲಶಿಲೆ ದೇವಿಗೆ ಕುಬ್ಜಾ ಸ್ನಾನ

Kamlashile Temple; ಕಮಲಶಿಲೆ ದೇವಿಗೆ ಕುಬ್ಜಾ ಸ್ನಾನ

vidhana-Soudha

Cabinet Decission: ಏಳು ತಾಲೂಕುಗಳಲ್ಲಿ 100 ಹಾಸಿಗೆಗಳ ಆಸ್ಪತ್ರೆ

CM-Siddaramaiah

CM Siddaramaiah: ಮುಡಾ ಹಗರಣದಲ್ಲಿ ನನ್ನ ತಪ್ಪಿಲ್ಲ

Heavy Rain ಬಿರುಸಿನ ಮಳೆ; ವಿವಿಧೆಡೆ ನೆರೆ, ವ್ಯಾಪಕ ಹಾನಿ, ನಷ್ಟHeavy Rain ಬಿರುಸಿನ ಮಳೆ; ವಿವಿಧೆಡೆ ನೆರೆ, ವ್ಯಾಪಕ ಹಾನಿ, ನಷ್ಟ

Heavy Rain ಬಿರುಸಿನ ಮಳೆ; ವಿವಿಧೆಡೆ ನೆರೆ, ವ್ಯಾಪಕ ಹಾನಿ, ನಷ್ಟ

Heavy Rain ನಾವುಂದ, ಸಾಲ್ಬುಡಾ, ಅರೆಹೊಳೆ ಜಲಾವೃತ; ನೂರಕ್ಕೂ ಮಿಕ್ಕಿ ಮನೆಗಳು ದಿಗ್ಬಂಧನ

Heavy Rain ನಾವುಂದ, ಸಾಲ್ಬುಡಾ, ಅರೆಹೊಳೆ ಜಲಾವೃತ; ನೂರಕ್ಕೂ ಮಿಕ್ಕಿ ಮನೆಗಳು ದಿಗ್ಬಂಧನ

BJP Meeting; ತಾಕತ್ತಿದ್ದರೆ ಚುನಾವಣೆಗೆ ಬನ್ನಿ: ಬಿ.ಎಸ್‌.ಯಡಿಯೂರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Heavy Rain ಬಿರುಸಿನ ಮಳೆ; ವಿವಿಧೆಡೆ ನೆರೆ, ವ್ಯಾಪಕ ಹಾನಿ, ನಷ್ಟHeavy Rain ಬಿರುಸಿನ ಮಳೆ; ವಿವಿಧೆಡೆ ನೆರೆ, ವ್ಯಾಪಕ ಹಾನಿ, ನಷ್ಟ

Heavy Rain ಬಿರುಸಿನ ಮಳೆ; ವಿವಿಧೆಡೆ ನೆರೆ, ವ್ಯಾಪಕ ಹಾನಿ, ನಷ್ಟ

Rain ಪೊರ್ಕೋಡಿ ದೇವಸ್ಥಾನದ ಬಳಿ ಕುಸಿದ ರಸ್ತೆ: ವಾಹನ ಸಂಚಾರ ವ್ಯತ್ಯಯ

Rain ಪೊರ್ಕೋಡಿ ದೇವಸ್ಥಾನದ ಬಳಿ ಕುಸಿದ ರಸ್ತೆ: ವಾಹನ ಸಂಚಾರ ವ್ಯತ್ಯಯ

Retirement ಬಳಿಕ ಎಸ್‌ಪಿ ಪದೋನ್ನತಿಗೆ ಪೂರ್ವಾನ್ವಯ ಆದೇಶ

Retirement ಬಳಿಕ ಎಸ್‌ಪಿ ಪದೋನ್ನತಿಗೆ ಪೂರ್ವಾನ್ವಯ ಆದೇಶ

Building ನಿರ್ಮಾಣ ಕಾಮಗಾರಿ: ಕಾರ್ಮಿಕ ಇಲಾಖೆ ಸೂಚನೆ

Building ನಿರ್ಮಾಣ ಕಾಮಗಾರಿ: ಕಾರ್ಮಿಕ ಇಲಾಖೆ ಸೂಚನೆ

ರಾಷ್ಟ್ರ ಸಂತ ವಿರಾಗ ಸಾಗರ ಮುನಿಮಹಾರಾಜ್‌ ಸಮಾಧಿ ಮರಣ

ರಾಷ್ಟ್ರ ಸಂತ ವಿರಾಗ ಸಾಗರ ಮುನಿಮಹಾರಾಜ್‌ ಸಮಾಧಿ ಮರಣ

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

Dengue: ಆರೋಗ್ಯ ಅಧಿಕಾರಿಯೇ ಆಹುತಿ: ಒಂದೇ ದಿನ 286 ಪ್ರಕರಣ

Dengue: ಆರೋಗ್ಯ ಅಧಿಕಾರಿಯೇ ಆಹುತಿ: ಒಂದೇ ದಿನ 286 ಪ್ರಕರಣ

Kamlashile Temple; ಕಮಲಶಿಲೆ ದೇವಿಗೆ ಕುಬ್ಜಾ ಸ್ನಾನ

Kamlashile Temple; ಕಮಲಶಿಲೆ ದೇವಿಗೆ ಕುಬ್ಜಾ ಸ್ನಾನ

vidhana-Soudha

Cabinet Decission: ಏಳು ತಾಲೂಕುಗಳಲ್ಲಿ 100 ಹಾಸಿಗೆಗಳ ಆಸ್ಪತ್ರೆ

Rohan Bopanna

Wimbledon tennis match: ಬೋಪಣ್ಣ-ಎಬ್ಡೆನ್‌ ಮುನ್ನಡೆ

1-athli

Paris Olympics; ಆ್ಯತ್ಲೀಟ್‌ ಗಳಿಂದ ಶ್ರೇಷ್ಠ ನಿರ್ವಹಣೆ: ಮೋದಿ ವಿಶ್ವಾಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.