![Gangavathi ವಿರೂಪಾಪೂರಗಡ್ಡಿ: ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ](https://www.udayavani.com/wp-content/uploads/2024/07/Gangolli-1-415x234.jpg)
ಬೈಂದೂರು: ಬಹುಕೋಟಿ ಬಸ್ ನಿಲ್ದಾಣ ಜಾನುವಾರು ತಂಗುದಾಣ!
ಸರಕಾರಕ್ಕೆ ಹಸ್ತಾಂತರಿಸಿದರೂ ಕೂಡ ಉದ್ಘಾಟನೆ ಭಾಗ್ಯ ಕಂಡಿಲ್ಲ
Team Udayavani, Jun 25, 2024, 3:08 PM IST
![ಬೈಂದೂರು: ಬಹುಕೋಟಿ ಬಸ್ ನಿಲ್ದಾಣ ಜಾನುವಾರು ತಂಗುದಾಣ!](https://www.udayavani.com/wp-content/uploads/2024/06/Byndoor-8-620x309.jpg)
ಬೈಂದೂರು: ಅಧಿಕಾರಿಗಳ ನಿರ್ಲಕ್ಷತೆ, ಸರಕಾರದ ಸ್ಪಂದನೆಯ ಕೊರತೆಯಿಂದ ಕಾಮಗಾರಿ ಪೂರ್ಣಗೊಂಡು ಮೂರು ವರ್ಷ ಕಳೆದರೂ ಬೈಂದೂರಿನ ಕೆಎಸ್ ಆರ್ಟಿಸಿ ಬಸ್ ನಿಲ್ದಾಣ ಇನ್ನೂ ಉದ್ಘಾಟನೆ ಆಗಿಲ್ಲ. ಬಹು ಕೋಟಿ ಕಟ್ಟಡ ಬಸ್ಗಳ ನಿಲ್ದಾಣವಾಗುವ ಬದಲು ಜಾನುವಾರುಗಳ ವಿಶ್ರಾಂತಿ ಕೇಂದ್ರವಾಗಿದೆ. ಮಾತ್ರವಲ್ಲದೆ ಅಕ್ರಮ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಯಡ್ತರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಸ್ ನಿಲ್ದಾಣ ಕಾಮಗಾರಿ ಮುಗಿದು ಗುತ್ತಿಗೆದಾರರು ಸರಕಾರಕ್ಕೆ ಹಸ್ತಾಂತರಿಸಿದರೂ ಕೂಡ ಉದ್ಘಾಟನೆ ಭಾಗ್ಯ ಕಂಡಿಲ್ಲ. 2018ರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಎಸ್. ಆರ್. ಉಮಾಶಂಕರ್ ಈ ನಿಲ್ದಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಗ್ರಾಮೀಣ ಮತ್ತು ನಗರ ಭಾಗಗಳಿಗೆ ಹೆಚ್ಚು ಬಸ್ಗಳನ್ನು ಒದಗಿಸಿ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಡುಪಿಯಲ್ಲಿ 34 ಕೋಟಿ ಬಸ್ ನಿಲ್ದಾಣ ಹಾಗೂ 6 ಕೋ.ರೂ. ವೆಚ್ಚದಲ್ಲಿ ಡಿಪೋ, ಬೈಂದೂರಿನಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಬಸ್ ನಿಲ್ದಾಣ ಹಾಗೂ 6 ಕೋಟಿ ರೂ. ವೆಚ್ಚದಲ್ಲಿ ಡಿಪೋ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿತ್ತು
ಎರಡೆರಡು ಬಾರಿ ಗುದ್ದಲಿ ಪೂಜೆ
ಶಂಕುಸ್ಥಾಪನೆ ಬಳಿಕ ಸರಕಾರ ಬದಲಾವಣೆಯಾಗಿ ಶಾಸಕರು ಕೂಡ ಬದಲಾಗಿದ್ದರು. ನೂತನ ಶಾಸಕರು ಮತ್ತೊಮ್ಮೆ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು. ಕೊಲ್ಲೂರು ದೇವಸ್ಥಾನದ ಯಾತ್ರಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಯಡ್ತರೆ ಬಳಿಯಲ್ಲಿ ಇದನ್ನು ನಿರ್ಮಿಸಲಾಗಿದೆ. ಎರಡು ಬಾರಿ ಶಂಕುಸ್ಥಾಪನೆ ಮಾಡುವ ಉತ್ಸಾಹ ಉದ್ಘಾಟನೆ ಮಾಡುವ ವಿಚಾರದಲ್ಲಿ ಕಂಡುಬಂದಿಲ್ಲ.
ಅತೀ ಅಗತ್ಯದ ನಿಲ್ದಾಣವಿದು
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಬೈಂದೂರು ಯಡ್ತರೆ ಬೈಪಾಸ್ ಬಳಿಯ ಈ ನಿಲ್ದಾಣ ಪ್ರಯಾಣಿಕರಿಗೆ ಅತಿ ಅಗತ್ಯವಾದ ನಿಲ್ದಾಣವಾಗಿದೆ. ದೂರದ ಊರುಗಳಿಂದ ಬರು ವವರಿಗೆ ಶೌಚ ಮತ್ತಿತರ ಅಗತ್ಯಗಳಿಗೆ ಇದು
ಅನುಕೂಲವಾಗಿದೆ. ಜತೆಗೆ ಅದೆಷ್ಟೋ ಬಸ್ ಗ ಳಿಗೆ, ಪ್ರಯಾಣಿಕರಿಗೆ ಬಸ್ ಕಾಯಲುಬೇಕಾಗಿದೆ.
ಬೇಸರದಾಯಕ
ಬಸ್ ನಿಲ್ದಾಣ ಉಳಿದ ಕಾಮಗಾರಿಗೆ ಈಗಾಗಲೇ ಅನುದಾನ ಮಂಜೂರಾಗಿದೆ. ಟೆಂಡರ್ ಕೂಡ ಆಗಿದೆ. ಗುತ್ತಿಗೆದಾರರು ಕಾಮಗಾರಿ ಮುಗಿಸಿ ಇಲಾಖೆಗೆ ಹಸ್ತಾಂತರಿಸಿದ್ದಾರೆ.ಆದರೆ ಆಧಿಕಾರಿಗಳು ಇದರ ಪೂರ್ಣತೆಗೆ ಗಮನಹರಿಸದಿರುವುದು ಬೇಸರದಾಯಕವಾಗಿದೆ.
*ಭೋಜರಾಜ ಶೆಟ್ಟಿ, ಬೈಂದೂರು ನಿವಾಸಿ
* ಅರುಣಕುಮಾರ ಶಿರೂರು
ಟಾಪ್ ನ್ಯೂಸ್
![Gangavathi ವಿರೂಪಾಪೂರಗಡ್ಡಿ: ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ](https://www.udayavani.com/wp-content/uploads/2024/07/Gangolli-1-415x234.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Train ಶಿವಮೊಗ್ಗ-ಶೃಂಗೇರಿ-ಮಂಗಳೂರು ಹೊಸ ರೈಲು ಮಾರ್ಗ ಮಂಜೂರಾತಿಗೆ ಮನವಿ](https://www.udayavani.com/wp-content/uploads/2024/07/TAIN-150x97.jpg)
Train ಶಿವಮೊಗ್ಗ-ಶೃಂಗೇರಿ-ಮಂಗಳೂರು ಹೊಸ ರೈಲು ಮಾರ್ಗ ಮಂಜೂರಾತಿಗೆ ಮನವಿ
![Byndoor ತುಂಬಿದ ಹೊಳೆ ಮಧ್ಯೆ ಮಕ್ಕಳನ್ನು ಹೊತ್ತೊಯ್ಯುವ ನಿತ್ಯದ ಕಸರತ್ತು](https://www.udayavani.com/wp-content/uploads/2024/07/kun-150x104.jpg)
Byndoor ತುಂಬಿದ ಹೊಳೆ ಮಧ್ಯೆ ಮಕ್ಕಳನ್ನು ಹೊತ್ತೊಯ್ಯುವ ನಿತ್ಯದ ಕಸರತ್ತು
![Shiroor : ಗಾಳಿ ಮಳೆಗೆ ಹಾರಿ ಹೋದ ಹೊಟೇಲ್ ಮೇಲ್ಛಾವಣಿ](https://www.udayavani.com/wp-content/uploads/2024/07/SHIRUR-7-150x87.jpg)
Shiroor : ಗಾಳಿ ಮಳೆಗೆ ಹಾರಿ ಹೋದ ಹೊಟೇಲ್ ಮೇಲ್ಛಾವಣಿ
![ಗಂಗೊಳ್ಳಿ: ಕೋಡಿ ಬ್ರೇಕ್ವಾಟರ್ ಬಳಿಕ ಗಂಗೊಳ್ಳಿ ಸರದಿ](https://www.udayavani.com/wp-content/uploads/2024/07/Gangolli-150x68.jpg)
ಗಂಗೊಳ್ಳಿ: ಕೋಡಿ ಬ್ರೇಕ್ವಾಟರ್ ಬಳಿಕ ಗಂಗೊಳ್ಳಿ ಸರದಿ
![Vandseಬೆಳ್ಳಾಲ ದುರಂತ: ಮಕ್ಕಳಿಬ್ಬರ ಅಂತ್ಯಸಂಸ್ಕಾರ: ತಾಯಿ ಚೇತರಿಕೆ,ಆಸ್ಪತ್ರೆಯಿಂದ ಬಿಡುಗಡೆ](https://www.udayavani.com/wp-content/uploads/2024/07/Vandse-150x85.jpg)
Vandseಬೆಳ್ಳಾಲ ದುರಂತ: ಮಕ್ಕಳಿಬ್ಬರ ಅಂತ್ಯಸಂಸ್ಕಾರ: ತಾಯಿ ಚೇತರಿಕೆ,ಆಸ್ಪತ್ರೆಯಿಂದ ಬಿಡುಗಡೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.