Terdal: ಮದುವೆ ಸಂಭ್ರಮ ಕಸಿದುಕೊಂಡ ಜವರಾಯ: ಹೈಟೆನ್ಶನ್ ವೈರ್ ತುಂಡಾಗಿ ಇಬ್ಬರು ಮೃತ
Team Udayavani, Jun 25, 2024, 6:34 PM IST
ಬಾಗಲಕೋಟೆ: ಹೈಟೆನ್ಶನ್ ವಿದ್ಯುತ್ ವೈರ್ ತುಂಡಾಗಿ ತಗಡಿನ ಶೆಡ್ ಮೇಲೆ ಬಿದ್ದು ವಿದ್ಯುತ್ ಪ್ರವಹಿಸಿ ಇಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ತೇರದಾಳ ಪಟ್ಟಣದ ದಾಸರಮಡ್ಡಿಯಲ್ಲಿ ಮಂಗಳವಾರ ನಡೆದಿದೆ.
ಸಂತೋಷ ಸುಣಗಾರ (22) ಹಾಗೂ ಶೋಭಾ ಹುಲ್ಲೆಣ್ಣವ (38) ಮೃತ ದುರ್ದೈವಿಗಳು.
ಅವಘಡದಲ್ಲಿ ಶ್ರೀಕಾಂತ, ಮಹೇಶ, ಕಸ್ತೂರಿ, ಸಂಗೀತಾ ಕಾಮಶೆಟ್ಟಿ ಎಂಬುವರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಾಸರಮಡ್ಡಿಯಲ್ಲಿ ದುರ್ಗಾದೇವಿ ಜಾತ್ರೆಯಿರುವ ಹಿನ್ನೆಲೆ ಮನೆಯಲ್ಲಿ ಹೆಚ್ಚಿನ ಜನರು ಉಳಿದುಕೊಂಡಿದ್ದರು. ಮೃತ ಯುವಕನಿಗೆ ಇನ್ನೂ ಮೂರು ದಿನದಲ್ಲಿಮದುವೆ ನಿಶ್ಚಯವಾಗಿತ್ತು. ಆದರೆ ಜವರಾಯನ ಅಟ್ಟಾಹಾಸಕ್ಕೆ ಬಲಿಯಾಗಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Irrigation: ರೈತರ ವಿಚಾರದಲ್ಲಿ ರಾಜಕಾರಣ ಮಾಡದಿರಿ: ಸಚಿವ ತಿಮ್ಮಾಪುರ
ಬಹುಮುಖ ಪ್ರತಿಭೆ: ಕಾಲಪೆಟ್ಟಿಗೆಯ ಹಾರ್ಮೋನಿಯಂ ಕಲಾವಿದ ಸದಾಶಿವ ತೇಲಿ
Young Farmer; ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು; ಯುವ ರೈತನ ಸಾಧನೆ
Agriculture ಹೀರೆಕಾಯಿ ಬೆಳೆಯಿಂದ ಉತ್ತಮ ಆದಾಯ; ಕೃಷಿಕ ಧನಪಾಲ ಯಲ್ಲಟ್ಟಿ ಸಾಧನೆ
Mudhol ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಒತ್ತಾಯಿಸಿ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.