![Rabakavi](https://www.udayavani.com/wp-content/uploads/2024/07/Rabakavi-415x249.jpg)
Semi finals; ಭಾರತಕ್ಕೆ ಇಂಗ್ಲೆಂಡ್ ಎದುರಾಳಿ; ಅಫ್ಘಾನಿಸ್ಥಾನಕ್ಕೆ ದಕ್ಷಿಣ ಆಫ್ರಿಕಾ
Team Udayavani, Jun 26, 2024, 7:11 AM IST
![icc t20 world cup 2024 semi finalists](https://www.udayavani.com/wp-content/uploads/2024/06/semi-620x342.jpg)
ಟರೂಬ/ಪ್ರೊವಿಡೆನ್ಸ್: ಟಿ20 ವಿಶ್ವಕಪ್ ಪಂದ್ಯಾವಳಿ ಸೆಮಿಫೈನಲ್ನತ್ತ ಮುಖ ಮಾಡಿದೆ. ದಾಖಲೆ ಸಂಖ್ಯೆಯ 20 ತಂಡಗಳಲ್ಲಿ 4 ಮಾತ್ರ ರೇಸ್ನಲ್ಲಿ ಉಳಿದುಕೊಂಡಿವೆ. ಸೂಪರ್-8 ಮೊದಲ ವಿಭಾಗದಿಂದ ಭಾರತ (6 ಅಂಕ) ಮತ್ತು ಅಫ್ಘಾನಿಸ್ಥಾನ (4 ಅಂಕ); ಎರಡನೇ ವಿಭಾಗದಿಂದ ದಕ್ಷಿಣ ಆಫ್ರಿಕಾ (6 ಅಂಕ) ಮತ್ತು ಇಂಗ್ಲೆಂಡ್ (4 ಅಂಕ) ಸೆಮಿಫೈನಲ್ ಪ್ರವೇಶಿಸಿವೆ.
ಟರೂಬದಲ್ಲಿ ನಡೆಯುವ ಮೊದಲ ಸೆಮಿಫೈನಲ್ನಲ್ಲಿ ದ. ಆಫ್ರಿಕಾ- ಅಫ್ಘಾನಿ ಸ್ಥಾನ ಮುಖಾಮುಖೀ ಆಗಲಿವೆ. ಗಯಾನಾದ ಪ್ರೊವಿಡೆನ್ಸ್ನಲ್ಲಿ ಭಾರತ ತಂಡ ಹಾಲಿ ಚಾಂಪಿಯನ್ ಇಂಗ್ಲೆಂಡನ್ನು ಎದುರಿಸಲಿದೆ.
ವೇಳಾಪಟ್ಟಿಯಂತೆ ಇದು ಜೂ. 26 ಮತ್ತು 27ರಂದು ನಡೆಯುವ ಸ್ಪರ್ಧೆ. ಆದರೆ ಭಾರತೀಯ ಕಾಲಮಾನದಂತೆ ಎರಡೂ ಗುರುವಾರವೇ ಸಾಗಲಿದೆ. ಮೊದಲ ಸೆಮಿಫೈನಲ್ ಬೆಳಗ್ಗೆ 6 ಗಂಟೆಗೆ, ಎರಡನೇ ಸೆಮಿಫೈನಲ್ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.
ಮೀಸಲು ದಿನ
ಮೊದಲ ಸೆಮಿಫೈನಲ್ಗೆ ಜೂ. 27 ಮೀಸಲು ದಿನವಾಗಿದೆ. ಆದರೆ ಭಾರತ- ಇಂಗ್ಲೆಂಡ್ ಪಂದ್ಯಕ್ಕೆ ಮೀಸಲು ದಿನವಿಲ್ಲ. ಕೇವಲ 48 ಗಂಟೆಯ ಅವಧಿಯಲ್ಲಿ ಫೈನಲ್ ಏರ್ಪಡುವುದೇ ಇದಕ್ಕೆ ಕಾರಣ. ಇದರ ಬದಲು 260 ನಿಮಿಷಗಳ ಹೆಚ್ಚುವರಿ ಅವಧಿಯನ್ನು ನೀಡಲಾಗಿದೆ. ಆದರೆ ದಕ್ಷಿಣ ಆಫ್ರಿಕಾ-ಆಫ್ಘಾನಿಸ್ಥಾನ ಪಂದ್ಯಕ್ಕೆ ಮೀಸಲು ದಿನ ಇರುವ ಕಾರಣ, ಪಂದ್ಯದ ದಿನ ಕೇವಲ 60 ನಿಮಿಷಗಳ ಹೆಚ್ಚುವರಿ ಅವಧಿಯನ್ನು ನೀಡಲಾಗಿದೆ. ಮೀಸಲು ದಿನದ ಆಟದ ಅವಧಿ 190 ನಿಮಿಷ.
ಸ್ಪಷ್ಟ ಫಲಿತಾಂಶಕ್ಕಾಗಿ ಕನಿಷ್ಠ 10 ಓವರ್ಗಳ ಆಟ ನಡೆಯಬೇಕಿದೆ. ಇಲ್ಲಿಯೂ ಆಟ ಅಸಾಧ್ಯವಾಗಿ ಪಂದ್ಯ ರದ್ದುಗೊಂಡರೆ ಸೂಪರ್-8ರಲ್ಲಿ ಅಗ್ರ ಸ್ಥಾನ ಹೊಂದಿದ ತಂಡಗಳು ಫೈನಲ್ ಪ್ರವೇಶಿಸಲಿವೆ. ಆಗ ದಕ್ಷಿಣ ಆಫ್ರಿಕಾ ಮತ್ತು ಭಾರತಕ್ಕೆ ಲಾಭವಾಗಲಿದೆ.
ಟಾಪ್ ನ್ಯೂಸ್
![Rabakavi](https://www.udayavani.com/wp-content/uploads/2024/07/Rabakavi-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![NDWvsSAW; ಚೆನ್ನೈನಲ್ಲಿ ಹರಿಣಗಳ ಬೇಟೆಯಾಡಿದ ಟೀಂ ಇಂಡಿಯಾ; ಏಕೈಕ ಟೆಸ್ಟ್ ನಲ್ಲಿ ಭರ್ಜರಿ ಜಯ](https://www.udayavani.com/wp-content/uploads/2024/07/ind-w-150x83.jpg)
INDWvsSAW; ಚೆನ್ನೈನಲ್ಲಿ ಹರಿಣಗಳ ಬೇಟೆಯಾಡಿದ ಟೀಂ ಇಂಡಿಯಾ; ಏಕೈಕ ಟೆಸ್ಟ್ ನಲ್ಲಿ ಭರ್ಜರಿ ಜಯ
![ದಾಖಲೆ ಬರೆಯಿತು ವಿರಾಟ್ ಕೊಹ್ಲಿ ಅವರ ಈ ಇನ್ಸ್ಟಾಗ್ರಾಮ್ ಪೋಸ್ಟ್](https://www.udayavani.com/wp-content/uploads/2024/07/virat-150x83.jpg)
Virat Kohli; ದಾಖಲೆ ಬರೆಯಿತು ವಿರಾಟ್ ಕೊಹ್ಲಿ ಅವರ ಈ ಇನ್ಸ್ಟಾಗ್ರಾಮ್ ಪೋಸ್ಟ್
![rohit sharma](https://www.udayavani.com/wp-content/uploads/2024/07/rohit-150x83.jpg)
Team India; ಟಿ20 ಗೆ ವಿದಾಯ ಹೇಳುವ ಯೋಚನೆ ಇರಲಿಲ್ಲ, ಆದರೆ…: ರೋಹಿತ್ ಶರ್ಮಾ
![DK; ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದ ಕಾರ್ತಿಕ್; ಈ ಬಾರಿ ಬೇರೆ ಜವಾಬ್ದಾರಿ](https://www.udayavani.com/wp-content/uploads/2024/07/dines-150x83.jpg)
DK; ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದ ಕಾರ್ತಿಕ್; ಈ ಬಾರಿ ಬೇರೆ ಜವಾಬ್ದಾರಿ
![1-isl](https://www.udayavani.com/wp-content/uploads/2024/07/1-isl-150x89.jpg)
2026 T20 World Cup; ಭಾರತ-ಶ್ರೀಲಂಕಾ ಆತಿಥ್ಯ
MUST WATCH
ಹೊಸ ಸೇರ್ಪಡೆ
![1-sagara](https://www.udayavani.com/wp-content/uploads/2024/07/1-sagara-150x94.jpg)
Sagara; ಮರ ಕತ್ತರಿಸುತ್ತಿದ್ದಾಗ ಕೊಂಬೆ ಬಿದ್ದು ವ್ಯಕ್ತಿ ಸಾವು
![Rabakavi](https://www.udayavani.com/wp-content/uploads/2024/07/Rabakavi-150x90.jpg)
Irrigation: ರೈತರ ವಿಚಾರದಲ್ಲಿ ರಾಜಕಾರಣ ಮಾಡದಿರಿ: ಸಚಿವ ತಿಮ್ಮಾಪುರ
![Congress ಸಿಎಂ, ಡಿಸಿಎಂ ಆಯ್ಕೆ ಹೈಕಮಾಂಡ್ಗೆ ಬಿಟ್ಟ ವಿಚಾರ: ಸಚಿವ ತಿಮ್ಮಾಪುರ](https://www.udayavani.com/wp-content/uploads/2024/07/aaaz-150x84.jpg)
Congress Govt ಸಿಎಂ, ಡಿಸಿಎಂ ಆಯ್ಕೆ ಹೈಕಮಾಂಡ್ಗೆ ಬಿಟ್ಟ ವಿಚಾರ: ಸಚಿವ ತಿಮ್ಮಾಪುರ
![police crime](https://www.udayavani.com/wp-content/uploads/2024/07/police-crime-150x92.jpg)
New criminal law ಅಡಿಯಲ್ಲಿ ಕನ್ನಡಿಗನ ವಿರುದ್ಧ ಮೊದಲ ಕೇಸ್ ದಾಖಲಿಸಿದ ಕೇರಳ ಪೊಲೀಸ್
![ಕಾಪು: ವಾಹನ ಚಾಲಕರು, ಸಂಚಾರಿಗಳ ಪ್ರಾಣಕ್ಕೆ ಸಂಚಕಾರ](https://www.udayavani.com/wp-content/uploads/2024/07/Kapu-150x79.jpg)
ಕಾಪು: ವಾಹನ ಚಾಲಕರು, ಸಂಚಾರಿಗಳ ಪ್ರಾಣಕ್ಕೆ ಸಂಚಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.