National Highway ಕಬ್ಬಿಣ ಪಟ್ಟಿ ಹಾನಿ; ಆಗುತ್ತಿಲ್ಲ ನಿರ್ವಹಣೆ


Team Udayavani, Jun 26, 2024, 6:35 AM IST

National Highway ಕಬ್ಬಿಣ ಪಟ್ಟಿ ಹಾನಿ; ಆಗುತ್ತಿಲ್ಲ ನಿರ್ವಹಣೆ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅಳವಡಿಸಲಾಗಿರುವ ಕಬ್ಬಿಣದ ತಡೆ ಬೇಲಿ ಪಟ್ಟಿ (ಮೆಟಲ್‌ ಬೀಮ್‌ ಕ್ರ್ಯಾಶ್ ಬ್ಯಾರಿಯರ್‌)ಗಳು ಬಹುತೇಕ ಕಡೆ ನಜ್ಜುಗುಜ್ಜಾಗಿದ್ದು, ನಿರ್ವಹಣೆಯೇ ಆಗುತ್ತಿಲ್ಲ.

ಅಪಘಾತಗಳು ಉಂಟಾದಾಗ ವಾಹನಗಳು ರಸ್ತೆಯಿಂದ ಹೊರಕ್ಕೆ ಅಥವಾ ಆಳವಾದ ಕಂದಕಗಳಿಗೆ ಬೀಳದಂತೆ ತಡೆಯಲು ಇವುಗಳನ್ನು ಅಳವಡಿಸಲಾಗುತ್ತದೆ. ಜಿಲ್ಲಾ ವ್ಯಾಪ್ತಿ ಯಲ್ಲಿ ಹಾದು ಹೋಗುವ ಪ್ರಮುಖ ಹೆದ್ದಾರಿಗಳಾದ ಎನ್‌ಎಚ್‌ 66, ಎನ್‌ಎಚ್‌ 73 ಹೆದ್ದಾರಿಗಳಲ್ಲಿ ದಶಕಗಳ ಹಿಂದೆ ರಸ್ತೆ ನಿರ್ಮಾಣದ ವೇಳೆ ಕಬ್ಬಿಣದ ಪಟ್ಟಿಗಳನ್ನು ಅಳವಡಿಸಲಾಗಿತ್ತು. ಪ್ರಸ್ತುತ ಅಲ್ಲಲ್ಲಿ ನಜ್ಜುಗುಜ್ಜಾಗಿರುವುದು, ತುಂಡಾ ಗಿರುವುದು ಕಾಣಲು ಸಿಗುತ್ತಿವೆ.

ದುರಸ್ತಿ ಕಾರ್ಯ ಆಗುತ್ತಿಲ್ಲ.
ಇಂತಹ ನಜ್ಜುಗುಜ್ಜಾದ ಕಬ್ಬಿಣದ ಪಟ್ಟಿಗಳನ್ನು ಬದಲಾಯಿಸಿ, ಹೊಸದಾಗಿ ಅಳವಡಿಸುವ ಕೆಲಸ ಮಾತ್ರ ಹೆದ್ದಾರಿ ಪ್ರಾಧಿಕಾರದ ಮೂಲಕ ನಡೆಯುತ್ತಿಲ್ಲ. ಹೆದ್ದಾರಿಯಲ್ಲಿರುವ ಗುಂಡಿಗಳಿಗೆ ತೇಪೆ,ಡಾಮರು, ಡಿವೈಡರ್‌ಗಳಿಗೆ ಬಣ್ಣ
ಬಳಿಯುವುದು, ಬ್ಲಿಂಕರ್ಗಳ ಅಳವಡಿಕೆ, ಬೀದಿ ದೀಪಗಳ ನಿರ್ವಹಣೆ, ಹುಲ್ಲು ಪೊದೆಗಳ ತೆರವು ಸೇರಿದಂತೆ ಎಲ್ಲ ರೀತಿಯ ಕೆಲಸಗಳು ಪ್ರತಿ ವರ್ಷ ನಡೆಯುತ್ತದೆ. ಆದರೆ ಈ ಪಟ್ಟಿಗಳನ್ನು ರಿಪೇರಿಮಾಡಲು ಮಾತ್ರ ಇಲಾಖೆ ಮುಂದಾಗು ತ್ತಿಲ್ಲ ಎನ್ನುವ ಆರೋಪಗಳು ಸಾರ್ವಜನಿಕವಲಯದಿಂದ ಕೇಳಿ ಬಂದಿವೆ.

ಹೆಚ್ಚಿನ ಅಪಾಯಕ್ಕೆ ಆಹ್ವಾನ
ಕೆಲವು ಕಡೆಗಳಲ್ಲಿ “ಪಟ್ಟಿ’ ಅಳವಡಿಸಿದ್ದ ಕಬ್ಬಿಣದ ಕಂಬಗಳು ಮಾತ್ರ ಉಳಿದಿದ್ದು, ಇವುಗಳೂ ಅಪಾಯಕ್ಕೆ ಆಹ್ವಾನ ನೀಡಿದಂತಿವೆ. ರಾತ್ರಿ ವೇಳೆ ವಾಹನ ಸವಾರರಿಗೆ ತಡೆ ಇರುವುದು ಗೋಚರಿಸಲು ಅಳವಡಿಸಲಾಗಿದ್ದ ಕೆಂಪು ಬಣ್ಣದ ರಿಫ್ಲೆಕ್ಟರ್‌ಗಳು ಕೂಡ ಮಾಯವಾಗಿದ್ದು, ಇದು ಕೂಡಾ ಅಪಾಯವೇ. ಸ್ಥಳೀಯರು ಕೂಡ ತಮ್ಮ ಆವಶ್ಯತೆಗಳಿಗಾಗಿ ಅವುಗಳನ್ನು ಕತ್ತರಿಸಿರುವುದು, ಕೆಲವು ಕಡೆಗಳಲ್ಲಿ ಕಾಮಗಾರಿಗಳಿಗಾಗಿ ತುಂಡರಿಸಿ ತೆಗೆದು ಪುನಃ ಅಳವಡಿಸದಿರುವುದೂ ಇದೆ.

ಹೆದ್ದಾರಿಗಳಲ್ಲಿ ಪ್ರತಿನಿತ್ಯ ಎಂಬಂತೆ ಭೀಕರ ಅಪಘಾತಗಳು ಉಂಟಾಗುತ್ತಿದ್ದು, ಪ್ರಾಣ ಹಾನಿಯೂ ಸಂಭವಿಸುತ್ತಿವೆ. ರಸ್ತೆ ಬದಿಯ ಕಂದಕಗಳಿಗೆ ವಾಹನಗಳು ಬೀಳುವುದು ಕೂಡ ಅಲ್ಲಲ್ಲಿ ವರದಿಯಾಗುತ್ತಿದೆ. ಹೆದ್ದಾರಿಗಳ ನಿರ್ವಹಣೆ ವೇಳೆ ಕಬ್ಬಿಣದ ತಡೆಬೇಲಿ ಬಗ್ಗೆಯೂ ಅಧಿಕಾರಿಗಳು ಗಮನ ಹರಿಸುವ ಅಗತ್ಯವಿದೆ.

ಟಾಪ್ ನ್ಯೂಸ್

vidhana-Soudha

Karnataka Government: 7ನೇ ವೇತನ ಆಯೋಗದ ಶಿಫಾರಸಿಗೆ ಎಳ್ಳುನೀರು?

High-Court

HSRP ಅಳವಡಿಕೆ ಅವಧಿ ಸೆ. 15ರವರೆಗೆ ವಿಸ್ತರಣೆ

Dengue

Health Problem: ಕರುನಾಡ‌ ಜೀವ‌ ಹಿಂಡುತ್ತಿರುವ ಡೆಂಗ್ಯೂ!

1-24-friday

Daily Horoscope: ಉದ್ಯೋಗ ಸ್ಥಾನದಲ್ಲಿ ಅನಿರೀಕ್ಷಿತ ಶ್ಲಾಘನೆ, ನೌಕರರಿಗೆ ವರ್ಗಾವಣೆಯ ಸೂಚನೆ

Agri

Agriculture: ಗ್ರಾಮೀಣ ಬದುಕಿನ ಚಾವಡಿ ಚರ್ಚೆ; ಕೇವಲ ನೆನಪು

Prajwal-revanna

Hasana Pendrive Case; ಪ್ರಜ್ವಲ್‌ ಸಮರ್ಥ ಪುರುಷ: ವೈದ್ಯಕೀಯ ವರದಿ

Udupi ಪ್ರೇಯಸಿ ಜತೆ ಜಗಳ: ರಸ್ತೆಯಲ್ಲೇ ಬಸ್‌ ನಿಲ್ಲಿಸಿ ಹೋದ ಚಾಲಕ!

Udupi ಪ್ರೇಯಸಿ ಜತೆ ಜಗಳ: ರಸ್ತೆಯಲ್ಲೇ ಬಸ್‌ ನಿಲ್ಲಿಸಿ ಹೋದ ಚಾಲಕ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ulaibettu ಪೆರ್ಮಂಕಿ ಉದ್ಯಮಿ ದರೋಡೆ ಪ್ರಕರಣ; 10 ಮಂದಿ ಆರೋಪಿಗಳ ಬಂಧನ

Ulaibettu ಪೆರ್ಮಂಕಿ ಉದ್ಯಮಿ ದರೋಡೆ ಪ್ರಕರಣ; 10 ಮಂದಿ ಆರೋಪಿಗಳ ಬಂಧನ

Dengue ಕರಾವಳಿಯಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ : ಮುಂಜಾಗರೂಕತೆಯೇ ಮದ್ದು

Dengue ಕರಾವಳಿಯಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ : ಮುಂಜಾಗರೂಕತೆಯೇ ಮದ್ದು

Heavy Rain ಬಿರುಸಿನ ಮಳೆ; ವಿವಿಧೆಡೆ ನೆರೆ, ವ್ಯಾಪಕ ಹಾನಿ, ನಷ್ಟHeavy Rain ಬಿರುಸಿನ ಮಳೆ; ವಿವಿಧೆಡೆ ನೆರೆ, ವ್ಯಾಪಕ ಹಾನಿ, ನಷ್ಟ

Heavy Rain ಬಿರುಸಿನ ಮಳೆ; ವಿವಿಧೆಡೆ ನೆರೆ, ವ್ಯಾಪಕ ಹಾನಿ, ನಷ್ಟ

Rain ಪೊರ್ಕೋಡಿ ದೇವಸ್ಥಾನದ ಬಳಿ ಕುಸಿದ ರಸ್ತೆ: ವಾಹನ ಸಂಚಾರ ವ್ಯತ್ಯಯ

Rain ಪೊರ್ಕೋಡಿ ದೇವಸ್ಥಾನದ ಬಳಿ ಕುಸಿದ ರಸ್ತೆ: ವಾಹನ ಸಂಚಾರ ವ್ಯತ್ಯಯ

Retirement ಬಳಿಕ ಎಸ್‌ಪಿ ಪದೋನ್ನತಿಗೆ ಪೂರ್ವಾನ್ವಯ ಆದೇಶ

Retirement ಬಳಿಕ ಎಸ್‌ಪಿ ಪದೋನ್ನತಿಗೆ ಪೂರ್ವಾನ್ವಯ ಆದೇಶ

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

vidhana-Soudha

Karnataka Government: 7ನೇ ವೇತನ ಆಯೋಗದ ಶಿಫಾರಸಿಗೆ ಎಳ್ಳುನೀರು?

High-Court

HSRP ಅಳವಡಿಕೆ ಅವಧಿ ಸೆ. 15ರವರೆಗೆ ವಿಸ್ತರಣೆ

Dengue

Health Problem: ಕರುನಾಡ‌ ಜೀವ‌ ಹಿಂಡುತ್ತಿರುವ ಡೆಂಗ್ಯೂ!

1-24-friday

Daily Horoscope: ಉದ್ಯೋಗ ಸ್ಥಾನದಲ್ಲಿ ಅನಿರೀಕ್ಷಿತ ಶ್ಲಾಘನೆ, ನೌಕರರಿಗೆ ವರ್ಗಾವಣೆಯ ಸೂಚನೆ

Agri

Agriculture: ಗ್ರಾಮೀಣ ಬದುಕಿನ ಚಾವಡಿ ಚರ್ಚೆ; ಕೇವಲ ನೆನಪು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.