Peace: ಪ್ರಕೃತಿ ಮಾತೆಯ ಮಡಿಲಲ್ಲಿದೆ ನೆಮ್ಮದಿ


Team Udayavani, Jun 26, 2024, 4:00 PM IST

8-uv-fusion

ಎರಡು ವಾರಗಳ ಹಿಂದೆ ನಾನು ಶೃಂಗೇರಿ ದೇವಿಯ ದರ್ಶನಕ್ಕೆ ಹೋಗಿದ್ದೆ. ಶೃಂಗೇರಿ ಎಂದಾಗ ನೆನಪಾಗುವುದೇ ತುಂಗಭದ್ರ ನದಿ. ಶೃಂಗೇರಿಗೆ ಇನ್ನಷ್ಟು ಮೆರುಗನ್ನು ನೀಡುವುದೇ ಅಲ್ಲಿ ಮತ್ಸé ಸಂತತಿ ನೋಟ. ಅವುಗಳು ಆಹಾರವನ್ನು ತಿನ್ನಲು ದಡದ ಹತ್ತಿರ ಬಂದು ಕೈಯಿಂದಲೇ ಕೇಳಿ ಪಡೆಯುವ ರೀತಿ.

ಆದರೆ ಶೃಂಗೇರಿಗೆ ತಲುಪುವ ಮುಂಚಿತವಾಗಿ ಬಿಸಿ ಗಾಳಿಯನ್ನು ಪಡೆಯುತ್ತಿದ್ದ ನಮಗೆ ಪಶ್ಚಿಮ ಘಟ್ಟಗಳ ಒಳ ನುಸುಳುವ ಜಾಗಗಳಲ್ಲಿ ಚೆಕ್‌ ಪೋಸ್ಟ್‌ಗಳ ಮುಖ್ಯದ್ವಾರ ತೆರೆದಾಗ ಸ್ವರ್ಗದ ಬಾಗಿಲೇ ತೆರೆದ ರೀತಿ ಭಾಸವಾಯಿತು. ಸೂರ್ಯನ ರಶ್ಮಿ ನೆಲಕ್ಕೆ ತಾಗದ ರೀತಿಯಲ್ಲಿ ಆವೃತವಾದ ಮರ-ಗಿಡಗಳು, ತಂಪಾದ ಗಾಳಿ, ನಡು-ನಡುವೆ ಬದಿಯಲ್ಲಿ ನದಿ ನೀರಿನ ಹರಿವಿನ ಸಿಂಚನ, ಕಾಫಿ ಗಿಡಗಳ ಕಲರವ, ಸೀಬೆ ಹಣ್ಣಿನ ಮರದ ನೋಟ, ಬೆಟ್ಟ-ಗುಡ್ಡಗಳ ನೋಟ ಆಹಾ! ಅದೊಂದು ಅದ್ಭುತ ಲೋಕದ ರೀತಿಯಾಗಿ ಕಂಡಿತು.

ಮೊಬೈಲ್‌ ನೆಟ್‌ವರ್ಕ್‌ ಇಲ್ಲದಿದ್ದರೂ ಯಾವುದೇ ಬೋರು ಎಂಬ ಸಂಗತಿಯೇ ಕಾಣಲಿಲ್ಲ. ಪ್ರಕೃತಿ ಮಾತೆಯ ಶೃಂಗಾರ ಪ್ರಧಾನವಾದ ಮರ-ಗಿಡಗಳ ಹಾಸುಗಂಬಳಿಗಳನ್ನು ಕಂಡಾಗ, ಭೂಮಿಯ ಮೇಲಿನ ಪ್ರಕೃತಿ ಮಡಿಲಿನ ಸೌಂದರ್ಯದೊಂದಿಗೆ ಈ ಆಧುನಿಕ ಮಾನವರು ಬೆರೆಯುತ್ತಿಲ್ಲವಲ್ಲ ಅನ್ನುವ ಬೇಸರ ಆವರಿಸಿತು.

ಪಟ್ಟಣಗಳಲ್ಲಿ ಬದುಕುವ ಜನರಿಗಿಂತಲೂ ಆ ಪಶ್ಚಿಮ ಘಟ್ಟದ ಭಾಗಗಳಲ್ಲಿ ನೆಟ್‌ವರ್ಕ್‌ ಸಂಪರ್ಕಗಳಿಲ್ಲದೆ ಅಲ್ಲಿನ ಜನರು ಆರೋಗ್ಯದೊಂದಿಗೆ ನೆಮ್ಮದಿಯಿಂದ ಬದುಕುತ್ತಿದ್ದಾರೆ.

ಪ್ರಕೃತಿ ಮಾತೆಯ ಸೌಂದರ್ಯದ ದರ್ಶನವಾದ ಬಳಿಕವಾಗಿ ಶೃಂಗೇರಿಯ ಶಾರದಾಂಬ ದೇವಿ ದರ್ಶನವನ್ನು ಪಡೆದೆವು. ಒಬ್ಬ ಮನುಷ್ಯ ಆಧುನಿಕ ಜಗತ್ತಿನಲ್ಲಿ ಮೊಬೈಲ್‌ಗೆ ಎಷ್ಟು ಒಗ್ಗಿಕೊಂಡಿದ್ದಾನೆ ಎಂದರೆ ಅದನ್ನು ಹೇಳತಿರದು.

ಮೊಬೈಲ್‌ ಬಳಸಬಾರದು ಎಂದು ಎಷ್ಟೇ ನಾಮಫ‌ಲಕಗಳಿದ್ದರೂ ಮೂರ್ಖರಂತೆ ವರ್ತಿಸುವ ಮಾನವ ಮೊಬೈಲ್‌ ಬಳಸಿಕೊಂಡು ಫೋಟೋ ತೆಗೆಯುತ್ತಿದ್ದರು. ಈ ದೃಶ್ಯವನ್ನು ಕಂಡಾಗ ಮನುಷ್ಯನಿಗೆ ಬುದ್ಧಿಜೀವಿ ಎಂದು ಕರೆಯುವುದು ತಪ್ಪು ತಾನೇ? ಬುದ್ಧಿ ಇದ್ದರೂ ಮನುಷ್ಯ ಮೂಢನಂತೆ ವರ್ತಿಸುತ್ತಾನೆ. ಪ್ರವಾಸಿ ತಾಣಗಳು, ಶ್ರೇಷ್ಠ ಕ್ಷೇತ್ರಗಳ ಸೌಂದರ್ಯ ಇನ್ನು ಉಳಿಯಬೇಕಾದರೆ ಮೊದಲಿಗೆ ಮನುಷ್ಯನ ವರ್ತನೆಯಲ್ಲಿ ಬದಲಾವಣೆ ಬರಲೇಬೇಕಾಗಿದೆ.

ಎಲ್ಲ ಮಠಗಳ ದರ್ಶನವಾದ ಬಳಿಕವಾಗಿ ದೇವಿಯ ಪುಣ್ಯ ಪ್ರಸಾದವಾದ ಅನ್ನವೆಂಬ ಅಮೃತವನ್ನು ಸೇವಿಸಿದೆವು. ಮತ್ತದೇ ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬ ಕಾಣುತ್ತಾ ಬರಬಹುದಲ್ಲ ಎಂಬ ವಿಷಯ ನನ್ನ ಮನಸ್ಸಲ್ಲಿ ಇತ್ತು. ಹಿಂತಿರುಗಿ ಬರುವಾಗ ಅದೇ ಆ ತಂಪು ಗಾಳಿಯೇ ತುಂಬಾ ಮುದ ನೀಡುತ್ತಿತ್ತು. ಚೆಕ್‌ ಪೋಸ್ಟ್‌ ತೆರೆದಾಗ ಸ್ವರ್ಗದಿಂದ ನರಕಕ್ಕೆ ಬಂದ ಹಾಗೆ ಅನ್ನಿಸಿತು. ಮತ್ತದೇ ಬಿಸಿ ಗಾಳಿ!….ಇವೆಲ್ಲವನ್ನು ಕಂಡಾಗ ನನಗೆ ಅನಿಸಿದ್ದು ಒಂದೇ, ಪ್ರಕೃತಿ ಮಾತೆಯು ನೀಡುವಷ್ಟು ಖುಷಿ, ನೆಮ್ಮದಿ ಯಾವ ಮಾನವ ನಿರ್ಮಿತ ಜಗತ್ತು ನೀಡಲು ಸಾಧ್ಯವಿಲ್ಲ.

-ತೃಪ್ತಿ ಗುಡಿಗಾರ್‌

ಎಂ.ಪಿ.ಎಂ., ಕಾರ್ಕಳ

 

ಟಾಪ್ ನ್ಯೂಸ್

1-csaddasd

Hosanagara: ಅಪಘಾತವಾಗಿ ಪಲ್ಟಿಯಾದ 50ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಸರಕಾರಿ ಬಸ್

Rabakavi

Irrigation: ರೈತರ ವಿಚಾರದಲ್ಲಿ ರಾಜಕಾರಣ ಮಾಡದಿರಿ: ಸಚಿವ ತಿಮ್ಮಾಪುರ

Congress ಸಿಎಂ, ಡಿಸಿಎಂ ಆಯ್ಕೆ ಹೈಕಮಾಂಡ್‌ಗೆ ಬಿಟ್ಟ ವಿಚಾರ: ಸಚಿವ ತಿಮ್ಮಾಪುರ

Congress Govt ಸಿಎಂ, ಡಿಸಿಎಂ ಆಯ್ಕೆ ಹೈಕಮಾಂಡ್‌ಗೆ ಬಿಟ್ಟ ವಿಚಾರ: ಸಚಿವ ತಿಮ್ಮಾಪುರ

police crime

New criminal law ಅಡಿಯಲ್ಲಿ ಕನ್ನಡಿಗನ ವಿರುದ್ಧ ಮೊದಲ ಕೇಸ್ ದಾಖಲಿಸಿದ ಕೇರಳ ಪೊಲೀಸ್

1-INDI-M

Stop ‘misusing’; ಸಂಸತ್ ಆವರಣದಲ್ಲಿ ವಿಪಕ್ಷ ಸಂಸದರಿಂದ ಪ್ರತಿಭಟನೆ

1-patla

Yakshagana;ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಕಲಾವಿದರಿಂದ ಅಮೆರಿಕದಲ್ಲಿ ಅಭಿಯಾನ

Defamation Case: 24 ವರ್ಷದ ಹಿಂದಿನ ಪ್ರಕರಣ- ಮೇಧಾ ಪಾಟ್ಕರ್‌ ಗೆ 5 ತಿಂಗಳ ಜೈಲುಶಿಕ್ಷೆ

Defamation Case: 24 ವರ್ಷದ ಹಿಂದಿನ ಪ್ರಕರಣ- ಮೇಧಾ ಪಾಟ್ಕರ್‌ ಗೆ 5 ತಿಂಗಳ ಜೈಲುಶಿಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-uv-fusion

Education: ಅಸಮತೋಲನೆ ನಿವಾರಣೆಗೆ ಸಹ ಶಿಕ್ಷಣ ಸರಿಯಾದ ದಾರಿ

13-tn-sitharama

T. N. Seetharam: ಧಾರಾವಾಹಿಗಳಿಗೆ ಹೊಸ ಭಾಷ್ಯ ನೀಡಿದ ನಿರ್ದೇಶಕ ಟಿ.ಎನ್‌. ಸೀತಾರಾಮ

11-uv-fusion

Rajeev Taranath: ಸರೋದ್‌ ಸ್ವರ ಮಾಂತ್ರಿಕನ ಸ್ವರ್ಗಾರೋಹಣ

10-uv-fusion

UV Fusion: ನೈಸರ್ಗಿಕ ಕಾಡು ಪುನರುತ್ಥಾನಕ್ಕೆ ಕೊಡುಗೆ ನೀಡುವ ಉಪ್ಪಳಿಗೆ

11-uv-fusion

UV Fusion: ಸಿನೆಮಾ

MUST WATCH

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

ಹೊಸ ಸೇರ್ಪಡೆ

1-csaddasd

Hosanagara: ಅಪಘಾತವಾಗಿ ಪಲ್ಟಿಯಾದ 50ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಸರಕಾರಿ ಬಸ್

1-sagara

Sagara; ಮರ ಕತ್ತರಿಸುತ್ತಿದ್ದಾಗ ಕೊಂಬೆ ಬಿದ್ದು ವ್ಯಕ್ತಿ ಸಾವು

Rabakavi

Irrigation: ರೈತರ ವಿಚಾರದಲ್ಲಿ ರಾಜಕಾರಣ ಮಾಡದಿರಿ: ಸಚಿವ ತಿಮ್ಮಾಪುರ

Congress ಸಿಎಂ, ಡಿಸಿಎಂ ಆಯ್ಕೆ ಹೈಕಮಾಂಡ್‌ಗೆ ಬಿಟ್ಟ ವಿಚಾರ: ಸಚಿವ ತಿಮ್ಮಾಪುರ

Congress Govt ಸಿಎಂ, ಡಿಸಿಎಂ ಆಯ್ಕೆ ಹೈಕಮಾಂಡ್‌ಗೆ ಬಿಟ್ಟ ವಿಚಾರ: ಸಚಿವ ತಿಮ್ಮಾಪುರ

police crime

New criminal law ಅಡಿಯಲ್ಲಿ ಕನ್ನಡಿಗನ ವಿರುದ್ಧ ಮೊದಲ ಕೇಸ್ ದಾಖಲಿಸಿದ ಕೇರಳ ಪೊಲೀಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.