Rain Water Harvesting: ಜೀವ ಜಲದ ಉಳಿವಿಗೊಂದು ಸಣ್ಣ ಪ್ರಯತ್ನ


Team Udayavani, Jun 26, 2024, 5:24 PM IST

13

ಇದೀಗ ಮಳೆಗಾಲ ಪ್ರಾರಂಭವಾಗಿದೆ. ಜೊತೆಗೆ ವರುಣ ದೇವನ ಕೃಪೆಯಿಂದ ರೈತನ ಮೊಗದಲ್ಲಿ ಸಂತಸ ಮನೆಮಾಡಿದೆ. ಬೇಸಿಗೆಯ ಬವಣೆಯನ್ನು ನೀಗಿಸಿಕೊಳ್ಳಲು ಮಳೆರಾಯ ನಮಗೊಂದು ಅವಕಾಶವನ್ನು ನೀಡಿದ್ದಾನೆ.

ಈ ಅವಕಾಶವನ್ನು ಸದುಪಯೋಗ ಪಡೆಸಿಕೊಳ್ಳುವುದು ನಮ್ಮೆಲರ ಜವಾಬ್ದಾರಿಯಾಗಿದೆ. ಹೇಗೆ ಈ ಜವಾಬ್ದಾರಿಯನ್ನು ಜವಾಬ್ದಾರಿಯುತವಾಗಿ ನೇರವೆರಿಸುವುದು ಎನ್ನುವ ವಿಚಾರಕ್ಕೆ ಬಂದಾಗ ತಟ್ಟನೇ ನೆನಪಾಗುವುದು ಮಳೆ ನೀರಿನ ಕೊಯ್ಲು. ಹೌದು ಈ ಮಳೆ ನೀರಿನ ಕೊಯ್ಲು ಮರು ವರ್ಷದ ಬೆಸಿಗೆಯಲ್ಲಿ ಉಂಟಾಗುವ ನೀರಿನ ಆಹಾಕಾರವನ್ನು ನೀಗಿಸುವಲ್ಲಿ ಕೊಂಚ ಮಟ್ಟಿಗೆ ಸಹಕಾರಿಯಾಗಲಿದೆ.

ಏನಿದು ಮಳೆ ನೀರಿನ ಕೊಯ್ಲು?

ಮಳೆಗಾಲದಲ್ಲಿ ಅಥವಾ ಮಳೆ ಬೀಳುವ ಸಮಯದಲ್ಲಿ ಭೂಮಿಗೆ ಬಿದ್ದ ನೀರನ್ನು ಶುದ್ಧಿಕರಿಸಿ ಸಂಗ್ರಹಣೆ ಮಾಡುವುದನ್ನು ಒಳಗೊಂಡಿದೆ. ಜೊತೆಗೆ ಭೂಮಿಯ ಅಂತರ್ಜಲದ ಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಮಳೆ ರೂಪದಲ್ಲಿ ಭೂಮಿಗೆ ಬಿದ್ದ ನೀರನ್ನು ಭೂಮಿಯ ಒಡಲಾಳಕ್ಕೆ ಇಳಿಸುವ ವಿಧಾನವಾಗಿದೆ.

ಮಳೆ ನೀರನ್ನು ಸಂಗ್ರಹಿಸುವ ವಿಚಾರಕ್ಕೆ ಬಂದಾಗ ಕೃಷಿ ಹೊಂಡಗಳ ನಿರ್ಮಾಣ, ಮೇಲ್ಚಾವಣಿಯ ಮೇಲೆ ಬಿದ್ದ ಮಳೆ ನೀರಿನ ಸಂಗ್ರಹಣೆಗಳಂತಹ ಅಂಶಗಳು ಗಮನಾರ್ಹವಾಗಿವೆ.

ಮೇಲ್ಚಾವಣಿಯ ಮೇಲೆ ಬಿದ್ದ ಮಳೆ ನೀರಿನ ಸಂಗ್ರಹಣೆ

ಮನೆಯ ಮೇಲ್ಚಾವಣಿಯ ಮೇಲೆ ಮಳೆ ಬಂದಾಗ ಬಿದ್ದ ನೀರನ್ನು ಸಂಗ್ರಹಿಸಿ ದಿನ ನಿತ್ಯದ ಬಳಕೆಗೆ ಉಪಯೋಗಿಸುವುದು ಜೊತೆಗೆ ಹೆಚ್ಚುವರಿ ನೀರನ್ನು ಮಣ್ಣಿನೊಳಗೆ ಇಂಗುವಂತೆ ಮಾಡುವುದರ ಮೂಲಕ ಅಂತರ್ಜಲವನ್ನು ಹೆಚ್ಚಿಸುವುದು ಮಳೆ ನೀರಿನ ಕೊಯ್ಲಿನ ಒಂದು ವಿಧಾನವಾಗಿದೆ. ಹೀಗೆ ನೀರನ್ನು ಸಂಗ್ರಹಿಸುವಾಗ ನೀರನ್ನು ದಪ್ಪ ಕಲ್ಲು, ಜೆಲ್ಲಿ ಕಲ್ಲು, ಇದ್ದಿಲ್ಲು, ನೈಲಾನ…ಗಳನ್ನು ಬಳಸಿ ಶುದ್ಧಿಕರಿಸುವುದು ಉತ್ತಮ. ನುರಿತ ತಜ್ಞರ ಸಲಹೆಯ ಮೇರೆಗೆ ಈ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಒಳ್ಳಯದು.

ಅಂತರ್ಜಲ ವೃದ್ಧಿಸುವುದು ಮಳೆನೀರಿನ ಕೊಯ್ಲಿನ ಪ್ರಮುಖ ಅಂಶವೇಂದರೆ ತಪ್ಪಾಗಲಾರದು. ಇವುಗಳಲ್ಲಿ ಹಲವು ಬಗೆಗಳನ್ನು ನಾವು ಕಾಣಬಹುದಾಗಿದೆ.

  1. ಇಂಗು ಕೊಳಗಳ ನಿರ್ಮಾಣ

ಪ್ರಾಕೃತಿಕವಾಗಿ ಹರಿದು ಹೋಗುವ ನೀರಿನ ತೆರೆಗಳಿಗೆ ಅಡ್ಡಲಾಗಿ ಹೆಚ್ಚು ಆಳವಿಲ್ಲದಂತಹ ಗುಂಡಿಗಳನ್ನು ನಿರ್ಮಿಸಿ ಅಲ್ಲಿಯೇ ನೀರು ಇಂಗುವಂತೆ ಮಾಡುವುದನ್ನು ಇದು ಒಳಗೊಂಡಿದೆ.

  1. ಕೊಳವೆ ಬಾವಿಯ ಮರುಪೂರಣ

ಇದು ಕೊಡ ಒಂದು ರೀತಿಯ ಇಂಗು ಗುಂಡಿಯ ರೀತಿಯಲ್ಲಿಯೇ ಕಾರ್ಯವನ್ನು ನಿರ್ವಹಿಸುತ್ತದೆ. ಬಾವಿಗಳ ಅಥವಾ ಕೊಳವೆ ಬಾವಿಗಳ ಸುತ್ತಲು ಗುಂಡಿಗಳನ್ನು ನಿರ್ಮಿಸಿ ಈ ಮುಂಚೆ ತಿಳಿಸಿದಂತೆ ದಪ್ಪ ಕಲ್ಲು, ಜೆಲ್ಲಿ ಕಲ್ಲು, ಇದ್ದಿಲ್ಲು, ನೈಲಾನ…ಗಳನ್ನು ಅಗತ್ಯ ಕ್ರಮದಲ್ಲಿ ಬಳಸಿಕೊಳ್ಳುವ ಮೂಲಕ ಬಾವಿಯ ಮೂಲಕ ಬರುವ ಹೆಚ್ಚುವರಿ ನೀರು ಅಥವಾ ಮಳೆ ರೂಪದಲ್ಲಿ ಭೂಮಿಯನ್ನು ಸೇರುವ ನೀರನ್ನು ಭೂಮಿಯಲ್ಲಿ ಇಂಗುವಂತೆ ಮಾಡುವ ಮೂಲಕ ಕೊಳವೆ ಬಾವಿಗಳ ಮರುಪೂರಣ ಮಾಡಬಹುದು.

ಇವಷ್ಟೇ ಅಲ್ಲದೆ, ಉಸುಕಿನ ಚೀಲಗಳ ಅಣೆಗಳ ನಿರ್ಮಾಣ, ಸಣ್ಣಗೆ ಹರಿದು ಹೋಗುವ ನೀರಿನ ತೊರೆಗಳಿಗೆ ಸ್ಥಳೀಯವಾಗಿ ದೊರೆಯುವ ಕಾಡುಕಲ್ಲು ಹಾಗೂ ಕಬ್ಬಿಣದ ಜಾಲರಿ ಬಳಸಿ ನೀರಿನ ಹರಿಯುವಿಕೆಯನ್ನು ತಡೆಯುವುದು, ಒಣಕಲ್ಲಿನ ತಡೆ ಅಣೆಗಳ ನಿರ್ಮಾಣಗಳಂತಹ ಹಲವು ವಿಧಾನಗಳನ್ನು ಬಳಸಿಕೊಂಡು ಮಳೆ ನೀರಿನ ಕೊಯ್ಲನ್ನು ಅಳವಡಿಸಿಕೊಳ್ಳುವ ಮೂಲಕ ಕಲಿಯುಗದ ಅಮೃತವಾದ ಜೀವಜಲದ ಸಬ್ದಳಕೆ ಮಾಡಬೇಕಿದೆ.

ಕೃಷಿ ಹೊಂಡಗಳ ನಿರ್ಮಾಣ

ಹೊಂಡಗಳನ್ನು ನಿರ್ಮಿಸಿ ಕೃಷಿ ಪ್ರದೇಶಗಳಲ್ಲಿ ಬೀಳುವ ನೀರು ಸರಾಗವಾಗಿ ಹರಿದು ಈ ಹೊಂಡಗಳನ್ನು ಸೇರುವಂತೆ ಒಳ ಹರಿವಿನ ಮಾರ್ಗವನ್ನು ಹಾಗೂ ಹೊಂಡ ತುಂಬಿ ಹೆಚ್ಚಾದ ನೀರಿನ ಹೊರ ಹರಿವಿಗಾಗಿ ಮಾರ್ಗವನ್ನು ನಿರ್ಮಿಸುವುದು ಉತ್ತಮ. ಈ ರೀತಿಯಾಗಿ ಸಂಗ್ರಹಿಸಿದ ನೀರನ್ನು ಅಲ್ಪಾವಧಿ ತರಕಾರಿ ಬೆಳೆ, ತೋಟಗಾರಿಕೆ ಬೆಳೆಗಳಿಗೂ ಕೊಡ ಬಳಕೆ ಮಾಡಬಹುದಾಗಿದೆ. ಜೊತೆಗೆ ಈ ನೀರನ್ನು ಆರು ತಿಂಗಳ ವರೆಗೆ ಸಂಗ್ರಹಿಸಬಹುದಾದಲ್ಲಿ ಮೀನು ಸಾಕಾಣಿಕೆಯನ್ನು ಸಹ ಕೈಗೊಳ್ಳಬಹುದು.

- ಲಕ್ಷ್ಮೀ ಶಿವಣ್ಣ

ಮಹಿಳಾ ವಿವಿ ವಿಜಯಪುರ

 

ಟಾಪ್ ನ್ಯೂಸ್

koratagere

Koratagere: ಎರಡು ವಿದ್ಯುತ್‌ ಉಪಸ್ಥಾವರ ಘಟಕಗಳ ಉದ್ಘಾಟನೆ

Amit Shah

3 new criminal laws; ತಮಿಳು ಸೇರಿ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯ: ಶಾ

Shirva: ಅಪರಿಚಿತ ವ್ಯಕ್ತಿ ಆತ್ಮಹತ್ಯೆ

Shirva: ಅಪರಿಚಿತ ವ್ಯಕ್ತಿ ಆತ್ಮಹತ್ಯೆ

America ಸೌಂದರ್ಯ ಸ್ಪರ್ಧೆ: ಶಿರಸಿ ಮೂಲದ ಡಾ|ಶ್ರುತಿಗೆ ಕಿರೀಟ

America ಸೌಂದರ್ಯ ಸ್ಪರ್ಧೆ: ಶಿರಸಿ ಮೂಲದ ಡಾ|ಶ್ರುತಿಗೆ ಕಿರೀಟ

CM Siddu

Leadership change; ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ: ಸಿಎಂ ಸಿದ್ದರಾಮಯ್ಯ

1-csaddasd

Hosanagara: ಅಪಘಾತವಾಗಿ ಪಲ್ಟಿಯಾದ 50ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಸರಕಾರಿ ಬಸ್

Rabakavi

Irrigation: ರೈತರ ವಿಚಾರದಲ್ಲಿ ರಾಜಕಾರಣ ಮಾಡದಿರಿ: ಸಚಿವ ತಿಮ್ಮಾಪುರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-uv-fusion

Education: ಅಸಮತೋಲನೆ ನಿವಾರಣೆಗೆ ಸಹ ಶಿಕ್ಷಣ ಸರಿಯಾದ ದಾರಿ

13-tn-sitharama

T. N. Seetharam: ಧಾರಾವಾಹಿಗಳಿಗೆ ಹೊಸ ಭಾಷ್ಯ ನೀಡಿದ ನಿರ್ದೇಶಕ ಟಿ.ಎನ್‌. ಸೀತಾರಾಮ

11-uv-fusion

Rajeev Taranath: ಸರೋದ್‌ ಸ್ವರ ಮಾಂತ್ರಿಕನ ಸ್ವರ್ಗಾರೋಹಣ

10-uv-fusion

UV Fusion: ನೈಸರ್ಗಿಕ ಕಾಡು ಪುನರುತ್ಥಾನಕ್ಕೆ ಕೊಡುಗೆ ನೀಡುವ ಉಪ್ಪಳಿಗೆ

11-uv-fusion

UV Fusion: ಸಿನೆಮಾ

MUST WATCH

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

ಹೊಸ ಸೇರ್ಪಡೆ

koratagere

Koratagere: ಎರಡು ವಿದ್ಯುತ್‌ ಉಪಸ್ಥಾವರ ಘಟಕಗಳ ಉದ್ಘಾಟನೆ

Amit Shah

3 new criminal laws; ತಮಿಳು ಸೇರಿ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯ: ಶಾ

Shirva: ಅಪರಿಚಿತ ವ್ಯಕ್ತಿ ಆತ್ಮಹತ್ಯೆ

Shirva: ಅಪರಿಚಿತ ವ್ಯಕ್ತಿ ಆತ್ಮಹತ್ಯೆ

America ಸೌಂದರ್ಯ ಸ್ಪರ್ಧೆ: ಶಿರಸಿ ಮೂಲದ ಡಾ|ಶ್ರುತಿಗೆ ಕಿರೀಟ

America ಸೌಂದರ್ಯ ಸ್ಪರ್ಧೆ: ಶಿರಸಿ ಮೂಲದ ಡಾ|ಶ್ರುತಿಗೆ ಕಿರೀಟ

CM Siddu

Leadership change; ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.