![Rabakavi](https://www.udayavani.com/wp-content/uploads/2024/07/Rabakavi-415x249.jpg)
Tragedy: ಕೆಲಸ ಮಾಡುತ್ತಲೇ ಕುಸಿದು ಬಿದ್ದು ಮೃತಪಟ್ಟ ಬ್ಯಾಂಕ್ ಉದ್ಯೋಗಿ…
Team Udayavani, Jun 26, 2024, 5:28 PM IST
![Tragedy: ಕೆಲಸ ಮಾಡುತ್ತಲೇ ಕುಸಿದು ಬಿದ್ದು ಮೃತಪಟ್ಟ ಬ್ಯಾಂಕ್ ಉದ್ಯೋಗಿ…](https://www.udayavani.com/wp-content/uploads/2024/06/bank-employ-620x382.jpg)
ಉತ್ತರಪ್ರದೇಶ: ಸಾವು ಯಾವಾಗ, ಹೇಗೆ ಮತ್ತು ಯಾವ ರೂಪದಲ್ಲಿ ಬರುತ್ತದೆ ಎಂದು ಹೇಳಲಾಗದು, ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಆಗಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಿದೆ. ಮಕ್ಕಳಿಂದ ಹಿಡಿದು ವಯೋಮಾನದವರೂ ವಯಸ್ಸಿನ ಭೇದವಿಲ್ಲದೆ ಹೃದಯಾಘಾತಕ್ಕೆ ಒಳಗಾಗುತ್ತಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ.
ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವ ಉದ್ಯೋಗಿಯೊಬ್ಬರು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಮಹೋಬಾದಲ್ಲಿರುವ ಎಚ್ಡಿಎಫ್ಸಿ ಬ್ಯಾಂಕ್ ಶಾಖೆಯಲ್ಲಿ ಈ ಘಟನೆ ನಡೆದಿದ್ದು ಈ ಘಟನೆಯಿಂದ ಅಲ್ಲಿದ ಇತರ ಸಿಬಂದಿಗಳು ಆಘಾತಕ್ಕೆ ಒಳಗಾಗಿದ್ದಾರೆ.
ಮೃತ ವ್ಯಕ್ತಿಯನ್ನು ರಾಜೇಶ್ ಕುಮಾರ್ ಶಿಂಧೆ (30) ಎನ್ನಲಾಗಿದ್ದು, ಕಚೇರಿಯಲ್ಲಿ ತನ್ನ ಸಹೋದ್ಯೋಗಿಗಳ ಜೊತೆ ಕೆಲಸ ಮಾಡುತ್ತಿದ್ದ ವೇಳೆ ಇದ್ದಕಿದ್ದಂತೆ ಹೃದಯಾಘಾತಕ್ಕೆ ಒಳಗಾಗಿ ಕುಳಿತಿದ್ದ ಕುರ್ಚಿಯಿಂದ ಕೆಳಗೆ ಬಿದ್ದಿದ್ದಾನೆ ಈ ವೇಳೆ ಅಲ್ಲಿದ್ದ ಇತರ ಸಹದ್ಯೋಗಿಗಳು ಆತನ ಸಹಾಯಕ್ಕೆ ಬಂದು ಜೀವ ಉಳಿಸುವ ಎಲ್ಲಾ ಪ್ರಯತ್ನ ಮಾಡಿದ್ದಾರೆ ಕೊನೆಗೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ ಈ ವೇಳೆ ಪರಿಶೀಲಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ರಾಜೇಶ್ ಹೃದಯಾಘಾತಕ್ಕೆ ಒಳಗಾಗುವ ದೃಶ್ಯ ಬ್ಯಾಂಕ್ ನಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಕುರಿತು ಹೇಳಿಕೆ ನೀಡಿರುವ ಆಸ್ಪತ್ರೆ ವೈದ್ಯರು ಕೆಲವೊಮ್ಮೆ ಕೆಲ ವ್ಯಕ್ತಿಗಳಿಗೆ ಹೆಚ್ಚಿನ ಒತ್ತಡದಿಂದಾಗಿ ಹೃದಯಾಘಾತ ಸಂಭವಿಸುವ ಸಂಭವ ಹೆಚ್ಚಾಗಿ ಇರುತ್ತವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Prajwal Revanna ಗೆ ಜೈಲೇ ಗತಿ… ಜಾಮೀನು ಅರ್ಜಿ ವಜಾಗೊಳಿಸಿದ ನ್ಯಾಯಾಲಯ
ಟಾಪ್ ನ್ಯೂಸ್
![Rabakavi](https://www.udayavani.com/wp-content/uploads/2024/07/Rabakavi-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![police crime](https://www.udayavani.com/wp-content/uploads/2024/07/police-crime-150x92.jpg)
New criminal law ಅಡಿಯಲ್ಲಿ ಕನ್ನಡಿಗನ ವಿರುದ್ಧ ಮೊದಲ ಕೇಸ್ ದಾಖಲಿಸಿದ ಕೇರಳ ಪೊಲೀಸ್
![1-INDI-M](https://www.udayavani.com/wp-content/uploads/2024/07/1-INDI-M-150x98.jpg)
Stop ‘misusing’; ಸಂಸತ್ ಆವರಣದಲ್ಲಿ ವಿಪಕ್ಷ ಸಂಸದರಿಂದ ಪ್ರತಿಭಟನೆ
![Defamation Case: 24 ವರ್ಷದ ಹಿಂದಿನ ಪ್ರಕರಣ- ಮೇಧಾ ಪಾಟ್ಕರ್ ಗೆ 5 ತಿಂಗಳ ಜೈಲುಶಿಕ್ಷೆ](https://www.udayavani.com/wp-content/uploads/2024/07/Court-150x90.jpg)
Defamation Case: 24 ವರ್ಷದ ಹಿಂದಿನ ಪ್ರಕರಣ- ಮೇಧಾ ಪಾಟ್ಕರ್ ಗೆ 5 ತಿಂಗಳ ಜೈಲುಶಿಕ್ಷೆ
![1-rahul](https://www.udayavani.com/wp-content/uploads/2024/07/1-rahul-150x99.jpg)
Parliament; ಹಿಂದೂಗಳು ಎಂದು ಹೇಳಿಕೊಳ್ಳುವವರು… ರಾಹುಲ್ ಹೇಳಿಕೆ ವಿರುದ್ಧ ಬಿಜೆಪಿ ಆಕ್ರೋಶ
![Video: ಯುವಕರ ಹುಚ್ಚಾಟಕ್ಕೆ ಕೊನೆ ಎಂದು; ಗೆಳೆಯರ ಎದುರು ಜಲಪಾತಕ್ಕೆ ಜಿಗಿದು ಕೊಚ್ಚಿ ಹೋದ…](https://www.udayavani.com/wp-content/uploads/2024/07/maharastra-150x84.jpg)
Video: ಯುವಕರ ಹುಚ್ಚಾಟಕ್ಕೆ ಕೊನೆ ಎಂದು; ಗೆಳೆಯರ ಎದುರು ಜಲಪಾತಕ್ಕೆ ಜಿಗಿದು ಕೊಚ್ಚಿ ಹೋದ…
MUST WATCH
ಹೊಸ ಸೇರ್ಪಡೆ
![1-sagara](https://www.udayavani.com/wp-content/uploads/2024/07/1-sagara-150x94.jpg)
Sagara; ಮರ ಕತ್ತರಿಸುತ್ತಿದ್ದಾಗ ಕೊಂಬೆ ಬಿದ್ದು ವ್ಯಕ್ತಿ ಸಾವು
![Rabakavi](https://www.udayavani.com/wp-content/uploads/2024/07/Rabakavi-150x90.jpg)
Irrigation: ರೈತರ ವಿಚಾರದಲ್ಲಿ ರಾಜಕಾರಣ ಮಾಡದಿರಿ: ಸಚಿವ ತಿಮ್ಮಾಪುರ
![Congress ಸಿಎಂ, ಡಿಸಿಎಂ ಆಯ್ಕೆ ಹೈಕಮಾಂಡ್ಗೆ ಬಿಟ್ಟ ವಿಚಾರ: ಸಚಿವ ತಿಮ್ಮಾಪುರ](https://www.udayavani.com/wp-content/uploads/2024/07/aaaz-150x84.jpg)
Congress Govt ಸಿಎಂ, ಡಿಸಿಎಂ ಆಯ್ಕೆ ಹೈಕಮಾಂಡ್ಗೆ ಬಿಟ್ಟ ವಿಚಾರ: ಸಚಿವ ತಿಮ್ಮಾಪುರ
![police crime](https://www.udayavani.com/wp-content/uploads/2024/07/police-crime-150x92.jpg)
New criminal law ಅಡಿಯಲ್ಲಿ ಕನ್ನಡಿಗನ ವಿರುದ್ಧ ಮೊದಲ ಕೇಸ್ ದಾಖಲಿಸಿದ ಕೇರಳ ಪೊಲೀಸ್
![ಕಾಪು: ವಾಹನ ಚಾಲಕರು, ಸಂಚಾರಿಗಳ ಪ್ರಾಣಕ್ಕೆ ಸಂಚಕಾರ](https://www.udayavani.com/wp-content/uploads/2024/07/Kapu-150x79.jpg)
ಕಾಪು: ವಾಹನ ಚಾಲಕರು, ಸಂಚಾರಿಗಳ ಪ್ರಾಣಕ್ಕೆ ಸಂಚಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.