T20 WorldCup 2024: ಅಫ್ಘಾನಿಸ್ಥಾನ vs ದಕ್ಷಿಣ ಆಫ್ರಿಕಾ : ವಿಶ್ವದ ಕಣ್ಣು ಅಫ್ಘಾನ್‌ ಮೇಲೆ!


Team Udayavani, Jun 26, 2024, 11:15 PM IST

T20 WorldCup 2024: ಅಫ್ಘಾನಿಸ್ಥಾನ vs ದಕ್ಷಿಣ ಆಫ್ರಿಕಾ : ವಿಶ್ವದ ಕಣ್ಣು ಅಫ್ಘಾನ್‌ ಮೇಲೆ!

ಟರೂಬ (ಟ್ರಿನಿಡಾಡ್‌): ಈ ಬಾರಿಯ ಟಿ20 ವಿಶ್ವಕಪ್‌ ಪಂದ್ಯಾವಳಿಯ “ಕಥಾನಾಯಕ’ನ ಸ್ಥಾನ ಅಲಂಕರಿಸಿರುವ ಅಫ್ಘಾನಿಸ್ಥಾನದ ಮೇಲೀಗ ಇಡೀ ಕ್ರಿಕೆಟ್‌ ವಿಶ್ವದ ದೃಷ್ಟಿ ನೆಟ್ಟಿದೆ. ವಿಶ್ವಕಪ್‌ ಇತಿಹಾಸದಲ್ಲೇ ಮೊದಲ ಸಲ ಸೆಮಿಫೈನಲ್‌ ಪ್ರವೇಶಿಸಿರುವ ಈ ಏಷ್ಯಾದ ದೇಶ, ಗುರುವಾರ ಅಜೇಯ ದಕ್ಷಿಣ ಆಫ್ರಿಕಾ ಸವಾಲನ್ನು ಎದುರಿಸಲಿದೆ. ಇಲ್ಲಿಯೂ ರಶೀದ್‌ ಖಾನ್‌ ಪಡೆಯಿಂದ ಅಚ್ಚರಿಯ ಬುಡಮೇಲು ಫ‌ಲಿತಾಂಶ ಸಾಧ್ಯವೇ? ಅಫ್ಘಾನ್‌ ಫೈನಲ್‌ಗೆ ಲಗ್ಗೆ ಇರಿಸೀತೇ… ಎಂಬೆಲ್ಲ ಕುತೂಹಲಗಳು ಈ ಪಂದ್ಯದ ಸುತ್ತ ಗಿರಕಿ ಹೊಡೆಯುತ್ತಿವೆ. ಯಾರೇ ಗೆದ್ದರೂ ಮೊದಲ ಸಲ ಫೈನಲ್‌ ತಲುಪಲಿದ್ದಾರೆ.

ಅಫ್ಘಾನಿಸ್ಥಾನ ಟಿ20 ಜೋಶ್‌ಗೆ ಹೊಸತೊಂದು ಆಯಾಮ ನೀಡಿದ ತಂಡ. ಕಳೆದ ಟಿ20 ವಿಶ್ವಕಪ್‌ನಲ್ಲಿ ಐದರಲ್ಲಿ ಒಂದೂ ಪಂದ್ಯ ಗೆಲ್ಲದ ಅವಮಾನಕ್ಕೆ ತುತ್ತಾದ ತಂಡವೊಂದು ಎರಡೇ ವರ್ಷಗಳಲ್ಲಿ ವಿಶ್ವಕಪ್‌ ಸೆಮಿಫೈನಲ್‌ಗೆ ಲಗ್ಗೆ ಹಾಕಿದ್ದು ಕ್ರಿಕೆಟಿನ ಅಚ್ಚರಿಗಳಲ್ಲೊಂದು.

ಸಮತೋಲಿತ ಅಫ್ಘಾನ್‌ ತಂಡ
ಅಫ್ಘಾನ್‌ ಬಹಳಷ್ಟು ಮಂದಿ ಹೀರೋಗಳನ್ನು ಒಳಗೊಂಡಿರುವ ಸಮತೋಲಿತ ತಂಡ. ಬ್ಯಾಟಿಂಗ್‌ ಆರಂಭಿಸುವ ರೆಹಮಾನುಲ್ಲ ಗುರ್ಬಜ್‌ 281 ರನ್‌, ಸ್ಟ್ರೈಕ್‌ ಬೌಲರ್‌ ಫಾರೂಖೀ 16 ವಿಕೆಟ್‌ ಸಂಪಾದಿಸಿದ್ದು, ಉತ್ತಮ ಲಯದಲ್ಲಿದ್ದಾರೆ. ನಾಯಕ ರಶೀದ್‌ ಖಾನ್‌, ಪೇಸರ್‌ ನವೀನ್‌ ಉಲ್‌ ಹಕ್‌, ಅನುಭವಿ ಮೊಹಮ್ಮದ್‌ ನಬಿ ಅವರೆಲ್ಲ ತಂಡದ ಯಶಸ್ಸಿನಲ್ಲಿ ಸಿಂಹಪಾಲು ಸಲ್ಲಿಸಿದ್ದಾರೆ. ಆದರೆ ನಾಕೌಟ್‌ ಎಂಬುದು “ಡಿಫ‌ರೆಂಟ್‌ ಬಾಲ್‌ ಗೇಮ್‌’. ಅಜೇಯ ದಕ್ಷಿಣ ಆಫ್ರಿಕಾ ಸವಾಲನ್ನು ಅಫ್ಘಾನಿ ಸ್ಥಾನ ಹೇಗೆ ಎದುರಿಸಲಿದೆ, ಹೇಗೆ ನಿಭಾ ಯಿಸಲಿದೆ ಎಂಬುದನ್ನು ಕಾಣಲು ಕ್ರಿಕೆಟ್‌ ಜಗತ್ತೇ ತುದಿಗಾಲಲ್ಲಿ ನಿಂತಿದೆ.

ಈ ಸಂದರ್ಭದಲ್ಲಿ ಅಫ್ಘಾನ್‌ ತಂಡದ ಕೋಚ್‌ ಜೊನಾಥನ್‌ ಟ್ರಾಟ್‌ ಕೂಡ ಕಪ್‌ ಗೆಲ್ಲುವ ತಮ್ಮ ಉದ್ದೇಶವನ್ನು ಪರೋಕ್ಷವಾಗಿ ಹೇಳಿದ್ದಾರೆ. “ಯಾವುದೇ ಭಯವಿಲ್ಲದೆ ಅಥವಾ ಇತಿಹಾಸ ವಿಲ್ಲದೆ ನಾವು ಸೆಮಿಫೈನಲ್‌ ಪಂದ್ಯದಲ್ಲಿ ಸೆಣಸಲಿದ್ದೇವೆ. ಇದು ನಮಗೆ ಹೊಸ ಅನುಭವ. ಆದರೆ ಕೇವಲ ಸ್ಪರ್ಧಿಸುವ ಉದ್ದೇಶದಿಂದ ನಾವು ಸೆಮಿಫೈನಲ್‌ಗೆ ಹೋಗುತ್ತಿಲ್ಲ ಎಂಬುದಂತೂ ನಿಜ. ಇಲ್ಲಿ ಗೆಲ್ಲುವುದೇ ನಮ್ಮ ಗುರಿ. ನಾವು ಬಹಳಷ್ಟು ದೊಡ್ಡ ತಂಡಗಳನ್ನು ಮಣಿಸಿದ್ದೇವೆ’ ಎಂದಿದ್ದಾರೆ.

ದಕ್ಷಿಣ ಆಫ್ರಿಕಾ ಕರಿಗುದುರೆ
ದಕ್ಷಿಣ ಆಫ್ರಿಕಾ ಈ ಕೂಟದ ಕರಿಗುದುರೆ. ಮುಟ್ಟಿದ್ದೆಲ್ಲ ಚಿನ್ನವಾಗುತ್ತ ಬಂದಿದೆ. ಲೀಗ್‌ನಲ್ಲಿ ಎಲ್ಲ 4 ಪಂದ್ಯ, ಸೂಪರ್‌-8 ಹಂತದ ಮೂರೂ ಪಂದ್ಯ ಗೆದ್ದಿರುವ ಐಡನ್‌ ಮಾರ್ಕ್‌ರಮ್‌ ಪಡೆಯ ಈ ಅಜೇಯ ಓಟ ಮುಂದಿನೆರಡು ಪಂದ್ಯಗಳಿಗೂ ವಿಸ್ತರಿಸೀತೇ ಎಂಬುದೊಂದು ನಿರೀಕ್ಷೆ.

ಈವರೆಗೆ ಯಾವುದೇ ಐಸಿಸಿ ಪಂದ್ಯಾವಳಿಯಲ್ಲಿ ಚಾಂಪಿಯನ್‌ ಆಗದ ದಕ್ಷಿಣ ಆಫ್ರಿಕಾ, ಇಲ್ಲಿ ತನ್ನ ಬಹು ದೊಡ್ಡ ಕನಸೊಂದನ್ನು ಸಾಕಾರಗೊಳಿಸಲು ಹೊರಟಿದೆ. ಸಮರ್ಥ ಪಡೆಯನ್ನೂ ಹೊಂದಿದೆ. ಡಿ ಕಾಕ್‌, ಮಾರ್ಕ್‌ ರಮ್‌, ಕ್ಲಾಸೆನ್‌, ಸ್ಟಬ್ಸ್, ಮಿಲ್ಲರ್‌, ನೋರ್ಜೆ, ರಬಾಡ, ಶಮಿÕ ಅವರೆಲ್ಲ ಹೋರಾಟಕ್ಕೆ ಟೊಂಕ ಕಟ್ಟಿದ್ದಾರೆ.

ಆದರೆ ಇಂಥದೊಂದು ಶ್ರೇಷ್ಠ ಪ್ರದರ್ಶನ ನೀಡಿಯೂ ಯಾರೂ ನಿರೀಕ್ಷಿಸಿರದ ರೀತಿಯಲ್ಲಿ, ಎಲ್ಲರೂ ಪಶ್ಚಾತ್ತಾಪಪಡುವಂತೆ ಕೂಟದಿಂದ ನಿರ್ಗಮಿಸುವ ಸಂಕಟ ದಕ್ಷಿಣ ಆಫ್ರಿಕಾದ್ದು. ಈ “ಚೋಕರ್’ ಹಣೆಪಟ್ಟಿಯಿಂದ ಮುಕ್ತವಾಗುವುದು ಹರಿಣಗಳ ಹೆಗ್ಗುರಿ.

ಟಾಪ್ ನ್ಯೂಸ್

Kota-poojary

Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ

SSLLC

leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ

1-horoscope

Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ

Text-Bokk

KSOU: ಪರೀಕ್ಷೆ ಸಮೀಪಿಸುತ್ತಿದ್ದರೂ ಮುದ್ರಿತ ಪಠ್ಯ ಸಿಗಲಿಲ್ಲ

1-hejb

Israel ಸರ್ಜಿಕಲ್‌ ಸ್ಟ್ರೈಕ್‌: ಹೆಜ್ಬುಲ್ಲಾ ಮುಖ್ಯಸ್ಥನ ಅಂತ್ಯಕ್ಕೆ 80 ಟನ್‌ ಬಾಂಬ್‌!

bjp-congress

BJP vs Congress ; ಕೇಸ್‌ ಮೇಲೆ ಕೇಸ್‌

isrel netanyahu

India ವರ, ಇರಾಕ್‌, ಇರಾನ್‌ ಶಾಪ: ವಿಶ್ವಸಂಸ್ಥೆಯಲ್ಲಿ ಇಸ್ರೇಲ್‌ ಪ್ರಧಾನಿ ನೆತನ್ಯಾಹು 


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BCCI: ಇಂದು ಬಿಸಿಸಿಐ ವಾರ್ಷಿಕ ಸಭೆ

BCCI: ಇಂದು ಬಿಸಿಸಿಐ ವಾರ್ಷಿಕ ಸಭೆ

028

IPL players: ಐಪಿಎಲ್‌ ಆಟಗಾರರಿಗೆ ಬಂಪರ್‌ ಸಂಭಾವನೆ

1-reee

Vinoo Mankad Trophy: ರಾಜ್ಯ ತಂಡಕ್ಕೆ ಬ್ರಹ್ಮಾವರದ ರೋಹಿತ್‌

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

1242

SAFF U-17 Championship: ಭಾರತ-ಬಾಂಗ್ಲಾ ಫೈನಲ್‌

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Kota-poojary

Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ

SSLLC

leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ

1-horoscope

Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ

Text-Bokk

KSOU: ಪರೀಕ್ಷೆ ಸಮೀಪಿಸುತ್ತಿದ್ದರೂ ಮುದ್ರಿತ ಪಠ್ಯ ಸಿಗಲಿಲ್ಲ

1-hejb

Israel ಸರ್ಜಿಕಲ್‌ ಸ್ಟ್ರೈಕ್‌: ಹೆಜ್ಬುಲ್ಲಾ ಮುಖ್ಯಸ್ಥನ ಅಂತ್ಯಕ್ಕೆ 80 ಟನ್‌ ಬಾಂಬ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.