T20 WC; ನಿರ್ಣಾಯಕ ಹಂತದಲ್ಲಿ ಎಡವಿದ ಅಫ್ಘಾನ್; ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ ದ.ಆಫ್ರಿಕಾ


Team Udayavani, Jun 27, 2024, 8:08 AM IST

ನಿರ್ಣಾಯಕ ಹಂತದಲ್ಲಿ ಎಡವಿದ ಅಫ್ಘಾನ್; ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ ದ.ಆಫ್ರಿಕಾ

ಟರೋಬಾ: ಬಲಿಷ್ಠ ತಂಡಗಳನ್ನು ಮಣಿಸಿ ಇದೇ ಮೊದಲ ಬಾರಿಗೆ ಐಸಿಸಿ ಟಿ20 ವಿಶ್ವಕಪ್ ಸೆಮಿ ಫೈನಲ್ ಪ್ರವೇಶ ಮಾಡಿದ್ದ ಅಫ್ಘಾನಿಸ್ತಾನ ತಂಡವು ನಿರ್ಣಾಯಕ ಹಂತದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. ಟರೋಬಾದ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು 9 ವಿಕೆಟ್ ಅಂತರದ ಗೆಲುವು ಸಾಧಿಸಿದೆ. ಈ ಮೂಲಕ ಮೊದಲ ಬಾರಿಗೆ ಐಸಿಸಿ ಕೂಟವೊಂದರ ಫೈನಲ್ ತಲುಪಿದೆ.

ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನ್ 11.5 ಓವರ್ ಗಳಲ್ಲಿ 56 ರನ್ ಗೆ ಆಲೌಟಾಯಿತು. ದಕ್ಷಿಣ ಆಫ್ರಿಕಾ ತಂಡವು 1 ವಿಕೆಟ್ ನಷ್ಟಕ್ಕೆ 8.5 ಓವರ್ ಗಳಲ್ಲಿ 60 ರನ್ ಗಳಿಸಿ ವಿಜಯಿಯಾಯಿತು.

ಇಡೀ ಪಂದ್ಯದಲ್ಲಿ ಅಫ್ಘಾನ್ ಪರವಾಗಿದ್ದು ಟಾಸ್ ಮಾತ್ರ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ರಶೀದ್ ಖಾನ್ ಗೆ ಯಾವುದೂ ಎಣಿಸಿದಂತೆ ನಡೆಯಲಿಲ್ಲ. ಕೂಟದ ಅತಿ ಹೆಚ್ಚಿನ ರನ್ ಸ್ಕೋರರ್ ಗುರ್ಬಾಜ್ ಮೊದಲ ಓವರ್ ನಲ್ಲಿಯೇ ಔಟಾದರು. ಆಫ್ರಿಕಾದ ವೇಗಿಗಳ ಎದುರು ನಿಲ್ಲಲಾಗದೆ ತರಗೆಲೆಗಳಂತೆ ವಿಕೆಟ್ ಉದುರುತ್ತಾ ಹೋಯಿತು. ಅತಿ ಹೆಚ್ಚಿನ ಸ್ಕೋರ್ ಬಂದಿದ್ದು ಎಕ್ಸ್ಟ್ರಾ ಮೂಲಕ. ಅದು 13 ರನ್. 11 ಆಟಗಾರರಲ್ಲಿ ಎರಡಂಕಿ ಮೊತ್ತ ಗಳಿಸಿದ್ದು ಅಜ್ಮತುಲ್ಲಾ ಮಾತ್ರ, ಅವರದ್ದು 10 ರನ್ ಗಳ ಕೊಡುಗೆ.

ದಕ್ಷಿಣ ಆಫ್ರಿಕಾ ಪರ ಮಾರ್ಕೋ ಎನ್ಸನ್ ಮತ್ತು ಶಮ್ಸಿ ತಲಾ ಮೂರು ವಿಕೆಟ್ ಕಿತ್ತರೆ, ನೋಕ್ಯಾ ಮತ್ತು ರಬಾಡಾ ತಲಾ ಎರಡು ವಿಕೆಟ್ ಪಡೆದರು.

ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವು ಮೊದಲ ಓವರ್ ನಲ್ಲಿಯೇ ಡಿಕಾಕ್ ರೂಪದಲ್ಲಿ ವಿಕೆಟ್ ಕಳೆದುಕೊಂಡಿತು. ಆದರೆ ಎರಡನೇ ವಿಕೆಟ್ ಗೆ ಜೊತೆಯಾದ ನಾಯಕ ಮಾರ್ಕ್ರಮ್ ಮತ್ತು ರೀಜಾ ಹೆಂಡ್ರಿಕ್ಸ್ ತಂಡಕ್ಕೆ ಆಧಾರವಾದರು. ರೀಜಾ ಅಜೇಯ 29 ಮತ್ತು ಮಾರ್ಕ್ರಮ್ ಅಜೇಯ 23 ರನ್ ಗಳಿಸಿದರು.

ಇದುವರೆಗೆ 7 ಸೆಮಿ ಫೈನಲ್ ಗಳಲ್ಲಿ ವಿಫಲವಾಗಿದ್ದ ದಕ್ಷಿಣ ಆಫ್ರಿಕಾ ಇದೇ ಮೊದಲ ಬಾರಿಗೆ ಐಸಿಸಿ ಫೈನಲ್ ತಲುಪಿದೆ.

ಟಾಪ್ ನ್ಯೂಸ್

Udupi ಪತ್ರಿಕಾ ದಿನಾಚರಣೆ: ಸಮ್ಮಾನ, ಪ್ರತಿಭಾ ಪುರಸ್ಕಾರ

Udupi ಪತ್ರಿಕಾ ದಿನಾಚರಣೆ: ಸಮ್ಮಾನ, ಪ್ರತಿಭಾ ಪುರಸ್ಕಾರ

1-amr

Army; ಎಲ್ಲ ಸವಾಲುಗಳಿಗೂ ಸೇನೆ ಸನ್ನದ್ಧ: ಜನರಲ್‌ ದ್ವಿವೇದಿ

Udupi ವಾಯ್ಸ ಆಫ್ ಹೀಲಿಂಗ್ಸ್‌: ಸಾಧಕರಿಗೆ ಸಮ್ಮಾನ

Udupi ವಾಯ್ಸ ಆಫ್ ಹೀಲಿಂಗ್ಸ್‌: ಸಾಧಕರಿಗೆ ಸಮ್ಮಾನ

crime (2)

West Bengal; ಮತ್ತೊಂದು ಗುಂಪು ಹತ್ಯೆ: ವಾರದಲ್ಲಿ ಇದು 4ನೇ ಕೇಸ್‌

Punjalkatte ಪಾಂಡವರಕಲ್ಲು: ಅಂಗನವಾಡಿ ಕೇಂದ್ರಕ್ಕೆ ಶೀಟ್‌ ಅಳವಡಿಕೆಗೆ ನಿರ್ಧಾರ

Punjalkatte ಪಾಂಡವರಕಲ್ಲು: ಅಂಗನವಾಡಿ ಕೇಂದ್ರಕ್ಕೆ ಶೀಟ್‌ ಅಳವಡಿಕೆಗೆ ನಿರ್ಧಾರ

July 5: “ಧರ್ಮದೈವ’ ತುಳು ಚಲನಚಿತ್ರ ತೆರೆಗೆ

July 5: “ಧರ್ಮದೈವ’ ತುಳು ಚಲನಚಿತ್ರ ತೆರೆಗೆ

Sullia 2 ವರ್ಷಗಳ ಹಿಂದೆ ನಡೆದಿದ್ದ ಕಳವು ಆರೋಪಿ ಬಂಧನ

Sullia 2 ವರ್ಷಗಳ ಹಿಂದೆ ನಡೆದಿದ್ದ ಕಳವು ಆರೋಪಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eque

Copa America ಫುಟ್‌ಬಾಲ್‌ ಕ್ವಾರ್ಟರ್‌ ಫೈನಲ್‌ಗೆ ಈಕ್ವಡಾರ್‌

1-wweqeqw

Wrestling:ರಾಜ್ಯಕ್ಕೆ ದಾಖಲೆಯ 47 ಚಿನ್ನದ ಪದಕ

1-wasdsadasd

National Level ಫಿಡೆ ರೇಟೆಡ್‌ ರ‍್ಯಾಪಿಡ್ ಚೆಸ್‌ ಶರಣ್‌ ರಾವ್‌ ಚಾಂಪಿಯನ್‌

chess

World Chess; ಸಿಂಗಾಪುರಕ್ಕೆ ಸಿಕ್ಕಿತು ವಿಶ್ವ ಚೆಸ್‌ ಆತಿಥ್ಯ

1-master

Lyon Master Chess: ಆನಂದ್‌ಗೆ 10ನೇ ಪ್ರಶಸ್ತಿ

MUST WATCH

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

ಹೊಸ ಸೇರ್ಪಡೆ

1-wewqewq

Abdul Hamid ಕೃತಿ ಬಿಡುಗಡೆ; ವಿಭಿನ್ನತೆಯ ನಡುವೆಯೂ ದೇಶ ಒಗ್ಗಟ್ಟು: ಭಾಗವತ್‌

arrested

POK ರಾವಲ್‌ಕೋಟ್‌ ಜೈಲಿಂದ 18 ಕೈದಿಗಳು ಪರಾರಿ!

court

Defamation:50 ಲಕ್ಷ ನೀಡಲು ಟಿಎಂಸಿ ಸಂಸದ ಗೋಖಲೆ ಗೆ ಆದೇಶ

Udupi ಪತ್ರಿಕಾ ದಿನಾಚರಣೆ: ಸಮ್ಮಾನ, ಪ್ರತಿಭಾ ಪುರಸ್ಕಾರ

Udupi ಪತ್ರಿಕಾ ದಿನಾಚರಣೆ: ಸಮ್ಮಾನ, ಪ್ರತಿಭಾ ಪುರಸ್ಕಾರ

GAS (2)

Commercial ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ 30 ರೂ. ಇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.