ಪುತ್ತೂರು, ಸುಳ್ಯ ತಾಲೂಕಿಗೆ ಬಂಟ್ವಾಳದಿಂದ ನೀರು


Team Udayavani, Jun 27, 2024, 11:46 AM IST

ಪುತ್ತೂರು, ಸುಳ್ಯ ತಾಲೂಕಿಗೆ ಬಂಟ್ವಾಳದಿಂದ ನೀರು

ಬಂಟ್ವಾಳ: ಪುತ್ತೂರು ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ನೇತ್ರಾವತಿ ನದಿಯಿಂದ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಬಂಟ್ವಾಳದ ಬಾಳ್ತಿಲದಲ್ಲಿ ಜಾಕ್‌ವೆಲ್‌ ನಿರ್ಮಾಣಕ್ಕೆ ಇದೀಗ ಸ್ಥಳೀಯರಿಂದ ಅಪಸ್ವರ ಕೇಳಿಬಂದಿದೆ.

ಜಲಜೀವನ್‌ ಮಿಷನ್‌ ಕಾರ್ಯಕ್ರಮದಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ 789 ಕೋ.ರೂ.ಗಳು
ಮಂಜೂರಾಗಿದ್ದು, ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಳಿಕೆ ಮತ್ತು ಇತರ123 ಜನವಸತಿ (ವಿಟ್ಲ ಪಟ್ಟಣ ಪಂಚಾಯತ್‌
ಸೇರಿ) ಪ್ರದೇಶ, ಪುತ್ತೂರಿನ 319, ಕಡಬ ತಾಲೂಕಿನ 51 ಹಾಗೂ ಸುಳ್ಯ ತಾಲೂಕಿನ 243 ಜನವಸತಿ ಪ್ರದೇಶಗಳಿಗೆ ಕುಡಿಯುವ
ನೀರಿನ ಯೋಜನೆಗೆ ಜಾಕ್‌ವೆಲ್‌ ನಿರ್ಮಿಸಲಾಗುತ್ತಿದೆ.

ನರಿಕೊಂಬು ಹಾಗೂ ಬಾಳ್ತಿಲ ಗ್ರಾ.ಪಂ.ವ್ಯಾಪ್ತಿಯ ಗಡಿ ಪ್ರದೇಶದಲ್ಲಿ ಕುಂದಾಯಮಜಲುನ ನೇತ್ರಾವತಿ ನದಿ ಕಿನಾರೆಯಲ್ಲಿ ಪ್ರಸ್ತುತ ಜಾಕ್‌ವೆಲ್‌ ಕಾಮಗಾರಿ ನಡೆಯುತ್ತಿದ್ದು, ನರಿಕೊಂಬು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇದ್ದರೂ, ಬೇಸಗೆಯಲ್ಲಿ ನರಿಕೊಂಬು ಹಾಗೂ ಬಾಳ್ತಿಲ ಗ್ರಾ.ಪಂ. ವ್ಯಾಪ್ತಿಗೆ ಕುಡಿಯುವ ನೀರು ಸಾಲುತ್ತಿಲ್ಲ. ಹೀಗಾಗಿರುವ ಪುತ್ತೂರು, ಸುಳ್ಯ ಕ್ಷೇತ್ರಗಳಿಗೆ ಹೇಗೆ ನೀರು ಕೊಂಡುಹೋಗುತ್ತಾರೆ ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.

ಕುಂದಾಯಮಜಲಿನಲ್ಲಿ ಜಾಕ್‌ವೆಲ್‌ ನಿರ್ಮಾಣವನ್ನು ವಿರೋಧಿಸಿ ಈಗಾಗಲೇ ನರಿಕೊಂಬು ಹಾಗೂ ಬಾಳ್ತಿಲ ಗ್ರಾ.ಪಂ.ಗಳು ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಹಾಗೂ ತಹಶೀಲ್ದಾರ್‌ ಅರ್ಚನಾ ಡಿ.ಭಟ್‌ ಅವರ ಗಮನಕ್ಕೂ ತಂದಿದ್ದಾರೆ. ಸ್ಥಳೀಯವಾಗಿ ಕುಡಿಯುವ ನೀರು ಕೊಟ್ಟು ಬಳಿಕ ಉಳಿದ ಪ್ರದೇಶಗಳಿಗೆ ನೀರು ಕೊಡಲಿ ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಬಂಡೆ ಸ್ಫೋಟದಿಂದ ಆತಂಕ
ಜಾಕ್‌ವೆಲ್‌ಗಾಗಿ ಹೊಂಡ ಕೊರೆಯಲಾಗುತ್ತಿದ್ದು, ಬಂಡೆ ಒಡೆಯುವುದಕ್ಕೆ ಸ್ಫೋಟಕಗಳನ್ನು ಬಳಸಲಾಗುತ್ತಿದೆ. ಇದರಿಂದ ಸ್ಥಳೀಯ ಮನೆಗಳಲ್ಲಿ ಕಂಪನ, ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂಬ ಆರೋಪಗಳು ಕೇಳಿ ಬಂದಿದೆ. ನದಿಯ ಮತ್ತೂಂದು ಕಿನಾರೆಯ ಪೂಪಾಡಿಕಟ್ಟೆ ಪ್ರದೇಶದಲ್ಲೂ ಸ್ಫೋಟದ ಸಂದರ್ಭ ಕಂಪನ ಉಂಟಾಗುತ್ತಿದೆ ಎಂಬ
ಕುರಿತು ಕೂಡ ದೂರುಗಳು ಕೇಳಿಬಂದಿದೆ.

ಬೇಸಗೆಯಲ್ಲಿ ಪಂಪುಸೆಟ್‌ ತೆರವು
ಪ್ರತೀ ಬೇಸಗೆಯ ಸಂದರ್ಭದಲ್ಲಿ ಬಾಳ್ತಿಲ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದ್ದು, ನೀರಿಲ್ಲ ಎಂದು ಕೃಷಿ ಪಂಪುಸೆಟ್‌ಗಳನ್ನೂ ತೆರವು ಮಾಡುತ್ತಾರೆ. ಬೇಸಗೆಯಲ್ಲಿ ನೀರಿಲ್ಲ ಎಂದಾದರೆ ಈ ಯೋಜನೆಗೆ ನೀರು ಎಲ್ಲಿಂದ ಸಿಗುತ್ತದೆ?
*ಶಿವರಾಜ್‌ ಕಾಂದಿಲ, ಸದಸ್ಯರು, ಬಾಳ್ತಿಲ ಗ್ರಾ.ಪಂ

ಸ್ಥಳೀಯಾಡಳಿತಕ್ಕೆ ಮಾಹಿತಿ ಇಲ್ಲ
ನರಿಕೊಂಬು ಹಾಗೂ ಬಾಳ್ತಿಲ ಗ್ರಾ.ಪಂ. ವ್ಯಾಪ್ತಿಯ ಗಡಿ ಪ್ರದೇಶದಲ್ಲಿ 789 ಕೋ.ರೂ.ಗಳ ಯೋಜನೆ ಅನುಷ್ಠಾನಕ್ಕೆ ಕಾಮಗಾರಿ ಆರಂಭಗೊಂಡಿದೆ. ಆದರೆ ಈ ಕುರಿತು ಸ್ಥಳೀಯಾಡಳಿತಕ್ಕೆ ಯಾವುದೇ ಮಾಹಿತಿ ನೀಡಿಲ್ಲ. ಸ್ಫೋಟಕಗಳ ಮೂಲಕ ಬಂಡೆಗಳನ್ನು ಒಡೆಯಲಾಗುತ್ತಿದ್ದು, ಹಲವು ಮನೆಗಳು ಕಂಪಿಸುತ್ತಿದೆ. ಜತೆಗೆ ನರಿಕೊಂಬು, ಬಾಳ್ತಿಲಕ್ಕೆ ಬೇಸಗೆಯಲ್ಲಿ ನೀರಿನ ಅಭಾವ ತಲೆದೋರುತ್ತಿದ್ದು, ನಮ್ಮ ಗ್ರಾಮಗಳ ನೀರಿನ ಸಮಸ್ಯೆ ಪರಿಹರಿಸಿ ಬಳಿಕ ಬೇರೆ ಊರಿಗೆ ನೀರು ಕೊಂಡು ಹೋಗಲಿ ಎಂಬುದು ನಮ್ಮ ಆಗ್ರಹ.
*ಸಂತೋಷ್‌ ಶಂಭೂರು, ಅಧ್ಯಕ್ಷರು, ನರಿಕೊಂಬು ಗ್ರಾ.ಪಂ.

ಸ್ಥಳೀಯವಾಗಿ ಯಾವುದೇ ಸಮಸ್ಯೆ ಇಲ್ಲ
ಸ್ಥಳೀಯ ಗ್ರಾಮಕ್ಕೆ ಕುಡಿಯುವ ನೀರು ಕಡಿಮೆಯಾಗುತ್ತಿದೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದು, ಆಂತಹ ಯಾವುದೇ ಸಮಸ್ಯೆ ಇಲ್ಲ. ಜಾಕ್‌ವೆಲ್‌ಗಾಗಿ ಕಾಮಗಾರಿ ನಡೆದು ಅಪಾಯ ಇಲ್ಲದೆ ಬಂಡೆಗಳನ್ನು ಒಡೆಯುವ ಕೆಲಸ ಮಾಡಲಾಗಿದೆ. ಪ್ರಸ್ತುತ ಮಳೆಗಾಲವಾದುದರಿಂದ ಹೆಚ್ಚಿನ ಕಾಮಗಾರಿ ನಡೆಯುತ್ತಿಲ್ಲ.
*ಜಿ.ಕೆ.ನಾಯ್ಕ, ಎಇಇ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಬಂಟ್ವಾಳ.

*ಕಿರಣ್‌ ಸರಪಾಡಿ

ಟಾಪ್ ನ್ಯೂಸ್

Shivamogga: ಬಟ್ಟೆ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ; 8ಕ್ಕೂ ಅಧಿಕ ಅಂಗಡಿಗಳು ಸುಟ್ಟು ಕರಕಲು

Shivamogga: ಬಟ್ಟೆ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ; 8ಕ್ಕೂ ಅಧಿಕ ಅಂಗಡಿಗಳು ಸುಟ್ಟು ಕರಕಲು

Horoscope: ಅಕಸ್ಮಾತ್‌ ಧನಾಗಮ ಯೋಗ ನಿಮ್ಮದಾಗಲಿದೆ

Horoscope: ಅಕಸ್ಮಾತ್‌ ಧನಾಗಮ ಯೋಗ ನಿಮ್ಮದಾಗಲಿದೆ

Government ಹೊಸ ಅಪರಾಧ ಸಂಹಿತೆಗೆ ರಾಜ್ಯದಲ್ಲಿ ತಿದ್ದುಪಡಿ

Government ಹೊಸ ಅಪರಾಧ ಸಂಹಿತೆಗೆ ರಾಜ್ಯದಲ್ಲಿ ತಿದ್ದುಪಡಿ

CM DCM ಹೇಳಿಕೆ ನಿಲ್ಲಿಸದಿದ್ದರೆ ಶೋಕಾಸ್‌ ನೋಟಿಸ್‌: ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಎಚ್ಚರಿಕೆ

CM DCM ಹೇಳಿಕೆ ನಿಲ್ಲಿಸದಿದ್ದರೆ ಶೋಕಾಸ್‌ ನೋಟಿಸ್‌: ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಎಚ್ಚರಿಕೆ

Exam

Australia;ಇನ್ನು ವಿದ್ಯಾರ್ಥಿ ಶುಲ್ಕ ದುಪ್ಪಟ್ಟು: ಭಾರತೀಯರಿಗೂ ಸಂಕಷ್ಟ

1-LOP

Leader of the Opposition; ಚೊಚ್ಚಲ ಭಾಷಣದಲ್ಲೇ ಅಬ್ಬರ! ; ರಾಹುಲ್‌ ವಿರುದ್ಧ ಕ್ರಮ?

Minister Pralhad Joshi ರಾಜ್ಯದ ಹೆದ್ದಾರಿಗೆ 8,021 ಕೋ.ರೂ.

Minister Pralhad Joshi ರಾಜ್ಯದ ಹೆದ್ದಾರಿಗೆ 8,021 ಕೋ.ರೂ.


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Punjalkatte ಪಾಂಡವರಕಲ್ಲು: ಅಂಗನವಾಡಿ ಕೇಂದ್ರಕ್ಕೆ ಶೀಟ್‌ ಅಳವಡಿಕೆಗೆ ನಿರ್ಧಾರ

Punjalkatte ಪಾಂಡವರಕಲ್ಲು: ಅಂಗನವಾಡಿ ಕೇಂದ್ರಕ್ಕೆ ಶೀಟ್‌ ಅಳವಡಿಕೆಗೆ ನಿರ್ಧಾರ

Sullia 2 ವರ್ಷಗಳ ಹಿಂದೆ ನಡೆದಿದ್ದ ಕಳವು ಆರೋಪಿ ಬಂಧನ

Sullia 2 ವರ್ಷಗಳ ಹಿಂದೆ ನಡೆದಿದ್ದ ಕಳವು ಆರೋಪಿ ಬಂಧನ

Dharmasthala ಅನ್ನದಾನಕ್ಕೆ ಮತ್ತಷ್ಟು ಮಹತ್ವ : ಡಾ| ವೀರೇಂದ್ರ ಹೆಗ್ಗಡೆ

Dharmasthala ಅನ್ನದಾನಕ್ಕೆ ಮತ್ತಷ್ಟು ಮಹತ್ವ : ಡಾ| ವೀರೇಂದ್ರ ಹೆಗ್ಗಡೆ

Vitla: ಲಿಫ್ಟ್ ನಲ್ಲಿ ಸಿಲುಕಿದ ವಿದ್ಯಾರ್ಥಿಗಳು

Vitla: ಲಿಫ್ಟ್ ನಲ್ಲಿ ಸಿಲುಕಿದ ವಿದ್ಯಾರ್ಥಿಗಳು

Theft case ಬಡಗಕಜೆಕಾರು: ನಿರ್ಮಾಣ ಹಂತದ ರುದ್ರ ಭೂಮಿಯಿಂದ ಕಳವು

Theft case ಬಡಗಕಜೆಕಾರು: ನಿರ್ಮಾಣ ಹಂತದ ರುದ್ರ ಭೂಮಿಯಿಂದ ಕಳವು

MUST WATCH

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

ಹೊಸ ಸೇರ್ಪಡೆ

Shivamogga: ಬಟ್ಟೆ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ; 8ಕ್ಕೂ ಅಧಿಕ ಅಂಗಡಿಗಳು ಸುಟ್ಟು ಕರಕಲು

Shivamogga: ಬಟ್ಟೆ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ; 8ಕ್ಕೂ ಅಧಿಕ ಅಂಗಡಿಗಳು ಸುಟ್ಟು ಕರಕಲು

Horoscope: ಅಕಸ್ಮಾತ್‌ ಧನಾಗಮ ಯೋಗ ನಿಮ್ಮದಾಗಲಿದೆ

Horoscope: ಅಕಸ್ಮಾತ್‌ ಧನಾಗಮ ಯೋಗ ನಿಮ್ಮದಾಗಲಿದೆ

Government ಹೊಸ ಅಪರಾಧ ಸಂಹಿತೆಗೆ ರಾಜ್ಯದಲ್ಲಿ ತಿದ್ದುಪಡಿ

Government ಹೊಸ ಅಪರಾಧ ಸಂಹಿತೆಗೆ ರಾಜ್ಯದಲ್ಲಿ ತಿದ್ದುಪಡಿ

CM DCM ಹೇಳಿಕೆ ನಿಲ್ಲಿಸದಿದ್ದರೆ ಶೋಕಾಸ್‌ ನೋಟಿಸ್‌: ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಎಚ್ಚರಿಕೆ

CM DCM ಹೇಳಿಕೆ ನಿಲ್ಲಿಸದಿದ್ದರೆ ಶೋಕಾಸ್‌ ನೋಟಿಸ್‌: ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಎಚ್ಚರಿಕೆ

Exam

Australia;ಇನ್ನು ವಿದ್ಯಾರ್ಥಿ ಶುಲ್ಕ ದುಪ್ಪಟ್ಟು: ಭಾರತೀಯರಿಗೂ ಸಂಕಷ್ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.