![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 27, 2024, 1:24 PM IST
ಗಾಂಧಿನಗರದಲ್ಲಿ ಒಂದಷ್ಟು ಮಂದಿ ಇದ್ದಾರೆ, ಯಾವುದಾದರೂ ಒಂದು ಘಟನೆ ನಡೆದ ತಕ್ಷಣ ಅದಕ್ಕೆ ಕುರಿತಾದ ಟೈಟಲ್ ರಿಜಿಸ್ಟ್ರರ್ ಮಾಡಿಸಿಬಿಡೋದು ಅಥವಾ ಆ ಕುರಿತಾದ ಸಿನಿಮಾ ಮಾಡುತ್ತೇನೆ, ಸ್ಕ್ರಿಪ್ಟ್ ಕೆಲಸ ಶುರುವಾಗಿದೆ ಎಂದು ಹೇಳಿಬಿಡೋದು. ಆದರೆ, ಮುಂದೆ ಆ ಸಿನಿಮಾಗಳ ಕಥೆ ಏನಾಯಿತು ಎಂದರೆ ಅದಕ್ಕೆ ಉತ್ತರವಿಲ್ಲ. ಈಗಲೂ ಅಷ್ಟೇ, ದರ್ಶನ್ ಘಟನೆ ನಡೆದ ದಿನದಿಂದಲೇ ಅದರ ಕುರಿತಾದ ಟೈಟಲ್ ನೀಡಿ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅರ್ಜಿ ನೀಡಿದವರ ಸಂಖ್ಯೆ ದೊಡ್ಡದೇ ಇದೆ.
ಕೆಲವು ದಿನಗಳ ಹಿಂದೆ “ಡಿ ಗ್ಯಾಂಗ್’ ಎಂಬ ಟೈಟಲ್ ನೀಡುವಂತೆ ಮಂಡಳಿಗೆ ತಂಡವೊಂದು ಮನವಿ ನೀಡಿತ್ತು. ಆದರೆ, ಮಂಡಳಿ ಆ ಟೈಟಲ್ ನೀಡಲು ಸಾಧ್ಯವಿಲ್ಲ ಎಂದು ನಿರಾಕರಿಸಿತು. ಈಗ ಮಂಡಳಿ ಮುಂದೆ ಮತ್ತೂಂದು ಟೈಟಲ್ ಅರ್ಜಿ ಬಂದಿದೆ. ಅದು ದರ್ಶನ್ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನೀಡಿರುವ ಕೈದಿ ನಂಬರ್.
ದರ್ಶನ್ ಅವರಿಗೆ 6106 ನಂಬರ್ ನೀಡಲಾಗಿದೆ. ಇದನ್ನೇ ಹೊಸ ಸಿನಿಮಾಗೆ ಶೀರ್ಷಿಕೆ ಯಾಗಿಸಲು ಭದ್ರಾವತಿ ಮೂವೀ ಮೇಕರ್ಸ್ ಎಂಬ ಸಂಸ್ಥೆಯೊಂದು ಮುಂದೆ ಬಂದು, ಮಂಡಳಿಗೆ ಅರ್ಜಿ ಕೂಡಾ ಕೊಟ್ಟಿದೆ. ಆದರೆ, ಮಂಡಳಿಯ ಶೀರ್ಷಿಕೆ ಸಮಿತಿ ಸದ್ಯಕ್ಕೆ ಈ ಟೈಟಲ್ ನೀಡಲು ಆಗುವುದಿಲ್ಲ ಎಂದಿದೆ.
ಮತ್ತೊಂದು ಮಂಡಳಿಯಿಂದ ಟೈಟಲ್: ಈ ನಡುವೆಯೇ ಕನ್ನಡ ಫಿಲಂ ಚೇಂಬರ್ ಎಂಬ ಮತ್ತೂಂದು ಸಂಸ್ಥೆ “ಖೈದಿ ನಂಬರ್ 6106- ಆರೋಪಿನಾ, ಅಪರಾಧಿನಾ ಎಂಬ ಟೈಟಲ್ ನೀಡಿದ್ದು, ಟೈಟಲ್ ಪಡೆದ ರಾಘವ್ ದನಿ ಎಂಬ ಸಂಸ್ಥೆ ಆ ಪತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.