Emergency ಅಸಾಂವಿಧಾನಿಕ ಎಂದ ರಾಷ್ಟ್ರಪತಿ ದ್ರೌಪದಿ ಮುರ್ಮು: ಸಂಸತ್ ಜಂಟಿ ಅಧಿವೇಶನ
ಬಿಜೆಪಿ ಸಂಸದರು ಸ್ವಾಗತಿಸಿದ್ದು, ವಿಪಕ್ಷ ಸದಸ್ಯರು ಪ್ರತಿಭಟನೆ ನಡೆಸಿದರು.
Team Udayavani, Jun 27, 2024, 1:45 PM IST
ನವದೆಹಲಿ: ಪ್ರಧಾನಿ ಇಂದಿರಾ ಗಾಂಧಿ 1975ರಲ್ಲಿ ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿದ್ದು, ಸಂವಿಧಾನದ ಮೇಲೆ ನಡೆಸಿದ ಅತಿ ದೊಡ್ಡ ಪ್ರಹಾರವಾಗಿದೆ ಎಂದು ತಿಳಿಸಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು, ಇದು ದೇಶದ ಇತಿಹಾಸದಲ್ಲಿನ ಕಪ್ಪು ಅಧ್ಯಾಯವಾಗಿದೆ ಎಂದರು.
ಇದನ್ನೂ ಓದಿ:Rain: ಕುದುರೆಮುಖ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ.. ಮುಳುಗುವ ಹಂತದಲ್ಲಿ ಹೆಬ್ಬಾಳೆ ಸೇತುವೆ
ಅವರು ಗುರುವಾರ (ಜೂನ್ 27) ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆದ ನಂತರ ರಚನೆಯಾದ ನೂತನ ಸರ್ಕಾರದ ಬಳಿಕ 18ನೇ ಲೋಕಸಭೆಯ ಮೊದಲ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದರು.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ದೇಶ ಅವ್ಯವಸ್ಥೆಯ ಆಗರದಲ್ಲಿ ಮುಳುಗಿತ್ತು, ಇದೊಂದು ಪ್ರಜಾಪ್ರಭುತ್ವದ ಮೇಲೆ ನಡೆದ ಕಳಂಕವಾಗಿದ್ದು, ಇದನ್ನು ಪ್ರತಿಯೊಬ್ಬರು ಖಂಡಿಸಲೇಬೇಕು ಎಂದು ಮುರ್ಮು ಹೇಳಿದರು.
ತುರ್ತುಪರಿಸ್ಥಿತಿ ಹೇರಿಕೆ ದೇಶದ ಸಂವಿಧಾನದ ಮೇಲೆ ನಡೆದ ಅತೀ ದೊಡ್ಡ ಹಾಗೂ ಕಳಂಕಿತ ಅಧ್ಯಾಯವಾಗಿದೆ. ಆದರೆ ದೇಶ ಇಂತಹ ಅಸಾಂವಿಧಾನಿಕ ಶಕ್ತಿಯ ವಿರುದ್ಧ ಜಯಗಳಿಸಿರುವುದಾಗಿ ಮುರ್ಮು ಜಂಟಿ ಅಧಿವೇಶನದಲ್ಲಿ ಹೇಳಿದ್ದು, ಇದನ್ನು ಬಿಜೆಪಿ ಸಂಸದರು ಸ್ವಾಗತಿಸಿದ್ದು, ವಿಪಕ್ಷ ಸದಸ್ಯರು ಪ್ರತಿಭಟನೆ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shivamogga: ಬಟ್ಟೆ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ; 8ಕ್ಕೂ ಅಧಿಕ ಅಂಗಡಿಗಳು ಸುಟ್ಟು ಕರಕಲು
Horoscope: ಅಕಸ್ಮಾತ್ ಧನಾಗಮ ಯೋಗ ನಿಮ್ಮದಾಗಲಿದೆ
Government ಹೊಸ ಅಪರಾಧ ಸಂಹಿತೆಗೆ ರಾಜ್ಯದಲ್ಲಿ ತಿದ್ದುಪಡಿ
CM DCM ಹೇಳಿಕೆ ನಿಲ್ಲಿಸದಿದ್ದರೆ ಶೋಕಾಸ್ ನೋಟಿಸ್: ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಎಚ್ಚರಿಕೆ
Australia;ಇನ್ನು ವಿದ್ಯಾರ್ಥಿ ಶುಲ್ಕ ದುಪ್ಪಟ್ಟು: ಭಾರತೀಯರಿಗೂ ಸಂಕಷ್ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.