Bandipur: ರಿಲ್ಯಾಕ್ಸ್ ಮೂಡ್ನಲ್ಲಿದ್ದ ವ್ಯಾಘ್ರನನ್ನೇ ಅಟ್ಟಾಡಿಸಿದ ಗಜರಾಜ…
Team Udayavani, Jun 27, 2024, 3:48 PM IST
ಗುಂಡ್ಲುಪೇಟೆ(ಚಾಮರಾಜನಗರ): ಕೆರೆಯಲ್ಲಿ ಮಲಗಿದ್ದ ಹುಲಿಯನ್ನು ಕಾಡಾನೆಯೊಂದು ಅಟ್ಟಾಡಿಸಿದ ಘಟನೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯದಲ್ಲಿ ನಡೆದಿದೆ.
ಕೆರೆಯಲ್ಲಿ ರಿಲ್ಯಾಕ್ಸ್ ಮೂಡ್ನಲ್ಲಿ ಮಲಗಿದ್ದ ವ್ಯಾಘ್ರನನ್ನು ಗಮನಿಸಿದ ಗಜರಾಜ ತನ್ನ ಮೇಲೆ ದಾಳಿ ಮಾಡಬಹುದು ಎಂಬ ಭಯದಲ್ಲಿ ಹುಲಿಯನ್ನು ಅಟ್ಟಡಿಸಿದೆ. ಆನೆ ದಾಳಿ ಮಾಡಲು ಮುಂದಾಗುವುದನ್ನು ಕಂಡ ಹುಲಿ ಪೇಚಿಗೆ ಸಿಲುಕಿ ಕೆರೆಯಿಂದ ಪೇರಿ ಕಿತ್ತಿದೆ. ಆನೆ ಸ್ಥಳದಿಂದ ತೆರಳಿದ ನಂತರ ಮತ್ತೇ ಕೆರೆಗೆ ಹುಲಿರಾಯ ಬಂದು ಮಲಗಿದ್ದಾನೆ. ಈ ದೃಶ್ಯವನ್ನು ಬಂಡೀಪುರದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗೊಬ್ಬರು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಇದೀಗ ಸಾಕಷ್ಟು ವೈರಲ್ ಆಗಿದೆ.
ಹಸಿನಿಂದ ಕಂಗೊಳಿಸುತ್ತಿದೆ ಅಭಯಾರಣ್ಯ: ಮೇ, ಜೂನ್ ಮಾಯೆಯಲ್ಲಿ ಬಂಡೀಪುರ ಅಭಯಾರಣ್ಯಕ್ಕೆ ಉತ್ತಮ ಮಳೆಯಾದ ಪರಿಣಾಮ ಕೆರೆ-ಕಟ್ಟೆಳಲ್ಲಿ ನೀರು ತುಂಬಿದೆ. ಜೊತೆಗೆ ಕಾಡೆಲ್ಲ ಅಚ್ಚ ಹಸಿರನ್ನು ಹೊದ್ದು ನಿಂತಿದ್ದು, ಕಾಡುಪ್ರಾಣಿಗಳಿಗೆ ಕುಡಿಯುವ ನೀರು ಮತ್ತು ಮೇವಿನ ಕೊರತೆ ದೂರವಾಗಿದೆ. ಜೊತೆಗೆ ಬಂಡೀಪುರ ಸಫಾರಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿಯೂ ಸಹ ಗಣನೀಯವಾಗಿ ಏರಿಕೆ ಕಂಡಿದೆ.
ಇದನ್ನೂ ಓದಿ: Miraculously Escapes: ರೀಲ್ಸ್ ಮಾಡಲು ಹೋಗಿ ಸಿಡಿಲಿನ ಆಘಾತದಿಂದ ಬಾಲಕಿ ಜಸ್ಟ್ ಎಸ್ಕೇಪ್…
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shivamogga: ಬಟ್ಟೆ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ; 8ಕ್ಕೂ ಅಧಿಕ ಅಂಗಡಿಗಳು ಸುಟ್ಟು ಕರಕಲು
Horoscope: ಅಕಸ್ಮಾತ್ ಧನಾಗಮ ಯೋಗ ನಿಮ್ಮದಾಗಲಿದೆ
Government ಹೊಸ ಅಪರಾಧ ಸಂಹಿತೆಗೆ ರಾಜ್ಯದಲ್ಲಿ ತಿದ್ದುಪಡಿ
CM DCM ಹೇಳಿಕೆ ನಿಲ್ಲಿಸದಿದ್ದರೆ ಶೋಕಾಸ್ ನೋಟಿಸ್: ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಎಚ್ಚರಿಕೆ
Australia;ಇನ್ನು ವಿದ್ಯಾರ್ಥಿ ಶುಲ್ಕ ದುಪ್ಪಟ್ಟು: ಭಾರತೀಯರಿಗೂ ಸಂಕಷ್ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.