500 ಕೋಟಿಯ ಸಿನಿಮಾ ಮಾಡುವಾಗಲೂ ಕಿತ್ತೋದ ಚಪ್ಪಲಿ ಹಾಕಿಕೊಂಡಿದ್ದ ʼಕಲ್ಕಿ 2898 ADʼ ನಿರ್ದೇಶಕ


Team Udayavani, Jun 27, 2024, 4:25 PM IST

500 ಕೋಟಿಯ ಸಿನಿಮಾ ಮಾಡುವಾಗಲೂ ಕಿತ್ತೋದ ಚಪ್ಪಲಿ ಹಾಕಿಕೊಂಡಿದ್ದ ʼಕಲ್ಕಿ 2898 ADʼ ನಿರ್ದೇಶಕ

ಹೈದರಾಬಾದ್:‌ ಇಂದು ಬಹುಕೋಟಿ ನಿರ್ಮಾಣದ ʼಕಲ್ಕಿ 2898 AD’ (Kalki 2898 AD) ವರ್ಲ್ಡ್‌ ವೈಡ್‌ ರಿಲೀಸ್‌ ಆಗಿದೆ. ಮುಂಜಾನೆ ಶೋನಿಂದಲೇ ಸಾಲುಗಟ್ಟಿ ಸಿನಿಮಾ ನೋಡಲು ಪ್ರೇಕ್ಷಕರು ಮುಗಿಬಿದ್ದಿದ್ದಾರೆ.

ಪ್ರಭಾಸ್‌ (Prabhas) ವೃತ್ತಿ ಬದುಕಿನ ಮತ್ತೊಂದು ದೊಡ್ಡ ಸಿನಿಮಾವೆಂದೇ ಹೇಳಲಾಗುತ್ತಿರುವ ʼಕಲ್ಕಿ 2898 AD’ ಸೆಟ್ಟೇರಿದ ದಿನದಿಂದ ಹೈಪ್‌ ಹೆಚ್ಚಿಸುತ್ತಲೇ ಬಂದಿತ್ತು. ಪೋಸ್ಟರ್‌, ಟೀಸರ್‌ ಕೊನೆಗೆ ʼಬುಜ್ಜಿʼ ಕಾರನ್ನು ಬಳಸಿಕೊಂಡು ಭರ್ಜರಿ ಪ್ರಚಾರವನ್ನು ಮಾಡಲಾಗಿತ್ತು.

ʼಕಲ್ಕಿ 2898 AD’ ಒಂದು ಸೈನ್ಸ್‌ ಫೀಕ್ಷನ್‌ ಕಥೆಯೊಳ್ಳ ಸಿನಿಮಾ. ಈ ಕಥೆಯಲ್ಲಿ ಪೌರಾಣಿಕ ಅಂಶವನ್ನು ಸೇರಿಸಿ ಹೊಸ ಲೋಕವನ್ನೇ ನಿರ್ದೇಶನ ನಾಗ್‌ ಅಶ್ವಿನ್‌ (Nag Ashwin)  ಅವರು ಸೃಷ್ಟಿಸಿದ್ದಾರೆ. ಇವರ ಕಾಲ್ಪನಿಕ ಲೋಕವನ್ನು ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ವರ್ಷಾನುಗಟ್ಟಲೇ ಚಿತ್ರಕ್ಕಾಗಿ ದುಡಿದು, ಶ್ರಮವಹಿಸಿದ್ದಕ್ಕೆ ತಕ್ಕ ಪ್ರತಿಫಲವನ್ನು ನಿರ್ದೇಶಕರು ಮೊದಲ ದಿನದಿಂದಲೇ ಪಡೆಯುತ್ತಿದ್ದಾರೆ.

ʼಕಲ್ಕಿ 2898 AD’ ಒಂದೆರೆಡು ಕೋಟಿಯ ಸಿನಿಮಾವಲ್ಲ. ಚಿತ್ರ ನಿರ್ಮಾಣಕ್ಕಾಗಿ  ವೈಜಯಂತಿ ಮೂವೀಸ್ ಬರೋಬ್ಬರಿ 500 ಕೋಟಿ ರೂ. ವ್ಯಯಿಸಿದ್ದಾರೆ. ಒಂದು ಚಿತ್ರಕ್ಕಾಗಿ ಇಷ್ಟೊಂದು ಕೋಟಿ ಹಣ ಸುರಿಯುವುದು ಅಷ್ಟು ಸುಲಭವಲ್ಲ. ಅಂದಾಜು ಬಜೆಟ್‌ ಇಟ್ಟುಕೊಂಡು ಈ ಯೋಜನೆ ಆಗಿರುವುದಲ್ಲ.

ಚಿತ್ರ ಇಂದು ರಿಲೀಸ್‌ ಆಗಿದೆ. ಈ ನಡುವೆ ನಿರ್ದೇಶಕ ನಾಗ್‌ ಅಶ್ವಿನ್‌ ಅವರು ಹಾಕಿರುವ ಸ್ಟೋರಿಯೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಕಿತ್ತುಹೋಗಿರುವ ಚಪ್ಪಲಿಯ ಫೋಟೋವೊಂದನ್ನು ಹಾಕಿದ್ದಾರೆ.

ʼಕಲ್ಕಿ 2898 AD’ ಚಿತ್ರ ಆರಂಭವಾದಾಗಿನಿಂದ ರಿಲೀಸ್‌ ಆಗುವವರೆಗೆ ನಿರ್ದೇಶಕ ನಾಗ್‌ ಅಶ್ವಿನ್‌ ಅವರು ಇದೇ ಚಪ್ಪಲಿಯನ್ನು ಹಾಕಿಕೊಂಡಿದ್ದರು.  ಈ ಚಪ್ಪಲಿ ಸವೆದು ಹೋಗಿದ್ದರೂ ಅದನ್ನು ಅವರು ಬದಲಾಯಿಸಿಲ್ಲ. ಇದು ಅವರ ಶ್ರಮವನ್ನು ತೋರಿಸುತ್ತದೆ. ʼಇದೊಂದು ಸುದೀರ್ಘ ಹಾದಿʼ ಎಂದು ನಾಗ್‌ ಅಶ್ವಿನ್‌ ಅವರು ಬರೆದುಕೊಂಡಿದ್ದಾರೆ.

500 ಕೋಟಿ ವೆಚ್ಚದ ಸಿನಿಮಾ ಮಾಡಿದ್ದರೂ ಎಲ್ಲೂ ಕೂಡ ತಾನೊಬ್ಬ ದೊಡ್ಡ ನಿರ್ದೇಶಕವೆಂದು ತೋರಿಸದೆ ಸಾಮಾನ್ಯನಂತಿರುವ ನಾಗ್‌ ಅಶ್ವಿನ್‌ ಅವರ ವ್ಯಕ್ತಿತ್ವವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.

ಸಿನಿಮಾದ ಸೀಕ್ವೆಲ್‌ ಕೂಡ ರಿಲೀಸ್‌ ಆಗುತ್ತದೆ ಎಂದು ಸಿನಿಮಾ ನೋಡಿದ ಬಳಿಕ ಅನೇಕ ಪ್ರೇಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ.

ಪ್ರಭಾಸ್‌, ದೀಪಿಕಾ, ಅಮಿತಾಭ್‌ ಬಚ್ಚನ್‌, ಕಮಲ್‌ ಹಾಸನ್‌, ದಿಶಾ ಪಠಾನಿ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.

 

ಟಾಪ್ ನ್ಯೂಸ್

Shivamogga: ಬಟ್ಟೆ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ; 8ಕ್ಕೂ ಅಧಿಕ ಅಂಗಡಿಗಳು ಸುಟ್ಟು ಕರಕಲು

Shivamogga: ಬಟ್ಟೆ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ; 8ಕ್ಕೂ ಅಧಿಕ ಅಂಗಡಿಗಳು ಸುಟ್ಟು ಕರಕಲು

Horoscope: ಅಕಸ್ಮಾತ್‌ ಧನಾಗಮ ಯೋಗ ನಿಮ್ಮದಾಗಲಿದೆ

Horoscope: ಅಕಸ್ಮಾತ್‌ ಧನಾಗಮ ಯೋಗ ನಿಮ್ಮದಾಗಲಿದೆ

Government ಹೊಸ ಅಪರಾಧ ಸಂಹಿತೆಗೆ ರಾಜ್ಯದಲ್ಲಿ ತಿದ್ದುಪಡಿ

Government ಹೊಸ ಅಪರಾಧ ಸಂಹಿತೆಗೆ ರಾಜ್ಯದಲ್ಲಿ ತಿದ್ದುಪಡಿ

CM DCM ಹೇಳಿಕೆ ನಿಲ್ಲಿಸದಿದ್ದರೆ ಶೋಕಾಸ್‌ ನೋಟಿಸ್‌: ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಎಚ್ಚರಿಕೆ

CM DCM ಹೇಳಿಕೆ ನಿಲ್ಲಿಸದಿದ್ದರೆ ಶೋಕಾಸ್‌ ನೋಟಿಸ್‌: ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಎಚ್ಚರಿಕೆ

Exam

Australia;ಇನ್ನು ವಿದ್ಯಾರ್ಥಿ ಶುಲ್ಕ ದುಪ್ಪಟ್ಟು: ಭಾರತೀಯರಿಗೂ ಸಂಕಷ್ಟ

1-LOP

Leader of the Opposition; ಚೊಚ್ಚಲ ಭಾಷಣದಲ್ಲೇ ಅಬ್ಬರ! ; ರಾಹುಲ್‌ ವಿರುದ್ಧ ಕ್ರಮ?

Minister Pralhad Joshi ರಾಜ್ಯದ ಹೆದ್ದಾರಿಗೆ 8,021 ಕೋ.ರೂ.

Minister Pralhad Joshi ರಾಜ್ಯದ ಹೆದ್ದಾರಿಗೆ 8,021 ಕೋ.ರೂ.


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Box office: ರಿಲೀಸ್‌ ಆದ ನಾಲ್ಕೇ ದಿನದಲ್ಲಿ 500 ಕೋಟಿ ರೂ. ಗಳಿಸಿದ ʼಕಲ್ಕಿ 2898ಎಡಿ’

Box office: ರಿಲೀಸ್‌ ಆದ ನಾಲ್ಕೇ ದಿನದಲ್ಲಿ 500 ಕೋಟಿ ರೂ. ಗಳಿಸಿದ ʼಕಲ್ಕಿ 2898 ಎಡಿ’

ಈ ವಿಚಾರದಲ್ಲಿ ಶಾರುಖ್‌ ಖಾನ್‌ ʼಜವಾನ್‌ʼ ಚಿತ್ರವನ್ನೇ ಮೀರಿಸಿದ ʼKalki 2898 ADʼ

ಈ ವಿಚಾರದಲ್ಲಿ ಶಾರುಖ್‌ ಖಾನ್‌ ʼಜವಾನ್‌ʼ ಚಿತ್ರವನ್ನೇ ಮೀರಿಸಿದ ʼKalki 2898 ADʼ

Box office: ʼಕಲ್ಕಿ 2898 ಎಡಿʼಯ 2ನೇ ದಿನದ ಗಳಿಕೆಯಲ್ಲಿ ಭಾರೀ ಕುಸಿತ; ಗಳಿಸಿದ್ದೆಷ್ಟು?

Box office: ʼಕಲ್ಕಿ 2898 ಎಡಿʼಯ 2ನೇ ದಿನದ ಗಳಿಕೆಯಲ್ಲಿ ಭಾರೀ ಕುಸಿತ; ಗಳಿಸಿದ್ದೆಷ್ಟು?

How much did ‘Kalki 2898 AD’ earn at the box office on the first day?

ಬಾಕ್ಸಾಫೀಸ್ ಗೆ ಕಿಚ್ಚು ಹತ್ತಿಸಿದ ‘Kalki 2898 AD’ ಮೊದಲ ದಿನ ಗಳಿಸಿದ್ದೆಷ್ಟು?

Kochi: ಉಸಿರಾಟ ಸಮಸ್ಯೆ; 37ನೇ ವಯಸ್ಸಿನಲ್ಲಿ ಖ್ಯಾತ ನಟನ ಮಗ ನಿಧನ

Kochi: ಉಸಿರಾಟ ಸಮಸ್ಯೆ; 37ನೇ ವಯಸ್ಸಿನಲ್ಲಿ ಖ್ಯಾತ ನಟನ ಮಗ ನಿಧನ

MUST WATCH

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

ಹೊಸ ಸೇರ್ಪಡೆ

Shivamogga: ಬಟ್ಟೆ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ; 8ಕ್ಕೂ ಅಧಿಕ ಅಂಗಡಿಗಳು ಸುಟ್ಟು ಕರಕಲು

Shivamogga: ಬಟ್ಟೆ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ; 8ಕ್ಕೂ ಅಧಿಕ ಅಂಗಡಿಗಳು ಸುಟ್ಟು ಕರಕಲು

Horoscope: ಅಕಸ್ಮಾತ್‌ ಧನಾಗಮ ಯೋಗ ನಿಮ್ಮದಾಗಲಿದೆ

Horoscope: ಅಕಸ್ಮಾತ್‌ ಧನಾಗಮ ಯೋಗ ನಿಮ್ಮದಾಗಲಿದೆ

Government ಹೊಸ ಅಪರಾಧ ಸಂಹಿತೆಗೆ ರಾಜ್ಯದಲ್ಲಿ ತಿದ್ದುಪಡಿ

Government ಹೊಸ ಅಪರಾಧ ಸಂಹಿತೆಗೆ ರಾಜ್ಯದಲ್ಲಿ ತಿದ್ದುಪಡಿ

CM DCM ಹೇಳಿಕೆ ನಿಲ್ಲಿಸದಿದ್ದರೆ ಶೋಕಾಸ್‌ ನೋಟಿಸ್‌: ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಎಚ್ಚರಿಕೆ

CM DCM ಹೇಳಿಕೆ ನಿಲ್ಲಿಸದಿದ್ದರೆ ಶೋಕಾಸ್‌ ನೋಟಿಸ್‌: ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಎಚ್ಚರಿಕೆ

Exam

Australia;ಇನ್ನು ವಿದ್ಯಾರ್ಥಿ ಶುಲ್ಕ ದುಪ್ಪಟ್ಟು: ಭಾರತೀಯರಿಗೂ ಸಂಕಷ್ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.