![](https://www.udayavani.com/wp-content/uploads/2024/07/Bite-415x233.jpg)
India ದಲ್ಲಿ ದ್ವೇಷ ಭಾಷಣ ಹೆಚ್ಚಳ: ಅಮೆರಿಕ ಕಳವಳ
Team Udayavani, Jun 28, 2024, 6:32 AM IST
![1-USSA](https://www.udayavani.com/wp-content/uploads/2024/06/1-USSA-620x389.jpg)
ಹೊಸದಿಲ್ಲಿ: ಭಾರತದಲ್ಲಿ ದ್ವೇಷ ಭಾಷಣ ಹೆಚ್ಚಾಗಿದ್ದು, ಇದು ಅತ್ಯಂತ ಕಳವಳದ ವಿಚಾರ ಎಂದು ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್ ಹೇಳಿದ್ದಾರೆ.
ವಿದೇಶಾಂಗ ಇಲಾಖೆಯಿಂದ ಜಗತ್ತಿನ 200 ದೇಶಗಳಿಗೆ ಸಂಬಂಧಿಸಿದ 2023ರ ಧಾರ್ಮಿಕ ಸ್ವಾತಂತ್ರ್ಯ ವರದಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ವಿಶ್ವಾದ್ಯಂತ ಬಹುತೇಕರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಗೌರವ ಸಿಗುತ್ತಿಲ್ಲ. ಭಾರತದಲ್ಲಿ ಮತಾಂತರ ನಿಷೇಧ ಕಾಯ್ದೆ, ದ್ವೇಷ ಭಾಷಣಗಳು, ಅಲ್ಪಸಂಖ್ಯಾಕರ ಪ್ರಾರ್ಥನಾ ಸ್ಥಳ, ಮನೆಗಳನ್ನು ಧ್ವಂಸಗೊಳಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಅಲ್ಪಸಂಖ್ಯಾಕರ ಧಾರ್ಮಿಕ ಸ್ವಾತಂತ್ರ್ಯ ರಕ್ಷಿಸಲು ಅಮೆರಿಕ ಸೇರಿ ಜಗತ್ತಿನ ಇತರ ದೇಶಗಳು ಶ್ರಮಿಸುತ್ತಿವೆ ಎಂದಿದ್ದಾರೆ.
ಭಾರತದ 28 ರಾಜ್ಯಗಳ ಪೈಕಿ 10 ರಾಜ್ಯಗಳಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಾಗಿದ್ದು, ಕೆಲವು ರಾಜ್ಯಗಳು ಮತಾಂತರಗೊಂಡವರ ಮೇಲೆ ದಂಡ ವಿಧಿಸುತ್ತಿವೆ. ಅಲ್ಪಸಂಖ್ಯಾಕರ ಹತ್ಯೆ, ದೌರ್ಜನ್ಯ, ಅವರ ಪ್ರಾರ್ಥನಾ ಸ್ಥಳಗಳ ಧ್ವಂಸವಾದ ಕೆಲವು ಪ್ರಕರಣಗಳನ್ನು ವರದಿಯಲ್ಲಿ ಉಲ್ಲೇಖೀಸಲಾಗಿದೆ ಎಂದು ಬ್ಲಿಂಕನ್ ಹೇಳಿದ್ದಾರೆ.
ಪಕ್ಷಪಾತದ ವರದಿ: ಭಾರತ ಈ ವರದಿಯನ್ನು ಭಾರತದ ವಿದೇಶಾಂಗ ಇಲಾಖೆ ಅಲ್ಲಗಳೆದಿದ್ದು, ಈ ವರದಿ ಸಂಪೂರ್ಣ ಪಕ್ಷಪಾತದಿಂದ ಕೂಡಿದೆ ಎಂದು ಹೇಳಿದೆ. ಅದರಲ್ಲಿ ದೋಷಪೂರಿತ ಮಾಹಿತಿಗಳಿವೆ. ಹಾಗಾಗಿ ಈ ವರದಿ ವಿಶ್ವಾಸಾರ್ಹವಲ್ಲ ಎಂದು ತಿಳಿಸಿದೆ.
ಟಾಪ್ ನ್ಯೂಸ್
![](https://www.udayavani.com/wp-content/uploads/2024/07/Bite-415x233.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![](https://www.udayavani.com/wp-content/uploads/2024/07/Bite-150x84.jpg)
Uttar Pradesh: ಹಾವಿನ ದ್ವೇಷ…45 ದಿನಗಳಲ್ಲಿ 5 ಬಾರಿ ಹಾವು ಕಚ್ಚಿದರೂ ಬದುಕುಳಿದ ವ್ಯಕ್ತಿ!
![1-mng-protest](https://www.udayavani.com/wp-content/uploads/2024/07/1-mng-protest-150x90.jpg)
Mangaluru: ನೀಟ್ ಅವ್ಯವಹಾರ: ಎನ್.ಎಸ್.ಯು.ಐ., ಕಾಂಗ್ರೆಸ್ ಪ್ರತಿಭಟನೆ
![Chikkamagaluru: ಬಸ್ ಹತ್ತುವ ವೇಳೆ ತುಂಡಾದ ಡೋರ್ ಲಾಕ್… ಮಹಿಳೆಗೆ ಗಾಯ](https://www.udayavani.com/wp-content/uploads/2024/07/ksrtc-150x96.jpg)
Chikkamagaluru: ಡೋರ್ ಲಾಕ್ ತುಂಡಾಗಿ ಬಸ್ಸಿನಿಂದ ಹೊರಬಿದ್ದ ಮಹಿಳೆ…
![Sirsi: ಕೇಂದ್ರ ಸಚಿವರನ್ನು ಭೇಟಿಯಾದ ಕಾಗೇರಿ: ಚತುಷ್ಪತ ರಾ.ಹೆದ್ದಾರಿ ತ್ವರಿತಕ್ಕೆ ಮನವಿ](https://www.udayavani.com/wp-content/uploads/2024/07/kageri-150x87.jpg)
Sirsi: ಕೇಂದ್ರ ಸಚಿವರನ್ನು ಭೇಟಿಯಾದ ಕಾಗೇರಿ: ಚತುಷ್ಪತ ರಾ.ಹೆದ್ದಾರಿ ತ್ವರಿತಕ್ಕೆ ಮನವಿ
![18](https://www.udayavani.com/wp-content/uploads/2024/07/18-150x90.jpg)
Actress Akshita Bopaiah: ತಮಿಳಿನತ್ತ ನವನಟಿ ಅಕ್ಷಿತಾ ಸಿನಿಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.