![](https://www.udayavani.com/wp-content/uploads/2024/07/Bite-415x233.jpg)
Manipal: ಹೊತ್ತಿ ಉರಿದು ಹಿಮ್ಮುಖವಾಗಿ ಚಲಿಸಿದ ಕಾರು… ತಪ್ಪಿದ ಅನಾಹುತ
Team Udayavani, Jun 28, 2024, 7:27 AM IST
![2-manipal](https://www.udayavani.com/wp-content/uploads/2024/06/2-manipal-620x372.jpg)
ಮಣಿಪಾಲ: ಕಾರೊಂದು ಹೊತ್ತಿ ಉರಿದ ಘಟನೆ ಮಣಿಪಾಲದಲ್ಲಿ ತಡರಾತ್ರಿ ಸುಮಾರು 1.35ಕ್ಕೆ ಸಂಭವಿಸಿದೆ.
ಕುಂದಾಪುರದಿಂದ ಕೆಎಂಸಿ ಆಸ್ಪತ್ರೆಗೆ ಬಂದ ರೋಗಿಗಳ ಪೈಕಿಯವರ ಕಾರು ಎಂದು ತಿಳಿದು ಬಂದಿದೆ.
ಇಬ್ಬರು ವ್ಯಕ್ತಿಗಳು ರಸ್ತೆ ಬದಿ (ಪರ್ಕಳದಿಂದ ಮಣಿಪಾಲಕ್ಕೆ ಬರುವ ರಸ್ತೆಯಲ್ಲಿ MIT ಬಸ್ ನಿಲ್ದಾಣಕ್ಕಿಂತ ಸ್ವಲ್ಪ ಕೆಳಗೆ ಇಳಿಜಾರಿನಲ್ಲಿ) ಕಾರನ್ನು ನಿಲ್ಲಿಸಿ ಒಳಗಡೆ ಮಲಗಿದ್ದರಂತೆ.
ಬೆಂಕಿ ಹತ್ತಿಕೊಂಡದ್ದು ಗೊತ್ತಾದ ತಕ್ಷಣ ಇಬ್ಬರೂ ಹೊರಗೆ ಬಂದು ಪಾರಾಗಿದ್ದಾರೆ. ಧಗಧಗಿಸಿ ಉರಿಯುತ್ತಿದ್ದಂತೆ ಹ್ಯಾಂಡ್ ಬ್ರೇಕ್ ಮುಕ್ತವಾದ ಕಾರು ಹಿಮ್ಮುಖವಾಗಿ ಚಲಿಸಿದೆ ಎನ್ನಲಾಗಿದೆ.
ಧಗಧಗಿಸುತ್ತಿದ್ದ ಕಾರು ಹಾಗೆಯೇ ರಸ್ತೆಯಲ್ಲಿ ಹಿಂದಕ್ಕೆ ಹೋಗಿದ್ದರೆ ಭಾರಿ ಅಪಾಯ ಸಂಭವಿಸುವ ಸಾಧ್ಯತೆ ಇತ್ತು. ಆದರೆ ಆ ಕಾರನ್ನು ತಡೆದು ನಿಲ್ಲಿಸಿದ್ದು ನಿನ್ನೆಯ ಗಾಳಿ – ಮಳೆಗೆ ಮುರಿದುಬಿದ್ದಿದ್ದ ಒಂದು ಮರದ ಗೆಲ್ಲು!
ಸುಮಾರು ಎರಡು ಗಂಟೆ ವೇಳೆಗೆ ಉಡುಪಿಯಿಂದ ಧಾವಿಸಿ ಬಂದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದರು.
ಟಾಪ್ ನ್ಯೂಸ್
![](https://www.udayavani.com/wp-content/uploads/2024/07/Bite-415x233.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![](https://www.udayavani.com/wp-content/uploads/2024/07/Bite-150x84.jpg)
Uttar Pradesh: ಹಾವಿನ ದ್ವೇಷ…45 ದಿನಗಳಲ್ಲಿ 5 ಬಾರಿ ಹಾವು ಕಚ್ಚಿದರೂ ಬದುಕುಳಿದ ವ್ಯಕ್ತಿ!
![1-mng-protest](https://www.udayavani.com/wp-content/uploads/2024/07/1-mng-protest-150x90.jpg)
Mangaluru: ನೀಟ್ ಅವ್ಯವಹಾರ: ಎನ್.ಎಸ್.ಯು.ಐ., ಕಾಂಗ್ರೆಸ್ ಪ್ರತಿಭಟನೆ
![Chikkamagaluru: ಬಸ್ ಹತ್ತುವ ವೇಳೆ ತುಂಡಾದ ಡೋರ್ ಲಾಕ್… ಮಹಿಳೆಗೆ ಗಾಯ](https://www.udayavani.com/wp-content/uploads/2024/07/ksrtc-150x96.jpg)
Chikkamagaluru: ಡೋರ್ ಲಾಕ್ ತುಂಡಾಗಿ ಬಸ್ಸಿನಿಂದ ಹೊರಬಿದ್ದ ಮಹಿಳೆ…
![Sirsi: ಕೇಂದ್ರ ಸಚಿವರನ್ನು ಭೇಟಿಯಾದ ಕಾಗೇರಿ: ಚತುಷ್ಪತ ರಾ.ಹೆದ್ದಾರಿ ತ್ವರಿತಕ್ಕೆ ಮನವಿ](https://www.udayavani.com/wp-content/uploads/2024/07/kageri-150x87.jpg)
Sirsi: ಕೇಂದ್ರ ಸಚಿವರನ್ನು ಭೇಟಿಯಾದ ಕಾಗೇರಿ: ಚತುಷ್ಪತ ರಾ.ಹೆದ್ದಾರಿ ತ್ವರಿತಕ್ಕೆ ಮನವಿ
![18](https://www.udayavani.com/wp-content/uploads/2024/07/18-150x90.jpg)
Actress Akshita Bopaiah: ತಮಿಳಿನತ್ತ ನವನಟಿ ಅಕ್ಷಿತಾ ಸಿನಿಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.