UV Fusion: ಸಿನೆಮಾ


Team Udayavani, Jun 28, 2024, 3:57 PM IST

11-uv-fusion

ಈ ಬಾರಿಯ ನಮ್ಮ ವಿಶ್ವ ಸಿನಿಮಾ ಪರ್ಯಟನೆಯಲ್ಲಿ ಉಲ್ಲೇಖಿಸಲಾದ ಎರಡು ಸಿನಿಮಾಗಳು ನಿಮಗೆ ಪರಿಚಯವೇ. ಆದರೆ ಈ ಎರಡೂ ಸಿನಿಮಾಗಳು ಬಹಳ ವಿಶಿಷ್ಟವಾದವು. ತೀರಾ ಅಪರೂಪದ್ದು ಎನಿಸುವಂಥವು. ಎರಡೂ ಬೇರೆ ಬೇರೆ ಪ್ರಾಂತ್ಯದ ಸಿನಿಮಾಗಳು ಎನ್ನುವುದು ವಿಶೇಷ.

ಶಿರಿನ್

ಈ ಸಿನಿಮಾವನ್ನು ಪ್ರಯೋ ಗಾತ್ಮಕ ಎನ್ನುವ ಕಾರಣಕ್ಕೂ ನೋಡಬೇಕು. ಬಹಳ ವಿಭಿನ್ನವಾದ ಆಲೋಚನೆಯ ಸಿನಿಮಾ. ಪರ್ಷಿಯನ್‌ ಭಾಷೆಯ ಇರಾನ್‌ ದೇಶದ ನಿರ್ದೇಶಕ ಅಬ್ಟಾಸ್‌ ಕೀರೋಸ್ತಮಿ ನಿರ್ದೇಶಿಸಿರುವ ಸಿನಿಮಾವಿದು. ಇದರ ಹೆಸರೇ ಶಿರಿನ್‌. 2008 ರಲ್ಲಿ ನಿರ್ಮಾಣವಾದುದು.

ಇದೊಂದು ಸಣ್ಣ ಕಥೆ. ಪರ್ಸಿಯಾದ ರಾಜಕುಮಾರ ಖೊಸ್ರೊ ಹಾಗೂ ಆರ್ಮೇನಿಯಾದ ರಾಜಕುಮಾರಿ ಶಿರಿನ್‌ ನಡುವಿನ ಪ್ರೇಮದ ಕುರಿತಾದದ್ದು.  ಈ ಸಿನಿಮಾದ ವಿಶೇಷವೇನೆಂದರೆ ಇಡೀ ಸಿನಿಮಾ ನಡೆಯುವುದು ಚಿತ್ರಮಂದಿರದಲ್ಲಿ. ಅಂದರೆ ಚಿತ್ರಮಂದಿರದೊಳಗೆ ಮತ್ತೂಂದು ಸಿನಿಮಾ. ಸುಮಾರು 110 ಕ್ಕೂ ಹೆಚ್ಚು ಮಂದಿ ಚಿತ್ರನಟಿಯರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ‌

ಅಭಿನಯವೆಂದರೆ ಏನು ಗೊತ್ತೇ? ಚಿತ್ರಮಂದಿರದಲ್ಲಿ ಕುಳಿತು ಸಿನಿಮಾ ನೋಡುತ್ತಾ ದೃಶ್ಯಗಳಲ್ಲಿನ ಭಾವನೆಗಳಿಗೆ ತಮ್ಮ ಮುಖ ಭಾವಗಳ ಮೂಲಕ ಪ್ರತಿ ಸ್ಪಂದಿಸು ವುದಷ್ಟೇ. ಸಿನಿಮಾ ಸಾಗುವಾಗ ಹಿನ್ನೆಲೆಯಲ್ಲಿ ಪರದೆಯ ಮೇಲಿನ ಪಾತ್ರಗಳ ಸಂಭಾಷಣೆ, ಸಂಗೀತ ಕೇಳಿಸುತ್ತದೆ. ಉಳಿದಂತೆ ಕ್ಯಾಮೆರಾ ಸಾಗುವುದು ಈ ಚಿತ್ರಮಂದಿರದೊಳಗೆ ಕುಳಿತ ಪ್ರೇಕ್ಷಕರು ಅಂದರೆ ನಟಿಯರ ಮುಖದ ಮೇಲೆ. ಆ ಮೂಲಕವೇ ನವರಸಗಳ ಭಾವನೆಯನ್ನು ಕಟ್ಟಿಕೊಡುವ ಪ್ರಯತ್ನ.

ಹಾಗಾಗಿ ಸಿನಿಮಾ ಆರಂಭದಿಂದ ಕೊನೆಯವರೆಗೂ ಪ್ರೇಕ್ಷಕರ ಮುಖದಿಂದ ಕದಲುವುದೇ ಇಲ್ಲ. ಬಹಳ ವಿಶಿಷ್ಟವೆನಿಸಿರುವ ಸಿನಿಮಾ. ಒಂದು ನಾಟಕವನ್ನು ನೋಡುತ್ತಿದ್ದೇವೆಂದುಕೊಂಡು ಕೇಳಿದರೆ ಹೇಗಿರಬಹುದು? ಅಥವಾ ರಂಗದ ಬದಲಿಗೆ ಪ್ರೇಕ್ಷಕರಿಗೆ ಅಭಿಮುಖವಾಗಿ ಕುಳಿತು ನಾಟಕವನ್ನು ಅನುಭವಿಸಿದರೆ (ಕೇವಲ ಸಂಭಾಷಣೆ, ಹಿನ್ನೆಲೆ ಸಂಗೀತ ಇತ್ಯಾದಿ ಮೂಲಕ ಶ್ರವಣ) ಹೇಗಿರಬಹುದು. ಅಂಥದೊಂದು ವಿಶಿಷ್ಟ ಅನುಭವ ನೀಡುವ ಸಿನಿಮಾವಿದು.

ಎ ಟ್ರೂಮನ್‌ ಷೋ

ಈ ಸಿನಿಮಾ ಬಗ್ಗೆ ಎಲ್ಲರಿಗೂ ತಿಳಿದಿರಬಹುದು. ಇದೂ ಸಹ ವಿಶಿಷ್ಟವಾದುದೇ. ಈಗ ಎಲ್ಲ ನೋಡ್ತೀವಲ್ಲ ಟಿವಿ ಗಳಲ್ಲಿ. ರಿಯಾಲಿಟಿ ಷೋಗಳ ಭರ್ಜರಿ ಜಮಾನಾದಲ್ಲಿದ್ದೇವಲ್ಲ. ಇದಕ್ಕೆಲ್ಲ ಮೂಲ ಎನ್ನುವಂತೆ ರೂಪುಗೊಂಡ ಸಿನಿಮಾ ಇದು ಎ ಟ್ರೂಮನ್‌ ಷೋ. ಇಂದು ಬಿಗ್‌ ಬಾಸ್‌ ರಿಯಾಲಿಟಿ ಷೋನಲ್ಲಿ ಏನೆಲ್ಲ ನಡೆಯುತ್ತೋ ಆದೇ ರೀತಿಯಲ್ಲಿ ಕಥಾ ನಾಯಕ‌ನ ನಿತ್ಯದ ಬದುಕಿನ ಪ್ರತಿ ಕ್ಷಣಗಳನ್ನೂ ಅವನಿಗೆ ಅರಿವಿಲ್ಲದೇ ದಾಖಲಿಸಿಕೊಳ್ಳುತ್ತಾ ಟಿವಿ ಗಳಲ್ಲಿ ಲೈವ್‌ ಪ್ರಸಾರ ಮಾಡುವಂಥ ಕಥಾವಸ್ತುವಿನದ್ದು.

ಇದೊಂದು ಸೈಕಲಾಜಿಕಲ್‌ ಕಾಮಿಡಿ ಸಿನಿಮಾ. ಪೀಟರ ವೇರ್‌ ಸಿನಿಮಾವನ್ನು ನಿರ್ದೇಶಿಸಿದ್ದರು. ಜಿಮ್‌ ಕೆರಿ ಕಥಾ ನಾಯಕನಾಗಿ ಅಭಿನಯಿಸಿದ್ದರು. ಇದರ ಮೂಲ ಚಿತ್ರಕಥೆ ಒಂದು ಸೈನ್ಸ್‌ ಫಿಕ್ಷನ್‌ ನದ್ದಾಗಿತ್ತು. ನ್ಯೂಯಾರ್ಕ್‌ ಸಿಟಿಯಲ್ಲಿ ನಡೆಯುವಂಥದ್ದು.

ಒಂದಿಷ್ಟು ಬದಲಾವಣೆಯೊಂದಿಗೆ ಸಿನಿಮಾ ತೆರೆ ಕಂಡದ್ದು 1998 ರಲ್ಲಿ. ಸಿನಿಮಾ ಬಾಕ್ಸ್‌ ಆಫೀಸಿನಲ್ಲಿ ಯಶಸ್ವಿಯಾಯಿತು. ಆಸ್ಕರ್‌ ಸೇರಿದಂತೆ ಹಲವಾರು ಪ್ರಶಸ್ತಿಗಳೂ ಬಂದವು.

ಒಂದು ಆಸಕ್ತಿದಾಯಕ ಸಂಗತಿಯೆಂದರೆ ಈ ಸಿನಿಮಾಕ್ಕೆ ಬರೀ ನಾಯಕರನ್ನಷ್ಟೇ ಆಯ್ಕೆ ಮಾಡಿರಲಿಲ್ಲ, ನಿರ್ದೇಶಕರನ್ನೂ ಸಹ. ಅವರ್‌ ಬಿಟ್‌ ಇವರ್‌ ಬಿಟ್‌ ಮತ್ತೂಬ್ಬರು ಬೇಕು ಎಂದು ಹುಡುಕಿ ಹುಡುಕಿ ಕೊನೆಗೇ ಪೀಟರ್‌ ವೇರ್‌ಅನ್ನು ಆಯ್ಕೆ ಮಾಡಲಾಯಿತು. ನಿರ್ದೇಶಕ ತನ್ನ ನಿರೂಪಣೆ ಶೈಲಿಗೆ ಚಿತ್ರಕಥೆಯನ್ನೂ ಬದಲಿಸಿಕೊಂಡರು. ಹಾಗಾಗಿ ಅದು ಸೈಕಲಾಜಿಕಲ್‌ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿತು. ಬಿಗ್‌ ಬಾಸ್‌ ಕ್ಕಿಂತ ಮೊದಲು ಇದನ್ನು ನೋಡಿ.

-ಅಪ್ರಮೇಯ

ಟಾಪ್ ನ್ಯೂಸ್

Dr.Sudhakar

Lokasabha: ಚಿಕ್ಕಬಳ್ಳಾಪುರದಲ್ಲಿ ರಾಷ್ಟ್ರೀಯ ಪುಷ್ಪ ಮಂಡಳಿ; ಡಾ.ಕೆ.ಸುಧಾಕರ್‌ ಪ್ರಸ್ತಾಪ

Bhovi Community ಜು. 20ಕ್ಕೆ ದೀಕ್ಷಾ ರಜತ ಮಹೋತ್ಸವ: ಲಿಂಬಾವಳಿ

Bhovi Community ಜು. 20ಕ್ಕೆ ದೀಕ್ಷಾ ರಜತ ಮಹೋತ್ಸವ: ಲಿಂಬಾವಳಿ

Congress ಸ್ಥಾನಮಾನ ಬೇಕಿದ್ರೆ ವರಿಷ್ಠರ ಬಳಿ ಕೇಳಬೇಕು: ರಾಜಣ್ಣಗೆ ಕೃಷ್ಣ ಬೈರೇಗೌಡ ತಿರುಗೇಟು

Congress ಸ್ಥಾನಮಾನ ಬೇಕಿದ್ರೆ ವರಿಷ್ಠರ ಬಳಿ ಕೇಳಬೇಕು: ರಾಜಣ್ಣಗೆ ಕೃಷ್ಣ ಬೈರೇಗೌಡ ತಿರುಗೇಟು

DK Shivakumar ಚೇರ್‌ ಖಾಲಿ ಇರುವುದಕ್ಕೆ ನಾನು ಬಂದು ಕೂತಿದ್ದೇನೆ

DK Shivakumar ಚೇರ್‌ ಖಾಲಿ ಇರುವುದಕ್ಕೆ ನಾನು ಬಂದು ಕೂತಿದ್ದೇನೆ

HD Revanna ಒಂದು ತಿಂಗಳಿಂದ ದೇವೇಗೌಡರು ನೋವಿನಲ್ಲೇ ಇದ್ದಾರೆ

HD Revanna ಒಂದು ತಿಂಗಳಿಂದ ದೇವೇಗೌಡರು ನೋವಿನಲ್ಲೇ ಇದ್ದಾರೆ

B. Y. Vijayendra ಹಿಂದೂಗಳ ತೇಜೋವಧೆ ಮಾಡಿರುವ ರಾಹುಲ್‌ ಕ್ಷಮೆ ಕೇಳಲಿ

B. Y. Vijayendra ಹಿಂದೂಗಳ ತೇಜೋವಧೆ ಮಾಡಿರುವ ರಾಹುಲ್‌ ಕ್ಷಮೆ ಕೇಳಲಿ

5-sulya

Crime: ಸುಳ್ಯ ಭಾಗದ ಅಪರಾಧ ಸುದ್ದಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-uv-fusion

Education: ಅಸಮತೋಲನೆ ನಿವಾರಣೆಗೆ ಸಹ ಶಿಕ್ಷಣ ಸರಿಯಾದ ದಾರಿ

13-tn-sitharama

T. N. Seetharam: ಧಾರಾವಾಹಿಗಳಿಗೆ ಹೊಸ ಭಾಷ್ಯ ನೀಡಿದ ನಿರ್ದೇಶಕ ಟಿ.ಎನ್‌. ಸೀತಾರಾಮ

11-uv-fusion

Rajeev Taranath: ಸರೋದ್‌ ಸ್ವರ ಮಾಂತ್ರಿಕನ ಸ್ವರ್ಗಾರೋಹಣ

10-uv-fusion

UV Fusion: ನೈಸರ್ಗಿಕ ಕಾಡು ಪುನರುತ್ಥಾನಕ್ಕೆ ಕೊಡುಗೆ ನೀಡುವ ಉಪ್ಪಳಿಗೆ

10-mosquiotes

Mosquito: ಮಳೆಗಾಲದ ಸೊಳ್ಳೆಗಳು…!

MUST WATCH

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

ಹೊಸ ಸೇರ್ಪಡೆ

Will not believe EVMs says akhilesh yadav

ಉ.ಪ್ರ.ದ 80 ಕ್ಷೇತ್ರ ಗೆದ್ದರೂ EVM ನಂಬಲ್ಲ: ಅಖೀಲೇಶ್‌

Dr.Sudhakar

Lokasabha: ಚಿಕ್ಕಬಳ್ಳಾಪುರದಲ್ಲಿ ರಾಷ್ಟ್ರೀಯ ಪುಷ್ಪ ಮಂಡಳಿ; ಡಾ.ಕೆ.ಸುಧಾಕರ್‌ ಪ್ರಸ್ತಾಪ

Question paper ready 2 hours before NEET-PG exam start?

NEET-PG ಪರೀಕ್ಷೆ ಆರಂಭಕ್ಕಿಂತ 2 ಗಂಟೆ ಮುಂಚೆ ಪ್ರಶ್ನೆಪತ್ರಿಕೆ ಸಿದ್ಧ?

Indian Prime Minister visits Austria after 41 years!

Narendra Modi; 41 ವರ್ಷಗಳ ಬಳಿಕ ಆಸ್ಟ್ರಿಯಾಗೆ ಭಾರತದ ಪ್ರಧಾನಿ ಭೇಟಿ!

Bhovi Community ಜು. 20ಕ್ಕೆ ದೀಕ್ಷಾ ರಜತ ಮಹೋತ್ಸವ: ಲಿಂಬಾವಳಿ

Bhovi Community ಜು. 20ಕ್ಕೆ ದೀಕ್ಷಾ ರಜತ ಮಹೋತ್ಸವ: ಲಿಂಬಾವಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.