![Bhovi Community ಜು. 20ಕ್ಕೆ ದೀಕ್ಷಾ ರಜತ ಮಹೋತ್ಸವ: ಲಿಂಬಾವಳಿ](https://www.udayavani.com/wp-content/uploads/2024/07/Aravinda-Limbavali-415x247.jpg)
ಮರವಂತೆ ಹೊರಬಂದರು: ಕಡಲ ಒಡಲು ಸೇರುತ್ತಿರುವ ತಡೆಗೋಡೆ, ಕೊರೆತವೂ ಶುರು
Team Udayavani, Jun 28, 2024, 4:00 PM IST
![ಮರವಂತೆ ಹೊರಬಂದರು: ಕಡಲ ಒಡಲು ಸೇರುತ್ತಿರುವ ತಡೆಗೋಡೆ, ಕೊರೆತವೂ ಶುರು](https://www.udayavani.com/wp-content/uploads/2024/06/Beauty-1-620x364.jpg)
ಕುಂದಾಪುರ: ಮರವಂತೆಯ ಮೀನುಗಾರಿಕಾ ಹೊರ ಬಂದರಿನ ಒಂದೊಂದೇ ಕಲ್ಲುಗಳು ಕಡಲು ಸೇರುತ್ತಿದೆ. ಅಲೆಗಳ ಅಬ್ಬರ ತಡೆಯಲು ಇಟ್ಟಿದ್ದ ಮರಳಿನ ಚೀಲಗಳು ಸಹ ಸಮುದ್ರಪಾಲಾಗುತ್ತಿದೆ. ಅಬ್ಬರಿಸುತ್ತಿರುವ ಕಡಲಿನ ಹೊಡೆತದಿಂದ ಮೀನುಗಾರಿಕಾ ಬಂದರು ಅಕ್ಷರಶಃ ನಲುಗಿ ಹೋಗಿದೆ.
ಭಾರೀ ತೂಕದ ಟೆಟ್ರಾಫೈಡ್ನಲ್ಲಿ ನಿರ್ಮಿಸಿರುವ ತಡೆಗೋಡೆಯೇ ಅಪಾಯದಲ್ಲಿ ಇದ್ದಂತಿದ್ದು, ಒಂದೊಂದೇ ಸಮುದ್ರದ ಒಡಲು ಸೇರುವಂತಿದೆ. ಕಲ್ಲುಗಳು ಜಾರಿ, ಕಡಲು ಪಾಲಾಗಿವೆ. ಸಮುದ್ರದ ಅಲೆಗಳು ಬಂದರಿನೊಳಗೆ ಬಂದು ಅಪ್ಪಳಿಸುತ್ತಿರುವುದರಿಂದ ಬಂದರು ಪ್ರದೇಶದಲ್ಲಿ ಯಾಂತ್ರೀಕೃತ ನಾಡದೋಣಿ ನಿಲುಗಡೆ ಜಾಗದಲ್ಲಿ ಕೊರೆತ ಆರಂಭಗೊಂಡಿದ್ದು, ದಿನಕಳೆದಂತೆ ತೀವ್ರಗೊಳ್ಳುತ್ತಿದೆ.
ಕಡಲ ಅಲೆಗಳ ಅಬ್ಬರಕ್ಕೆ ಒಳಾಂಗಣದ ಬಹುತೇಕ ಭೂಭಾಗ ಕಡಲು ಸೇರುತ್ತಿದ್ದರೆ, ಬಂದರಿನಲ್ಲಿ ಅಳವಡಿಸಲಾಗಿದ್ದ ಹೈಮಾಸ್ಟ್ ದೀಪದ ಕಂಬಗಳು, ಇಂಟರ್ಲಾಕ್ ಕೂಡ ಕೊಚ್ಚಿ ಹೋಗುವ ಭೀತಿ ಎದುರಾಗಿದೆ. 2013ರಲ್ಲಿ ಆರಂಭಗೊಂಡಿದ್ದ ಕಾಮಗಾರಿ ಈವರೆಗೆ ಪೂರ್ಣಗೊಂಡಿಲ್ಲ. ಸುಮಾರು 55 ಕೋ. ರೂ. ವೆಚ್ಚದ ಕಾಮಗಾರಿಯಲ್ಲಿ ಶೇ.50ರಷ್ಟು ಸಮುದ್ರ ಪಾಲಾಗಿದೆ.
ಬಂದರಿನ ರಕ್ಷಣೆ ಮತ್ತು ವಿನ್ಯಾಸ ಬದಲಾವಣೆಗಾಗಿ ಬಿಡುಗಡೆಯಾದ 85 ಕೋ. ರೂ. ಅನುದಾನದ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ. ಅದಾಗಿ 2 ವರ್ಷ ಕಳೆದಿದೆ. ಇದು ಪೂರ್ಣಗೊಂಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎನ್ನುವುದು ಇಲ್ಲಿನ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರಿಸ್ಥಿತಿ ಹೀಗೆ ಮುಂದುವರಿದಲ್ಲಿ ಔಟ್ಡೋರ್ ಬಂದರು ಇನ್ನಿಲ್ಲದಂತೆ ಮರೆಯಾಗುವ ಸಾಧ್ಯತೆ ಇದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನ ಹರಿಸಿ ಬಂದರಿನ ಸುರಕ್ಷತೆಗೆ ಆದ್ಯತೆ ನೀಡಬೇಕಾಗಿ ಮೀನುಗಾರರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
![Bhovi Community ಜು. 20ಕ್ಕೆ ದೀಕ್ಷಾ ರಜತ ಮಹೋತ್ಸವ: ಲಿಂಬಾವಳಿ](https://www.udayavani.com/wp-content/uploads/2024/07/Aravinda-Limbavali-415x247.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Indian Prime Minister visits Austria after 41 years!](https://www.udayavani.com/wp-content/uploads/2024/07/aust-150x83.jpg)
Narendra Modi; 41 ವರ್ಷಗಳ ಬಳಿಕ ಆಸ್ಟ್ರಿಯಾಗೆ ಭಾರತದ ಪ್ರಧಾನಿ ಭೇಟಿ!
![Bhovi Community ಜು. 20ಕ್ಕೆ ದೀಕ್ಷಾ ರಜತ ಮಹೋತ್ಸವ: ಲಿಂಬಾವಳಿ](https://www.udayavani.com/wp-content/uploads/2024/07/Aravinda-Limbavali-150x89.jpg)
Bhovi Community ಜು. 20ಕ್ಕೆ ದೀಕ್ಷಾ ರಜತ ಮಹೋತ್ಸವ: ಲಿಂಬಾವಳಿ
![SEBI issues show cause notice to Hindenburg](https://www.udayavani.com/wp-content/uploads/2024/07/sebi-1-150x83.jpg)
SEBI; ಅದಾನಿ ವಿರುದ್ಧ ಆರೋಪಿಸಿದ್ದ ಹಿಂಡನ್ಬರ್ಗ್ಗೆ ಸೆಬಿ ಶೋಕಾಸ್ ನೋಟಿಸ್
![6-](https://www.udayavani.com/wp-content/uploads/2024/07/6--150x90.jpg)
Govt ವೈಫಲ್ಯದ ಕುರಿತು ವಿಷಯ ಪ್ರಸ್ತಾಪ; ಸರ್ಕಾರಕ್ಕೆ ಪ್ರತಿಪಕ್ಷದ ಶಾಸಕ ವಿಜಯ್ ಎಚ್ಚರಿಕೆ
![Congress ಸ್ಥಾನಮಾನ ಬೇಕಿದ್ರೆ ವರಿಷ್ಠರ ಬಳಿ ಕೇಳಬೇಕು: ರಾಜಣ್ಣಗೆ ಕೃಷ್ಣ ಬೈರೇಗೌಡ ತಿರುಗೇಟು](https://www.udayavani.com/wp-content/uploads/2024/07/krishna-byre-gowda-150x91.jpg)
Congress ಸ್ಥಾನಮಾನ ಬೇಕಿದ್ರೆ ವರಿಷ್ಠರ ಬಳಿ ಕೇಳಬೇಕು: ರಾಜಣ್ಣಗೆ ಕೃಷ್ಣ ಬೈರೇಗೌಡ ತಿರುಗೇಟು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.