Pen Drive Case: ಪ್ರಜ್ವಲ್ ಧ್ವನಿ ಬದಲಾಯಿಸಲು ಯತ್ನ
Team Udayavani, Jun 29, 2024, 6:45 AM IST
ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿ ಬಂದಿರುವ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ಸಂಬಂಧ ಇತ್ತೀಚೆಗೆ ಅವರನ್ನು ಧ್ವನಿ ಪರೀಕ್ಷೆಗೆ ಒಳಪಡಿಸಿದಾಗ ಕೊಂಚ ಧ್ವನಿ ಬದಲಾಯಿಸಿ ಮಾತನಾಡಲು ಯತ್ನಿಸಿರುವ ಆರೋಪ ಕೇಳಿ ಬಂದಿತ್ತು.
ಹಾಸನದ ಅಶ್ಲೀಲ ಚಿತ್ರವಿರುವ ಪೆನ್ಡ್ರೈವ್ ಕೇಸ್ ಬಗ್ಗೆ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆ ಚುರುಕುಗೊಳಿಸಿದ್ದು ಪ್ರಜ್ವಲ್ ವಿರುದ್ಧ ದಾಖಲಾಗಿರುವ ಸಾಲು-ಸಾಲು ದೂರುಗಳ ಪೈಕಿ ಒಂದೊಂದೇ ಪ್ರಕರಣದ ಸಾಕ್ಷ್ಯ ಕಲೆ ಹಾಕಲಾಗುತ್ತಿದೆ.
ಸಂತ್ರಸ್ತೆಯರಿಬ್ಬರು ಎಸ್ಐಟಿಗೆ ಪ್ರಜ್ವಲ್ ರೇವಣ್ಣ ವಿರುದ್ಧ ಕೊಟ್ಟಿರುವ ಪ್ರತ್ಯೇಕ 2 ಪ್ರಕರಣಗಳಲ್ಲಿ ಇತ್ತೀಚೆಗೆ ಪ್ರಜ್ವಲ್ನನ್ನು ಧ್ವನಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಧ್ವನಿ ಪರೀಕ್ಷೆಯ ವೇಳೆ ಪ್ರಜ್ವಲ್ ರೇವಣ್ಣ ತಮ್ಮ ಧ್ವನಿಯನ್ನು ಕೊಂಚ ಬದಲಾಯಿಸಿ ಮಾತನಾಡಲು ಯತ್ನಿಸಿದ್ದರು ಎನ್ನಲಾಗಿದೆ. ಈ ಮೂಲಕ ತಮ್ಮ ವಿರುದ್ಧ ಎಸ್ಐಟಿಗೆ ಸೂಕ್ತ ಸಾಕ್ಷ್ಯ ಸಿಗಬಾರದೆಂಬ ಉದ್ದೇಶದಿಂದ ಈ ರೀತಿ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಏನಿದು ಧ್ವನಿ ಪರೀಕ್ಷೆ ಸಾಕ್ಷ್ಯ?
ಪ್ರಜ್ವಲ್ ಅವರದ್ದು ಎನ್ನಲಾದ ವೈರಲ್ ಆಗಿರುವ ಅಶ್ಲೀಲ ವೀಡಿಯೋದಲ್ಲಿ ಸಂತ್ರಸ್ತೆಯರ ಜತೆಗೆ ಸಂಭಾಷಣೆ ನಡೆಸಿರುವ ಆಡಿಯೋ ಕೇಳಿ ಬಂದಿದೆ. ಆದರೆ ಸಂತ್ರಸ್ತೆಯರ ಜತೆಗೆ ಇರುವ ವ್ಯಕ್ತಿಯ ಮುಖ ಚಹರೆ ಕಂಡುಬಂದಿಲ್ಲ ಎನ್ನಲಾಗಿದೆ. ಹೀಗಾಗಿ ವೀಡಿಯೋದಲ್ಲಿ ಕೇಳಿ ಬಂದಿರುವ ಆಡಿಯೋ ಪ್ರಜ್ವಲ್ ರೇವಣ್ಣ ಅವರದ್ದೇ ಎಂಬುದನ್ನು ಸಾಕ್ಷ್ಯ ಸಮೇತ ಸಾಬೀತು ಪಡಿಸುವ ಉದ್ದೇಶದಿಂದ ಅವರನ್ನು ಧ್ವನಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಎರಡೂ ಧ್ವನಿಗಳು ಹೋಲಿಕೆಯಾದರೆ ವೀಡಿಯೋದಲ್ಲಿರುವುದು ಪ್ರಜ್ವಲ್ ರೇವಣ್ಣ ಎಂಬುದಕ್ಕೆ ಬಲವಾದ ತಾಂತ್ರಿಕ ಸಾಕ್ಷ್ಯ ಸಿಕ್ಕಂತಾಗುತ್ತದೆ. ಇದೀಗ ಧ್ವನಿ ಪರೀಕ್ಷೆಯ ವರದಿಗಾಗಿ ಎಸ್ಐಟಿ ತಂಡ ಕಾದು ಕುಳಿತಿದೆ.
ಇಂದು ಪ್ರಜ್ವಲ್ ಕಸ್ಟಡಿ ಅಂತ್ಯ
ಪ್ರಜ್ವಲ್ ರೇವಣ್ಣ ವಶಕ್ಕೆ ಪಡೆದ ಅವಧಿಯು ಶನಿವಾರ ಅಂತ್ಯಗೊಳ್ಳಲಿದ್ದು ಎಸ್ಐಟಿ ಅಧಿಕಾರಿಗಳು ಜೂ. 29ರಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಗಳಿವೆ. ಕೋರ್ಟ್ ಪ್ರಜ್ವಲ್ನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದರೆ ಪ್ರಜ್ವಲ್ಗೆ ಇನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕಂಬಿ ಎಣಿಸಬೇಕಾಗಿದೆ. ನ್ಯಾಯಾಲಯದಲ್ಲಿ ಈ ಹಿಂದೆ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿರುವ ಹಿನ್ನೆಲೆಯಲ್ಲಿ ಸದ್ಯ ಜೈಲಿನಿಂದ ಹೊರ ಬರುವುದೇ ಅನುಮಾನ ಎನ್ನಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Private Hospital ಡೆಂಗ್ಯೂ ಪರೀಕ್ಷೆಗೆ ಶುಲ್ಕ ನಿಗದಿ: ಸಚಿವ ದಿನೇಶ್
ಡಿಕೆಶಿ ಕಾಂಗ್ರೆಸ್ಗೆ ಕಾಲಿಡುವ ಮೊದಲೇ ನೋಟಿಸ್, ಉಚ್ಚಾಟನೆ ಎಲ್ಲಾ ನೋಡಿದ್ದೀನಿ…; ರಾಜಣ್ಣ
CM Siddaramaiah ರೈತರಿಗೆ ನಿತ್ಯ 5 ಕೋಟಿ ರೂ. ಪ್ರೋತ್ಸಾಹ ಧನ
KMF ಹಾಲಿನ ಹೊಳೆ: ನಿತ್ಯ 1 ಕೋಟಿ ಲೀಟರ್!-ಕೆಎಂಎಫ್ ಇತಿಹಾಸದಲ್ಲೇ ದಾಖಲೆ ಕ್ಷೀರ ಸರಬರಾಜು
MLC ಮೇಲ್ಮನೆಗೆ ಬಸವನಗೌಡ ಬಾದರ್ಲಿ ಏಕೈಕ ಸ್ಪರ್ಧಿ: ನಾಡಿದ್ದು ಅವಿರೋಧ ಆಯ್ಕೆ ಘೋಷಣೆ
MUST WATCH
ಹೊಸ ಸೇರ್ಪಡೆ
Private Hospital ಡೆಂಗ್ಯೂ ಪರೀಕ್ಷೆಗೆ ಶುಲ್ಕ ನಿಗದಿ: ಸಚಿವ ದಿನೇಶ್
Byndoor ತುಂಬಿದ ಹೊಳೆ ಮಧ್ಯೆ ಮಕ್ಕಳನ್ನು ಹೊತ್ತೊಯ್ಯುವ ನಿತ್ಯದ ಕಸರತ್ತು
ಡಿಕೆಶಿ ಕಾಂಗ್ರೆಸ್ಗೆ ಕಾಲಿಡುವ ಮೊದಲೇ ನೋಟಿಸ್, ಉಚ್ಚಾಟನೆ ಎಲ್ಲಾ ನೋಡಿದ್ದೀನಿ…; ರಾಜಣ್ಣ
Lok Sabha; ರಾಹುಲ್ ರೀತಿ ವರ್ತಿಸಬೇಡಿ, ಸತ್ಯ ಸಂಗತಿ ಮೂಲಕ ಉತ್ತರಿಸಿ: ಮೋದಿ
T20 Cricket; 2026ರ ಟಿ20 ವಿಶ್ವಕಪ್ ತನಕ ಭಾರತ ಆಡಲಿದೆ 34 ಪಂದ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.