Mangaluru ಅಧಿಕ ಬಡ್ಡಿದರ ಆಮಿಷವೊಡ್ಡಿ ವಂಚನೆ
Team Udayavani, Jun 28, 2024, 11:59 PM IST
ಮಂಗಳೂರು: ಅಧಿಕ ಬಡ್ಡಿದರ ನೀಡುವುದಾಗಿ ಹೇಳಿ ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿನೋದ ಶೆರ್ಲೆಕರ್ ಎಂ.ಜಿ. ರಸ್ತೆಯ ಎಸ್ಸೆಲ್ ಸೆಂಟರ್ನ 3ನೇ ಮಹಡಿಯಲ್ಲಿರುವ ಫ್ರಂಟ್ ಲೈನ್ ಮಲ್ಟಿಪರ್ಪಸ್ ಕೋ-ಅಪರೇಟಿವ್ ಸೊಸೈಟಿಯಲ್ಲಿ ಹಣವನ್ನು ನಿಶ್ಚಿತ ಠೇವಣಿ (ಡೆಪಾಸಿಟ್) ಮಾಡಿದರೆ ವಾರ್ಷಿಕ ಶೇ 11.50 ಬಡ್ಡಿದರ ನೀಡುವುದಾಗಿ ಹೇಳಿದ್ದ. ಅದರಂತೆ ದೂರುದಾರರು 2018ರ ಡಿ. 31ರಂದು 3 ಲ.ರೂ.ಗಳನ್ನು ಎಫ್ಡಿ ಹಾಗೂ 5 ಲ.ರೂ.ಗಳನ್ನು ನಿಶ್ಚಿತ ಠೇವಣಿ ಮಾಡಿದ್ದರು. ಕೆಲವು ವರ್ಷಗಳ ಅನಂತರ ಹಣವು ಮೆಚ್ಯುರಿಟಿಗೆ ಬಂದಾಗ ಸೊಸೈಟಿಗೆ ಹೋಗಿ ಹಣವನ್ನು ಕೇಳಿದಾಗ ಮುಂದಕ್ಕೆ ಕೊಡುವುದಾಗಿ ಹೇಳಿ ಕಳುಹಿಸಿದ್ದಾನೆ.
ಅನಂತರ 2023ರ ಫೆಬ್ರವರಿಯಲ್ಲಿ ಹಣವನ್ನು ಕೊಡುವಂತೆ ಕೇಳಿದಾಗ 3 ಖಾಲಿ ಚೆಕ್ಗಳನ್ನು ನೀಡಿದ್ದ. ಅವುಗಳನ್ನು ಬ್ಯಾಂಕ್ಗೆ ಹಾಕದಂತೆ ಅವರಲ್ಲಿ ಕೇಳಿಕೊಂಡು ಹಣವನ್ನು ಕೊಡುವುದಾಗಿ ಹೇಳಿ ನಂಬಿಸಿದ್ದ. ಆದರೆ ಅನಂತರವೂ ಹಣವನ್ನು ನೀಡದೆ ಮೋಸ ಮಾಡಿದ್ದಾನೆ. ಆರೋಪಿ ಸುಳ್ಳು ಸೊಸೈಟಿಯನ್ನು ತೆರೆದು ದಾಖಲೆಗಳನ್ನು ತಯಾರಿಸಿ ನಕಲಿ ಸಹಿಗಳನ್ನು ಮಾಡಿ ಹಲವರಿಗೆ ಮೋಸ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.