![Road](https://www.udayavani.com/wp-content/uploads/2024/07/Road-415x234.jpg)
Subrahmanya: ಕುಮಾರ ಧಾರೆಯಲ್ಲಿ ನೀರಿನ ಮಟ್ಟ ಇಳಿಕೆ
Team Udayavani, Jun 29, 2024, 12:39 AM IST
![Subrahmanya: ಕುಮಾರ ಧಾರೆಯಲ್ಲಿ ನೀರಿನ ಮಟ್ಟ ಇಳಿಕೆ](https://www.udayavani.com/wp-content/uploads/2024/06/sub-3-620x429.jpg)
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಶುಕ್ರವಾರ ಮಳೆ ಬಿಡುವು ನೀಡಿದ್ದು, ಸಂಜೆಯವರೆಗೂ ಬಿಸಿಲ ವಾತಾವರಣ ಕಂಡುಬಂದಿತ್ತು. ಇದರಿಂದ ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಇಳಿಕೆಯಾಗಿದೆ.
ನಿರಂತರ ಮಳೆಗೆ ಗುರುವಾರ ಬೆಳಗ್ಗಿನಿಂದಲೇ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ಇಲ್ಲಿನ ಕಿಂಡಿ ಅಣೆಕಟ್ಟು, ಸ್ನಾನ ಘಟ್ಟ ಮುಳುಗಡೆ ಯಾಗಿತ್ತು. ಸಂಜೆ ವೇಳೆಗೆ ನೀರಿನ ಮಟ್ಟ ಅಲ್ಪ ಇಳಿಕೆ ಕಂಡಿತ್ತು. ಶುಕ್ರವಾರ ಮಳೆ ಬಿಡುವು ನೀಡಿದ್ದರಿಂದ ನೀರಿನ ಮಟ್ಟ ಇಳಿಕೆ ಕಂಡಿದೆ.
ನೀರಿಗಿಳಿಯಲು ನಿರ್ಬಂಧ
ಸ್ನಾನ ಘಟ್ಟ ಮುಳುಗಡೆ ತೆರವುಗೊಂಡಿದ್ದರೂ ಜಿಲ್ಲಾಧಿಕಾರಿ ಅವರ ಸೂಚನೆಯಂತೆ ಭಕ್ತರು ನದಿಗೆ ಇಳಿಯುವುದನ್ನು ನಿರ್ಬಂಧಿಸ ಲಾಗಿದೆ. ಇಲ್ಲಿ ದೇಗುಲದ ಸಿಬಂದಿ ಹಾಗೂ ಗೃಹ ರಕ್ಷಕ ದಳದ ಸಿಬಂದಿ ನಿಯೋಜಿಸಲಾಗಿದೆ.
ಟಾಪ್ ನ್ಯೂಸ್
![Road](https://www.udayavani.com/wp-content/uploads/2024/07/Road-415x234.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.