Desi Swara: ಏನೂ ಇಲ್ಲದೆಯೂ ಸಂತೋಷವಾಗಿರಿ!

ಏನೇನು ಮಾಡಿದರೂ ಅದೊಂದು ಮಾತ್ರ ಅವನ ಬಳಿ ಬರುತ್ತಲೇ ಇರಲಿಲ್ಲ

Team Udayavani, Jun 29, 2024, 2:20 PM IST

Desi Swara: ಏನೂ ಇಲ್ಲದೆಯೂ ಸಂತೋಷವಾಗಿರಿ!

ಬುದ್ಧ ಮತ್ತು ಕಿಸಾಗೌತಮಿಯ ಕಥೆಯನ್ನು ನೀವು ಕೇಳಿರಬಹುದು, ಓದಿರಬಹುದು. ಪರಿಪೂರ್ಣ ಸುಖ, ಸಂತೋಷ ಎಂಬುದು ಯಾರಿಗೂ ಇಲ್ಲ ಎಂಬುದು ಅದು ತಿಳಿಸಿಕೊಡುವ ಸತ್ಯ. ನಾವು ಮರ್ತ್ಯರು. ಅಂದರೆ ಮರಣವನ್ನು ನಮ್ಮ ಬೆನ್ನಲ್ಲೇ ಕಟ್ಟಿಕೊಂಡವರು. ಸಾವು ಮತ್ತು ಬದುಕು ಒಂದೇ ನಾಣ್ಯದ ಎರಡು ಮುಖಗಳು ಕೂಡ ಅಲ್ಲ; ಒಂದರ ಬದಿಯಲ್ಲಿ ಇನ್ನೊಂದು. ಸುಖ-ದುಃಖ, ಸಂತೋಷ ಮತ್ತು ಬೇಸರ ಕೂಡ ಹೀಗೆಯೇ. ಒಂದರ ಪಕ್ಕದಲ್ಲಿ ಇನ್ನೊಂದು ಇರುತ್ತವೆ. ಯಾವುದಕ್ಕೂ ಬಗ್ಗಬಾರದು, ಬೆದರಬಾರದು. ಜೀವನ ಮುಂದುವರಿಯ ಬೇಕು, ಮುಂದುವರಿಯುತ್ತದೆ ಅಷ್ಟೇ.

ಇದು ಆಫ್ರಿಕ ದೇಶದ ಒಂದು ಕಥೆ. ಸಾವಿರಾರು ವರ್ಷಗಳ ಹಿಂದೆ ಉತ್ತರ ಆಫ್ರಿಕದ ಒಂದು ಊರಿನಲ್ಲಿ ಶ್ರೀಮಂತನೊಬ್ಬ ಇದ್ದನಂತೆ. ಹಲವು ಹೆಂಡತಿಯರು, ಮಕ್ಕಳು, ಮರಿಗಳಿಂದ ತುಂಬಿದ ದೊಡ್ಡ ಸಂಸಾರ, ಭಾರೀ ದೊಡ್ಡದಾದ ಮನೆ, ಬೇಕಾದಷ್ಟು ಆಳುಕಾಳುಗಳು ಎಲ್ಲವೂ ಇದ್ದ ಸಿರಿವಂತ ಅವನು. ಇಷ್ಟೆಲ್ಲ ಇದ್ದರೂ ಸಂತೋಷ ಎಂಬುದು ಅವನ ಹತ್ತಿರ ಸುಳಿಯುತ್ತಿರಲಿಲ್ಲ. ಯಾವಾಗ ನೋಡಿದರೂ ಉಗ್ರ ಮುಖ, ಕೆಂಪು ಸಿಡಿಯುವ ಕಣ್ಣುಗಳು, ಸದಾ ಸಿಡುಕು. ನಿಜಕ್ಕಾದರೆ ಅವನು ಸುಖ-ಸಂತೋಷಗಳಿಂದ ಇರಬೇಕಿತ್ತು. ಆದರೆ ಹಾಗಿರಲಿಲ್ಲ.

ತನ್ನ ಈ ಪರಿಸ್ಥಿತಿಯ ಬಗ್ಗೆ ಸ್ವತಃ ಶ್ರೀಮಂತನಿಗೂ ಅರಿವಿತ್ತು. ಖುಷಿಯಾಗಿರಬೇಕು ಎಂದು ಹಂಬಲಿಸುತ್ತಿದ್ದ. ಆದರೆ ಅದಾಗುತ್ತಲೇ ಇರಲಿಲ್ಲ. ಏನೇನು ಮಾಡಿದರೂ ಅದೊಂದು ಮಾತ್ರ ಅವನ ಬಳಿ ಬರುತ್ತಲೇ ಇರಲಿಲ್ಲ. ಒಂದು ಬಾರಿ ಆತ ತನಗೆ ಆಪ್ತರಾದ ಕೆಲವು ಸೇವಕರನ್ನು ಕರೆದು ಖುಷಿ ಕೊಡಬಲ್ಲ ಕೆಲವು ವಿಧಾನಗಳ ಸಲಹೆ ಕೇಳಿದ. ಅದಕ್ಕೆ ಒಬ್ಬ, “ಒಡೆಯಾ, ಆಕಾಶವನ್ನು ನೋಡಿ. ಅಲ್ಲಿರುವ ಸೂರ್ಯ, ಚಂದ್ರ, ನಕ್ಷತ್ರಗಳನ್ನು ವೀಕ್ಷಿಸಿ. ಇದರಿಂದ ನಿಮಗೆ ಖುಷಿಯಾಗಬಹುದು’ ಎಂದ.

ಶ್ರೀಮಂತನಿಗೆ ಸಂತೋಷವಾಗುವ ಬದಲು ಸಿಟ್ಟು ಬಂತು. “ಆಗಸ ನೋಡಿದರೆ ಸಂತೋಷವಾಗುವುದು ಹೇಗೆ? ಅಲ್ಲಿರುವ ನಕ್ಷತ್ರಗಳು ಕೈಗೆಟಕುವುದಿಲ್ಲವಲ್ಲ ಎಂದು ದುಃಖವಾಗುತ್ತದೆ’ ಎಂದನಾತ. ಇನ್ನೊಬ್ಬ ಸೇವಕ, “ಸಂಗೀತ ಕೇಳಿದರೆ ಹೇಗೆ?’ ಎಂದ. ಈಗ ಶ್ರೀಮಂತನಿಗೆ ಸಿಟ್ಟೇ ಬಂತು. “ಇಡೀ ದಿನ ಸಂಗೀತ ಕೇಳುತ್ತ ಇರುವುದಕ್ಕಾಗುತ್ತದೆಯೇ’ ಎಂದು ಗರ್ಜಿಸಿದ. ಸೇವಕರೆಲ್ಲರೂ ಬಾಯಿ ಮುಚ್ಚಿಕೊಂಡು ಹೊರಟು ಹೋದರು. ಸ್ವಲ್ಪ ಹೊತ್ತು ಕಳೆದ ಮೇಲೆ ಇನ್ನೊಬ್ಬ ಸೇವಕ ಮೆಲ್ಲನೆ ಸಿರಿವಂತನ ಬಳಿಗೆ ಬಂದು, “ಒಡೆಯಾ, ಒಂದು ಉಪಾಯವಿದೆ.

ಈ ಪ್ರಾಂತದಲ್ಲಿ ಅತ್ಯಂತ ಸಂತೋಷವಾಗಿರುವ ಮನುಷ್ಯನನ್ನು ಹುಡುಕಬೇಕು. ಅವನನ್ನು ಕರೆತಂದು ಅವನ ಅಂಗಿಯನ್ನು ನೀವು ಧರಿಸಿದರೆ ಅವನ ಸಂತೋಷವೂ ನಿಮ್ಮದಾಗುತ್ತದೆ’ ಎಂದು ಹೊಸ ಉಪಾಯ ಸೂಚಿಸಿದ. ಸಿರಿವಂತನಿಗೆ ಇದಾಗಬಹುದು ಎನ್ನಿಸಿತು. ಸೇವಕರನ್ನು ಕರೆದು ಅತೀವ ಸಂತೋಷದಿಂದಿರುವ ಮನುಷ್ಯನನ್ನು ಹುಡುಕಿ ಕರೆತರುವಂತೆ ಹೇಳಿದ. ಸೇವಕರು ಹಲವು ದಿನಗಳ ಕಾಲ ಊರೂರು ಸುತ್ತಿದರೂ ಸಂತುಷ್ಟ ಮನುಷ್ಯ ಸಿಗಲೇ ಇಲ್ಲ.

ಕೊನೆಗೆ ಒಂದು ಸಣ್ಣ ಹಳ್ಳಿಯಲ್ಲಿ ಒಬ್ಬ ಖುಷಿ ಖುಷಿ ವ್ಯಕ್ತಿ ಅವರ ಕಣ್ಣಿಗೆ ಬಿದ್ದ. ಆತ ಸದಾ ನಗು ನಗುತ್ತ ಹಾಡು ಹೇಳುತ್ತ ಇದ್ದ. ಸೇವಕರು ಅವನನ್ನು ಸಿರಿವಂತನ ಅರಮನೆಗೆ ಕರೆತಂದರು. ಅದಾಗಲೇ ಸುದ್ದಿ ತಿಳಿದಿದ್ದ ಸಿರಿವಂತ ತನ್ನ ವಿಲಾಸಿ ಕೊಠಡಿಯಲ್ಲಿ ಅಂಗಿ ಬಿಚ್ಚಿಕೊಂಡು ಕುಳಿತಿದ್ದ. ಇನ್ನಾದರೂ ಖುಷಿಯಾಗಿರಬಹುದು ಎಂದುಕೊಂಡ ಶ್ರೀಮಂತ, “ಬಾರಯ್ಯ’ ಎಂದು ಸ್ವಾಗತಿಸಿದ. ಕಪ್ಪನೆಯ, ಕುಳ್ಳು ಬಡವನೊಬ್ಬ ಮೆಲ್ಲನೆ ಸಿರಿವಂತನ ಕೊಠಡಿಯೊಳಕ್ಕೆ ಹೊಕ್ಕ. ಆ ಅತ್ಯಂತ ಸುಖೀ ಮನುಷ್ಯನಿಗೆ ಅಂಗಿಯೇ ಇರಲಿಲ್ಲ.!

ಟಾಪ್ ನ್ಯೂಸ್

Salaar 2: ಪ್ರಶಾಂತ್‌ ನೀಲ್‌ – ಪ್ರಭಾಸ್‌ ʼಸಲಾರ್-2‌ʼ ಸೆಟ್ಟೇರಲು ಡೇಟ್‌ ಫಿಕ್ಸ್

Salaar 2: ಪ್ರಶಾಂತ್‌ ನೀಲ್‌ – ಪ್ರಭಾಸ್‌ ʼಸಲಾರ್-2‌ʼ ಸೆಟ್ಟೇರಲು ಡೇಟ್‌ ಫಿಕ್ಸ್

3-chikkamagaluru

ಮಹಿಳೆಯರೊಂದಿಗೆ ಅಸಭ್ಯ ವರ್ತನೆ; ವ್ಯಕ್ತಿಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

Bridges collapse: ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿತ… 15 ದಿನದಲ್ಲಿ 7ನೇ ಪ್ರಕರಣ

Bridges Collapse: ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿತ… 15 ದಿನದಲ್ಲಿ 7ನೇ ಪ್ರಕರಣ

Bollywood: 8 ವರ್ಷದ ಬಳಿಕ ಬಾಲಿವುಡ್‌ಗೆ ಪಾಕ್‌ ನಟ‌ ಫವಾದ್‌ ಖಾನ್ ಕಂಬ್ಯಾಕ್

Bollywood: 8 ವರ್ಷದ ಬಳಿಕ ಬಾಲಿವುಡ್‌ಗೆ ಪಾಕ್‌ ನಟ‌ ಫವಾದ್‌ ಖಾನ್ ಕಂಬ್ಯಾಕ್

ICC T20I Rankings: ವಿಶ್ವಕಪ್‌ನಲ್ಲಿ ಶ್ರೇಷ್ಠ ಸಾಧನೆ; ನಂ.1 ಆಲ್ ರೌಂಡರ್ ಆದ ಪಾಂಡ್ಯ

ICC T20I Rankings: ವಿಶ್ವಕಪ್‌ನಲ್ಲಿ ಶ್ರೇಷ್ಠ ಸಾಧನೆ; ನಂ.1 ಆಲ್ ರೌಂಡರ್ ಆದ ಪಾಂಡ್ಯ

Chamarajanagar ನೂತನ ಎಸ್ಪಿ ಯಾಗಿ ಡಾ.ಬಿ.ಟಿ.ಕವಿತಾ ಅಧಿಕಾರ ಸ್ವೀಕಾರ

Chamarajanagar ನೂತನ ಎಸ್ಪಿ ಯಾಗಿ ಡಾ.ಬಿ.ಟಿ.ಕವಿತಾ ಅಧಿಕಾರ ಸ್ವೀಕಾರ

1-sadsdadsads

Bihar DCM ಶಪಥ ಪೂರ್ಣ; ಅಯೋಧ್ಯೆ ರಾಮನಿಗೆ ಪೇಟ ಅರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

UAE ರಾಸ್‌ ಅಲ್‌ ಖೈಮಾ-ಪ್ರತಿಭಾನ್ವೇಷಣೆ ಸ್ಪರ್ಧೆ: ಮಿಂಚಿದ ಪ್ರತಿಭೆಗಳು

UAE ರಾಸ್‌ ಅಲ್‌ ಖೈಮಾ-ಪ್ರತಿಭಾನ್ವೇಷಣೆ ಸ್ಪರ್ಧೆ: ಮಿಂಚಿದ ಪ್ರತಿಭೆಗಳು

Desi Swara: ವೀರಶೈವವು ಬಸವಪೂರ್ವ ಯುಗದ ಸನಾತನ ಧರ್ಮ

Desi Swara: ವೀರಶೈವವು ಬಸವಪೂರ್ವ ಯುಗದ ಸನಾತನ ಧರ್ಮ

Desi Swara: ಗಾದೆ ಮಾತು ಹೇಳಿದರೆ ಕೇಳಬೇಕಮ್ಮಾ…

Desi Swara: ಗಾದೆ ಮಾತು ಹೇಳಿದರೆ ಕೇಳಬೇಕಮ್ಮಾ…

Desi Swara: ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂಭ್ರಮ

Desi Swara: ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂಭ್ರಮ

Desi Swara-ಕತಾರ್‌; ಪರಿಸರ ದಿನಾಚರಣೆ: ಭಾಷಣ ಸ್ಪರ್ಧೆ

Desi Swara-ಕತಾರ್‌; ಪರಿಸರ ದಿನಾಚರಣೆ: ಭಾಷಣ ಸ್ಪರ್ಧೆ

MUST WATCH

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

ಹೊಸ ಸೇರ್ಪಡೆ

Salaar 2: ಪ್ರಶಾಂತ್‌ ನೀಲ್‌ – ಪ್ರಭಾಸ್‌ ʼಸಲಾರ್-2‌ʼ ಸೆಟ್ಟೇರಲು ಡೇಟ್‌ ಫಿಕ್ಸ್

Salaar 2: ಪ್ರಶಾಂತ್‌ ನೀಲ್‌ – ಪ್ರಭಾಸ್‌ ʼಸಲಾರ್-2‌ʼ ಸೆಟ್ಟೇರಲು ಡೇಟ್‌ ಫಿಕ್ಸ್

3-chikkamagaluru

ಮಹಿಳೆಯರೊಂದಿಗೆ ಅಸಭ್ಯ ವರ್ತನೆ; ವ್ಯಕ್ತಿಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

Bridges collapse: ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿತ… 15 ದಿನದಲ್ಲಿ 7ನೇ ಪ್ರಕರಣ

Bridges Collapse: ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿತ… 15 ದಿನದಲ್ಲಿ 7ನೇ ಪ್ರಕರಣ

Bollywood: 8 ವರ್ಷದ ಬಳಿಕ ಬಾಲಿವುಡ್‌ಗೆ ಪಾಕ್‌ ನಟ‌ ಫವಾದ್‌ ಖಾನ್ ಕಂಬ್ಯಾಕ್

Bollywood: 8 ವರ್ಷದ ಬಳಿಕ ಬಾಲಿವುಡ್‌ಗೆ ಪಾಕ್‌ ನಟ‌ ಫವಾದ್‌ ಖಾನ್ ಕಂಬ್ಯಾಕ್

2-dandeli

Dandeli: ಅರಣ್ಯ ಪ್ರದೇಶದಲ್ಲಿ ಆನೆ ದಾಳಿ : ಓರ್ವನಿಗೆ ಗಾಯ, ಚಿಕಿತ್ಸೆಗೆ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.