Operation Azm-i-Istehkam; ಅಮೆರಿಕದ ಬಳಿ ಸಣ್ಣ ಶಸ್ತ್ರಾಸ್ತ್ರಗಳನ್ನು ಕೇಳಿದ ಪಾಕಿಸ್ಥಾನ


Team Udayavani, Jun 29, 2024, 5:34 PM IST

1-Pak

ಇಸ್ಲಾಮಾಬಾದ್: ಪಾಕಿಸ್ಥಾನವು ಹೊಸದಾಗಿ ಅನುಮೋದಿಸಲಾದ ಉಗ್ರ ನಿಗ್ರಹ ಉಪಕ್ರಮ ‘ಆಪರೇಷನ್ ಅಜ್ಮ್-ಇ-ಇಸ್ತೇಕಾಮ್‌’ ನ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಸಣ್ಣ ಶಸ್ತ್ರಾಸ್ತ್ರಗಳು ಮತ್ತು ಆಧುನಿಕ ಉಪಕರಣಗಳನ್ನು ಒದಗಿಸುವಂತೆ ಪಾಕಿಸ್ಥಾನದ ರಾಯಭಾರಿ ಅಮೆರಿಕಕ್ಕೆ ಒತ್ತಾಯಿಸಿದ್ದಾರೆ.

ಪಾಕಿಸ್ಥಾನದಿಂದ ಉಗ್ರವಾದವನ್ನು ತೊಡೆದುಹಾಕುವ ಸಲುವಾಗಿ 2014 ರಲ್ಲಿ ಅನುಮೋದಿಸಲಾದ ರಾಷ್ಟ್ರೀಯ ಕ್ರಿಯಾ ಯೋಜನೆಯ ಅಪೆಕ್ಸ್ ಕಮಿಟಿ ಸಭೆಯಲ್ಲಿ ಜೂನ್ 22 ರಂದು ‘ಅಜ್ಮ್-ಎ-ಇಸ್ತೇಕಾಮ್’ ಕಾರ್ಯಾಚರಣೆಯನ್ನು ಪ್ರಾರಂಭಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಪಾಕಿಸ್ಥಾನ ಸರಕಾರವು ಇತ್ತೀಚೆಗೆ ಪುನಶ್ಚೇತನಗೊಂಡ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಅಭಿಯಾನವನ್ನು ಅನುಮೋದಿಸಿದೆ. ಉಗ್ರ ಜಾಲಗಳನ್ನು ವಿರೋಧಿಸಲು ಮತ್ತು ತೊಡೆದುಹಾಕಲು ಪಾಕಿಸ್ಥಾನವು ಅಜ್ಮ್-ಇ-ಇಸ್ತೇಕಾಮ್ ಕಾರ್ಯಾಚರಣೆ ಪ್ರಾರಂಭಿಸಿದ್ದು, ನಮಗೆ ಅತ್ಯಾಧುನಿಕ ಸಣ್ಣ ಶಸ್ತ್ರಾಸ್ತ್ರಗಳು ಮತ್ತು ಸಂವಹನ ಉಪಕರಣಗಳು ಬೇಕು ಎಂದು ರಾಯಭಾರಿ ಮಸೂದ್ ಖಾನ್ ಹೇಳಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.

ಈ ವಾರದ ಆರಂಭದಲ್ಲಿ ವಾಷಿಂಗ್ಟನ್ ಥಿಂಕ್ ಟ್ಯಾಂಕ್, ವಿಲ್ಸನ್ ಸೆಂಟರ್‌ನಲ್ಲಿ ಯುಎಸ್ ನೀತಿ ನಿರೂಪಕರು, ವಿದ್ವಾಂಸರು, ಬುದ್ಧಿಜೀವಿಗಳು ಮತ್ತು ಕಾರ್ಪೊರೇಟ್ ನಾಯಕರನ್ನು ಉದ್ದೇಶಿಸಿ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.

‘ಅಜ್ಮ್-ಇ-ಇಸ್ತೇಕಾಮ್’ ಮೂರು ಅಂಶಗಳನ್ನು ಒಳಗೊಂಡಿದ್ದು, ಸೈದ್ಧಾಂತಿಕ, ಸಾಮಾಜಿಕ ಮತ್ತು ಕಾರ್ಯಾಚರಣೆ. ಈಗಾಗಲೇ ಮೊದಲ ಎರಡು ಹಂತಗಳ ಕಾಮಗಾರಿ ಆರಂಭವಾಗಿದ್ದು, ಮೂರನೇ ಹಂತವನ್ನು ಶೀಘ್ರದಲ್ಲಿಯೇ ಅನುಷ್ಠಾನಗೊಳಿಸಲಾಗುವುದು ಎಂದು ಖಾನ್ ವಿವರಿಸಿದ್ದಾರೆ.

ಅಮೆರಿಕ ವಿದೇಶಾಂಗ ಇಲಾಖೆ ಪಾಕಿಸ್ಥಾನದ ಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಜೂನ್ 26 ರಂದು, ಸ್ಟೇಟ್ ಡಿಪಾರ್ಟ್ಮೆಂಟ್ ನ ವಕ್ತಾರ ಮ್ಯಾಥ್ಯೂ ಮಿಲ್ಲರ್ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವಾಗ “ಉಗ್ರವಾದವನ್ನು ಎದುರಿಸಲು, ಕಾನೂನು ಮತ್ತು ಮಾನವ ಹಕ್ಕುಗಳ ರಕ್ಷಣೆಯನ್ನು ಉತ್ತೇಜಿಸುವ ರೀತಿಯಲ್ಲಿ ಅದರ ನಾಗರಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಾವು ಪಾಕಿಸ್ಥಾನದ ಪ್ರಯತ್ನಗಳನ್ನು ಬೆಂಬಲಿಸುತ್ತೇವೆ” ಎಂದು ಹೇಳಿದ್ದಾರೆ.

“ಪಾಕಿಸ್ಥಾನದ ಜನರು ಉಗ್ರರ ದಾಳಿಯಿಂದ ಅಪಾರವಾಗಿ ನೊಂದಿದ್ದಾರೆ. ಯಾವುದೇ ದೇಶವು ಇಂತಹ ಭಯೋತ್ಪಾದಕ ಕೃತ್ಯಗಳಿಗೆ ಒಳಗಾಗಬಾರದು ಎಂದು ಮ್ಯಾಥ್ಯೂ ಮಿಲ್ಲರ್ ಹೇಳಿದ್ದಾರೆ.

ಟಾಪ್ ನ್ಯೂಸ್

Gangavathi ವಿರೂಪಾಪೂರಗಡ್ಡಿ: ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

Gangavathi ವಿರೂಪಾಪೂರಗಡ್ಡಿ: ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

Yellapur: ಪ್ರವಾಸಿಗರ ಗಮನಕ್ಕೆ; ಸಾತೋಡ್ಡಿ ಜಲಪಾತಕ್ಕೆ ನಿಷೇಧ

Yellapur: ಪ್ರವಾಸಿಗರ ಗಮನಕ್ಕೆ; ಸಾತೋಡ್ಡಿ ಜಲಪಾತಕ್ಕೆ ನಿಷೇಧ

ತೆಪ್ಪದ ದುರಂತ: ಪೊಲೀಸರ ವರ್ತನೆ ನಾಗರಿಕ ಸಮಾಜ ತಲೆ ತಗ್ಗಿಸುವಂಥದ್ದು: ಸಚಿವ ಶಿವಾನಂದ 

ತೆಪ್ಪದ ದುರಂತ: ಪೊಲೀಸರ ವರ್ತನೆ ನಾಗರಿಕ ಸಮಾಜ ತಲೆ ತಗ್ಗಿಸುವಂಥದ್ದು: ಸಚಿವ ಶಿವಾನಂದ 

Sagara ರಸ್ತೆ ಪಕ್ಕದಲ್ಲಿಯೇ ಶಾಲಾ ಬಸ್‌ಗಳ ನಿಲುಗಡೆ

Sagara ರಸ್ತೆ ಪಕ್ಕದಲ್ಲಿಯೇ ಶಾಲಾ ಬಸ್‌ಗಳ ನಿಲುಗಡೆ

Team-india

T-20 World Champion: ತವರಿಗೆ ಬರುವ ಟೀಂ ಇಂಡಿಯಾದ ನಾಳೆಯ ಕಾರ್ಯಕ್ರಮವೇನು?

Sagara: ಭೂತನೋಣಿ ಧರೆ ಕುಸಿತ: 3 ಗಂಟೆ ರಾಣೇಬೆನ್ನೂರು – ಬೈಂದೂರು ಹೆದ್ದಾರಿ ಸಂಚಾರ ಬಂದ್

Hosanagara: ಭೂತನೋಣಿ ಬಳಿ ಧರೆ ಕುಸಿತ… 3 ಗಂಟೆ ರಾಣೇಬೆನ್ನೂರು-ಬೈಂದೂರು ಹೆದ್ದಾರಿ ಬಂದ್

Udupi: ಮಿಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ರೆಕ್ಟರ್ ವಂ|ವಲೇರಿಯನ್ ಮೆಂಡೊನ್ಸಾ ನಿಧನ

Udupi: ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ರೆಕ್ಟರ್ ವಂ|ವಲೇರಿಯನ್ ಮೆಂಡೊನ್ಸಾ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadsad

Italy; ಕೈ ತುಂಡಾದ ಭಾರತೀಯ ಕಾರ್ಮಿಕನನ್ನು ರಸ್ತೆಗೆ ಎಸೆದ ಮಾಲಕ ಅರೆಸ್ಟ್

Indian based businessman arrested in 8300 crore scam

8300 ಕೋಟಿ ಹಗರಣದಲ್ಲಿ ಭಾರತ ಮೂಲದ ಉದ್ಯಮಿ ಬಂಧನ

Americaದಲ್ಲಿ ಭಾರತೀಯ ಮೂಲದ ಉದ್ಯಮಿಯ ಬೃಹತ್‌ ವಂಚನೆ, ಹೂಡಿಕೆದಾರರು ಕಂಗಾಲು!

Americaದಲ್ಲಿ ಭಾರತೀಯ ಮೂಲದ ಉದ್ಯಮಿಯ ಬೃಹತ್‌ ವಂಚನೆ, ಹೂಡಿಕೆದಾರರು ಕಂಗಾಲು!

Exam

Australia;ಇನ್ನು ವಿದ್ಯಾರ್ಥಿ ಶುಲ್ಕ ದುಪ್ಪಟ್ಟು: ಭಾರತೀಯರಿಗೂ ಸಂಕಷ್ಟ

arrested

POK ರಾವಲ್‌ಕೋಟ್‌ ಜೈಲಿಂದ 18 ಕೈದಿಗಳು ಪರಾರಿ!

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

Gangavathi ವಿರೂಪಾಪೂರಗಡ್ಡಿ: ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

Gangavathi ವಿರೂಪಾಪೂರಗಡ್ಡಿ: ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

Yellapur: ಪ್ರವಾಸಿಗರ ಗಮನಕ್ಕೆ; ಸಾತೋಡ್ಡಿ ಜಲಪಾತಕ್ಕೆ ನಿಷೇಧ

Yellapur: ಪ್ರವಾಸಿಗರ ಗಮನಕ್ಕೆ; ಸಾತೋಡ್ಡಿ ಜಲಪಾತಕ್ಕೆ ನಿಷೇಧ

ತೆಪ್ಪದ ದುರಂತ: ಪೊಲೀಸರ ವರ್ತನೆ ನಾಗರಿಕ ಸಮಾಜ ತಲೆ ತಗ್ಗಿಸುವಂಥದ್ದು: ಸಚಿವ ಶಿವಾನಂದ 

ತೆಪ್ಪದ ದುರಂತ: ಪೊಲೀಸರ ವರ್ತನೆ ನಾಗರಿಕ ಸಮಾಜ ತಲೆ ತಗ್ಗಿಸುವಂಥದ್ದು: ಸಚಿವ ಶಿವಾನಂದ 

Sagara ರಸ್ತೆ ಪಕ್ಕದಲ್ಲಿಯೇ ಶಾಲಾ ಬಸ್‌ಗಳ ನಿಲುಗಡೆ

Sagara ರಸ್ತೆ ಪಕ್ಕದಲ್ಲಿಯೇ ಶಾಲಾ ಬಸ್‌ಗಳ ನಿಲುಗಡೆ

Team-india

T-20 World Champion: ತವರಿಗೆ ಬರುವ ಟೀಂ ಇಂಡಿಯಾದ ನಾಳೆಯ ಕಾರ್ಯಕ್ರಮವೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.