Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

ತಲೇಕಳ ದೇವಸ್ಥಾನದಿಂದ ಚಿನ್ನಾಭರಣ, ಬೆಳ್ಳಿ ಆಭರಣ, ಕಾಣಿಕೆ ಹುಂಡಿ ಕಳವು

Team Udayavani, Jun 29, 2024, 9:48 PM IST

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

ಮಂಜೇಶ್ವರ: ಮೀಯಪದವು ಸಮೀಪದ ಪುರಾತನ ತಲೇಕ್ಕಳ ಶ್ರೀ ಸದಾಶಿವ ರಾಮ ವಿಠಲ ದೇವಸ್ಥಾನದಿಂದ ಮೂರು ಪವನ್‌ನಷ್ಟು ತೂಕದ ದೇವರ ಚಿನ್ನದ ಮುಕ್ಕಣ್ಣು ಹಾಗು ಇತರ ಬೆಳ್ಳಿ ಆಭರಣ ಮತ್ತು 2 ಕಾಣಿಕೆ ಹುಂಡಿಯಿಂದ ಹಣವನ್ನು ಕಳವು ಮಾಡಲಾಗಿದೆ.

ಕಳ್ಳ ಬಳಸಿದ ಕಬ್ಬಿಣದ ರಾಡ್‌ ದೇವಸ್ಥಾನದಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಹಳೆಯ ದೇವಸ್ಥಾನವಾಗಿರುವುದರಿಂದ ಸುತ್ತುಗೋಪುರದ ಬಾಗಿಲು ಹಳತಾಗಿದೆ. ಬಾಗಿಲ ಎಡೆಗೆ ಕಬ್ಬಿಣದ ರಾಡ್‌ ಹಾಕಿ ಬಾಗಿಲನ್ನು ಎತ್ತಿ ಕಳ್ಳ ಒಳ ನುಗ್ಗಿದ್ದಾನೆ. ಗರ್ಭಗುಡಿಯ ಬಾಗಿಲು ಕೂಡ ಹಳತಾದುದರಿಂದ ಬಾಗಿಲು ಹಾಕಲಾಗುತ್ತದೆಯೇ ಹೊರತು ಬೀಗ ಹಾಕುವುದಿಲ್ಲವೆಂದು ದೇವಸ್ಥಾನದ ಟ್ರಸ್ಟಿ ಹಾಗು ಪ್ರಧಾನ ಅರ್ಚಕರಾದ ವಾಸುದೇವ ಭಟ್‌ ಹೇಳಿದ್ದಾರೆ.

ವಾಸುದೇವ ಭಟ್‌ ಅವರ ಪುತ್ರ ಶಿವರಾಜ್‌ ಭಟ್‌ ದೇವಸ್ಥಾನಕ್ಕೆ ಪೂಜೆಗಾಗಿ ಬಂದಿದ್ದು, ಎಂದಿನಂತೆ ಬಾಗಿಲು ತೆರೆದು ಸ್ನಾನ ಮಾಡಿ ಗರ್ಭಗುಡಿಗೆ ತೆರಳಿದಾಗಲಷ್ಟೇ ಕಳವು ಬಗ್ಗೆ ತಿಳಿಯಿತು. ಶಿವರಾಜ್‌ ಸ್ನಾನ ಮಾಡುತ್ತಿದ್ದಾಗ ಸ್ಕೂಟರೊಂದರ ಶಬ್ದ ದೇವಸ್ಥಾನ ಸಮೀಪದಿಂದ ಕೇಳಿ ಬಂದಿರುವುದಾಗಿ ಅವರು ತಿಳಿಸಿದ್ದಾರೆ.

ಕಾರಡ್ಕ ಸೊಸೈಟಿ ವಂಚನೆ ಪ್ರಕರಣ
ರಾಜ್ಯ ಕ್ರೈಂಬ್ರಾಂಚ್‌ ಶೀಘ್ರ ಕಾಸರಗೋಡಿಗೆ
ಕಾಸರಗೋಡು: ಕಾರಡ್ಕ ಅಗ್ರಿಕಲ್ಚರಿಸ್ಟ್‌ ವೆಲ್ಫೆರ್‌ ಕೋ-ಆಪರೇಟಿವ್‌ ಸೊಸೈಟಿಯಲ್ಲಿ ನಡೆದ 4.76 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿ ನಿಗೂಢತೆಗಳನ್ನು ಪತ್ತೆಹಚ್ಚಲು ರಾಜ್ಯ ಕ್ರೈಂಬ್ರಾಂಚ್‌ ತಂಡ ಶೀಘ್ರವೇ ಕಾಸರಗೋಡಿಗೆ ತಲುಪಲಿದೆ. ವಂಚನೆ ಪ್ರಕರಣದ ಹಿಂದೆ ದೊಡ್ಡ ಜಾಲವೇ ಇದೆ ಎಂದು ಶಂಕಿಸಲಾಗಿದೆ. ವಂಚನೆಗೆ ಸಂಬಂಧಿಸಿ ವಿವಿಧ ಬ್ಯಾಂಕ್‌ಗಳಲ್ಲಿ ಅಡವಿರಿಸಿದ ಚಿನ್ನಾಭರಣಗಳನ್ನು ವಶಪಡಿಸಲಾಗಿದೆ. ಆದರೆ ತನಿಖೆ ಮುಂದುವರಿಯುತ್ತಿರುವುದರಿಂದ ಚಿನ್ನಾಭರಣಗಳನು ಲಭಿಸುವುದು ವಿಳಂಬವಾಗುವ ಸಾಧ್ಯತೆಯಿದ್ದು, ಇದರಿಂದ ಚಿನ್ನದ ವಾರೀಸುದಾರರು ಆತಂಕಿತರಾಗಿದ್ದಾರೆ.

ವಿಷ ಸೇವಿಸಿದ ವ್ಯಕ್ತಿ ಸಾವು
ಕಾಸರಗೋಡು: ವಿಷ ಪ್ರಾಶನಗೈದು ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೊಸದುರ್ಗ ಮಡಿಕೈ ಕಕ್ಕಾಟ್‌ ಕಾಮಂಡ ನಿವಾಸಿ ವಿ.ಸಿ.ವಿನೋದನ್‌ (45) ಸಾವಿಗೀಡಾದರು. ಇವರು ಒಂದು ವಾರದ ಹಿಂದೆ ವಿಷ ಸೇವಿಸಿದ್ದರು.

ಎಸ್‌.ಐ, ಡ್ರೈವರ್‌ಗೆ ಇರಿದು ಗಾಯ : 16 ವರ್ಷ ಸಜೆ, ದಂಡ
ಕಾಸರಗೋಡು: ಕರ್ತವ್ಯ ನಿರತ ಎಸ್‌.ಐ. ಮತ್ತು ಪೊಲೀಸ್‌ ಜೀಪು ಚಾಲಕ ಅವರಿಗೆ ಇರಿದು ಗಂಭೀರ ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಾರಾ ಗ್ರಾಮದ ಮೀತ್ತಲ್‌ ಮಾಂಙಾಡ್‌ ಕುಳಿಕುನ್ನು ಕೆ.ಎಂ.ಹೌಸ್‌ನ ಅಹಮ್ಮದ್‌ ರಾಶೀದ್‌ ಕೆ.ಎಂ(31) ನಿಗೆ ವಿವಿಧ ಸೆಕ್ಷನ್‌ಗಳಲ್ಲಾಗಿ ಒಟ್ಟು 16 ವರ್ಷ ಸಜೆ ಹಾಗು 90 ಸಾವಿರ ರೂ. ದಂಡ ವಿಧಿಸಿ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್‌ ನ್ಯಾಯಾಲಯ(2) ತೀರ್ಪು ನೀಡಿದೆ.

ದಂಡ ಪಾವತಿಸದಿದ್ದಲ್ಲಿ ಮೂರು ತಿಂಗಳು ಹೆಚ್ಚುವರಿಯಾಗಿ ಸಜೆ ಅನುಭವಿಸುವಂತೆ ನ್ಯಾಯಾಲಯ ತಿಳಿಸಿದೆ.

2019 ಜನವರಿ 1 ರಂದು ಮುಂಜಾನೆ 3 ಗಂಟೆಗೆ ಕಳನಾಡುನಲ್ಲಿ ಪೊಲೀಸ್‌ ವಾಹನವನ್ನು ತಡೆದು ನಿಲ್ಲಿಸಿ ಎಸ್‌.ಐ ಜಯರಾಜ್‌ ಮತ್ತು ಚಾಲಕ ಇಲ್‌ಸಾದ್‌ಗೆ ಇರಿದು ಗಂಭೀರ ಗಾಯಗೊಳಿಸಲಾಗಿತ್ತು. ಪೊಲೀಸ್‌ ವಾಹನಕ್ಕೆ ಹಾನಿಗೈಯ್ಯಲಾಗಿತ್ತು. ಈ ಸಂಬಂಧ ಬೇಕಲ ಪೊಲೀಸರು ರಾಶೀದ್‌ ವಿರುದ್ಧ ಕೇಸು ದಾಖಲಿಸಿದ್ದರು.

ಜೀಪು ಢಿಕ್ಕಿ : ವ್ಯಕ್ತಿ ಸಾವು
ಕಾಸರಗೋಡು: ಮುಟ್ಟಿಚ್ಚರಲ್‌ ತಿರುವಿನಲ್ಲಿ ಜೀಪು ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದ ಮುಟ್ಟಿಚ್ಚರಲ್‌ ಕೋಪಾಳಂ ಮೂಲೆಯ ತಂಬಾನ್‌(62) ಸಾವಿಗೀಡಾದರು. ಎಣ್ಣಪ್ಪಾರಕ್ಕೆ ತೆರಳುತ್ತಿದ್ದ ಜೀಪು ಢಿಕ್ಕಿ ಹೊಡೆದಿತ್ತು.

ಮುಸೋಡಿ, ಪೆರಿಂಗಡಿ ಸಮುದ್ರ ಕಿನಾರೆಯಲ್ಲಿ
ಕಡಲ್ಕೊರೆತ : ಹಲವು ಮರಗಳು ಸಮುದ್ರ ಪಾಲು
ಕುಂಬಳೆ: ಉಪ್ಪಳ ಶಿವಾಜಿ ನಗರ, ಮುಸೋಡಿ ಹಾಗು ಪೆರಿಂಗಡಿ ಕಡಪ್ಪುರದಲ್ಲಿ ಕಡಲ್ಕೊರೆತ ವ್ಯಾಪಕಗೊಂಡಿದ್ದು, ಹಲವು ಗಾಳಿ ಮರಗಳು ಸಮುದ್ರ ಪಾಲಾಗಿದೆ. ಕೆಲವು ದಿನಗಳಿಂದ ಕಡಲ್ಕೊರೆತ ಮುಂದುವರಿದಿದ್ದು, ಸ್ಥಳೀಯ ನಿವಾಸಿಗಳು ಆತಂಕಿತರಾಗಿದ್ದಾರೆ. ಇದು ಹೀಗೆ ಮುಂದುವರಿದರೆ ಪರಿಸರದ ರಸ್ತೆ ಬದಿಯ ವಿದ್ಯುತ್‌ ಕಂಬಗಳು ಮತ್ತು ಮನೆ, ಮಸೀದಿಗಳು ಸಮುದ್ರ ಪಾಲಾಗುವ ಸಾಧ್ಯತೆಯಿದೆ.

 

ಟಾಪ್ ನ್ಯೂಸ್

Mangaluru ಮಣ್ಣು ಕುಸಿತ: ಕೆಲಸ ಹೊಸತಲ್ಲ, ದುರದೃಷ್ಟ ಹೊಸತು !

Mangaluru ಮಣ್ಣು ಕುಸಿತ: ಕೆಲಸ ಹೊಸತಲ್ಲ, ದುರದೃಷ್ಟ ಹೊಸತು !

Rain ಕಬ್ಬಿನಾಲೆ, ಸಿದ್ದಾಪುರ: ಸುಂಟರಗಾಳಿಗೆ ಅಪಾರ ಹಾನಿ

Rain ಕಬ್ಬಿನಾಲೆ, ಸಿದ್ದಾಪುರ: ಸುಂಟರಗಾಳಿಗೆ ಅಪಾರ ಹಾನಿ

Bantwal: ಅರಣ್ಯ ಮಿತ್ರ ಪ್ರಶಸ್ತಿ ಪ್ರದಾನ

Bantwal: ಅರಣ್ಯ ಮಿತ್ರ ಪ್ರಶಸ್ತಿ ಪ್ರದಾನ

Railway ಕರಾವಳಿ ರೈಲ್ವೇ ಸಮಸ್ಯೆ ಪರಿಹಾರಕ್ಕೆ ಸಂಸದರ ಮನವಿ

Railway ಕರಾವಳಿ ರೈಲ್ವೇ ಸಮಸ್ಯೆ ಪರಿಹಾರಕ್ಕೆ ಸಂಸದರ ಮನವಿ

Ajekar ಪುಸ್ತಕ ಮನೆ ಪ್ರಕಾಶನದ ವಿವಿಧ ಪುಸ್ತಕಗಳ ಅನಾವರಣ

Ajekar ಪುಸ್ತಕ ಮನೆ ಪ್ರಕಾಶನದ ವಿವಿಧ ಪುಸ್ತಕಗಳ ಅನಾವರಣ

BJP-Member

Congress Government: ರಾಜ್ಯ ಸರಕಾರದ ವಿರುದ್ಧ ಮುಗಿಬಿದ್ದ ಬಿಜೆಪಿ 

Mangaluru ಪ್ರತ್ಯೇಕ ರೈಲ್ವೇ ವಿಭಾಗಕ್ಕೆ ಅಭಿಯಾನ ಆರಂಭ

Mangaluru ಪ್ರತ್ಯೇಕ ರೈಲ್ವೇ ವಿಭಾಗಕ್ಕೆ ಅಭಿಯಾನ ಆರಂಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Woman’s body found in Kasaragod Quattros; Beloved who surrendered to hanging

Kasaragod ಕ್ವಾಟ್ರಸ್‌ನಲ್ಲಿ ಮಹಿಳೆಯ ಶವ ಪತ್ತೆ; ನೇಣಿಗೆ ಶರಣಾದ ಪ್ರಿಯತಮ

Kodagu: ಆನೆ ದಾಳಿ; ರಿಕ್ಷಾ ಜಖಂ, ತೋಟಕ್ಕೆ ಹಾನಿ

Kodagu: ಆನೆ ದಾಳಿ; ರಿಕ್ಷಾ ಜಖಂ, ತೋಟಕ್ಕೆ ಹಾನಿ

Madikeri ಅಂಗಡಿ, ದೇವಾಲಯ ಕಳವು ಪ್ರಕರಣದ ಆರೋಪಿ ಬಂಧನ

Madikeri ಅಂಗಡಿ, ದೇವಾಲಯ ಕಳವು ಪ್ರಕರಣದ ಆರೋಪಿ ಬಂಧನ

3-crime

Crime News: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

Mangaluru ಮಣ್ಣು ಕುಸಿತ: ಕೆಲಸ ಹೊಸತಲ್ಲ, ದುರದೃಷ್ಟ ಹೊಸತು !

Mangaluru ಮಣ್ಣು ಕುಸಿತ: ಕೆಲಸ ಹೊಸತಲ್ಲ, ದುರದೃಷ್ಟ ಹೊಸತು !

Rain ಕಬ್ಬಿನಾಲೆ, ಸಿದ್ದಾಪುರ: ಸುಂಟರಗಾಳಿಗೆ ಅಪಾರ ಹಾನಿ

Rain ಕಬ್ಬಿನಾಲೆ, ಸಿದ್ದಾಪುರ: ಸುಂಟರಗಾಳಿಗೆ ಅಪಾರ ಹಾನಿ

Bantwal: ಅರಣ್ಯ ಮಿತ್ರ ಪ್ರಶಸ್ತಿ ಪ್ರದಾನ

Bantwal: ಅರಣ್ಯ ಮಿತ್ರ ಪ್ರಶಸ್ತಿ ಪ್ರದಾನ

Railway ಕರಾವಳಿ ರೈಲ್ವೇ ಸಮಸ್ಯೆ ಪರಿಹಾರಕ್ಕೆ ಸಂಸದರ ಮನವಿ

Railway ಕರಾವಳಿ ರೈಲ್ವೇ ಸಮಸ್ಯೆ ಪರಿಹಾರಕ್ಕೆ ಸಂಸದರ ಮನವಿ

Ajekar ಪುಸ್ತಕ ಮನೆ ಪ್ರಕಾಶನದ ವಿವಿಧ ಪುಸ್ತಕಗಳ ಅನಾವರಣ

Ajekar ಪುಸ್ತಕ ಮನೆ ಪ್ರಕಾಶನದ ವಿವಿಧ ಪುಸ್ತಕಗಳ ಅನಾವರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.