AUB: ಗರ್ಭಕೋಶದ ಅಸಹಜ ರಕ್ತಸ್ರಾವ; ಅಬ್ನಾರ್ಮಲ್‌ ಯುಟರೈನ್‌ ಬ್ಲೀಡಿಂಗ್‌ (ಎಯುಬಿ)

ಹಾಗೆಂದರೇನು, ಕಾರಣವೇನು, ಪತ್ತೆ, ಚಿಕಿತ್ಸೆ ಹೇಗೆ?

Team Udayavani, Jun 30, 2024, 1:34 PM IST

6-health

ಸೀತಾ ಮತ್ತು ಗೀತಾ (ಹೆಸರು ಬದಲಾಯಿಸಿದೆ) ಇಬ್ಬರೂ ಅತಿಯಾದ ಋತುಸ್ರಾವ, ತೀವ್ರ ಬಳಲಿಕೆ ಮತ್ತು ತಲೆತಿರುಗುವ ಸಮಸ್ಯೆಗಳಿಂದ ನಮ್ಮ ಡಾ| ಟಿಎಂಎ ಪೈ ಆಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷೆ ಗೊಳಪಡಿಸಿದ ಬಳಿಕ ಇಬ್ಬರೂ 5 ಗ್ರಾಂ % ನಷ್ಟು ಅಲ್ಪಪ್ರಮಾಣದ ಹಿಮೊಗ್ಲೋಬಿನ್‌ ನೊಂದಿಗೆ ತೀವ್ರ ತರಹದ ರಕ್ತಹೀನತೆ ಹೊಂದಿರುವುದು ತಿಳಿದುಬಂತು.

ಜತೆಗೆ, ಗೀತಾ ಅವರಲ್ಲಿ ಅತಿಯಾದ ಋತುಸ್ರಾವಕ್ಕೆ ಅಡೆನೊಮಯೋಸಿಸ್‌ ಮತ್ತು ಸೀತಾ ಅವರಲ್ಲಿ ಫೈಬ್ರಾಯ್ಡ ಕಾರಣವಾಗಿರುವುದು ಪತ್ತೆಯಾಯಿತು. ಇಬ್ಬರೂ ರೋಗಿಗಳಿಗೆ ರಕ್ತಹೀನತೆಯನ್ನು ಸರಿಪಡಿಸಲು ರಕ್ತಮರುಪೂರಣ ನಡೆಸಲಾಯಿತು ಮತ್ತು ಬಳಿಕ ನಿರ್ದಿಷ್ಟ ಚಿಕಿತ್ಸೆಗಳನ್ನು ಅಂದರೆ, ಹಿಸ್ಟರೆಕ್ಟೊಮಿ (ಗರ್ಭಕೋಶವನ್ನು ತೆಗೆದುಹಾಕುವುದು) ಒದಗಿಸಲಾಯಿತು.

ಗರ್ಭಕೋಶದ ಅಸಹಜ ರಕ್ತಸ್ರಾವ (ಎಯುಬಿ)ವು ಎಲ್ಲ ವಯೋಮಾನದ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಯಾಗಿದ್ದು, ವಯಸ್ಸನ್ನು ಆಧರಿಸಿ ಕಾರಣಗಳು ಬೇರೆ ಬೇರೆಯಾಗಿರಬಹುದಾಗಿದೆ. ಮಹಿಳೆಯರು ಸ್ತ್ರೀರೋಗ ಮತ್ತು ಪ್ರಸೂತಿಶಾಸ್ತ್ರಜ್ಞರನ್ನು ಕಾಣಲು ಧಾವಿಸುವ ಮೂರನೇ ಒಂದರಷ್ಟು ಪ್ರಕರಣಗಳಿಗೆ ಇದೇ ಕಾರಣವಾಗಿರುತ್ತದೆ.

ಮಹಿಳೆಯರ ದೈಹಿಕ, ಸಾಮಾಜಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಎಯುಬಿಯು ಗಮನಾರ್ಹ ಪರಿಣಾಮವನ್ನು ಬೀರಬಹುದಾಗಿದೆ. ಎಯುಬಿ ಹೊಂದಿರುವ ಮಹಿಳೆಯರು ಕ್ಲಪ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆಯುವುದು ಅತ್ಯಾವಶ್ಯಕವಾಗಿದೆ.

ಎಯುಬಿ ಅಂದರೇನು?

ಎಯುಬಿ ಎಂಬುದು ಅಬ್ನಾರ್ಮಲ್‌ ಯುಟರೈನ್‌ ಬ್ಲೀಡಿಂಗ್‌ ಎಂಬುದರ ಸಂಕ್ಷಿಪ್ತ ರೂಪ, ಕನ್ನಡದಲ್ಲಿ ಇದನ್ನು “ಗರ್ಭಕೋಶದ ಅಸಹಜ ರಕ್ತಸ್ರಾವ’ ಎಂದು ಕರೆಯಬಹುದು. ಮಹಿಳೆಯೊಬ್ಬರ ಸಹಜ ಋತುಸ್ರಾವ ಪ್ರಕ್ರಿಯೆಯಲ್ಲಿ ಕಂಡುಬರುವ ಯಾವುದೇ ರೀತಿಯ ಅಸಹಜ ಬದಲಾವಣೆ – ಅವಧಿ, ಬಾರಿ ಅಥವಾ ಪ್ರಮಾಣ- ಇವೆಲ್ಲವನ್ನೂ ಎಯುಬಿ ಎಂದು ಪರಿಗಣಿಸಲಾಗುತ್ತದೆ. ಋತುಚಕ್ರದ ಸಹಜ ಅವಧಿಯು ಸಾಮಾನ್ಯವಾಗಿ 24ರಿಂದ 38 ದಿನಗಳಾಗಿರುತ್ತವೆ. ಸಹಜ ಋತುಸ್ರಾವದ ಅವಧಿಯು ಸಾಮಾನ್ಯವಾಗಿ 8 ದಿನಗಳ ವರೆಗೆ ಇರುತ್ತದೆ. ಭಾರತದಲ್ಲಿ ಎಯುಬಿಯು ಸರಿಸುಮಾರು ಶೇ.17ರಷ್ಟು ಮಹಿಳೆಯರಲ್ಲಿ ಕಂಡುಬರುತ್ತದೆ. ಎಯುಬಿಯು ಯಾವುದೇ ವಯಸ್ಸಿನ ಮಹಿಳೆಯರಲ್ಲಿ ಕಂಡುಬರಬಹುದಾದರೂ ಅದು ಹದಿಹರಯದವರು ಮತ್ತು ಋತುಚಕ್ರಬಂಧಪೂರ್ವ ವಯಸ್ಸಿನವರಲ್ಲಿ ಹೆಚ್ಚು ಉಂಟಾಗುತ್ತದೆ.

ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು?

ಸಹಜವಾಗಿ ಋತುಸ್ರಾವ ಹೊಂದುತ್ತಿದ್ದ ಯಾವುದೇ ಮಹಿಳೆ ತನ್ನ ಋತುಸ್ರಾವ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆಯನ್ನು ಗಮನಿಸಿದರೆ – ಋತುಸ್ರಾವದ ಸಂದರ್ಭದಲ್ಲಿ ಅತಿಯಾದ ರಕ್ತಸ್ರಾವ, 38ಕ್ಕಿಂತಲೂ ಹೆಚ್ಚು ದಿನ ಅಥವಾ 24ಕ್ಕಿಂತ ಕಡಿಮೆ ದಿನಗಳ ಋತುಸ್ರಾವ, 7ರಿಂದ 9 ದಿನಗಳಿಗಿಂತ ಹೆಚ್ಚು ದಿನಗಳ ಕಾಲ ಕಂಡುಬರುವ ಅನಿಯಮಿತ ಋತುಸ್ರಾವ, ಋತುಸ್ರಾವದ ದಿನಗಳ ನಡುವೆಯೂ ರಕ್ತಸ್ರಾವ ಮತ್ತು ಋತುಚಕ್ರಬಂಧದ ಬಳಿಕವೂ ರಕ್ತಸ್ರಾವ – ಇಂಥವುಗಳನ್ನು ಗಮನಿಸಿದರೆ ವೈದ್ಯರನ್ನು ಕಾಣಬೇಕು.

ವೈದ್ಯರನ್ನು ಯಾಕೆ ಕಾಣಬೇಕು?

ಯೋನಿಯ ಮೂಲಕ ಅಸಹಜ ರಕ್ತಸ್ರಾವ ಉಂಟಾಗುತ್ತಿರುವ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸುವ ಉದ್ದೇಶವೆಂದರೆ ರಕ್ತಹೀನತೆಯನ್ನು ತಡೆಗಟ್ಟುವುದು, ರಕ್ತಸ್ರಾವಕ್ಕೆ ನಿರ್ದಿಷ್ಟ ಕಾರಣವನ್ನು ಪತ್ತೆಹಚ್ಚುವುದು ಮತ್ತು ಅನಾರೋಗ್ಯಕ್ಕೆ ನಿರ್ದಿಷ್ಟವಾದ ಚಿಕಿತ್ಸೆಯನ್ನು ಪಡೆದುಕೊಳ್ಳುವುದು. ಹದಿಹರಯದ ಬಾಲಕಿಯರಲ್ಲಿ ಎಯುಬಿ ಉಂಟಾದರೆ ಶಾಲೆಗೆ ಗೈರುಹಾಜರಿಗೆ ಕಾರಣವಾಗುತ್ತದೆ ಹಾಗೂ ಆಕೆಯ ಪೌಷ್ಟಿಕಾಂಶ ಸ್ಥಿತಿಗತಿ ಮತ್ತು ಬೆಳವಣಿಗೆಯನ್ನು ಬಾಧಿಸುತ್ತದೆ.

ಎಯುಬಿಯು ಚಿಕಿತ್ಸೆಗೊಳಪಡದೆ ಹಾಗೆಯೇ ಮುಂದುವರಿದಲ್ಲಿ ಶೀಘ್ರ ದಣಿವು, ಹಸಿವು ನಷ್ಟ ಹಾಗೂ ಯಾವುದೇ ಬಗೆಯ ಸೋಂಕುಗಳಿಗೆ ಸುಲಭವಾಗಿ ತುತ್ತಾಗುವ ಅಪಾಯವನ್ನು ತಂದೊಡ್ಡುತ್ತದೆ. ಮಹಿಳೆಯರ ವಯೋಮಾನವನ್ನು ಆಧರಿಸಿ ಎಯುಬಿಗೆ ಕಾರಣಗಳು ಬದಲಾಗಬಹುದಾಗಿವೆ; ಹದಿಹರಯದ ಬಾಲಕಿಯರಲ್ಲಿ ಹಾರ್ಮೋನ್‌ ವ್ಯತ್ಯಯ, ರಕ್ತ ಹೆಪ್ಪುಗಟ್ಟುವ ಸಮಸ್ಯೆ (ಹಿಮೊಸ್ಟಾಸಿಸ್‌) ಇದಕ್ಕೆ ಸಾಮಾನ್ಯ ಕಾರಣವಾಗಿದ್ದರೆ, ಸಂತಾನೋತ್ಪತ್ತಿ ನಡೆಸಬಲ್ಲ ವಯೋಮಾನದ ಮಹಿಳೆಯರಲ್ಲಿ ಗರ್ಭಪಾತ ಮತ್ತು ಫೈಬ್ರಾಯ್ಡ ಗಳಂತಹ ಕ್ಯಾನ್ಸರ್‌ ಅಲ್ಲದ ಗಡ್ಡೆಗಳು ಕಾರಣವಾಗಿರುತ್ತವೆ; ಋತುಚಕ್ರಬಂಧ ಹೊಂದುವ ಆಸುಪಾಸಿನ ಮಹಿಳೆಯರಲ್ಲಿ ಗರ್ಭಕೋಶದ ಕ್ಯಾನ್ಸರ್‌ ಇದಕ್ಕೆ ಕಾರಣವಲ್ಲ ಎಂಬುದನ್ನು ಪತ್ತೆಹಚ್ಚುವುದು ಆದ್ಯತೆಯಾಗಿರುತ್ತದೆ.

ಎಯುಬಿ ರೋಗಿ ಮಹಿಳೆಯರು ವೈದ್ಯರನ್ನು ಸಂಪರ್ಕಿಸುವುದನ್ನು ಮುಂದೂಡುತ್ತಾರೆ ಏಕೆ? (ನಿಶ್ಶಬ್ದವಾಗಿ ನರಳುವುದೇಕೆ?)

ಎಯುಬಿ ಅಥವಾ ಇನ್ಯಾವುದೇ ಪ್ರಜನನ ಸಂಬಂಧಿ ಅನಾರೋಗ್ಯಗಳಿಗೆ ತುತ್ತಾಗಿರುವ ಮಹಿಳೆಯರು ಕ್ಲಪ್ತ ಕಾಲದಲ್ಲಿ ವೈದ್ಯರನ್ನು ಸಂಪರ್ಕಿಸದೆ ನಿಶ್ಶಬ್ದವಾಗಿ ನರಳುತ್ತಿರುತ್ತಾರೆ ಎನ್ನುವುದೇ ಬಹಳ ವಿಷಾದಕರ ವಿಷಯ. ಕಳಪೆ ಆರೋಗ್ಯ ಸ್ಥಿತಿ, ಅನಕ್ಷರತೆ, ಋತುಸ್ರಾವಕ್ಕೆ ಸಂಬಂಧಿಸಿದಂತೆ ಯಾವುದು ಅಸಹಜ ಎಂಬುದನ್ನು ತಿಳಿಯಲಾಗದೆ ಇರುವುದು ಮತ್ತು ಅತಿಯಾದ ರಕ್ತಸ್ರಾವವನ್ನೂ ಸಹಜ ಎಂದೇ ಭಾವಿಸುವುದು, ಇತರ ಅನಾರೋಗ್ಯಗಳಿಗೆ ಹೋಲಿಸಿದರೆ ಗರ್ಭಕೋಶದ ಸಮಸ್ಯೆಗಳು ಆದ್ಯತೆಯವಲ್ಲ ಎಂದು ಭಾವಿಸುವುದು, ಸಾಮಾಜಿಕ ಮುಜುಗರ, ಕೌಟುಂಬಿಕ ಹೊಣೆಗಾರಿಕೆಗಳು, ಕೆಲಸ, ಸಾಮಾಜಿಕ ನಿಬಂಧನೆಗಳು ಇತ್ಯಾದಿ ಹಲವು ಕಾರಣಗಳು ಎಯುಬಿಗೆ ತುತ್ತಾಗಿರುವ ಅನೇಕ ಮಹಿಳೆಯರು ಸರಿಯಾದ ಸಮಯಕ್ಕೆ ವೈದ್ಯರನ್ನು ಸಂಪರ್ಕಿಸದಂತೆ ತಡೆಯುತ್ತವೆ.

ಇದನ್ನು ತಡೆಯುವುದಕ್ಕಾಗಿ ಮಹಿಳೆಯರಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗಶಾಸ್ತ್ರೀಯ ಸೇವೆಗಳ ಬಗ್ಗೆ ತಿಳಿವಳಿಕೆ ಮೂಡಿಸಬೇಕು, ಆರೋಗ್ಯ ಸೇವಾ ಸೌಲಭ್ಯಗಳನ್ನು ಪಡೆದುಕೊಳ್ಳುವುದನ್ನು ವಿಳಂಬಿಸಿದರೆ ಎದುರಾಗಬಹುದಾದ ಅಪಾಯಗಳ ಬಗ್ಗೆ ತಿಳಿಹೇಳಬೇಕು ಮತ್ತು ಈ ಸಂಬಂಧಿಯಾದ ಸೂಕ್ತ ಮಾಹಿತಿಗಳನ್ನು ಅವರಿಗೆ ಅವರ ಭಾಷೆಯಲ್ಲಿಯೇ ಒದಗುವಂತೆ ಮಾಡಬೇಕಿದೆ.

ಎಯುಬಿಗೆ ಕಾರಣಗಳೇನು?

ಎಯುಬಿಗೆ ಕಾರಣಗಳನ್ನು “PALM-COEINʼ ಎಂಬ ಸಂಕೇತ ಸೂತ್ರದ ಅಡಿಯಲ್ಲಿ ಪಟ್ಟಿ ಮಾಡಬಹುದಾಗಿದೆ. ­

ಪಾಲಿಪ್‌ (ಎಯುಬಿ-ಪಿ): ಗರ್ಭಕೋಶದ ಕುಹರದಲ್ಲಿ, ಎಂಡೋಮೆಟ್ರಿಯಂ (ಗರ್ಭಕೋಶದ ಒಳಪದರ)ನಲ್ಲಿ ಉಂಟಾಗುವ ಬೆಳವಣಿಗೆಗಳು.

­ಅಡೆನೋಮಯೋಸಿಸ್‌ (ಎಯುಬಿ-ಎ): ಗರ್ಭಕೋಶದ ಒಳಪದರವು (ಎಂಡೋಮೆಟ್ರಿಯಂ) ಗರ್ಭಕೋಶದ ಸ್ನಾಯುಪದರ (ಮಯೋಮೆಟ್ರಿಯಂ) ದೊಳಕ್ಕೆ ಬೆಳವಣಿಗೆ ಹೊಂದುವುದು. ­

ಲಯೋಮಯೋಮಾ (ಎಯುಬಿ-ಎಲ್‌): ಗರ್ಭಕೋಶದ ಸ್ನಾಯು ಪದರದಲ್ಲಿ ಕ್ಯಾನ್ಸರ್‌ ಅಲ್ಲದ ಫೈಬ್ರೊಮಸ್ಕುಲರ್‌ ಗಡ್ಡೆಗಳು.

­ಮ್ಯಾಲಿಗ್ನಾನ್ಸಿ ಆ್ಯಂಡ್‌ ಹೈಪರ್‌ಪ್ಲಾಸಿಯಾ (ಎಯುಬಿ-ಎಂ): ಕ್ಯಾನ್ಸರ್‌ ಮತ್ತು ಕ್ಯಾನ್ಸರ್‌ಪೂರ್ವ ಬೆಳವಣಿಗೆಗಳು. ­

ಕೊಆಗ್ಯುಲೋಪತಿ (ಎಯುಬಿ-ಸಿ): ಹಿಮೊಸ್ಟಾಸಿಸ್‌ (ರಕ್ತಸ್ರಾವವನ್ನು ನಿಲ್ಲಿಸುವ ವ್ಯವಸ್ಥೆ) ನ ಅನಾರೋಗ್ಯಗಳು. ­

ಅಂಡೋತ್ಪತ್ತಿ ಚಟುವಟಿಕೆ ಸ್ಥಗಿತ: ಅಂಡೋತ್ಪತ್ತಿಗೆ ಸಂಬಂಧಿಸಿದ ಅನಾರೋಗ್ಯಗಳು ಅಮೆನೊರಿಯಾ (ಋತುಸ್ರಾವ ಆಗದೆ ಇರುವುದು), ರಕ್ತಸ್ರಾವದಲ್ಲಿ ಏರುಪೇರು, ಊಹಿಸಲು ಸಾಧ್ಯವಾಗದಷ್ಟು ತೀವ್ರವಾದ ಋತುಸ್ರಾವದಂತಹ ವೈವಿಧ್ಯವಾದ ಲಕ್ಷಣಗಳಿಗೆ ಕಾರಣವಾಗಬಹುದು. ಅಂಡೋತ್ಪತ್ತಿಗೆ ಸಂಬಂಧಿಸಿದ ಅನಾರೋಗ್ಯಗಳು ಪಾಲಿಸಿಸ್ಟಿಕ್‌ ಓವರಿ ಸಿಂಡ್ರೋಮ್‌, ಹೈಪರ್‌ಥೈರಾಯ್ಡಿಸಂ, ಹೈಪರ್‌ ಪ್ರೊಲ್ಯಾಕ್ಟಿನೀಮಿಯಾ, ಮಾನಸಿಕ ಒತ್ತಡ, ಬೊಜ್ಜು, ಅನೊರೆಕ್ಸಿಯಾ, ತೂಕ ನಷ್ಟ ಮತ್ತು ಅತಿಯಾದ ವ್ಯಾಯಾಮಗಳ ಜತೆಗೆ ಸಂಬಂಧ ಹೊಂದಿರಬಹುದಾಗಿದೆ.

­ಎಂಡೊಮೆಟ್ರಿಯಲ್‌ (ಎಯುಬಿ-ಇ): ಅಂಡೋತ್ಪತ್ತಿ ಕಾರ್ಯಚಟುವಟಿಕೆ ಸಹಜವಾಗಿದ್ದು, ಇತರ ಯಾವುದೇ ಕೊಆಗ್ಯುಲೊಪತಿ ಇಲ್ಲದೆ ಎಂಡೊಮೆಟ್ರಿಯಂನ ಅಸಹಜತೆಗಳಿಂದಾಗಿ ಗರ್ಭಕೋಶದಿಂದ ರಕ್ತಸ್ರಾವ.

­ಅಯೊಟ್ರೊಜೆನಿಕ್‌ (ಎಯುಬಿ-ಐ): ಎಕೊÕಜೆನಸ್‌ ಗೊನೇಡಲ್‌ ಸ್ಟಿರಾಯ್ಡ ಗಳು, ಗರ್ಭಕೋಶಕ್ಕೆ ತೂರಿಸುವ ಸಾಧನಗಳು ಅಥವಾ ಅಯೊಟ್ರೊಜೆನಿಕ್‌ ಎಂಬುದಾಗಿ ವರ್ಗೀಕರಿಸಲಾಗಿರುವ ದೇಹವ್ಯವಸ್ಥೆಗೆ ಸಂಬಂಧಿಸಿದ ಅಥವಾ ದೇಹದ ಹೊರ ಗಿನಿಂದ ಬಳಸುವ ದ್ರವ್ಯಗಳ ಬಳಕೆಯಿಂದ ಅಸಹಜ ರಕ್ತಸ್ರಾವ (ಎಯುಬಿ -ಐ). ­

ಇನ್ನೂ ನಿರ್ದಿಷ್ಟವಾಗಿ ವರ್ಗೀಕರಿಸಲಾಗದ (ಎಯುಬಿ-ಎನ್‌): ವ್ಯಾಖ್ಯಾನಿಸಲಾಗದ ಅಥವಾ ಅಪರೂಪಕ್ಕೆ ಎದುರಾಗಬಹುದಾದ ತೊಂದರೆಗಳನ್ನು ಸೇರಿಸಿಕೊಳ್ಳುವುದಕ್ಕಾಗಿ “ಇನ್ನೂ ನಿರ್ದಿಷ್ಟವಾಗಿ ವರ್ಗೀಕರಿಸಲಾಗದ’ ಎಂಬ ವರ್ಗವನ್ನು ಸೃಷ್ಟಿಸಲಾಗಿದೆ.

-ಮುಂದಿನ ವಾರಕ್ಕೆ

-ಡಾ| ವಿನುತಾ,

ಅಸೋಸಿಯೇಟ್‌ ಪ್ರೊಫೆಸರ್‌

ಒಬಿಜಿ ವಿಭಾಗ,

ಡಾ| ಟಿಎಂಎ ಪೈ ಆಸ್ಪತ್ರೆ, ಉಡುಪಿ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಒಬಿಜಿ ವಿಭಾಗ, ಕೆಎಂಸಿ, ಮಂಗಳೂರು)

ಟಾಪ್ ನ್ಯೂಸ್

Bihar: ಬಿಹಾರದಲ್ಲಿ ಕುಸಿದು ಬಿದ್ದ ಮತ್ತೊಂದು ಸೇತುವೆ- 15 ದಿನಗಳಲ್ಲಿ 10 ಸೇತುವೆ ಕುಸಿತ!

Bihar: ಬಿಹಾರದಲ್ಲಿ ಕುಸಿದು ಬಿದ್ದ ಮತ್ತೊಂದು ಸೇತುವೆ- 15 ದಿನಗಳಲ್ಲಿ 10 ಸೇತುವೆ ಕುಸಿತ!

Sagara: ಗಾಳಿ ಮಳೆಯ ಆರ್ಭಟಕ್ಕೆ ಸಾಲು ಸಾಲು ವಿದ್ಯುತ್ ಕಂಬಗಳು ಧರಾಶಾಹಿ

Sagara: ಮಳೆಯ ಆರ್ಭಟಕ್ಕೆ ಸಾಲು ಸಾಲು ವಿದ್ಯುತ್ ಕಂಬಗಳು ಧರಾಶಾಹಿ

Flashing lights of vehicles; ಮೂರು ದಿನದಲ್ಲಿ 3700 ಪ್ರಕರಣ: ಅಲೋಕ್ ಕುಮಾರ್

Flashing lights of vehicles; ಮೂರು ದಿನದಲ್ಲಿ 3700 ಪ್ರಕರಣ: ಅಲೋಕ್ ಕುಮಾರ್

Rajasthan: ಚುನಾವಣೆ ವೇಳೆ ನೀಡಿದ ಭರವಸೆಯಂತೆ ಸಚಿವ ಸ್ಥಾನಕ್ಕೆ ಕಿರೋಡಿ ಲಾಲ್‌ ರಾಜೀನಾಮೆ!

Rajasthan: ಚುನಾವಣೆ ವೇಳೆ ನೀಡಿದ ಭರವಸೆಯಂತೆ ಸಚಿವ ಸ್ಥಾನಕ್ಕೆ ಕಿರೋಡಿ ಲಾಲ್‌ ರಾಜೀನಾಮೆ!

Charmadi: ಭಾರಿ ಮಳೆಗೆ ಚಾರ್ಮಾಡಿ ಘಾಟಿಯ ರಸ್ತೆ, ತಡೆಗೋಡೆಯಲ್ಲಿ ಬಿರುಕು… ಕುಸಿಯುವ ಭೀತಿ

Charmadi: ಭಾರಿ ಮಳೆಗೆ ಚಾರ್ಮಾಡಿ ಘಾಟಿಯ ರಸ್ತೆ, ತಡೆಗೋಡೆಯಲ್ಲಿ ಬಿರುಕು… ಕುಸಿಯುವ ಭೀತಿ

Transfer of four IPS officers; New SP for Raichur, Koppal

IPS Transfer: ಮತ್ತೆ ಐಪಿಎಸ್ ಅಧಿಕಾರಿಗಳ ವರ್ಗಾವಣೆ; ರಾಯಚೂರು, ಕೊಪ್ಪಳಕ್ಕೆ ಹೊಸ ಎಸ್.ಪಿ

Divorce Case: ಯುವ ರಾಜ್‌ಕುಮಾರ್‌ ವಿಚ್ಚೇದನ ಅರ್ಜಿ ವಿಚಾರಣೆ ಆ.23ಕ್ಕೆ ಮುಂದೂಡಿಕೆ

Divorce Case: ಯುವ ರಾಜ್‌ಕುಮಾರ್‌ ವಿಚ್ಚೇದನ ಅರ್ಜಿ ವಿಚಾರಣೆ ಆ.23ಕ್ಕೆ ಮುಂದೂಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-health

PCOD (ಪಾಲಿಸಿಸ್ಟಿಕ್‌ ಅಂಡಾಶಯದ ಕಾಯಿಲೆ) ಸಮಸ್ಯೆ ಮತ್ತು ನಿರ್ವಹಣೆ

2-Health

Menstrual Cycle: ಹೆರಿಗೆಯ ಬಳಿಕ ಮಹಿಳೆಯ ಋತುಚಕ್ರ ಪೂರ್ವಸ್ಥಿತಿ ಸ್ಥಾಪನೆ

7-health

Health: ಅಸ್ತಮಾ ಮತ್ತು ಮೂಢನಂಬಿಕೆಗಳು

4-yoga

Yoga Practice: ಆರೋಗ್ಯಕರ ಜೀವನಕ್ಕಾಗಿ ಆಹಾರ ಪದ್ಧತಿ ಮತ್ತು ಯೋಗಾಭ್ಯಾಸ

3-

Throat Cancer: ತಂಬಾಕು ಮುಕ್ತ ಜೀವನ

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

Bihar: ಬಿಹಾರದಲ್ಲಿ ಕುಸಿದು ಬಿದ್ದ ಮತ್ತೊಂದು ಸೇತುವೆ- 15 ದಿನಗಳಲ್ಲಿ 10 ಸೇತುವೆ ಕುಸಿತ!

Bihar: ಬಿಹಾರದಲ್ಲಿ ಕುಸಿದು ಬಿದ್ದ ಮತ್ತೊಂದು ಸೇತುವೆ- 15 ದಿನಗಳಲ್ಲಿ 10 ಸೇತುವೆ ಕುಸಿತ!

Sagara: ಗಾಳಿ ಮಳೆಯ ಆರ್ಭಟಕ್ಕೆ ಸಾಲು ಸಾಲು ವಿದ್ಯುತ್ ಕಂಬಗಳು ಧರಾಶಾಹಿ

Sagara: ಮಳೆಯ ಆರ್ಭಟಕ್ಕೆ ಸಾಲು ಸಾಲು ವಿದ್ಯುತ್ ಕಂಬಗಳು ಧರಾಶಾಹಿ

Flashing lights of vehicles; ಮೂರು ದಿನದಲ್ಲಿ 3700 ಪ್ರಕರಣ: ಅಲೋಕ್ ಕುಮಾರ್

Flashing lights of vehicles; ಮೂರು ದಿನದಲ್ಲಿ 3700 ಪ್ರಕರಣ: ಅಲೋಕ್ ಕುಮಾರ್

11-honnavara

Honnavara: ಭಾರೀ ಮಳೆ; ಹಲವು ಮನೆಗಳಿಗೆ ನೆರೆ ನೀರು

Rajasthan: ಚುನಾವಣೆ ವೇಳೆ ನೀಡಿದ ಭರವಸೆಯಂತೆ ಸಚಿವ ಸ್ಥಾನಕ್ಕೆ ಕಿರೋಡಿ ಲಾಲ್‌ ರಾಜೀನಾಮೆ!

Rajasthan: ಚುನಾವಣೆ ವೇಳೆ ನೀಡಿದ ಭರವಸೆಯಂತೆ ಸಚಿವ ಸ್ಥಾನಕ್ಕೆ ಕಿರೋಡಿ ಲಾಲ್‌ ರಾಜೀನಾಮೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.