![Special tribute to Kohli-Rohit by Vistara airlines](https://www.udayavani.com/wp-content/uploads/2024/07/ro-ko-415x229.jpg)
T20 ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ ರವೀಂದ್ರ ಜಡೇಜಾ
ಸಾರ್ವಕಾಲಿಕ ಅತ್ಯುತ್ತಮ ಆಲ್ರೌಂಡರ್ಗಳಲ್ಲಿ ಒಬ್ಬರು...
Team Udayavani, Jun 30, 2024, 5:21 PM IST
![1-jadeja](https://www.udayavani.com/wp-content/uploads/2024/06/1-jadeja-620x414.jpg)
ಹೊಸದಿಲ್ಲಿ: T20 ವಿಶ್ವಕಪ್ ವಿಜಯದ ನಂತರ ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಅವರು ಟಿ 20 ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಆಲ್ ರೌಂಡರ್ ರವೀಂದ್ರ ಜಡೇಜಾ ಅವರೂ ಅದೇ ಹಾದಿಯನ್ನು ಅನುಸರಿಸಿದ್ದಾರೆ.
ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್ಗಳಿಂದ ಜಯ ಸಾಧಿಸಿ ಎರಡನೇ ಬಾರಿ ಟಿ20 ವಿಶ್ವಕಪ್ ಟ್ರೋಫಿಯನ್ನು ಪ್ರಶಸ್ತಿ ಮುಡಿಗೇರಿಸಿಕೊಂಡ ಮರುದಿನ ಜಡೇಜಾ ಟಿ 20 ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.
T20 World Cup 2024 ಪಂದ್ಯಾವಳಿಯಲ್ಲಿ ಜಡೇಜಾ ಅಂತಹದ್ದೇನು ಫಾರ್ಮ್ನಲ್ಲಿರಲಿಲ್ಲ ಆದರೆ ಕಳೆದ ದಶಕದಲ್ಲಿ ವಿಶ್ವ ಕ್ರಿಕೆಟ್ನಲ್ಲಿ ಪ್ರಾಬಲ್ಯ ಸಾಧಿಸಿದ ಎಲ್ಲಾ ಮೂರು ಸ್ವರೂಪಗಳಲ್ಲಿ ಭಾರತ ತಂಡದ ಪರ ಅಮೋಘ ಆಟವಾಡಿದ್ದರು. ಸಾರ್ವಕಾಲಿಕ ಅತ್ಯುತ್ತಮ ಆಲ್ರೌಂಡರ್ಗಳಲ್ಲಿ ಒಬ್ಬರೆಂದು ಪರಿಗಣಿಸಲ್ ಪಟ್ಟಿರುವ ಆಟಗಾರರಾಗಿದ್ದಾರೆ.
ಸಂಭ್ರಮದ ಕ್ಷಣದಲ್ಲಿ ತೇಲಾಡುತ್ತಿರುವ ಸಮಯದಲ್ಲೇ ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿರುವ 35 ರ ಹರೆಯದ ಜಡೇಜಾ ” ಧನ್ಯವಾದ ತುಂಬಿದ ಹೃದಯದಿಂದ ನಾನು T20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ವಿದಾಯ ಹೇಳುತ್ತೇನೆ. ಹೆಮ್ಮೆಯಿಂದ ಓಡುವ ದೃಢವಾದ ಕುದುರೆಯಂತೆ, ನಾನು ಯಾವಾಗಲೂ ನನ್ನ ದೇಶಕ್ಕಾಗಿ ನನ್ನ ಅತ್ಯುತ್ತಮವಾದದ್ದನ್ನು ನೀಡಿದ್ದೇನೆ ಮತ್ತು ಇತರ ಸ್ವರೂಪಗಳಲ್ಲಿ ಅದನ್ನು ಮುಂದುವರಿಸುತ್ತೇನೆ. ಟಿ 20 ವಿಶ್ವಕಪ್ ಗೆಲ್ಲುವ ನನ್ನ ಕನಸು ನನಸಾಯಿತು, ಇದು ನನ್ನ ಟಿ 20 ಅಂತಾರಾಷ್ಟ್ರೀಯ ವೃತ್ತಿಜೀವನದ ಶಿಖರವಾಗಿದೆ. ನೆನಪುಗಳು, ಹರ್ಷೋದ್ಗಾರಗಳು ಮತ್ತು ಅಚಲವಾದ ಬೆಂಬಲಕ್ಕಾಗಿ ಧನ್ಯವಾದಗಳು” ಎಂದು ಬರೆದಿದ್ದಾರೆ.
ಟಾಪ್ ನ್ಯೂಸ್
![Special tribute to Kohli-Rohit by Vistara airlines](https://www.udayavani.com/wp-content/uploads/2024/07/ro-ko-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Special tribute to Kohli-Rohit by Vistara airlines](https://www.udayavani.com/wp-content/uploads/2024/07/ro-ko-150x83.jpg)
Team India: ಕೊಹ್ಲಿ-ರೋಹಿತ್ ಗೆ ವಿಶೇಷ ಗೌರವ ನೀಡಿದ ವಿಸ್ತಾರ ವಿಮಾನ; ಇಲ್ಲಿದೆ ವಿವರ
![Team India; ಹಾರ್ದಿಕ್ ಪಾಂಡ್ಯ ಬಳಿ ಕ್ಷಮೆಯಾಚಿಸಿದ ಮುಂಬೈ ಇಂಡಿಯನ್ಸ್ ಅಭಿಮಾನಿ](https://www.udayavani.com/wp-content/uploads/2024/07/hardik-150x83.jpg)
Team India; ಹಾರ್ದಿಕ್ ಪಾಂಡ್ಯ ಬಳಿ ಕ್ಷಮೆಯಾಚಿಸಿದ ಮುಂಬೈ ಇಂಡಿಯನ್ಸ್ ಅಭಿಮಾನಿ
![Indian Cricket Team met with PM Narendra Modi](https://www.udayavani.com/wp-content/uploads/2024/07/team-India-modi-150x83.jpg)
T20 World Cup ಗೆದ್ದ ಭಾರತ ತಂಡವನ್ನು ಅಭಿನಂದಿಸಿದ ಪ್ರಧಾನಿ ಮೋದಿ
![Team India; ತಾಯ್ನಾಡಿಗೆ ಕಾಲಿಟ್ಟ ಖುಷಿಯಲ್ಲಿ ಕುಣಿದಾಡಿದ ನಾಯಕ ರೋಹಿತ್ ಶರ್ಮಾ](https://www.udayavani.com/wp-content/uploads/2024/07/rohiit-150x83.jpg)
Team India; ತಾಯ್ನಾಡಿಗೆ ಕಾಲಿಟ್ಟ ಖುಷಿಯಲ್ಲಿ ಕುಣಿದಾಡಿದ ನಾಯಕ ರೋಹಿತ್ ಶರ್ಮಾ
![T20 World Cup ಗೆದ್ದು ತಾಯ್ನಾಡಿಗೆ ಮರಳಿದ ಟೀಮ್ ಇಂಡಿಯಾ… ಅದ್ಧೂರಿ ಸ್ವಾಗತ](https://www.udayavani.com/wp-content/uploads/2024/07/india-150x84.jpg)
T20 World Cup ಗೆದ್ದು ತಾಯ್ನಾಡಿಗೆ ಮರಳಿದ ಟೀಮ್ ಇಂಡಿಯಾ… ಅದ್ಧೂರಿ ಸ್ವಾಗತ
MUST WATCH
ಹೊಸ ಸೇರ್ಪಡೆ
![Special tribute to Kohli-Rohit by Vistara airlines](https://www.udayavani.com/wp-content/uploads/2024/07/ro-ko-150x83.jpg)
Team India: ಕೊಹ್ಲಿ-ರೋಹಿತ್ ಗೆ ವಿಶೇಷ ಗೌರವ ನೀಡಿದ ವಿಸ್ತಾರ ವಿಮಾನ; ಇಲ್ಲಿದೆ ವಿವರ
![Up-Police](https://www.udayavani.com/wp-content/uploads/2024/07/Up-Police-150x90.jpg)
Uttara Pradesh: ಹಾಥರಸ್ ದುರಂತಕ್ಕೆ ಸಂಬಂಧಿಸಿ 6 ಮಂದಿ ಬಂಧನ
![1-hemanth-soren-CM](https://www.udayavani.com/wp-content/uploads/2024/07/1-hemanth-soren-CM-150x97.jpg)
Jharkhand; ಮತ್ತೆ ಸಿಎಂ ಆಗಿ ಹೇಮಂತ್ ಪ್ರಮಾಣವಚನ: ಶಿಬು ಸೊರೇನ್ ಭಾಗಿ
![ಬಿಗ್ ಬಾಸ್ ಮನೆಗೆ ವಿವಾದಿತ ಜ್ಯೋತಿಷಿ ವೇಣುಸ್ವಾಮಿ? ಈತ ಹೇಳಿದೆಲ್ಲವೂ ಆಗಿದೆ ಆದರೆ..](https://www.udayavani.com/wp-content/uploads/2024/07/14-2-150x90.jpg)
ಬಿಗ್ ಬಾಸ್ ಮನೆಗೆ ವಿವಾದಿತ ಜ್ಯೋತಿಷಿ ವೇಣುಸ್ವಾಮಿ? ಈತ ಹೇಳಿದೆಲ್ಲವೂ ಆಗಿದೆ ಆದರೆ..
![Team India; ಹಾರ್ದಿಕ್ ಪಾಂಡ್ಯ ಬಳಿ ಕ್ಷಮೆಯಾಚಿಸಿದ ಮುಂಬೈ ಇಂಡಿಯನ್ಸ್ ಅಭಿಮಾನಿ](https://www.udayavani.com/wp-content/uploads/2024/07/hardik-150x83.jpg)
Team India; ಹಾರ್ದಿಕ್ ಪಾಂಡ್ಯ ಬಳಿ ಕ್ಷಮೆಯಾಚಿಸಿದ ಮುಂಬೈ ಇಂಡಿಯನ್ಸ್ ಅಭಿಮಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.