Indian Army: ಆಗ ಸಹಪಾಠಿಗಳು, ಈಗ ಭೂ ಸೇನೆ, ನೌಕಪಡೆ ಮುಖ್ಯಸ್ಥರು!

ಲೆ. ಜನರಲ್ ಉಪೇಂದ್ರ ದ್ವಿವೇದಿ ಭೂ ಸೇನೆ ಮುಖ್ಯಸ್ಥ, ಅಡ್ಮಿರಲ್ ತ್ರಿಪಾಠಿಗೆ ನೌಕಪಡೆ ಹೊಣೆ

Team Udayavani, Jun 30, 2024, 5:46 PM IST

ARMY,-Navy-Chiefs

ನವದೆಹಲಿ: ಭಾರತೀಯ ಸೇನೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಸಹಪಾಠಿಗಳಿಬ್ಬರು ಸೇನೆಯ ಎರಡು ವಿಭಾಗಗಳ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಭೂ ಸೇನೆಗೆ ಮತ್ತು ಅಡ್ಮಿರಲ್ ದಿನೇಶ್ ತ್ರಿಪಾಠಿ ನೌಕಾ ಪಡೆಯ ನೂತನ ಮುಖ್ಯಸ್ಥರಾಗಿದ್ದಾರೆ.

ಭಾರತೀಯ ನೌಕಾ ಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ತ್ರಿಪಾಠಿ ಹಾಗೂ ಭೂ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್‌ ಜನರಲ್ ಉಪೇಂದ್ರ ದ್ವಿವೇದಿ ಮಧ್ಯಪ್ರದೇಶದ ರೇವಾದಲ್ಲಿನ ಸೈನಿಕ ಶಾಲೆಯಲ್ಲಿ ಸಹಪಾಠಿಗಳಾಗಿದ್ದರು. 1970ರ ದಶಕದ ಆರಂಭದಲ್ಲಿ ಇಬ್ಬರೂ 5ಎ ತರಗತಿಯಿಂದ ಶಾಲೆಯಲ್ಲಿ ಒಂದೇ ತರಗತಿಯಲ್ಲಿ ಓದಿದ್ದರು.

ಇಬ್ಬರೂ ಅಧಿಕಾರಿಗಳ ಹಾಜರಿ ಸಂಖ್ಯೆ ನಡುವೆಯೂ ಹೆಚ್ಚಿನ ಅಂತರವಿರಲಿಲ್ಲ. ದ್ವಿವೇದಿ ನೋಂದಣಿ ಸಂಖ್ಯೆ 931 ಹಾಗೂ ತ್ರಿಪಾಠಿ ನೋಂದಣಿ ಸಂಖ್ಯೆ 938 ಇತ್ತು. ಶಾಲೆಯಲ್ಲಿನ ಆರಂಭದ ದಿನಗಳಲ್ಲಿ ಇಬ್ಬರ ನಡುವೆ ಉತ್ತಮ ಬಾಂಧವ್ಯವಿತ್ತು. ಇಬ್ಬರೂ ರಕ್ಷಣಾ ವಿಭಾಗದಲ್ಲಿ ಬೇರೆ ಬೇರೆ ದಿಕ್ಕು ಹಿಡಿದರೂ, ಪ್ರತಿ ಹಂತದಲ್ಲಿಯೂ ಸಂಪರ್ಕದಲ್ಲಿದ್ದರು.

ಮೇ ತಿಂಗಳಲ್ಲಿ ಅಧಿಕಾರ ವಹಿಸಿದ್ದ ತ್ರಿಪಾಠಿ

ಸೇನೆಯಲ್ಲಿನ ಹಿರಿಯ ನಾಯಕತ್ವದಲ್ಲಿನ ಗೆಳೆತನವು ಪಡೆಗಳ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಇಬ್ಬರೂ ಅಧಿಕಾರಿಗಳ ಬಲ್ಲ ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಡ್ಮಿರಲ್ ತ್ರಿಪಾಠಿ ಮೇ 1ರಂದು ಭಾರತೀಯ ನೌಕಾ ಪಡೆ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು. ಲೆ. ಜನರಲ್ ದ್ವಿವೇದಿ ಭಾನುವಾರ (ಜೂ. 30)  ಸೇನಾ ಪಡೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

” ಭಾರತೀಯ ಸೇನೆಯ ಇತಿಹಾಸದಲ್ಲಿ ಮೊದಲ ಬಾರಿ ಇಬ್ಬರು ಅಸಾಧಾರಣವಾದ ವಿದ್ಯಾರ್ಥಿಗಳ ಪೋಷಿಸುವ ಅಪರೂಪದ ಗೌರವ. ಮಧ್ಯಪ್ರದೇಶದ ರೇವಾದ ಸೈನಿಕ ಶಾಲೆಯಲ್ಲಿ ಓದಿ, 50 ವರ್ಷಗಳ ಬಳಿಕ ತಮ್ಮ ತಮ್ಮ ವಿಭಾಗಗಳನ್ನು ಮುನ್ನಡೆಸುವ ಅವಕಾಶ ಪಡೆದಿದ್ದಾರೆ” ಎಂದು ರಕ್ಷಣಾ ಸಚಿವಾಲಯದ ವಕ್ತಾರ ಎ. ಭರತ್ ಭೂಷಣ್ ಬಾಬು ಟ್ವೀಟ್ ಮಾಡಿದ್ದಾರೆ.

ಮನೋಜ್ ಪಾಂಡೆ ನಿವೃತ್ತಿ

2022ರ ಮೇ ನಿಂದ ಭಾರತೀಯ ಭೂ ಸೇನೆ ಮುಖ್ಯಸ್ಥರಾಗಿದ್ದ ಮನೋಜ್ ಪಾಂಡೆ ನಿವೃತ್ತರಾಗಿದ್ದು, ಜನರಲ್ ಉಪೇಂದ್ರ ದ್ವಿವೇದಿ ಅಧಿಕಾರ ವಹಿಸಿಕೊಂಡರು. ದ್ವಿವೇದಿ  ಇದಕ್ಕೂ ಮುನ್ನ ಸೇನಾ ಸಿಬ್ಬಂದಿ ಉಪ ಮುಖ್ಯಸ್ಥರಾಗಿದ್ದರು. ಅವರು ಪರಮ ವಸಿಷ್ಠ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ ಹಾಗೂ ಮೂರು ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚಾರ್ಜ್ ಕಮೆಂಡೇಷನ್ ಕಾರ್ಡ್‌ಗಳನ್ನು ಪಡೆದಿದ್ದಾರೆ.

ಮಧ್ಯಪ್ರದೇಶ ಮೂಲದ ಉಪೇಂದ್ರ ದ್ವಿವೇದಿ, 1981ರ ಜನವರಿಯಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಸೇರ್ಪಡೆಯಾಗಿದ್ದರು. 1984ರಲ್ಲಿ ಜಮ್ಮು ಮತ್ತು ಕಾಶ್ಮೀರ ರೈಫಲ್ಸ್‌ನ 18ನೇ ಬೆಟಾಲಿಯನ್‌ಗೆ ನಿಯೋಜನೆಗೊಂಡಿದ್ದರು. ಕಾಶ್ಮೀರ ಕಣಿವೆ ಹಾಗೂ ರಾಜಸ್ಥಾನ ಮರುಭೂಮಿಗಳಲ್ಲಿ ಅವರು ಸೇನೆಯ ನಿರ್ವಹಿಸಿದ್ದರು.

ಟಾಪ್ ನ್ಯೂಸ್

supreem

NEET-UG ಪರೀಕ್ಷೆ ರದ್ದುಗೊಳಿಸದಂತೆ ನಿರ್ದೇಶನ ನೀಡಿ: 50 ಕ್ಕೂ ಹೆಚ್ಚು ಅಭ್ಯರ್ಥಿಗಳ ಮನವಿ

UK Polls: ಬ್ರಿಟನ್‌ ಸಂಸತ್‌ ಚುನಾವಣೆ-ರಿಷಿ ಪಕ್ಷಕ್ಕೆ ಸೋಲು, ಲೇಬರ್‌ ಪಕ್ಷ ಜಯಭೇರಿ?

UK Polls: ಬ್ರಿಟನ್‌ ಸಂಸತ್‌ ಚುನಾವಣೆ-ರಿಷಿ ಪಕ್ಷಕ್ಕೆ ಸೋಲು, ಲೇಬರ್‌ ಪಕ್ಷ ಜಯಭೇರಿ?

Special tribute to Kohli-Rohit by Vistara airlines

Team India: ಕೊಹ್ಲಿ-ರೋಹಿತ್ ಗೆ ವಿಶೇಷ ಗೌರವ ನೀಡಿದ ವಿಸ್ತಾರ ವಿಮಾನ; ಇಲ್ಲಿದೆ ವಿವರ

Up-Police

Uttara Pradesh: ಹಾಥರಸ್‌ ದುರಂತಕ್ಕೆ ಸಂಬಂಧಿಸಿ 6 ಮಂದಿ ಬಂಧನ

1-hemanth-soren-CM

Jharkhand; ಮತ್ತೆ ಸಿಎಂ ಆಗಿ ಹೇಮಂತ್ ಪ್ರಮಾಣವಚನ: ಶಿಬು ಸೊರೇನ್ ಭಾಗಿ

ಬಿಗ್‌ ಬಾಸ್‌ ಮನೆಗೆ ವಿವಾದಿತ ಜ್ಯೋತಿಷಿ ವೇಣುಸ್ವಾಮಿ? ಈತ ಹೇಳಿದೆಲ್ಲವೂ ಆಗಿದೆ ಆದರೆ..

ಬಿಗ್‌ ಬಾಸ್‌ ಮನೆಗೆ ವಿವಾದಿತ ಜ್ಯೋತಿಷಿ ವೇಣುಸ್ವಾಮಿ? ಈತ ಹೇಳಿದೆಲ್ಲವೂ ಆಗಿದೆ ಆದರೆ..

Team India; ಹಾರ್ದಿಕ್ ಪಾಂಡ್ಯ ಬಳಿ ಕ್ಷಮೆಯಾಚಿಸಿದ ಮುಂಬೈ ಇಂಡಿಯನ್ಸ್ ಅಭಿಮಾನಿ

Team India; ಹಾರ್ದಿಕ್ ಪಾಂಡ್ಯ ಬಳಿ ಕ್ಷಮೆಯಾಚಿಸಿದ ಮುಂಬೈ ಇಂಡಿಯನ್ಸ್ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

supreem

NEET-UG ಪರೀಕ್ಷೆ ರದ್ದುಗೊಳಿಸದಂತೆ ನಿರ್ದೇಶನ ನೀಡಿ: 50 ಕ್ಕೂ ಹೆಚ್ಚು ಅಭ್ಯರ್ಥಿಗಳ ಮನವಿ

Up-Police

Uttara Pradesh: ಹಾಥರಸ್‌ ದುರಂತಕ್ಕೆ ಸಂಬಂಧಿಸಿ 6 ಮಂದಿ ಬಂಧನ

1-hemanth-soren-CM

Jharkhand; ಮತ್ತೆ ಸಿಎಂ ಆಗಿ ಹೇಮಂತ್ ಪ್ರಮಾಣವಚನ: ಶಿಬು ಸೊರೇನ್ ಭಾಗಿ

Hyderabad; ಹತ್ತರ ಬಾಲಕಿಯ ಮೇಲೆ ಮುಗಿಬಿದ್ದ ಹತ್ತು ಮಂದಿ ದುರುಳರು; ಬಾಲಕಿ ಈಗ ಗರ್ಭಿಣಿ

Hyderabad; ಹತ್ತರ ಬಾಲಕಿಯ ಮೇಲೆ ಮುಗಿಬಿದ್ದ ಹತ್ತು ಮಂದಿ ದುರುಳರು; ಬಾಲಕಿ ಈಗ ಗರ್ಭಿಣಿ

CCTV: ಪ್ರಯಾಣಿಕರೇ… ಬಸ್ಸಿನ ಬಾಗಿಲ ಬಳಿ ನಿಲ್ಲುವಾಗ ಇರಲಿ ಎಚ್ಚರ, ತಪ್ಪಿದರೆ…

Video: ಪ್ರಯಾಣಿಕರೇ ಗಮನಿಸಿ… ಬಸ್ಸಿನ ಬಾಗಿಲ ಬಳಿ ನಿಲ್ಲುವಾಗ ಇರಲಿ ಎಚ್ಚರ, ತಪ್ಪಿದರೆ…

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

supreem

NEET-UG ಪರೀಕ್ಷೆ ರದ್ದುಗೊಳಿಸದಂತೆ ನಿರ್ದೇಶನ ನೀಡಿ: 50 ಕ್ಕೂ ಹೆಚ್ಚು ಅಭ್ಯರ್ಥಿಗಳ ಮನವಿ

UK Polls: ಬ್ರಿಟನ್‌ ಸಂಸತ್‌ ಚುನಾವಣೆ-ರಿಷಿ ಪಕ್ಷಕ್ಕೆ ಸೋಲು, ಲೇಬರ್‌ ಪಕ್ಷ ಜಯಭೇರಿ?

UK Polls: ಬ್ರಿಟನ್‌ ಸಂಸತ್‌ ಚುನಾವಣೆ-ರಿಷಿ ಪಕ್ಷಕ್ಕೆ ಸೋಲು, ಲೇಬರ್‌ ಪಕ್ಷ ಜಯಭೇರಿ?

Special tribute to Kohli-Rohit by Vistara airlines

Team India: ಕೊಹ್ಲಿ-ರೋಹಿತ್ ಗೆ ವಿಶೇಷ ಗೌರವ ನೀಡಿದ ವಿಸ್ತಾರ ವಿಮಾನ; ಇಲ್ಲಿದೆ ವಿವರ

Up-Police

Uttara Pradesh: ಹಾಥರಸ್‌ ದುರಂತಕ್ಕೆ ಸಂಬಂಧಿಸಿ 6 ಮಂದಿ ಬಂಧನ

1-hemanth-soren-CM

Jharkhand; ಮತ್ತೆ ಸಿಎಂ ಆಗಿ ಹೇಮಂತ್ ಪ್ರಮಾಣವಚನ: ಶಿಬು ಸೊರೇನ್ ಭಾಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.