Shivamogga; ಅಪಘಾತದಲ್ಲಿ ಮಡಿದವರ ಎಮ್ಮೆಹಟ್ಟಿಯ ಮನೆಗಳಿಗೆ ಕೇಂದ್ರ ಸಚಿವ ಎಚ್ ಡಿಕೆ ಭೇಟಿ

ಉತ್ತಮ ಜೀವನ ನಡೆಸಲು ಸಹರಿಸುತ್ತೇನೆ, ಉದ್ಯೋಗ, ಆಶ್ರಯದ ಭರವಸೆ... ತೆಪ್ಪ ದುರಂತದ ಪ್ರಸ್ತಾಪ

Team Udayavani, Jun 30, 2024, 6:04 PM IST

1-hdk

ಹೊಳೆಹೊನ್ನೂರು: ಹಾವೇರಿಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸುವ ಜತೆಗೆ ಉತ್ತಮ ಜೀವನ ನಡೆಸಲು ಸಹಕರಿಸುತ್ತೇನೆ ಎಂದು ಕೇಂದ್ರ ಉಕ್ಕು ಸಚಿವ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಎಮ್ಮೆಹಟ್ಟಿ ಗ್ರಾಮದಲ್ಲಿ ಮೃತರ ಮನೆಗಳಿಗೆ ಭಾನುವಾರ ಭೇಟಿ ನೀಡಿ ಸಾಂತ್ವನ ಹೇಳಿದರು. ಅಪಘಾತದಲ್ಲಿ ಮೃತ ಪಟ್ಟ ಶರಣಪ್ಪ ನವರ ಮಗ ಅರುಣ್ ರವರಿಗೆ 3 ತಿಂಗಳ ಹಸುಗೂಸು ಇದ್ದು, ಪತ್ನಿಗೆ ಸರ್ಕಾರಿ ಕೆಲಸ. ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪರಶುರಾಮ್ ಮಕ್ಕಳಿಗೆ ವಿದ್ಯಾಭ್ಯಾಸದ ಜತೆಗೆ ಸ್ವಂತ ಮನೆಯನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.

ಆಶಾ ಕಾರ್ಯಕರ್ತೆ ವಿಶಾಲಾಕ್ಷಮ್ಮನ ಮನೆಯಲ್ಲಿ ಬದುಕುಳಿದಿರುವ ಅಂಗವಿಕಲೆ ಅರ್ಪಿತಾಳಿಗೆ ಹೆಚ್ಚಿನ ಕಾಳಜಿಯ ಅವಶ್ಯಕತೆ ಇದೆ. ಅವಳು ಬದುಕಿರುವ ವರಗೂ ಆಕೆಯನ್ನು ಸಾಕಿ ಸಲಹಲು, ಮತ್ತು ಜೀವನ ನಿರ್ವಹಣೆಗೆ ಬೇಕಾಗಬಹುದಾದ ಆರ್ಥಿಕ ಸಹಾಯವನ್ನು ಒದಗಿಸಲಾಗುವುದು ಎಂದರು.

ಮೃತ ಕುಟುಂಬಗಳಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ, ಇಂತದೊಂದು ದುರ್ಘಟನೆ ನಡೆಯಬಾರದಿತ್ತು. ಆದರೆ ವಿಧಿಯ ಮುಂದೆ ನಮ್ಮ ನಿಮ್ಮ ಆಟ ಏನೂ ನಡೆಯುವುದಿಲ್ಲ. ಆದ್ದರಿಂದ ನಾವುಗಳು ಎಷ್ಟು ಹುಷಾರಿರುತ್ತೇವೂ ಅಷ್ಟೇ ಒಳ್ಳೆಯದು ಎಂದರು.

ಈ ಅಪಘಾತದಿಂದ ಮೃತರ ಕುಟುಂಬ ಅಷ್ಟೇ ಅಲ್ಲ, ಇಡೀ ಗ್ರಾಮವೇ ಆತಂಕಕ್ಕೆ ಒಳಗಾಗಿರುವುದು ಕಂಡುಬರುತ್ತಿದೆ. ಆಕಸ್ಮಿಕ ಅವಘಡಗಳು ಸಹಜ. ಇವೆಲ್ಲವನ್ನೂ ಮೆಟ್ಟಿ ನಿಂತು ಬದುಕಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಇಂದಿನ ಯುವಕರು ಉತ್ತಮ ರಸ್ತೆಗಳಿವೆ ಎಂದು ವಾಹನಗಳನ್ನು ಜೋರಾಗಿ ಓಡಿಸುವುದನ್ನು ಬಿಡಬೇಕು. ನಾವು ತಲುಪುವ ಸ್ಥಳ ಅರ್ದ ಘಂಟೆ ತಡವಾಗಬಹುದು ಅಷ್ಟೆ. ಇದರಿಂದ ಯಾವುದೇ ನಷ್ಟ ಇಲ್ಲ. ಬದಲಾಗಿ ಅವಸರ ಮತ್ತು ಅತಿಯಾದ ವೇಗದಿಂದ ಜೀವಕ್ಕೆ ಏನಾದರೂ ಹೆಚ್ಚು ಕಡಿಮೆ ಆದರೆ ನಿಮ್ಮನ್ನು ನಂಬಿಕೊಂಡಿರುವ ಇಡೀ ಕುಟುಂಬವೇ ತೊಂದರೆಗೆ ಒಳಗಾಗುತ್ತದೆ. ಆದ್ದರಿಂದ ಯುವಕರು ಸ್ವಲ್ಪ ನಿಧಾನವಾಗಿ ವಾಹನಗಳನ್ನು ಚಲಾಯಿಸಬೇಕು ಎಂದು ಯುವಕರಿಗೆ ಕಿವಿ ಮಾತು ಹೇಳಿದರು.

ಹಾಡೋನಹಳ್ಳಿ ತೆಪ್ಪ ದುರಂತದ ಪ್ರಸ್ತಾಪ

ಕೆಲ ವರ್ಷಗಳ ಹಿಂದೆ ಹಾಡೋನಹಳ್ಳಿ ಗ್ರಾಮದಲ್ಲಿ ಗಣಪತಿ ವಿಸರ್ಜನೆಯ ವೇಳೆ ತೆಪ್ಪ ಮುಳುಗಿ 12 ಜನ ಮೃತಪಟ್ಟ ಘಟನೆಯನ್ನು ಪ್ರಸ್ತಾಪಿದ ಸಚಿವರು, ಹೆಚ್ಚು ಕಡಿಮೆ ಎಮ್ಮೆಹಟ್ಟಿ ಗ್ರಾಮದಲ್ಲಿ ನಡೆದಿರುವ ಅಪಘಾತ ಪ್ರಕರಣ ಎರಡೂ ತಾಳೆಯಾಗುವಂತಿವೆ. ಅಂದೂ ಕೂಡ ರಾತ್ರಿ ಹಾಡೋನಹಳ್ಳಿ ಗ್ರಾಮಕ್ಕೆ ಶಾಸಕಿ ಸಹೋದರಿ ಶಾರದಾ ಪೂರ್ಯಾ ನಾಯ್ಕ್ ಒಟ್ಟಿಗೆ ಭೇಟಿ ನೀಡಿ ಆ ಕುಟುಂಬಗಳಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗಿತ್ತು. ಪ್ರಸ್ತುತ ಘಟನೆ ತಿಳಿದೊಡನೆ ಶಾಸಕರೊಂದಿಗೆ ಮಾತನಾಡಿದಾಗ ಸಮಾಧಾನವಾಗದೆ ಇದ್ದುದರಿಂದ ಇಂದು ಎಮ್ಮೆಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ ನಿಮ್ಮೆಲ್ಲರೊಂದಿಗೆ ಚರ್ಚಿಸಲು ಅವಕಾಶ ಸಿಕ್ಕಿತು. ನಾಳೆ ಪಾರ್ಲಿಮೆಂಟ್ ಸಭೆ ಇರುವುದರಿಂದ ನಾನು ತುರ್ತಾಗಿ ತೆಳರಳಲಿದ್ದೇನೆ. ಮುಂದೆ ಇನ್ನೊಂದು ದಿನ ಬಿಡುವು ಮಾಡಿಕೊಂಡು ಮತ್ತೆ ಇಲ್ಲಿಗ ಬರುತ್ತೇನೆ. ಆಗ ನಿಮ್ಮಗಳ ಸಮಸ್ಯೆಯನ್ನು ಆಲಿಸಿ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಟಾಪ್ ನ್ಯೂಸ್

Team India; ಹಾರ್ದಿಕ್ ಪಾಂಡ್ಯ ಬಳಿ ಕ್ಷಮೆಯಾಚಿಸಿದ ಮುಂಬೈ ಇಂಡಿಯನ್ಸ್ ಅಭಿಮಾನಿ

Team India; ಹಾರ್ದಿಕ್ ಪಾಂಡ್ಯ ಬಳಿ ಕ್ಷಮೆಯಾಚಿಸಿದ ಮುಂಬೈ ಇಂಡಿಯನ್ಸ್ ಅಭಿಮಾನಿ

pejawar swamiji reacts to Rahul Gandhi’s Hindu remark on parliament

Hindu remark; ಅಂತವರನ್ನು ದೂರ ಇಡಬೇಕು..: ರಾಹುಲ್ ಹೇಳಿಕೆಗೆ ಪೇಜಾವರಶ್ರೀ ಕಿಡಿ

14-gadaga

Uttara Kannada ರೈತಾಪಿ ವರ್ಗದ ಮಿನಿ ಸಂಕ್ರಾಂತಿ ಹಬ್ಬಕ್ಕೆ ಸಿದ್ಧತೆ

Hyderabad; ಹತ್ತರ ಬಾಲಕಿಯ ಮೇಲೆ ಮುಗಿಬಿದ್ದ ಹತ್ತು ಮಂದಿ ದುರುಳರು; ಬಾಲಕಿ ಈಗ ಗರ್ಭಿಣಿ

Hyderabad; ಹತ್ತರ ಬಾಲಕಿಯ ಮೇಲೆ ಮುಗಿಬಿದ್ದ ಹತ್ತು ಮಂದಿ ದುರುಳರು; ಬಾಲಕಿ ಈಗ ಗರ್ಭಿಣಿ

“ದರ್ಶನ್‌ ನಿರಪರಾಧಿ ಎಂದು ಸಾಬೀತುಪಡಿಸಿ ಹೊರಬರುತ್ತಾರೆ..” ಸುಮಲತಾ ಸುದೀರ್ಘ ಪೋಸ್ಟ್

“ದರ್ಶನ್‌ ನಿರಪರಾಧಿ ಎಂದು ಸಾಬೀತುಪಡಿಸಿ ಹೊರಬರುತ್ತಾರೆ..” ಸುಮಲತಾ ಸುದೀರ್ಘ ಪೋಸ್ಟ್

tock Market: ಬಿಎಸ್‌ ಇ, ನಿಫ್ಟಿ ಭಾರೀ ಏರಿಕೆ-ಸೆಬಿಗೆ CJI ಚಂದ್ರಚೂಡ್‌ ಕೊಟ್ಟ ಸಲಹೆ ಏನು?

Stock Market: ಬಿಎಸ್‌ ಇ, ನಿಫ್ಟಿ ಭಾರೀ ಏರಿಕೆ-ಸೆಬಿಗೆ CJI ಚಂದ್ರಚೂಡ್‌ ಕೊಟ್ಟ ಸಲಹೆ ಏನು?

CCTV: ಪ್ರಯಾಣಿಕರೇ… ಬಸ್ಸಿನ ಬಾಗಿಲ ಬಳಿ ನಿಲ್ಲುವಾಗ ಇರಲಿ ಎಚ್ಚರ, ತಪ್ಪಿದರೆ…

Video: ಪ್ರಯಾಣಿಕರೇ ಗಮನಿಸಿ… ಬಸ್ಸಿನ ಬಾಗಿಲ ಬಳಿ ನಿಲ್ಲುವಾಗ ಇರಲಿ ಎಚ್ಚರ, ತಪ್ಪಿದರೆ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Agumbe Ghat; ಓಮಿನಿ ಮೇಲೆ ಬಿದ್ದ ಮರ; ಪಾರಾದ ಪ್ರಯಾಣಿಕರು

Agumbe Ghat; ಓಮಿನಿ ಮೇಲೆ ಬಿದ್ದ ಮರ; ಪಾರಾದ ಪ್ರಯಾಣಿಕರು

Sagara: ಗಾಳಿ ಮಳೆಯ ಆರ್ಭಟಕ್ಕೆ ಸಾಲು ಸಾಲು ವಿದ್ಯುತ್ ಕಂಬಗಳು ಧರಾಶಾಹಿ

Sagara: ಮಳೆಯ ಆರ್ಭಟಕ್ಕೆ ಸಾಲು ಸಾಲು ವಿದ್ಯುತ್ ಕಂಬಗಳು ಧರಾಶಾಹಿ

SHIVAMOGGA

Shimoga; ಆರಿದ್ರಾ ಮಳೆ ಅಬ್ಬರ, ಮೈದುಂಬಿದ ತುಂಗೆ, ಶರಾವತಿ, ಭದ್ರೆ

Thirthahalli: ಗಾಳಿ ಮಳೆಯ ಅಬ್ಬರಕ್ಕೆ ಕುಸಿದು ಬಿತ್ತು ಯಕ್ಷಗಾನ ಕಲಾವಿದನ ಮನೆ

Thirthahalli: ಗಾಳಿ ಮಳೆಯ ಅಬ್ಬರಕ್ಕೆ ಕುಸಿದು ಬಿತ್ತು ಯಕ್ಷಗಾನ ಕಲಾವಿದನ ಮನೆ

Sagara ರಸ್ತೆ ಪಕ್ಕದಲ್ಲಿಯೇ ಶಾಲಾ ಬಸ್‌ಗಳ ನಿಲುಗಡೆ

Sagara ರಸ್ತೆ ಪಕ್ಕದಲ್ಲಿಯೇ ಶಾಲಾ ಬಸ್‌ಗಳ ನಿಲುಗಡೆ

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

Team India; ಹಾರ್ದಿಕ್ ಪಾಂಡ್ಯ ಬಳಿ ಕ್ಷಮೆಯಾಚಿಸಿದ ಮುಂಬೈ ಇಂಡಿಯನ್ಸ್ ಅಭಿಮಾನಿ

Team India; ಹಾರ್ದಿಕ್ ಪಾಂಡ್ಯ ಬಳಿ ಕ್ಷಮೆಯಾಚಿಸಿದ ಮುಂಬೈ ಇಂಡಿಯನ್ಸ್ ಅಭಿಮಾನಿ

ತೆಕ್ಕಟ್ಟೆ: ಕೆಳಗಿಳಿದರೆ ಕೆಸರು; ಮೇಲೇರಿದರೆ ಡೇಂಜರು!

ತೆಕ್ಕಟ್ಟೆ: ಕೆಳಗಿಳಿದರೆ ಕೆಸರು; ಮೇಲೇರಿದರೆ ಡೇಂಜರು!

Kandagal ಗ್ರಾಮಸ್ಥರಿಗೆ ಕಾಟ ಕೊಡುತ್ತಿದ್ದ ಕೋತಿ ಸೆರೆ

Kandagal ಗ್ರಾಮಸ್ಥರಿಗೆ ಕಾಟ ಕೊಡುತ್ತಿದ್ದ ಕೋತಿ ಸೆರೆ

pejawar swamiji reacts to Rahul Gandhi’s Hindu remark on parliament

Hindu remark; ಅಂತವರನ್ನು ದೂರ ಇಡಬೇಕು..: ರಾಹುಲ್ ಹೇಳಿಕೆಗೆ ಪೇಜಾವರಶ್ರೀ ಕಿಡಿ

Agumbe Ghat; ಓಮಿನಿ ಮೇಲೆ ಬಿದ್ದ ಮರ; ಪಾರಾದ ಪ್ರಯಾಣಿಕರು

Agumbe Ghat; ಓಮಿನಿ ಮೇಲೆ ಬಿದ್ದ ಮರ; ಪಾರಾದ ಪ್ರಯಾಣಿಕರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.