![Kamlashile Temple; ಕಮಲಶಿಲೆ ದೇವಿಗೆ ಕುಬ್ಜಾ ಸ್ನಾನ](https://www.udayavani.com/wp-content/uploads/2024/07/Kamlashile-415x304.jpg)
Mann Ki Baat ಕಬ್ಬನ್ ಪಾರ್ಕ್ನಲ್ಲಿ ಸಂಸ್ಕೃತ ಕಲರವ: ಮೋದಿ ಮೆಚ್ಚುಗೆ
"ಸಂಸ್ಕೃತ ವಾರಾಂತ್ಯ': ಸಮಷ್ಠಿಗೆ ಮನ್ ಕಿ ಬಾತ್ನ 111ನೇ ಆವೃತ್ತಿಯಲ್ಲಿ ಶ್ಲಾಘನೆ
Team Udayavani, Jul 1, 2024, 1:55 AM IST
![Mann Ki Baat ಕಬ್ಬನ್ ಪಾರ್ಕ್ನಲ್ಲಿ ಸಂಸ್ಕೃತ ಕಲರವ: ಮೋದಿ ಮೆಚ್ಚುಗೆ](https://www.udayavani.com/wp-content/uploads/2024/07/mann-620x405.jpg)
ಹೊಸದಿಲ್ಲಿ: ಸಂಸ್ಕೃತವನ್ನು “ಮಾತ ನಾಡುವ ಭಾಷೆ’ಯನ್ನಾಗಿಸುವ ನಿಟ್ಟಿನಲ್ಲಿ ಕೊಪ್ಪಳ ಮೂಲದ ಸಮಷ್ಠಿ ಗುಬ್ಬಿ ಅವರು ಬೆಂಗಳೂರಿನ ಕಬ್ಬನ್ ಪಾರ್ಕ್ನಲ್ಲಿ ನಡೆಸುತ್ತಿರುವ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ರವಿವಾರ 111ನೇ ಆವೃತ್ತಿಯ ಮನ್ ಕಿ ಬಾತ್ನಲ್ಲಿ ಪ್ರಧಾನಿ ಮೋದಿಯವರು ಈ ಬಗ್ಗೆ ಉಲ್ಲೇಖೀಸಿ, ಮೆಚ್ಚುಗೆ ಸೂಚಿಸಿದ್ದಾರೆ. ದೇಶದ ಪ್ರಾಚೀನ ತಿಳಿವಳಿಕೆ ಮತ್ತು ವಿಜ್ಞಾನದ ಬೆಳವಣಿಗೆ ಯಲ್ಲಿ ಭಾಷೆಯು ಮಹತ್ವದ ಪಾತ್ರವನ್ನು ವಹಿಸಿದೆ.
ಈ ನಿಟ್ಟಿನಲ್ಲಿ ಇತ್ತೀಚೆಗಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಕೆಲವರು ಪ್ರಯತ್ನ ಆರಂಭಿಸಿದ್ದಾರೆ. ನಗರದಲ್ಲಿ ಕಬ್ಬನ್ ಪಾರ್ಕ್ ಎಂಬ ಉದ್ಯಾನವನವಿದೆ. ಅಲ್ಲಿ ಒಂದು ಹೊಸ ಸಂಪ್ರದಾಯವನ್ನು ಆರಂಭಿಸಲಾಗಿದೆ. ವಾರದಲ್ಲಿ ಒಂದು ದಿನ ಅಂದರೆ ರವಿವಾರ ಅಲ್ಲಿ ಮಕ್ಕಳು, ಯುವಕರು ಮತ್ತು ಹಿರಿಯ ನಾಗರಿಕರು ಪರಸ್ಪರ ಸಂಸ್ಕೃತ ಭಾಷೆಯಲ್ಲಿ ಮಾತನಾಡುತ್ತಾರೆ. ಈ ಕಾರ್ಯಕ್ರಮಕ್ಕೆ ಅವರು “ಸಂಸ್ಕೃತ ವಾರಾಂತ್ಯ’ ಎಂದು ಹೆಸರಿಟ್ಟಿದ್ದಾರೆ. ಸ್ಥಾಯಿ ಡಾಟ್ ಇನ್ ಎಂಬ ವೆಬ್ಸೈಟ್ ಮೂಲಕ ಸಮಷ್ಠಿ ಗುಬ್ಬಿ ಎಂಬ ಮಹಿಳೆ ಇದನ್ನು ಆರಂಭಿಸಿದ್ದು, ಈಗ ಬೆಂಗಳೂರಿನಾದ್ಯಂತ ಭಾರೀ ಜನಪ್ರಿಯತೆ ಪಡೆದಿದೆ. ಗುಬ್ಬಿ ಅವರಂಥ ವ್ಯಕ್ತಿಗಳಿಂದ ಪ್ರೇರಣೆ ಪಡೆದು ನಾವೆಲ್ಲರೂ ದೇಶದ ಪ್ರಾಚೀನ ಭಾಷೆಯನ್ನು ಉತ್ತೇಜಿಸುವ ಕೆಲಸ ಮಾಡಬೇಕು ಎಂದು ಮೋದಿ ಹೇಳಿದ್ದಾರೆ.
ನನ್ನ ಪ್ರಯತ್ನವನ್ನು ಪ್ರಧಾನಿಯವರು ಮನ್ ಕಿ ಬಾತ್ನಲ್ಲಿ ಶ್ಲಾ ಸಿರುವುದು ಹಾಗೂ ನನ್ನಿಂದ ಪ್ರೇರಣೆ ಪಡೆಯುವಂತೆ ದೇಶವಾಸಿಗಳಿಗೆ ಅವರು ಕರೆ ನೀಡಿರುವುದು ನನಗೆ ಬಹಳ ಸಂತಸ ತಂದಿದೆ. ನಾನು ಸಂಸ್ಕೃತವನ್ನು ಜನಪ್ರಿಯಗೊಳಿಸಲು ಹಲವು ವರ್ಷಗಳಿಂದ ಶ್ರಮಿಸುತ್ತಿದ್ದೇನೆ. ಸಮಾಜದ ಎಲ್ಲ ವರ್ಗದ ಜನರು ಸಂಸ್ಕೃತದಲ್ಲಿ ಸಂವಹನ ನಡೆಸಬೇಕು ಎಂಬುದು ನಮ್ಮ ಆಶಯ.- ಸಮಷ್ಠಿ ಗುಬ್ಬಿ
ಟಾಪ್ ನ್ಯೂಸ್
![Kamlashile Temple; ಕಮಲಶಿಲೆ ದೇವಿಗೆ ಕುಬ್ಜಾ ಸ್ನಾನ](https://www.udayavani.com/wp-content/uploads/2024/07/Kamlashile-415x304.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.