![1-aaaa](https://www.udayavani.com/wp-content/uploads/2024/07/1-aaaa-415x234.jpg)
ಹೆಚ್ಚು ಮಂದಿ ವಿಡಿಯೋ ನೋಡಬೇಕೆಂದು ಟವರ್ ಏರಿದ ಯೂಟ್ಯೂಬರ್: ಮನವೊಲಿಕೆಗೆ ಖಾಕಿ ಸುಸ್ತು
Team Udayavani, Jul 1, 2024, 12:15 PM IST
![ಹೆಚ್ಚು ಮಂದಿ ವಿಡಿಯೋ ನೋಡಬೇಕೆಂದು ಟವರ್ ಏರಿದ ಯೂಟ್ಯೂಬರ್: ಮನವೊಲಿಕೆಗೆ ಖಾಕಿ ಸುಸ್ತು](https://www.udayavani.com/wp-content/uploads/2024/07/8-620x372.jpg)
ಗ್ರೇಟರ್ ನೋಯ್ಡಾ: ಆನ್ ಲೈನ್ ನಲ್ಲಿ ಮಿಂಚಬೇಕೆನ್ನುವ ಕಾರಣದಿಂದ ಯುವಕನೊಬ್ಬ ಟವರ್ ಹತ್ತಿ ರಾದ್ಧಾಂತ ಸೃಷ್ಟಿಸಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.
ʼನೀಲೇಶ್ವರ್ 22ʼ ಎನ್ನುವ ಯೂಟ್ಯೂಬ್ ಚಾನೆಲ್ ಹೊಂದಿರುವ ನೀಲೇಶ್ವರ್ ಯೂಟ್ಯೂಬ್ ನಲ್ಲಿ ತನ್ನ ವಿಡಿಯೋಗೆ ಹೆಚ್ಚಿನ ವೀಕ್ಷಣೆ ಬರಬೇಕೆನ್ನುವ ಕಾರಣದಿಂದ ಅಪಾಯಕಾರಿ ಸಾಹಸವನ್ನು ಮಾಡಲು ಮುಂದಾಗಿ ಇಕ್ಕಟ್ಟಿಗೆ ಸಿಲುಕಿದ್ದಾರೆ.
8.87 ಸಾವಿರ ಚಂದಾದಾರರಿರುವ ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಹೆಚ್ಚಿನ ವೀಕ್ಷಣೆ ಬರಬೇಕೆನ್ನುವ ನಿಟ್ಟಿನಲ್ಲಿ ನೀಲೇಶ್ವರ್ ಅಪಾಯಕಾರಿ ಸಾಹಸವನ್ನು ಕೈಗೊಳ್ಳಲು ನಿರ್ಧರಿಸಿದ್ದಾರೆ.
ತನ್ನ ಸ್ನೇಹಿತನ ಬಳಿ ಲೈವ್ ಸ್ಟ್ರೀಮ್ ವಿಡಿಯೋ ಮಾಡಲು ಹೇಳಿ, ನೀಲ್ವೇಶ್ವರ್ ಎತ್ತರದ ಟವರ್ ವೊಂದಕ್ಕೆ ಏರಿದ್ದಾರೆ. ಏರುತ್ತಾ ಹೋದಂತೆ ಆತನ ಸ್ನೇಹಿತ ಕೆಳಗಡೆ ನಿಂತು ವಿಡಿಯೋವನ್ನು ಚಿತ್ರೀಕರಿಸಿದ್ದಾರೆ.
ಯುವಕನ ಅಪಾಯಕಾರಿ ಹಾಗೂ ಹುಚ್ಚ ಸಾಹಸವನ್ನು ನೋಡಲು ಇತ್ತ ಗ್ರಾಮಸ್ಥರು ಒಟ್ಟು ಸೇರಿದಾಗ ಕೆಳಗಡೆ ನಿಂತು ವಿಡಿಯೋ ಮಾಡುತ್ತಿದ್ದ ನೀಲ್ವೇಶ್ವರ್ ಸ್ನೇಹಿತ ಗಾಬರಿಗೊಂಡು ಸ್ಥಳದಿಂದ ಪರಾರಿ ಆಗಿದ್ದಾನೆ.
ಇನ್ನೊಂದೆಡೆ ಯುವಕನನ್ನು ಕೆಳಗಿಳಿಸಲು ಪೊಲೀಸರು ಸ್ಥಳಕ್ಕೆ ಬಂದಿತ್ತು. ಪೊಲೀಸರು ಸತತ 5 ಗಂಟೆಗಳ ಯುವಕನ ಮನವೊಲಿಸಿದ ಬಳಿಕ ಆತನನ್ನು ಸುರಕ್ಷಿತವಾಗಿ ಟವರ್ ನಿಂದ ಕೆಳಗಿಳಿಸಿದ್ದಾರೆ.
ಆನ್ಲೈನ್ ಜನಪ್ರಿಯತೆಗಾಗಿ ಅಪಾಯಕಾರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ನಿಲ್ಲಿಸಬೇಕೆಂದು ಪೊಲೀಸರು ಹೇಳಿದ್ದು, ಈ ಕೃತ್ಯದ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದೆಂದು ಪೊಲೀಸರು ಹೇಳಿದ್ದಾರೆ.
ಟಾಪ್ ನ್ಯೂಸ್
![1-aaaa](https://www.udayavani.com/wp-content/uploads/2024/07/1-aaaa-415x234.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![1-aaaa](https://www.udayavani.com/wp-content/uploads/2024/07/1-aaaa-150x84.jpg)
Mumbai; ಟೀಮ್ ಇಂಡಿಯಾ ಸ್ವಾಗತ ಮೆರವಣಿಗೆ ಬಳಿಕ ಭಾರೀ ಕಸ ಸಂಗ್ರಹ
![pune](https://www.udayavani.com/wp-content/uploads/2024/07/pune-150x83.jpg)
Pune Porsche crash; 300 ಪದಗಳ ಪ್ರಬಂಧ ಬರೆದು ಸಲ್ಲಿಸಿದ ಬಾಲಾಪರಾಧಿ
![ತನಗೆ ಕಚ್ಚಿದ ಹಾವಿಗೆ ಎರಡು ಬಾರಿ ಕಚ್ಚಿದ ವ್ಯಕ್ತಿ… ಹಾವು ಸತ್ತಿತು, ವ್ಯಕ್ತಿ ಬದುಕಿದ](https://www.udayavani.com/wp-content/uploads/2024/07/snake-1-150x91.jpg)
Snake: ಹಾವು ಕಚ್ಚಿತೆಂದು ಹಾವಿಗೆ ಎರಡು ಬಾರಿ ಕಚ್ಚಿದ… ಹಾವು ಸತ್ತಿತು, ವ್ಯಕ್ತಿ ಬದುಕಿದ
![Panaji: ಮಹದಾಯಿ ಪ್ರವಾಹ ಪ್ರಾಧಿಕಾರದ ನಿಯೋಗದಿಂದ ಕಳಸಾ ಬಂಡೂರಿ ಕಾಮಗಾರಿ ಪರಿಶೀಲನೆ](https://www.udayavani.com/wp-content/uploads/2024/07/pramod-sawanth-150x90.jpg)
Panaji: ಮಹದಾಯಿ ಪ್ರವಾಹ ಪ್ರಾಧಿಕಾರದ ನಿಯೋಗದಿಂದ ಕಳಸಾ ಬಂಡೂರಿ ಕಾಮಗಾರಿ ಪರಿಶೀಲನೆ
![New NEET Exam: ಮುಂದೂಡಿಕೆಯಾದ 2 ವಾರದ ಬಳಿಕ ನೀಟ್ ಪಿಜಿ ಪರೀಕ್ಷೆ ದಿನಾಂಕ ಘೋಷಣೆ](https://www.udayavani.com/wp-content/uploads/2024/07/Exam-2-150x85.jpg)
New NEET Exam: ಮುಂದೂಡಿಕೆಯಾದ 2 ವಾರದ ಬಳಿಕ ನೀಟ್ ಪಿಜಿ ಪರೀಕ್ಷೆ ದಿನಾಂಕ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.