![Earthquake: ತಿಕೋಟಾ ಭಾಗದಲ್ಲಿ ಲಘು ಭೂಕಂಪ… ಮನೆಯಿಂದ ಹೊರ ಓಡಿಬಂದ ಜನ](https://www.udayavani.com/wp-content/uploads/2024/07/earthquake1-415x225.jpg)
Storm: ವಿಂಡೀಸ್ನಲ್ಲೇ ಉಳಿದ ಭಾರತ ಕ್ರಿಕೆಟ್ ತಂಡ
Team Udayavani, Jul 2, 2024, 6:36 AM IST
![1-asddasdsa](https://www.udayavani.com/wp-content/uploads/2024/07/1-asddasdsa-620x414.jpg)
ಬ್ರಿಜ್ಟೌನ್: ಐತಿಹಾಸಿಕ ಟಿ20 ವಿಶ್ವಕಪ್ ಗೆದ್ದ ಬಳಿಕ ತವರಿಗೆ ಮರಳಬೇಕಿದ್ದ ಭಾರತ ಕ್ರಿಕೆಟ್ ತಂಡ, ಕೆರಿಬಿಯನ್ ರಾಷ್ಟ್ರದಲ್ಲಿ ಬೀಸುತ್ತಿರುವ ಭಾರೀ ಚಂಡಮಾರುತದ ಕಾರಣ ಅಲ್ಲೇ ಉಳಿದುಕೊಂಡಿದೆ. ಮಳೆ, ಚಂಡಮಾರುತದಿಂದಾಗಿ ಅಲ್ಲಿನ ಪರಿಸ್ಥಿತಿ ಅಪಾಯ ಮಟ್ಟದಲ್ಲಿರುವುದರಿಂದ ವಿಮಾನ ನಿಲ್ದಾಣಗಳು ಬಂದ್ ಆಗಿವೆ. ಹೀಗಾಗಿ, ರೋಹಿತ್ ಶರ್ಮ ಪಡೆ ತವರಿಗೆ ವಾಪಸಾಗುವುದು ವಿಳಂಬಗೊಳ್ಳುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ.
ಭಾರತ ತಂಡದ ಆಟಗಾರರು ಮತ್ತವರ ಕುಟುಂಬಸ್ಥರು, ಬೆಂಬಲ ಸಿಬಂದಿ, ಬಿಸಿಸಿಐ ಅಧಿಕಾರಿಗಳು ಸೇರಿದ ಇಡೀ ತಂಡ ಬಾರ್ಬಡಾಸ್ ಕರಾವಳಿ ತೀರದಲ್ಲಿರುವ ಹೊಟೇಲ್ನಲ್ಲಿ ತಂಗಿದೆ. ಚಂಡಮಾರುತದ ಕಾರಣ, ಭಾರತೀಯ ಆಟಗಾರರಿರುವ ಹೊಟೇಲ್ ಸೇವೆಯಲ್ಲೂ ವ್ಯತ್ಯಯವಾಗಿದೆ ಎಂದು ವರದಿಯಾಗಿದೆ.
ಅಪಾಯಕಾರಿಯಾಗಿ, ಗಂಟೆಗೆ 130 ಕಿ.ಮೀ.ಗೂ ವೇಗವಾಗಿ ಗಾಳಿ ಬೀಸುತ್ತಿರುವುದರಿಂದ ಕೆರಿಬಿಯನ್ ರಾಷ್ಟ್ರಕ್ಕೆ ಭೇಟಿ ನೀಡಿರುವ ಪ್ರವಾಸಿಗರಿಗೆ ಒಳಾಂಗಣದಲ್ಲೇ ಉಳಿದುಕೊಳ್ಳುವಂತೆ ಎಚ್ಚರಿಕೆ ನೀಡಲಾಗಿದೆ ಎಂದೂ ವರದಿಗಳು ಹೇಳಿವೆ. ಅಲ್ಲದೇ ಬಾರ್ಬಡಾಸ್ನಲ್ಲಿ ನಿಷೇದಾಜ್ಞೆ ಜಾರಿ ಮಾಡಿದ್ದು, ಜನರಿಗೆ ಮನೆಗಳಿಂದ ಹೊರಬರದಂತೆ ಸೂಚಿಸಲಾಗಿದೆ.
ಟಾಪ್ ನ್ಯೂಸ್
![Earthquake: ತಿಕೋಟಾ ಭಾಗದಲ್ಲಿ ಲಘು ಭೂಕಂಪ… ಮನೆಯಿಂದ ಹೊರ ಓಡಿಬಂದ ಜನ](https://www.udayavani.com/wp-content/uploads/2024/07/earthquake1-415x225.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![23](https://www.udayavani.com/wp-content/uploads/2024/07/23-150x90.jpg)
“140ಕ್ಕೂ ಹೆಚ್ಚು ಮುಡಾ ಕಡತ ಕದ್ದೊಯ್ದ ಅಧಿಕಾರಿಗಳು’ʼ: ಶಾಸಕ ಟಿ.ಎಸ್. ಶ್ರೀವತ್ಸ
![Earthquake: ತಿಕೋಟಾ ಭಾಗದಲ್ಲಿ ಲಘು ಭೂಕಂಪ… ಮನೆಯಿಂದ ಹೊರ ಓಡಿಬಂದ ಜನ](https://www.udayavani.com/wp-content/uploads/2024/07/earthquake1-150x81.jpg)
Earthquake: ತಿಕೋಟಾ ಭಾಗದಲ್ಲಿ ಲಘು ಭೂಕಂಪ… ಮನೆಯಿಂದ ಹೊರ ಓಡಿಬಂದ ಜನ
![RadhaMohan-das](https://www.udayavani.com/wp-content/uploads/2024/07/RadhaMohan-das-1-150x90.jpg)
Karnataka New Incharge: ಬಿಜೆಪಿ ನಾಯಕರಿಗೆ ಡಾ.ಅಗರ್ವಾಲ್ “ಇಂಜೆಕ್ಷನ್’
![Eshwara Khandre: ಅರ್ಜುನ ಆನೆ ಸ್ಮಾರಕ ಡಿಸೆಂಬರ್ಗೆ ರೆಡಿ: ಸಚಿವ ಖಂಡ್ರೆ](https://www.udayavani.com/wp-content/uploads/2024/07/22-150x90.jpg)
Eshwara Khandre: ಅರ್ಜುನ ಆನೆ ಸ್ಮಾರಕ ಡಿಸೆಂಬರ್ಗೆ ರೆಡಿ: ಸಚಿವ ಖಂಡ್ರೆ
![ಕಾರು ಚಾಲನೆ ವೇಳೆ ಚಾಲಕನಿಗೆ ಹೃದಯಾಘಾತ… ಹಲವು ವಾಹನಗಳಿಗೆ ಡಿಕ್ಕಿ, ನಾಲ್ವರಿಗೆ ಗಾಯ](https://www.udayavani.com/wp-content/uploads/2024/07/car-2-150x102.jpg)
ಕಾರು ಚಾಲನೆ ವೇಳೆ ಚಾಲಕನಿಗೆ ಹೃದಯಾಘಾತ… ಹಲವು ವಾಹನಗಳಿಗೆ ಡಿಕ್ಕಿ, ನಾಲ್ವರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.