![rain 21](https://www.udayavani.com/wp-content/uploads/2024/07/rain-21-415x263.jpg)
Shivashakti: ಚಂದ್ರನ ಶಿವಶಕ್ತಿ ಪಾಯಿಂಟ್ನಲ್ಲಿ ಪ್ರಜ್ಞಾನ್ನಿಂದ ಶಿಲೆಗಳ ತುಣುಕು ಪತ್ತೆ!
ಚಂದಿರನ ವಾತಾವರಣ, ಶಿಲೆಗಳ ಹಂಚಿಕೆ, ಮೂಲ ತಿಳಿಯಲು ಸಹಕಾರಿ
Team Udayavani, Jul 2, 2024, 11:32 PM IST
![Fragment of rocks discovered by Pragyan at Moon Shivashakti Point!](https://www.udayavani.com/wp-content/uploads/2024/07/shiv-shakti-620x342.jpg)
ನವದೆಹಲಿ: ಚಂದ್ರನ ಕುರಿತ ಅನ್ವೇಷಣೆಯಲ್ಲಿ ಮಹತ್ವದ ಹೆಜ್ಜೆಯೆಂಬಂತೆ, ಭಾರತದ ಚಂದ್ರಯಾನ-3ರ ಪ್ರಜ್ಞಾನ್ ರೋವರ್ ಪತ್ತೆ ಹಚ್ಚಿದ್ದ ಕೆಲವು ಪ್ರಮುಖ ಅಂಶಗಳು ಇತ್ತೀಚೆಗೆ ಬಹಿರಂಗಗೊಂಡಿವೆ.
ಚಂದಿರನ ಒಂದು ದಿನ (ಭೂಮಿಯ 29.5 ದಿನ)ದಲ್ಲಿ ರೋವರ್ ಶಶಾಂಕನ ದಕ್ಷಿಣ ಮೇಲ್ಮೈನಲ್ಲಿ ಸುಮಾರು 103 ಮೀಟರ್ನಷ್ಟು ಸುತ್ತಾಡಿದೆ. ವಿಕ್ರಂ ಲ್ಯಾಂಡರ್ ಇಳಿದಿದ್ದಂತಹ ಸ್ಥಳದಲ್ಲಿರುವ ಸಣ್ಣ ಕುಳಿಯಲ್ಲಿ ಹಾಗೂ ಆ ಕುಳಿಯ ಗೋಡೆಗಳಲ್ಲಿ ಮತ್ತು ಅಂಚಿನ ಸುತ್ತಲೂ ಸಣ್ಣದಾದ ಶಿಲೆಗಳ ತುಣುಕು (1ರಿಂದ 11.5 ಸೆ.ಮೀ. ಗಾತ್ರದವು) ಗಳನ್ನು ರೋವರ್ ಪತ್ತೆಹಚ್ಚಿತ್ತು. ಗ್ರಹದ ತಳಪಾಯವನ್ನು ಆವರಿಸಿರುವ ಘನ ಪದರದಲ್ಲಿನ ಶಿಲೆಗಳು ಕ್ರಮೇಣ ಒರಟಾಗುತ್ತವೆ ಎಂಬ ಈ ಹಿಂದಿನ ಅಧ್ಯಯನಗಳಿಗೆ ಇದು ಪೂರಕವಾಗಿದೆ.
ಶಿವಶಕ್ತಿ ಪಾಯಿಂಟ್ನ ಸುಮಾರು 30 ಮೀಟರ್ನಷ್ಟು ಪಶ್ಚಿಮಕ್ಕೆ ಹೋದಂತೆ ಶಿಲೆಗಳ ತುಣುಕುಗಳ ಪ್ರಮಾಣ ಹಾಗೂ ಗಾತ್ರವೂ ಹೆಚ್ಚಿರುವುದನ್ನು ರೋವರ್ ಗುರುತಿಸಿತ್ತು. ಇವುಗಳ ಪೈಕಿ 2 ಶಿಲೆಗಳು ಅವನತಿಯ ಕುರುಹನ್ನು ಪ್ರದರ್ಶಿಸಿದೆ. ಅಂದರೆ, ಕಾಲಗಳು ಉರುಳಿದಂತೆ ಚಂದಿರನ ಮೇಲ್ಮೈನಲ್ಲಿರುವ ವಸ್ತುಗಳ ಮೇಲೆ ವಾತಾವರಣವು ಹೇಗೆ ಪ್ರಭಾವ ಬೀರುತ್ತವೆ ಎನ್ನುವುದರ ಮಾಹಿತಿಯನ್ನು ಇದು ನೀಡುತ್ತದೆ. ಶಿಲೆಗಳ ತುಣುಕುಗಳ ಹಂಚಿಕೆ ಮತ್ತು ಮೂಲವನ್ನು ತಿಳಿಯಲು ಇದು ಸಹಾಯಕವಾಗಲಿದೆ.
ಟಾಪ್ ನ್ಯೂಸ್
![rain 21](https://www.udayavani.com/wp-content/uploads/2024/07/rain-21-415x263.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![BJP 2](https://www.udayavani.com/wp-content/uploads/2024/07/BJP-2-2-150x91.jpg)
LDF ; ಸುರೇಶ್ ಗೋಪಿಯವರನ್ನು ಹೊಗಳಿದ್ದ ತ್ರಿಶೂರ್ ಮೇಯರ್ ಬೆಂಬಲಕ್ಕೆ ನಿಂತ ಬಿಜೆಪಿ
![1-rasht-aa](https://www.udayavani.com/wp-content/uploads/2024/07/1-rasht-aa-150x85.jpg)
Puri ಜಗದ್ವಿಖ್ಯಾತ ಜಗನ್ನಾಥ ರಥಯಾತ್ರೆ ಆರಂಭ; ಸಾಕ್ಷಿಯಾದ ರಾಷ್ಟ್ರಪತಿ ದ್ರೌಪದಿ ಮುರ್ಮು
![Mohua Moitra](https://www.udayavani.com/wp-content/uploads/2024/07/Mohua-Moitra-150x89.jpg)
NCW ಮುಖ್ಯಸ್ಥೆ ವಿರುದ್ಧ ಅವಹೇಳನಕಾರಿ ಪದ: ಮಹುವಾ ಮೊಯಿತ್ರಾ ವಿರುದ್ಧ ಎಫ್ಐಆರ್
![1-maya](https://www.udayavani.com/wp-content/uploads/2024/07/1-maya-150x84.jpg)
K Armstrong; ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ: ಮಾಯಾವತಿ ಆಕ್ರೋಶ
![1hatharas](https://www.udayavani.com/wp-content/uploads/2024/07/1hatharas-150x84.jpg)
Hathras ಕಾಲ್ತುಳಿತ: ವಿಷಕಾರಿ ದ್ರವವನ್ನು ಹೊಂದಿದ್ದ ಕ್ಯಾನ್ಗಳನ್ನು ತಂದಿದ್ದರೆ?
MUST WATCH
ಹೊಸ ಸೇರ್ಪಡೆ
![rain 21](https://www.udayavani.com/wp-content/uploads/2024/07/rain-21-150x95.jpg)
Heavy Rain; ಉತ್ತರ ಕನ್ನಡ ಜಿಲ್ಲೆಯ 5 ತಾಲೂಕುಗಳಲ್ಲಿ ಜುಲೈ 8 ರಂದು ಪಿಯುಸಿವರೆಗೆ ರಜೆ
![Bhatkal ಮುಂದುವರಿದ ವರುಣನ ಆರ್ಭಟ; ತಗ್ಗು ಪ್ರದೇಶಗಳು ಜಲಾವೃತ](https://www.udayavani.com/wp-content/uploads/2024/07/Bha-150x73.jpg)
Bhatkal ಮುಂದುವರಿದ ವರುಣನ ಆರ್ಭಟ; ತಗ್ಗು ಪ್ರದೇಶಗಳು ಜಲಾವೃತ
![1-wqwewewq](https://www.udayavani.com/wp-content/uploads/2024/07/1-wqwewewq-150x106.jpg)
T20 ಸರಣಿ ಸಮಬಲ: ಜಿಂಬಾಬ್ವೆ ವಿರುದ್ಧ 100 ರನ್ ಗಳ ಅಮೋಘ ಜಯ ಸಾಧಿಸಿದ ಭಾರತ
![renukaacharya](https://www.udayavani.com/wp-content/uploads/2024/07/renukaacharya-150x100.jpg)
Lok Sabha Elections; ಪಕ್ಷ ವಿರೋಧಿ ಚಟುವಟಿಕೆ ನಡೆಸಿಯೇ ಇಲ್ಲ: ರೇಣುಕಾಚಾರ್ಯ
![BSNL ಟವರ್ ಸಮಸ್ಯೆ: ಕೇಂದ್ರ ಸಚಿವರ ಜೊತೆ ಚರ್ಚೆ ಮಾಡಿದ ಸಂಸದ ಕಾಗೇರಿ!](https://www.udayavani.com/wp-content/uploads/2024/07/BSNL-150x84.jpg)
BSNL ಟವರ್ ಸಮಸ್ಯೆ: ಕೇಂದ್ರ ಸಚಿವರ ಜೊತೆ ಚರ್ಚೆ ಮಾಡಿದ ಸಂಸದ ಕಾಗೇರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.