![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Jul 2, 2024, 11:58 PM IST
ಉಡುಪಿ: ಮಣಿಪಾಲದ ಯುವಕನೊಬ್ಬ ತಮ್ಮ ಬೈಕ್ ಡೂಮ್ನಲ್ಲಿ ಹಾವು ಕಂಡು ಬೆಚ್ಚಿ ಬಿದ್ದ ಘಟನೆ ಮಂಗಳವಾರ ನಡೆದಿದೆ.
ಮಣಿಪಾಲದ ರಾಹುಲ್ ಬೆಳಗ್ಗೆ ಕಿನ್ನಿಮೂಲ್ಕಿ ಪೆಟ್ರೋಲ್ ಬಂಕ್ ಬಳಿ ಬೈಕ್ ನಿಲ್ಲಿಸಿ ಡ್ರೈವಿಂಗ್ ಕೆಲಸಕ್ಕೆ ಹೋಗಿದ್ದರು. ರಾತ್ರಿ 8.30 ಕ್ಕೆ ಕೆಲಸದಿಂದ ವಾಪಸ್ಸಾಗಿ ಬೈಕ್ ನೊಂದಿಗೆ ಉಡುಪಿ ಬಿಗ್ ಬಝಾರ್ಬಳಿ ಬಂದರು. ಆಗ ಬೈಕ್ ಡೂಮ್ ಅಲ್ಲಿ ಮಲಗಿದ್ದ ಹಾವು ಕಣ್ಣಿಗೆ ಬಿದ್ದಿತು. ಕೂಡಲೇ ಬೈಕ್ ನಿಲ್ಲಿಸಿ ಅವಘಡದಿಂದ ಪಾರಾದರು.
ಬಳಿಕ ಅರಣ್ಯ ಇಲಾಖೆಯ ಮೂಲಕ ಪ್ರಾಣೇಶ್ ಪರ್ಕಳ ಇವರಿಗೆ ಕರೆ ಮಾಡಿ ಹಾವು ಇರುವ ಮಾಹಿತಿ ನೀಡಿದರು. ಸ್ಥಳಕ್ಕೆ ಉರಗ ಪರಿಣಿತರು ಬಂದು ನೋಡಿದಾಗ ಅದು ವಿಷ ರಹಿತ ಹೆಬ್ಬಾವಿನ ಮರಿ ಆಗಿದ್ದು ಹಾವನ್ನು ಸುರಕ್ಷಿತವಾಗಿ ಹಿಡಿದು ರಕ್ಷಿಸಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.