Brahmavar ಕುರ್ಪಾಡಿ; ಸುಂಟರ ಗಾಳಿ: 36 ಮನೆಗಳಿಗೆ ಹಾನಿ
Team Udayavani, Jul 4, 2024, 12:22 AM IST
ಬ್ರಹ್ಮಾವರ: ಕರ್ಜೆ ಗ್ರಾ.ಪಂ. ವ್ಯಾಪ್ತಿಯ ಕುರ್ಪಾಡಿಯಲ್ಲಿ ಮಂಗಳವಾರ ರಾತ್ರಿ ಬೀಸಿದ ಸುಂಟರ ಗಾಳಿಗೆ ಸುಮಾರು 36 ಮನೆಗಳಿಗೆ ಹಾನಿಯಾಗಿದೆ.
ಮಾಡಿನ ಹೆಂಚು, ತಗಡುಗಳು ಹಾರಿ ಹೋಗಿವೆ. ಮರಗಳು ಉರುಳಿ ಬಿದ್ದಿವೆ. ವಿದ್ಯುತ್ ಕಂಬಗಳು ಧರಾಶಾಯಿಯಾಗಿವೆ. ದನದ ಕೊಟ್ಟಿಗೆಗೆ ಹಾನಿಯಾಗಿದೆ. ಕೆಲವು ಮನೆಗಳ ಮೇಲ್ಛಾವಣಿ ಸಂಪೂರ್ಣ ಜಖಂಗೊಂಡಿದೆ.
ಗ್ರಾಮದ ಸೋಮಯ್ಯ, ಜಗದೀಶ್, ಶೇಖರ ಸೇರ್ವಗಾರ್, ಲತಾ, ಸರಸ್ವತಿ, ಉಷಾ, ಜಯಪ್ರಕಾಶ್ ಕೆ., ಸಂತೋಷ್ ಸಾವಂತ್, ಶಾಲಿನಿ, ಸುನೀತಾ, ಸದಾನಂದ ನಾಯಕ್, ಯಶೋದಾ, ರೋಹಿಣಿ, ಜಯರಾಮ, ಶುಭಾ, ದುಗ್ಗಪ್ಪ ಸೇರ್ವೆಗಾರ್, ಸುರೇಶ್ ಸೇರ್ವೆಗಾರ್, ಪಾರ್ವತಿ, ವಿಶ್ವನಾಥ, ಆಶಾ, ಪುನೀತ್, ನಾಗೇಶ್ ನಾಯಕ್, ಸುರೇಶ್ ನಾಯಕ್, ರಾಜೀವಿ, ಕಲ್ಯಾಣಿ, ಉಷಾ, ನಾಗೇಶ್, ರಾಘವೇಂದ್ರ, ಕಮಲಾವತಿ ಭಟ್, ಲಲಿತಾ, ಗುಲಾಬಿ, ಮಾಲತಿ, ಲಕ್ಷ್ಮಣ ಸೇರ್ವೆಗಾರ್, ಗೋಪಾಲ ಸಾವಂತ, ಶ್ರೀಮತಿ, ನಾಗೇಶ್ ಸೇರ್ವೆಗಾರ್ ಮತ್ತಿತರರ ಮನೆ, ಕೊಟ್ಟಿಗೆಗಳಿಗೆ ಹಾನಿಯಾಗಿದೆ.
ಏಕಾಏಕಿ ಬೀಸಿದ ಗಾಳಿಗೆ ಹೆಂಚುಗಳು ಮುರಿದು ಬಿದ್ದ ಪರಿಣಾಮ ಪಾತ್ರೆ ಪಗಡಿ, ಉಪಕರಣಗಳ ಸಹಿತ ವಸ್ತುಗಳು ಜಖಂಗೊಂಡಿವೆ.
ಮಧ್ಯರಾತ್ರಿಯ ಅನಿರೀಕ್ಷಿತ ಘಟನೆಯಿಂದ ಜನರು ಕಂಗಾಲಾದರು. ಒಂದೆಡೆ ಗಾಳಿ, ಇನ್ನೊಂದೆಡೆ ಮಳೆಯಿಂದ ಸಂತ್ರಸ್ತರು ತತ್ತರಿಸಿದರು. ಕಂದಾಯ ಇಲಾಖೆ, ಮೆಸ್ಕಾಂ, ಅಗ್ನಿಶಾಮಕ ದಳದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಗರಿಷ್ಠ ಪರಿಹಾರಕ್ಕೆ ಸೂಚನೆ: ಮನೆ ಹಾನಿಯಾದ ಸಂತ್ರಸ್ತರಿಗೆ ಗರಿಷ್ಠ ಪರಿಹಾರ ಶೀಘ್ರ ಕಲ್ಪಿಸುವಂತೆ ಶಾಸಕ ಯಶಪಾಲ್ ಸುವರ್ಣ ಅವರು ಜಿಲ್ಲಾಧಿಕಾರಿ ಜತೆಗೆ ಚರ್ಚಿಸಿದ್ದಾರೆ. ಪೂರ್ವ ನಿಗದಿ ಕಾರ್ಯಕ್ರಮದ ಹಿನ್ನಲೆ ಬೆಂಗಳೂರಿನಲ್ಲಿರುವ ಕಾರಣ ಶುಕ್ರವಾರ ಬೆಳಗ್ಗೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Gangavathi: ಸತತ ಮಳೆಗೆ ಕುಸಿದ ಮನೆ; ಮಣ್ಣಿನಲ್ಲಿ ಸಿಲುಕಿದ ವ್ಯಕ್ತಿ-ಗ್ರಾಮಸ್ಥರಿಂದ ರಕ್ಷಣೆ
Surgery: 11 ಗಂಟೆ ಶಸ್ತ್ರಚಿಕಿತ್ಸೆ ನಡೆಸಿ ಪಿಟ್ ಬುಲ್ ಶ್ವಾನದ ಕಿತ್ತ ಕಿವಿ ಜೋಡಣೆ
Gadaga: ಹುರಿಗಡಲೆ ಚೀಲದಲ್ಲಿ ಪಡಿತರ ಅಕ್ಕಿ ಅಕ್ರಮ ಸಾಗಾಟ… ಕಣ್ಮುಚ್ಚಿ ಕುಳಿತ ಅಧಿಕಾರಿಗಳು
Chikkamagaluru: ಸಮಾಜ ಕಲ್ಯಾಣ ಇಲಾಖೆಯಲ್ಲಿ ಲಂಚ ಪಡೆಯುವಾಗ ಲೋಕಾಯುಕ್ತ ದಾಳಿ
ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ… ನಾವು ಆ ರೀತಿ ರಾಜಕಾರಣ ಮಾಡಲ್ಲ: ಜಿ. ಪರಮೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.