Uttara Kannada ರೈತಾಪಿ ವರ್ಗದ ಮಿನಿ ಸಂಕ್ರಾಂತಿ ಹಬ್ಬಕ್ಕೆ ಸಿದ್ಧತೆ
ವಿವಿಧ ಆಕೃತಿ, ಬಣ್ಣ ಹಾಗೂ ವೈವಿದ್ಯತೆಯಿಂದ ಕೂಡಿರುವ ಮಣ್ಣೆತ್ತನ್ನು ಖರೀದಿಸುತ್ತಿರುವ ರೈತರು, ಸಾರ್ವಜನಿಕರು
Team Udayavani, Jul 4, 2024, 4:06 PM IST
ಗದಗ: ಉತ್ತರ ಕರ್ನಾಟಕ ರೈತಾಪಿ ವರ್ಗದ ಮಿನಿ ಸಂಕ್ರಾಂತಿ ಎಂದೇ ಕರೆಯಲ್ಪಡುವ ಮಣ್ಣೆತ್ತಿನ ಅಮವಾಸ್ಯೆ ಆಚರಣೆಗೆ ಸಕಲ ಸದ್ದತೆಗಳು ನಡೆದಿವೆ. ಮಣ್ಣೆತ್ತಿನ ಅಮವಾಸ್ಯೆಯಂದು ಮಣ್ಣಿನಿಂದ ತಯಾರಿಸಿದ ಎತ್ತುಗಳನ್ನು ಹಾಗೂ ಗ್ವಾದ್ಲಿಯನ್ನು ತಂದು ಪೂಜಿಸುವ ಪದ್ಧತಿಯು ಸಾಂಪ್ರದಾಯಿಕವಾಗಿ ಮುಂದುವರಿದುಕೊಂಡು ಬಂದಿದೆ.
ಈ ಹಿನ್ನೆಲೆ ಜಿಲ್ಲಾದ್ಯಂತ ಮಾರುಕಟ್ಟೆಗಳಲ್ಲಿ ಹಾಗೂ ಕುಂಬಾರರ ಮನೆಗಳಲ್ಲಿ ವಿವಿಧ ಆಕೃತಿ ಹಾಗೂ ಬಣ್ಣಗಳಿಂದ ಕೂಡಿದ ಮಣ್ಣೆತ್ತುಗಳ ಮಾರಾಟ ಪ್ರಕ್ರಿಯೆ ಆರಂಭವಾಗಿದ್ದು, ಖರೀದಿಯು ಜೋರಾಗಿದೆ. ರೈತರು, ಸಾರ್ವಜನಿಕರು ಮಾರುಕಟ್ಟೆಗೆ ಧಾವಿಸಿ ಮಣ್ಣೆತ್ತಿನ ಖರೀದಿಯಲ್ಲಿ ನಿರತರಾಗಿದ್ದಾರೆ.
ಕಾರಹುಣ್ಣಿಮೆ ಬಳಿಕ ಆಗಮಿಸುವ ಮಣ್ಣೆತ್ತಿನ ಅಮವಾಸ್ಯೆ ನಂತರ ಬಿತ್ತನೆ ಕಾಲವಾಗಿದ್ದರಿಂದ ರೈತರು ಸೇರಿದಂತೆ ಸಾರ್ವಜನಿಕರು, ರೈತರು ಸಂಭ್ರಮದಿಂದ ಮಣ್ಣೆತ್ತನ್ನು ಖರೀದಿಸುವುದರ ಜತೆಗೆ ಕೃಷಿ ಪರಿಕರ ಹಾಗೂ ಎತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸುವ ರೂಢಿಯಿದೆ.
ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಒಂದಿಷ್ಟು ನೆಮ್ಮದಿ ವಾತಾವರಣ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಮಣ್ಣೆತ್ತಿನ ಅಮವಾಸ್ಯೆ ಆಚರಣೆಯ ಮೆರುಗು ಹೆಚ್ಚಿದೆ.
ಒಂದೆಡೆ ಎತ್ತುಗಳಿಗೆ ಬೇಕಾಗುವ ಮಿಣಿ, ಜತ್ತಿಗೆ, ಮೂಗುದಾರ, ಬಾರಕೋಲು, ಎತ್ತುಗಳನ್ನು ಕಟ್ಟಲು ಬೇಕಾಗುವ ಸರಪಳಿಗಳನ್ನು ರೈತರು ಖರೀದಿಸಿದರು. ಮತ್ತೊಂದೆಡೆ ಸಾರ್ವಜನಿಕರು ಮಣ್ಣೆತ್ತುಗಳನ್ನು ಖರೀದಿ ಮಾಡಿದರು.
ಮಣ್ಣೆತ್ತು ಕೂಡ ಬಲು ದುಬಾರಿ: ಮಣ್ಣೆತ್ತಿನ ಅಮವಾಸ್ಯೆ ನಿಮಿತ್ತ ನಗರದ ತೋಂಟದಾರ್ಯ ಮಠ, ಹಾತಲಗೇರಿ ನಾಕಾ, ಬೆಟಗೇರಿ ಟೆಂಗಿನಕಾಯಿ ಬಜಾರ್, ಟಾಂಗಾಕೂಟ, ಮುಳಗುಂದ ನಾಕಾ ಸೇರಿ ವಿವಿಧೆಡೆ ಮಣ್ಣೆತ್ತಿನ ಮಾರಾಟ ಜೋರಾಗಿತ್ತು.
ಕಳೆದ ಕೆಲ ವರ್ಷಗಳ ಹಿಂದೆ ಜೋಡಿ ಮಣ್ಣೆತ್ತೆ ಮತ್ತು ಗ್ವಾದ್ಲಿಗೆ 15ರಿಂದ 30 ರೂ. ದರ ನಿಗದಿಯಾಗಿರುತ್ತಿತ್ತು. ಆದರೆ, ಪ್ರಸಕ್ತ ವರ್ಷ ಜೋಡಿ ಮಣ್ಣೆತ್ತಿಗೆ ಕನಿಷ್ಠ 50 ರಿಂದ 80 ರೂ. ದರ ಇತ್ತು. ಅಲ್ಲದೇ, ಅಲಂಕಾರಿಕ ಮಣ್ಣೆತ್ತಿನ ಬೆಲೆ 400 ರೂ. ಗೆ ನಿಗದಿಪಡಿಸಲಾಗಿತ್ತು.
ಮಣ್ಣೆತ್ತಿಗೆ ಸಿಂಗಾರ: ಗ್ರಾಮೀಣ ಭಾಗದಲ್ಲಿ ರೈತರು ತಮ್ಮ ಹೊಲದಲ್ಲಿನ ತಿಳಿ ಎರೆಮಣ್ಣನ್ನು ಬಳಸಿ ಎತ್ತುಗಳು ಹಾಗೂ ಗ್ವಾದ್ಲಿಯನ್ನು ನಿರ್ಮಿಸುತ್ತಾರೆ. ಬಳಿಕ ಅವುಗಳನ್ನು ಜೋಳ, ಗೋಧಿ ಸೇರಿದಂತೆ ವಿವಿಧ ಧಾನ್ಯಗಳಿಂದ ಸಿಂಗಾರ ಮಾಡುತ್ತಾರೆ. ಆದರೆ, ಸಮಯದ ಅಭಾವದಿಂದ ಬಹುತೇಕರು ಸಿದ್ಧಪಡಿಸಿದ ಮಣ್ಣೆತ್ತುಗಳನ್ನೆ ಒಯ್ದು ಪೂಜೆ ಸಲ್ಲಿಸುತ್ತಾರೆ. ಮಣ್ಣೆತ್ತಿನ ಅಮಾವಾಸ್ಯೆ ಮುಗಿದ ಮರುದಿನ ಕೆರೆ, ಬಾವಿ ಹಾಗೂ ಹಳ್ಳ ಬಳಿ ಪೂಜೆ ಸಲ್ಲಿಸಿ ಮಣ್ಣೆತ್ತುಗಳನ್ನು ಬಿಟ್ಟು ಹೋಗುವುದು ವಾಡಿಕೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗುವ ವಿಶ್ವಾಸವಿದೆ ಇಲ್ಲದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ
Gadaga: ಹುರಿಗಡಲೆ ಚೀಲದಲ್ಲಿ ಪಡಿತರ ಅಕ್ಕಿ ಅಕ್ರಮ ಸಾಗಾಟ… ಕಣ್ಮುಚ್ಚಿ ಕುಳಿತ ಅಧಿಕಾರಿಗಳು
Veerashaiva Lingayat ಧರ್ಮವು ವಿಶ್ವಮಾನ್ಯ ಮೌಲ್ಯಗಳನ್ನು ಹೊಂದಿದೆ: ವಿ. ಸೋಮಣ್ಣ
Siddaramaiah;ಔಷಧಿ ಇಲ್ಲದ ಹಾಗೆ ಗಾಯ ಮಾಡಿಕೊಂಡಿದ್ದಾರೆ: ವಿ.ಸೋಮಣ್ಣ
ಹೆಸ್ಕಾಂ ನಿರ್ಲಕ್ಷ್ಯ: ವಿದ್ಯುತ್ ಪ್ರವಹಿಸಿ 11 ಕುರಿ, 1 ನಾಯಿ ಸಾವು… ತಪ್ಪಿದ ಅನಾಹುತ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Minchu Hulu Review: ಮಿಂಚುಹುಳು ತಂದ ಹೊಸಕಿರಣ
Haryana Polls; ಕೈ ಕಾರ್ಯಕರ್ತರು ಮತ್ತು ಪಕ್ಷೇತರನ ಬೆಂಬಲಿಗರ ಮಾರಾಮಾರಿ
Vinesh Phogat; ನನ್ನ ತಂದೆಯ ಸಹಾಯವನ್ನು ವಿನೇಶ್ ಮರೆತಿದ್ದಾರೆ: ಬಬಿತಾ ಫೋಗಾಟ್
Bigg Boss: ಬಿಗ್ ಬಾಸ್ ಮನೆಯಲ್ಲಿ ರಾದ್ಧಾಂತ ಸೃಷ್ಟಿಸಿದ ವಿವಾದಿತ ಸ್ಪರ್ಧಿಗಳಿವರು..
Irani Cup: ತನುಷ್ ಕೋಟ್ಯಾನ್ ದಿಟ್ಟ ಹೋರಾಟ; 27 ವರ್ಷದ ಬಳಿಕ ಇರಾನಿ ಕಪ್ ಗೆದ್ದ ಮುಂಬೈ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.