ಬಿಗ್‌ ಬಾಸ್‌ ಮನೆಗೆ ವಿವಾದಿತ ಜ್ಯೋತಿಷಿ ವೇಣುಸ್ವಾಮಿ? ಈತ ಹೇಳಿದೆಲ್ಲವೂ ಆಗಿದೆ ಆದರೆ..

ಯಾರು ಈ ವೇಣುಸ್ವಾಮಿ..?

Team Udayavani, Jul 4, 2024, 5:29 PM IST

ಬಿಗ್‌ ಬಾಸ್‌ ಮನೆಗೆ ವಿವಾದಿತ ಜ್ಯೋತಿಷಿ ವೇಣುಸ್ವಾಮಿ? ಈತ ಹೇಳಿದೆಲ್ಲವೂ ಆಗಿದೆ ಆದರೆ..

ಹೈದರಾಬಾದ್:‌ ಕಿರುತೆರೆ ಲೋಕದ ಜನಪ್ರಿಯ ರಿಯಾಲಿಟ ಶೋ ಬಿಗ್‌ ಬಾಸ್‌ಗೆ ಆಯಾ ಭಾಷೆಯಲ್ಲಿ ಅನೇಕ ವೀಕ್ಷಕರಿದ್ದಾರೆ.

ಬಿಗ್‌ ಬಾಸ್‌ ತೆಲುಗು -7 ಕಳೆದ ಬಾರಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಟಿಆರ್‌ ಪಿ ವಿಚಾರದಲ್ಲೂ ಕಾರ್ಯಕ್ರಮ ಭರ್ಜರಿ ಸೌಂಡ್‌ ಮಾಡಿತ್ತು. ಸೀಸನ್‌ 7ನಲ್ಲಿ ವಿನ್ನರ್‌ ಆಗಿದ್ದ ಪಲ್ಲವಿ ಪ್ರಶಾಂತ್‌ ರನ್ನು ಪೊಲೀಸರು ಬಂಧಿಸಿದ್ದರು. ಈ ಎಲ್ಲಾ ವಿಚಾರದಿಂದ ಸುದ್ದಿಯಲ್ಲಿ ತೆಲುಗು ಬಿಗ್‌ ಬಾಸ್‌ ತೆಲುಗು ಇದೀಗ 8ನೇ ಸೀಸನ್‌ ಆರಂಭಕ್ಕೆ ತಯಾರಿಯನ್ನು ನಡೆಸುತ್ತಿದೆ.

ಅಕ್ಕಿನೇನಿ ನಾಗಾರ್ಜುನ ನಡೆಸಿಕೊಡುವ ಬಿಗ್‌ ಬಾಸ್‌ ಇದೀಗ ಸೀಸನ್‌ -8 ಆರಂಭಗೊಳ್ಳಲಿದೆ ಎನ್ನುವ ಮಾತು ಶುರುವಾದ ಬೆನ್ನಲ್ಲೇ ಸ್ಪರ್ಧಿಗಳು ಯಾರೆಲ್ಲಾ ಇರುತ್ತಾರೆ ಎನ್ನುವುದರ ಬಗ್ಗೆಯೂ ಚರ್ಚೆ ಶುರುವಾಗಿದೆ.

ಖ್ಯಾತ ಯೂಟ್ಯೂಬರ್ ಬಾಂಚಿಕ್ ಬಬ್ಲು,ನಟ ರಾಜ್‌ ತರುಣ್‌, ಇತ್ತೀಚೆಗೆ ಡ್ರಗ್ಸ್‌ ಪ್ರಕರಣದಲ್ಲಿ ಬಂಧಿತರಾದ ನಟಿ ಹೇಮಾ ,ರಸ್ತೆಬದಿ ಹೊಟೇಲ್‌ ಹೊಂದಿರುವ ಜನಪ್ರಿಯ ಕುಮಾರಿ ಆಂಟಿ ಸೇರಿದಂತೆ ಹಲವರು ಹೆಸರು ಸ್ಪರ್ಧಿಗಳ ಲಿಸ್ಟ್‌ ನಲ್ಲಿ ಕೇಳಿ ಬರುತ್ತಿದೆ.

ಈ ಲಿಸ್ಟ್‌ ನಲ್ಲಿ ಕೇಳಿ ಬರುತ್ತಿರುವ ಮತ್ತೊಂದು ಖ್ಯಾತ ಹೆಸರೆಂದರೆ ಅದು ಜನಪ್ರಿಯ ಜ್ಯೋತಿಷಿ ವೇಣುಸ್ವಾಮಿ ಅವರದು.

ತೆಲುಗು ಪ್ರೇಕ್ಷಕರಿಗೆ ವೇಣುಸ್ವಾಮಿ ಅವರ ಪರಿಚಯ ಹೊಸತೇನಲ್ಲ. ಸಾಮಾನ್ಯ ಜನರಿಂದಿಡಿದು ಟಾಲಿವುಡ್‌ ನ ಟಾಪ್‌ ಸೆಲೆಬ್ರಿಟಿಗಳಿಗೂ ವೇಣು ಸ್ವಾಮಿಯವರ ಹೆಸರು ಗೊತ್ತಿದೆ.

ಯಾರು ಈ ವೇಣು ಸ್ವಾಮಿ:  ವೇಣುಸ್ವಾಮಿ ಟಾಲಿವುಡ್‌ ಸೆಲೆಬ್ರಿಟಿಗಳ ಹಾಗೂ ರಾಜಕೀಯ ಆಗುಹೋಗುಗಳ ಕುರಿತಾಗಿ ಭವಿಷ್ಯ ನುಡಿಯುವ ಜ್ಯೋತಿಷಿ. ಟಾಲಿವುಡ್‌ ಸೆಲೆಬ್ರಿಟಿಗಳ ದಾಂಪತ್ಯ, ವಿಚ್ಚೇದನ, ಪ್ರೇಮ್‌ ಕಹಾನಿ ಬಗ್ಗೆ ಭವಿಷ್ಯವನ್ನು ನುಡಿದಿದ್ದಾರೆ.

ಬಹುತೇಕ ಎಲ್ಲಾ ಭವಿಷ್ಯವೂ ನಿಜವಾಗಿದೆ..

ʼಬಾಹುಬಲಿ-2ʼ ಬಳಿಕ ಪ್ರಭಾಸ್‌ ಅವರ ಕೆರಿಯರ್‌ ಕಷ್ಟವಿದೆ ಎಂದು ವೇಣುಸ್ವಾಮಿ ಹೇಳಿದ್ದರು. ಇದಾದ ಬಳಿಕ ಪ್ರಭಾಸ್‌ ಅವರ ಮೂರು ಸಿನಿಮಾಗಳು ಸೋತಿದ್ದವು. ʼಸಲಾರ್‌ʼ ಸಿನಿಮಾ ಸೋಲುತ್ತದೆ ಎಂದಿದ್ದರು. ಆದರೆ ಸಲಾರ್‌ 700 ಕೋಟಿ ಗಳಿಸಿ ಹಿಟ್‌ ಆಗಿತ್ತು.

ಇನ್ನು ಪ್ರಭಾಸ್‌ ಅವರಿಗೆ ಮದುವೆ ಆಗುವುದಿಲ್ಲ ಅವರ ಜಾತಕದಲ್ಲಿ ದೋಷವಿದೆ ಎಂದು ವೇಣು ಸ್ವಾಮಿ ಹೇಳಿದ್ದಾರೆ.

ನಯನತಾರಾ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗುತ್ತದೆ. ವಿಚ್ಚೇದನ ಪಡೆಯುತ್ತಾರೆ ಎಂದೂ ವೇಣುಸ್ವಾಮಿ ಹೇಳಿದ್ದಾರೆ.

ಸಮಂತಾ ಹಾಗೂ ನಾಗಚೈತನ್ಯ ಅವರು ಪರಸ್ಪರ ದೂರವಾಗುತ್ತಾರೆ ಅವರಿಬ್ಬರೂ ಬೇರೆ ಮದುವೆ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಅದರಂತೆ ಸಮಂತಾ – ನಾಗಚೈತನ್ಯ ವಿಚ್ಚೇದನ ಪಡೆದಿದ್ದಾರೆ.

ಮದುವೆಯ ಬಳಿಕ ವಿಜಯ ದೇವರಕೊಂಡ ಹಾಗೂ ರಶ್ಮಿಕಾ ಅವರು ಮದುವೆ ಆಗಿ ಸುಖವಾಗಿರಲ್ಲ. ಇಬ್ಬರು ವಿಚ್ಚೇದನ ಪಡೆಯುತ್ತಾರೆ ಎನ್ನುವ ಭವಿಷ್ಯವನ್ನು ಅವರು ನುಡಿದಿದ್ದಾರೆ.

ಪವನ್‌ ಕಲ್ಯಾಣ್‌ ಮೂರನೇ ಪತ್ನಿಯಿಂದಲೂ ವಿಚ್ಚೇದನ ಪಡೆಯುತ್ತಾರೆ. ರಾಜಕೀಯ ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ ಎಂದಿದ್ದಾರೆ. ಇದರಲ್ಲಿ ಪವನ್‌ ಕಲ್ಯಾಣ್‌ ರಾಜಕೀಯ ಬದುಕು ಯಶಸ್ಸು ಕಂಡಿದೆ.

ಜೂ.ಎನ್‌ ಟಿಆರ್‌ ಸಿಎಂ ಆಗುತ್ತಾರೆ. ಅಲ್ಲು ಅರ್ಜುನ್‌ ಸಕ್ಸಸ್‌ ಪಡೆಯುತ್ತಾರೆ ಹೀಗೆ ಹತ್ತಾರು ಭವಿಷ್ಯವನ್ನು ಅವರು ನುಡಿದಿದ್ದು. ಇದರಲ್ಲಿ ಬಹುತೇಕ  ನಿಜವಾಗಿದೆ.

ಜಗನ್‌ ರೆಡ್ಡಿಗೆ ಹೀನಾಯ ಸೋಲು.. ಸುಳ್ಳಾದ ವೇಣು ಭವಿಷ್ಯ.. : ಚುನಾವಣೆಯಲ್ಲಿ ಜಗನ್ ಮೋಹನ್‌ ರೆಡ್ಡಿ ಅವರ ವೈಎಸ್‌ಆರ್‌ಸಿಪಿ ಪಕ್ಷ ಚುನಾವಣೆಯಲ್ಲಿ ಮೇಲುಗೈ ಸಾಧಿಸುತ್ತದೆ ಎನ್ನುವ ಭವಿಷ್ಯ ವೇಣು ಸ್ವಾಮಿ ನುಡಿದಿದ್ದರು. ಫಲಿತಾಂಶದ ಬಳಿಕ ಭವಿಷ್ಯ ಸುಳ್ಳಾಗಿದ್ದು. ಇದರಿಂದ ವೇಣು ಸ್ವಾಮಿ ಟ್ರೋಲ್‌ ಗೆ ಒಳಗಾಗಿದ್ದರು.

ಇದರಿಂದ ಅವರು ಕ್ಷಮೆಯಾಚಿಸಿದ್ದರು. ಇನ್ಮುಂದೆ ಅವರು ಭವಿಷ್ಯ ನುಡಿಯಲ್ಲ ಎಂದು ಹೇಳಿರುವುದಾಗಿ ವರದಿಗಳು ತಿಳಿಸಿವೆ.

ಬಿಗ್‌ ಬಾಸ್‌ ಸ್ಪರ್ಧಿಯಾಗಲು ಭಾರೀ ಸಂಭಾವನೆ ಬೇಡಿಕೆ.!: ಬಿಗ್‌ ಬಾಸ್‌ ತೆಲುಗು -8 ನಲ್ಲಿ ಸ್ಪರ್ಧಿಯನ್ನಾಗಿ ಭಾಗಿಯಾಗಲು ವೇಣುಸ್ವಾಮಿ ಅವರಿಗೆ ಆಫರ್‌ ನೀಡಲಾಗಿದ್ದು, ಇದಕ್ಕೆ ವೇಣುಸ್ವಾಮಿ ಆಯೋಜಕರಿಂದ ಭಾರೀ ಸಂಭಾವನೆಯನ್ನು ಕೇಳಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಆಯೋಜಕರು ಇದಕ್ಕೆ ಒಪ್ಪಿದರೆ ಇದುವರೆಗೆ ಯಾರೂ ಪಡೆಯದೆ ಇರುವಷ್ಟು ದೊಡ್ಡ ಸಂಭಾವನೆಯನ್ನು ವೇಣುಸ್ವಾಮಿ ಪಡೆಯಲಿದ್ದಾರೆ ಎಂದು ʼಹಿಂದೂಸ್ತಾನ್‌ ಟೈಮ್ಸ್‌ ತೆಲುಗುʼ ವರದಿ ತಿಳಿಸಿದೆ.

ಯಾವಾಗ ಶುರು ಬಿಗ್‌ ಬಾಸ್‌ ?: ಬಿಗ್‌ ಬಾಸ್‌ ತೆಲುಗು -8 ಆರಂಭಕ್ಕೆ ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿದ್ದು, ಈ ವರ್ಷದ ಸೆಪ್ಟೆಂಬರ್ ಆರಂಭಗೊಳ್ಳುವ ಸಾಧ್ಯತೆಯಿದೆ. ಈಗಾಗಲೇ ಅನ್ನಪೂರ್ಣ ಸ್ಟುಡಿಯೋದಲ್ಲಿ ಬೃಹತ್ ಸೆಟ್‌ನಲ್ಲಿ ಕೆಲಸವನ್ನು ಪ್ರಾರಂಭಿಸಲಾಗಿದೆ. ಪ್ರೀ-ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿವೆ ಎಂದು ವರದಿ ತಿಳಿಸಿದೆ.

 

ಟಾಪ್ ನ್ಯೂಸ್

JK-Congress

J-K Election: ಚುನಾವಣೆ ಫ‌ಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್‌ ಆಕ್ಷೇಪ

1-frr

Risk; ಚಾರ್ ಮಿನಾರ್ ಕಿಟಕಿಗಳಲ್ಲಿ ನಡೆದು ಅಪಾಯಕಾರಿ ಸಾಹಸ: ವೈರಲ್ ವಿಡಿಯೋ

1-vij

Vijayapura;ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ: 184 ಗ್ರಾಂ ಚಿನ್ನ, 80 ಗ್ರಾಂ ಬೆಳ್ಳಿ ಜಪ್ತಿ

8

Mallika Sherawat: ಮೀಟೂ ವಿವಾದಕ್ಕೆ ನಟಿ ಮಲ್ಲಿಕಾ ಶೆರಾವತ್‌ ಧ್ವನಿ; ಹೀರೋ ಮೇಲೆ ಆರೋಪ

1-qweeqw

Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ

Jaishankar

Jaishankar; ಭಾರತ-ಪಾಕ್ ಸಂಬಂಧದ ಕುರಿತ ಚರ್ಚೆಗೆ ಇಸ್ಲಾಮಾಬಾದ್‌ಗೆ ಹೋಗುತ್ತಿಲ್ಲ

1-yati

Prophet Hate Speech; ಯತಿ ನರಸಿಂಹಾನಂದ ಸರಸ್ವತಿ ಯುಪಿ ಪೊಲೀಸರ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chitara

BBK11: ವಂಚನೆ ಪ್ರಕರಣ ನೆನೆದು ಬಿಗ್ ಬಾಸ್ ಮನೆಯಲ್ಲಿ ಕಣ್ಣೀರಿಟ್ಟ ಚೈತ್ರಾ!

BBK11: ಇವತ್ತು ಅಥವಾ ನಾಳೆ ಈ ರಾಜ್ಯದ ಸಿಎಂ ಆಗುವವನು ನಾನು: ಜಗದೀಶ್

BBK11: ಇವತ್ತು ಅಥವಾ ನಾಳೆ ಈ ರಾಜ್ಯದ ಸಿಎಂ ಆಗುವವನು ನಾನು: ಜಗದೀಶ್

BBK11:ಬಿಗ್‌ಬಾಸ್‌ ಸ್ಪರ್ಧಿ ಜಗದೀಶ್‌ ಬಗ್ಗೆ ಸ್ಫೋಟಕ ವಿಚಾರ ಬಯಲು ಮಾಡಿದ ಪ್ರಶಾಂತ್‌ ಸಂಬರಗಿ

BBK11:ಬಿಗ್‌ಬಾಸ್‌ ಸ್ಪರ್ಧಿ ಜಗದೀಶ್‌ ಬಗ್ಗೆ ಸ್ಫೋಟಕ ವಿಚಾರ ಬಯಲು ಮಾಡಿದ ಪ್ರಶಾಂತ್‌ ಸಂಬರಗಿ

BBK11: ನನಗೆ ಇಲ್ಲಿ ಇರೋಕೆ ಇಷ್ಟವಿಲ್ಲ.. ನಾನು ಬಿಗ್‌ಬಾಸ್‌ನಿಂದ ಹೊರ ಹೋಗ್ತೇನೆ – ಜಗದೀಶ್

BBK11: ನನಗೆ ಇಲ್ಲಿ ಇರೋಕೆ ಇಷ್ಟವಿಲ್ಲ.. ನಾನು ಬಿಗ್‌ಬಾಸ್‌ನಿಂದ ಹೊರ ಹೋಗ್ತೇನೆ – ಜಗದೀಶ್

jaaa

BBK11: ಆಚೆ ಕಡೆ ಹೋಗಿ ಬಿಗ್ ಬಾಸ್ ಮುಖವಾಡವನ್ನು ಬಯಲು ಮಾಡ್ತೇನೆ ಎಂದ ಜಗದೀಶ್

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

JK-Congress

J-K Election: ಚುನಾವಣೆ ಫ‌ಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್‌ ಆಕ್ಷೇಪ

13

Asian Youth Archery: ಮಹಿಳಾ ತಂಡಕ್ಕೆ ಬೆಳ್ಳಿ ಪದಕ

1-frr

Risk; ಚಾರ್ ಮಿನಾರ್ ಕಿಟಕಿಗಳಲ್ಲಿ ನಡೆದು ಅಪಾಯಕಾರಿ ಸಾಹಸ: ವೈರಲ್ ವಿಡಿಯೋ

ISSF Junior World Championship: ಕಿರಿಯರ ಶೂಟಿಂಗ್‌; ಭಾರತಕ್ಕೆ ಸಮಗ್ರ ಪ್ರಶಸ್ತಿ

ISSF Junior World Championship: ಕಿರಿಯರ ಶೂಟಿಂಗ್‌; ಭಾರತಕ್ಕೆ ಸಮಗ್ರ ಪ್ರಶಸ್ತಿ

ಗ್ವಾಲಿಯರ್‌ ಮಸೀದಿಗೆ ಭೇಟಿ ನೀಡದೆ ಹೋಟೆಲ್‌ನಲ್ಲೇ ಬಾಂಗ್ಲಾ ಕ್ರಿಕೆಟರ್ಸ್ ಪ್ರಾರ್ಥನೆ

ಗ್ವಾಲಿಯರ್‌ ಮಸೀದಿಗೆ ಭೇಟಿ ನೀಡದೆ ಹೋಟೆಲ್‌ನಲ್ಲೇ ಬಾಂಗ್ಲಾ ಕ್ರಿಕೆಟರ್ಸ್ ಪ್ರಾರ್ಥನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.