ಎಕ್ಕಾರು ಪಂಚಾಯತ್ ಸ್ಥಿತಿ ; ಗ್ರಾಪಂ ಕಟ್ಟಡವೇ ಸೋರಿಕೆ, ಪ್ಲಾಸಿಕ್ ಹೊದಿಕೆ!
Team Udayavani, Jul 4, 2024, 2:28 PM IST
ಬಜಪೆ: ಮಳೆ ಗಾಲದ ಸಂದರ್ಭದಲ್ಲಿ ಎದು ರಾಗುವ ಪ್ರಾಕೃತಿಕ ವಿಕೋಪಗಳಿಗೆ ಮೊದಲು ಸಾಂತ್ವನ ಹೇಳುವುದು, ಪರಿಹಾರ ನೀಡುವ ಕೆಲಸ ಮಾಡುವುದು ಗ್ರಾಮ ಪಂಚಾಯತ್. ಆದರೆ ಮಳೆ ಪಂಚಾಯತ್ ಕಟ್ಟಡವನ್ನೂ ಬಿಡುವುದಿಲ್ಲ. ಇದೇ ಕಾರಣದಿಂದಾಗಿ ಎಕ್ಕಾರು ಗ್ರಾಮ ಪಂಚಾಯತ್ ಕಟ್ಟಡ ಕಷ್ಟಕ್ಕೆ ಸಿಲುಕಿದೆ.
ಎಕ್ಕಾರು ಗ್ರಾಮ ಪಂಚಾಯತ್ ಕಟ್ಟಡ ಮಳೆಗೆ ಸೋರುತ್ತಿದ್ದು, ಇದನ್ನು ತಡೆಯಲು ಇಲ್ಲಿ ಚಾವಣಿಗೆ ಟರ್ಪಾಲು ಹೊದಿಸಲಾಗಿದೆ. ಎಕ್ಕಾರು ಪಂಚಾಯತ್ ಕಟ್ಟಡ ಸುಮಾರು 30 ವರ್ಷಗಳ ಹಿಂದಿನ ಆರ್ಸಿಸಿ ಕಟ್ಟಡವಾಗಿದೆ. ಈ ಕಟ್ಟಡದಲ್ಲಿಯೇ ಸಾಮಾನ್ಯ ಸಭೆ, ಗ್ರಾಮ ಸಭೆಗಳು ಮಾತ್ರವಲ್ಲ, ಬೇರೆ ಕಾರ್ಯಕ್ರಮಗಳು ನಡೆಯುತ್ತವೆ. ಅದರೆ ಸುಮಾರು 6 ವರ್ಷಗಳಿಂದ ಈ ಕಟ್ಟಡ ಮಳೆಗಾಲದಲ್ಲಿ ಸೋರುತ್ತಿದೆ. ಕಟ್ಟಡವೂ ಈಗ ಶಿಥಿಲಗೊಂಡಿದೆ.ಮಳೆ ಬಂದಾಗ ಕಟ್ಟಡದಲ್ಲಿನ ಬಿರುಕುಗಳ ಮೂಲಕ ನೀರು ಸೋರಿಕೆಯಾಗುತ್ತಿದೆ. ಹೀಗಾಗಿ ಪಂಚಾಯತ್ನ ಕಾರ್ಯ ನಿರ್ವಹಣೆಗೆ ತೊಡಕಾಗುತ್ತಿದೆ.
50 ಸಾವಿರ ಖರ್ಚಾದರೂ ಸೋರಿಕೆ ನಿಲ್ಲಿಸಲಾಗಲಿಲ್ಲ!
ಈ ಕಟ್ಟಡ ಸೋರುತ್ತಿರುವುದರಿಂದ ವರ್ಷ ವರ್ಷ ಪಂಚಾಯತ್ಗೆ ಸಮಸ್ಯೆಯಾಗುತ್ತಿದೆ. ನಾಲ್ಕು ವರ್ಷಗಳ ಹಿಂದೆ ಸುಮಾರು 50 ಸಾವಿರ ಅಂದಾಜು ವೆಚ್ಚದಲ್ಲಿ ಆರ್ಸಿಸಿ ಕಟ್ಟಡ ಮೇಲೆ ಕಾಂಕ್ರೀಟಿನ ಲೇಪನ ಮಾಡಲಾಗಿತ್ತು ಇದರಿಂದಲೂ ಇದು ನೀರು
ಸೋರಿಕೆಯನ್ನು ತಡೆಯಲಾಗಲಿಲ್ಲ.
ಎಲ್ಲ ಕೆಲಸ ಇದೇ ಕಟ್ಟಡದಲ್ಲಿ
ಪಂಚಾಯತ್ನ ಸಾಮಾನ್ಯ ಸಭೆ ಈಗಲೂ ಇದೇ ಕಟ್ಟಡದಲ್ಲಿ ನಡೆಯುತ್ತಿದೆ. ಕಂಪ್ಯೂಟರ್ ಕೊಠಡಿ ಇದರಲ್ಲಿಯೇ ಇದೆ. ಗ್ರಾಮ ಕರಣಿಕರ (ಗ್ರಾಮ ಆಡಳಿತಾಧಿಕಾರಿ) ಕಚೇರಿ ಇದೆ. ಜತೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಚೇರಿಯೂ ಇದೆ. ಗ್ರಾಮ ಕರಣಿಕರ ಕಚೇರಿಯಲ್ಲೂ ಮಳೆಯ ನೀರು ಸೋರಿಕೆಯಾಗುತ್ತಿದೆ.
ಸಮಸ್ಯೆಯಾಗಬಾರದು ಎಂಬ ಕಾರಣಕ್ಕಾಗಿ ಇಲ್ಲಿನ ಫ್ಯಾನ್ನ್ನು ಕಳಚಿ ಇಡಲಾಗಿದೆ. ಫೈಲುಗಳನ್ನು ಇಡಲು ಬೇರೆಯೇ ಕವಾಟು
ಮಾಡಲಾಗಿದೆ.
ಕಳೆದ ಬಾರಿ ಕಂಪ್ಯೂಟರ್ಗೆ ಹಾನಿ
ಕಳೆದ ಮಳೆಗಾಲದಲ್ಲಿ ನೀರು ಸೋರಿಕೆಯಿಂದ ಪಂಚಾಯತ್ನ ಕಂಪ್ಯೂಟರ್ ಮತ್ತು ಫ್ಯಾನ್ ಗ ಳಿಗೆ ಹಾನಿಯಾಗಿತ್ತು. ಈ ಬಾರಿ ಪಂಚಾಯತ್ ಕೆಲಸ ಕಾರ್ಯಕ್ಕೆ ತೊಂದರೆಯಾಗದಂತೆ ತುರ್ತು ರಕ್ಷಣೆಗಾಗಿ ಕಟ್ಟಡದ ಮೇಲೆ ಟರ್ಪಾಲು ಹೊದಿಕೆ ಹಾಕಲಾಗಿದೆ.
ಹೊಸ ಕಟ್ಟಡ ನಿರ್ಮಾಣ ಯೋಜನೆ ಸುಮಾರು 1 ಕೋಟಿ ರೂಪಾಯಿ ಅನುದಾನದಲ್ಲಿ ಹೊಸ ಕಟ್ಟಡ ರಚನೆಗೆ ಯೋಜನೆಯನ್ನು ಮಾಡಲಾಗಿದೆ. ಒಂದು ಅಂತಸ್ತಿನ ಕಟ್ಟಡ ಇದರಲ್ಲಿ ಪಂಚಾಯತ್ ಕಚೇರಿ, ಗ್ರಾಮ ಕರಣಿಕರ ಕಚೇರಿ, ಸಭಾಭವನ ಹಾಗೂ ಇನ್ನಿತರ ಕಚೇರಿಗಳಿಗೆ ಅವಕಾಶವಿದೆ. ಈಗಾಗಲೇ ಎಂಆರ್ಪಿಎಲ್, ಶಾಸಕರು, ಸಂಸದರಿಗೆ ಮನವಿ
ಮಾಡಲಾಗಿದೆ.
*ಪ್ರವೀಣ್ ಆಚಾರ್ಯ,
ಅಧ್ಯಕ್ಷ, ಗ್ರಾ.ಪಂ. ಎಕ್ಕಾರು
*ಸುಬ್ರಾಯ ನಾಯಕ್ ಎಕ್ಕಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru Dasara: ನವರಾತ್ರಿ, ಶಾರದಾ ಮಹೋತ್ಸವ: ಪೊಲೀಸರಿಂದ ಮಾರ್ಗಸೂಚಿ
Mangaluru: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಅಭಿವೃದ್ಧಿ ಕಡೆಗಣನೆಯಾಗಿದೆ: ನಳಿನ್ ಆರೋಪ
Kinnigoli ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮನೆಯಲ್ಲಿ ಮತ್ತಷ್ಟು ಲಂಚದ ಹಣ ಪತ್ತೆ
Speaker UT Khader: ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಶೀಘ್ರ ಸಿಎಂ, ಕಾನೂನು ಸಚಿವರ ಭೇಟಿ
Mangaluru: ಒಂದೂವರೆ ಕೋಟಿಗೂ ಅಧಿಕ ಬಿಜೆಪಿ ಸದಸ್ಯತ್ವ ಗುರಿ: ಧೀರಜ್ ಮುನಿರಾಜು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.